/newsfirstlive-kannada/media/post_attachments/wp-content/uploads/2024/11/Gambhir-Kohli.jpg)
ಗೌತಮ್​​ ಗಂಭೀರ್​​ ಟೀಮ್​ ಇಂಡಿಯಾದ ಹೆಡ್​​ ಕೋಚ್​ ಆದ ದಿನದಿಂದಲೂ ಭಾರೀ ಸುದ್ದಿಯಲ್ಲೇ ಇದ್ದಾರೆ. ಹಲವು ಕಂಡೀಷನ್​​​ ಹಾಕಿ ಕೋಚ್​ ಆಗಿದ್ದ ಗಂಭೀರ್​​ ಇಡೀ ಕೋಚಿಂಗ್​ ಸ್ಟ್ಯಾಫ್​ ಅನ್ನೇ ಬದಲಿಸಿದ್ರು. ಆದರೀಗ, ಟೀಮ್​ ಇಂಡಿಯಾ ಬ್ಯಾಕ್​​ ಟು ಬ್ಯಾಕ್​​​ ಸರಣಿ ಸೋಲುತ್ತಿದ್ದು, ಗಂಭೀರ್​ ಅವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.
ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಆಗಿ ಗಂಭೀರ್​​ ಆಯ್ಕೆಯಾಗಿ ಇನ್ನೂ 4 ತಿಂಗಳು. ಇವ್ರು ಕೋಚ್​​ ಆದ 4 ತಿಂಗಳಲ್ಲೇ ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವು ಹೊರತುಪಡಿಸಿ ಮತ್ತೆಲ್ಲಾ ಸೀರೀಸ್​ನಲ್ಲೂ ಬಹುತೇಕ ಸೋಲಾಗಿದೆ.
ಬರೋಬ್ಬರಿ 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಟೀಮ್​​​ ಇಂಡಿಯಾ ಏಕದಿನ ಸರಣಿ ಸೋತಿತ್ತು. ಇದಾದ ಬೆನ್ನಲ್ಲೇ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಸೋತಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲೂ ಟೀಮ್​ ಇಂಡಿಯಾ ಸೋಲು ಕಂಡಿದೆ.
ಸುಮಾರು 24 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು. ಹೀಗಾಗಿ ಗಂಭೀರ್​ ವಿರುದ್ಧ ಬಿಸಿಸಿಐ ಕಠಿಣಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ತಮಗೆ ಬೇಕಾದ ಆಟಗಾರರಿ ಮಣೆ
ಬಿಸಿಸಿಐ ಹಲವು ನಿಯಮಗಳನ್ನು ಗಾಳಿಗೆ ತೂರಿ ಗಂಭೀರ್​ ಅವರನ್ನು ಮುಖ್ಯ ಕೋಚ್​​ ಆಗಿ ಮಾಡಿತು. ತಂಡದ ಆಯ್ಕೆ ಸಭೆಗಳಲ್ಲಿ ಮುಖ್ಯ ಕೋಚ್​ ಭಾಗಿಯಾಗಬಾರದು. ಅದಕ್ಕೂ ಬಿಸಿಸಿಐ ಗಂಭೀರ್​ ಅವರಿಗೆ ಅವಕಾಶ ನೀಡಿತು. ಹಾಗಾಗಿ ಎಲ್ಲಾ ಸರಣಿಗೂ ತಮಗೆ ಬೇಕಾದ ಆಟಗಾರರನೇ ಆಯ್ಕೆ ಮಾಡಿಕೊಂಡರು. ಇದುವೇ ಗಂಭೀರ್​ಗೆ ಮುಳುವಾಗುವ ಸಾಧ್ಯತೆ ಇದೆ. ಕಾರಣ ಅವರು ಆಯ್ಕೆ ಮಾಡಿದ ಆಟಗಾರರು ಯಾರು ಉತ್ತಮ ಪ್ರದರ್ಶನ ನೀಡಲಿಲ್ಲ.
ಇದನ್ನೂ ಓದಿ:ಕೇವಲ 4 ಲಕ್ಷದಲ್ಲಿ ಕೋಟಿ ಕೋಟಿ ದುಡಿಯೋದು ಹೇಗೆ? ಇದು ಯಾವ ಬ್ಯುಸಿನೆಸ್​ಗೂ ಕಮ್ಮಿ ಇಲ್ಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us