newsfirstkannada.com

ಬಯೋಪಿಕ್​ ಬಗ್ಗೆ ದ್ರಾವಿಡ್ ಅಚ್ಚರಿ ಹೇಳಿಕೆ.. ರಹಸ್ಯವಾಗಿ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಗ್ಯಾರಂಟಿ ಎಂದ ಫ್ಯಾನ್ಸ್

Share :

Published August 23, 2024 at 9:56am

Update August 23, 2024 at 5:34pm

    ಬಾಲಿವುಡ್​ನಲ್ಲಿ ರಾಹುಲ್​ ದ್ರಾವಿಡ್​ ಬಯೋಪಿಕ್​​ ಸದ್ದು

    ಕನ್ನಡದ ಕಣ್ಮಣಿಯ ಬಯೋಪಿಕ್​ಗೆ ತೆರೆಮರೆಯ ಸಿದ್ಧತೆ

    ರಾಹುಲ್​ ದ್ರಾವಿಡ್​ ಬಯೋಪಿಕ್​ನಲ್ಲಿ ಏನೆಲ್ಲಾ ಇರುತ್ತೆ?

ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಬಯೋಪಿಕ್​ ಅನೌನ್ಸ್​ಮೆಂಟ್​ ಆಗಿ ವಾರ ಕಳೆದಿಲ್ಲ. ಅದಾಗಲೇ ಮತ್ತೊಬ್ಬ ಸೂಪರ್​ ಸ್ಟಾರ್​ ಜೀವನದ ಕಥೆ ತೆರೆಗೆ ಅಪ್ಪಳಿಸೋ ಸುದ್ದಿ ಹೊರ ಬಿದ್ದಿದೆ. ಅಂದ್ಹಾಗೆ ಆ ಸೂಪರ್​ ಸ್ಟಾರ್​​ ಬೇರಾರೂ ಅಲ್ಲ. ಕನ್ನಡದ ಕಣ್ಮಣಿ, ವಿಶ್ವ ಕ್ರಿಕೆಟ್​ ಲೋಕದ ದಿ ವಾಲ್​, ರಾಹುಲ್​ ದ್ರಾವಿಡ್​.

MS ಧೋನಿ, ಸಚಿನ್​ ತೆಂಡುಲ್ಕರ್​, ಮೊಹಮ್ಮದ್​ ಅಜರುದ್ದೀನ್​, ಕಪಿಲ್​ ದೇವ್​.. ಟೀಮ್​ ಇಂಡಿಯಾ ಕಂಡ ಈ ಲೆಜೆಂಡ್​​ಗಳ ಜೀವನಾಧಾರಿತ ಚಿತ್ರಗಳು ಬಾಲಿವುಡ್​ನಲ್ಲಿ ಮೋಡಿ ಮಾಡಿದೆ. ನೆಚ್ಚಿನ ಕ್ರಿಕೆಟರ್​ಗಳ ಆನ್ ಅಂಡ್ ಆಫ್​ ದ ಫೀಲ್ಡ್​ ಜೀವನವನ್ನ ತೆರೆ ಮೇಲೆ ಕಣ್ತುಂಬಿಕೊಂಡು ಫ್ಯಾನ್ಸ್​ ಆನಂದಿಸಿದ್ದಾರೆ. ಇದೀಗ ಈ ಬಯೋಪಿಕ್​ಗಳ ಲಿಸ್ಟ್​ಗೆ ಯುವರಾಜ್​ ಸಿಂಗ್​ ಚಿತ್ರ ಹೊಸ ಸೇರ್ಪಡೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಯುವಿಯ ಬಯೋಪಿಕ್​ ನಿರ್ಮಾಣದ ಬಗ್ಗೆ ಅಧಿಕೃತವಾಗಿ ಅನೌನ್ಸ್​ ಆಗಿದೆ. ಇದ್ರ ಬೆನಲ್ಲೇ, ಮತ್ತೊಬ್ಬ ಲೆಜೆಂಡ್​ ಜೀವನಾಧಾರಿತ ಚಿತ್ರದ ಸದ್ದು ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ.

ಇದನ್ನೂ ಓದಿ:IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?

ಬಾಲಿವುಡ್​ನಲ್ಲಿ ರಾಹುಲ್​ ದ್ರಾವಿಡ್​ ಬಯೋಪಿಕ್​​ ಸದ್ದು
ಯುವರಾಜ್​ ಸಿಂಗ್​ ಬಯೋಪಿಕ್​​ ತೆರೆಗೆ ಬರುವ ಅಧಿಕೃತ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಲೆಜೆಂಡ್​ ರಾಹುಲ್​ ದ್ರಾವಿಡ್​​ ಜೀವನಾಧಾರಿತ ಚಿತ್ರದ ಸದ್ದು ಬಿ ಟೌನ್​ನಲ್ಲಿ ಜೋರಾಗಿದೆ. ವಿಶ್ವ ಕ್ರಿಕೆಟ್​ ಲೋಕ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗನ ಬಯೋಪಿಕ್​ ನಿರ್ಮಾಣಕ್ಕೆ ಬಾಲಿವುಡ್​ನಲ್ಲಿ ತೆರೆಮರೆಯಲ್ಲೇ ಕಸರತ್ತು ಆರಂಭವಾಗಿದೆ. ಬಹುಕೋಟಿ ಬಜೆಟ್​ನಲ್ಲಿ ದ್ರಾವಿಡ್​ ಕ್ರಿಕೆಟ್​ ಕರಿಯರ್​ನ ಕಥೆಯನ್ನ ತೆರೆಗೆ ತರಲು ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ನನ್ನ ಬಯೋಪಿಕ್​ಗೆ ನಾನೇ ಹೀರೋ ಎಂದ ದ್ರಾವಿಡ್​
ಅಸಲಿಗೆ ದ್ರಾವಿಡ್​ ಬಯೋಪಿಕ್​ ತೆರೆಗೆ ಬರುತ್ತೆ ಅನ್ನೋ ಸುದ್ದಿ ಹರಿದಾಡಲು ಆರಂಭಿಸಿ ವಾರಗಳೇ ಕಳೆದಿತ್ತು. ಸುದ್ದಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಈ ಬಗ್ಗೆ ಸ್ವತಃ ರಾಹುಲ್​ ದ್ರಾವಿಡ್​ ತುಟಿ ಬಿಚ್ಚಿದ್ದಾರೆ. ದ್ರಾವಿಡ್​ ಮಾತುಗಳೇ, ಬಯೋಪಿಕ್​ ತೆರೆಗೆ ಬರೋ ಸುದ್ದಿ ಸತ್ಯ ಎಂಬ ಹಿಂಟ್​ ನೀಡಿವೆ. ಇಂವೆಂಟ್​ ಒಂದರಲ್ಲಿ ಬಯೋಪಿಕ್​ ಹೀರೋ ಯಾರಾಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿರೋ ದ್ರಾವಿಡ್​, ತುಂಬಾ ಹಣ ಸಿಕ್ಕರೆ ನಾನೇ ಎಂದು ಉತ್ತರಿಸಿದ್ದಾರೆ. ಅಪ್ಪಿತಪ್ಪಿಯೂ ಬಯೋಪಿಕ್​ನ ಬಗ್ಗೆ ಹಬ್ಬಿರುವ ಸುದ್ದಿಯನ್ನ ತಳ್ಳಿ ಹಾಕಿಲ್ಲ. ದ್ರಾವಿಡ್​ರ ಈ ನಡೆ ಫ್ಯಾನ್ಸ್​ ಕುತೂಹಲ ಹೆಚ್ಚಿಸಿದ್ದು, ಬಯೋಪಿಕ್​ನಲ್ಲಿ ಏನೆಲ್ಲಾ ಇರಲಿದೆ ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

ಚಿನ್ನಸ್ವಾಮಿ TO ಬಾರ್ಬಡೋಸ್​.. ರೋಚಕ ಜರ್ನಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ವರೆಗಿನ ರಾಹುಲ್​ ದ್ರಾವಿಡ್​ ಜರ್ನಿ ರೋಚಕವಾಗಿದೆ. ಸಾಮಾನ್ಯನಾಗಿ ಜರ್ನಿ ಆರಂಭಿಸಿದ ದ್ರಾವಿಡ್​, ಕರಿಯರ್​​ ಅಂತ್ಯಗೊಳಿಸಿದ್ದು, ವಿಶ್ವ ಕ್ರಿಕೆಟ್​ ಲೋಕ ಕಂಡ ಸರ್ವಶ್ರೇಷ್ಟ ಬ್ಯಾಟ್ಸ್​ಮನ್​ ಆಗಿ. ಸುದೀರ್ಘ 16 ವರ್ಷಗಳ ಕ್ರಿಕೆಟ್​ ಜರ್ನಿಯಲ್ಲಿ ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಈ ಏಳು-ಬೀಳುಗಳ ಕಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿದೆ.

ನಾಯಕನಾಗಿ ಫೇಲ್​.. ಕೋಚ್​ ಆಗಿ ಸಕ್ಸಸ್
ಸರ್ವಶ್ರೇಷ್ಟ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆ ಹೊಂದಿರೋ ದ್ರಾವಿಡ್​ಗೆ, ಕಳಪೆ ಕ್ಯಾಪ್ಟನ್​ ಎಂಬ ಅಪಖ್ಯಾತಿ ಕೂಡ ಇದೆ. ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ದ್ರಾವಿಡ್​ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ನಿರ್ಗಮಿಸಿತ್ತು. ಆ ಬಳಿಕ ಕ್ಯಾಪ್ಟನ್ಸಿಗೆ ದ್ರಾವಿಡ್​ ಗುಡ್​ ಬೈ ಹೇಳಿದರು. ನಾಯಕನಾಗಿ ಫೇಲ್​ ಆದ ದ್ರಾವಿಡ್​, ಕೋಚ್​ ಆಗಿ ಅದೇ ವೆಸ್ಟ್​​ ಇಂಡೀಸ್​ನಲ್ಲಿ ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟರು.

ರಹಸ್ಯವಾಗಿ ಉಳಿದ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?
ರಾಹುಲ್​ ದ್ರಾವಿಡ್​ನ ಜಂಟಲ್​ಮನ್​ ಗೇಮ್​ನ ರಿಯಲ್​ ಜಂಟಲ್​ಮನ್​ ಎನ್ನಲಾಗುತ್ತೆ. ಕಾಂಟ್ರವರ್ಸಿಗಳಿಂದ ಸದಾ ಅಂತರ ಕಾಯ್ದುಕೊಂಡ ಕ್ರಿಕೆಟಿಗ ದ್ರಾವಿಡ್​. ಇಂತಹ ದ್ರಾವಿಡ್​ ವಿಚಾರದಲ್ಲೂ ಹಲವು ಉತ್ತರ ಸಿಗದ ಪ್ರಶ್ನೆಗಳಿವೆ. ನಾಯಕನಾದ ಬಳಿಕ ಸೌರವ್​ ಗಂಗೂಲಿಯನ್ನ ಡ್ರಾಪ್​ ಮಾಡಿದ್ದು, ಸಚಿನ್​ ತೆಂಡುಲ್ಕರ್​ 194 ರನ್​ಗಳಿಸಿದ್ದಾಗ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದ್ದು, 2004ರ ಬಾಲ್​ ಟ್ಯಾಂಪರಿಂಗ್​ ವಿವಾದ ಸೇರಿದಂತೆ ಹಲವು ಕಾಂಟ್ರವರ್ಸಿಗಳು ಉತ್ತರ ಸಿಗದೇ ಉಳಿದಿವೆ. ಆ ಪ್ರಶ್ನೆಗಳಿಗೆ ಬಯೋಪಿಕ್​ನಲ್ಲಿ ಉತ್ತರ ಸಿಗುತ್ತಾ ಅನ್ನೋ ಕುತೂಹಲವಿದೆ.

ಇದನ್ನೂ ಓದಿ:‘ಅವಕಾಶ ಸಿಕ್ಕರೆ..’ RCB ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ ಮನಿಷ್ ಪಾಂಡೆ

ರಾಹುಲ್​ ದ್ರಾವಿಡ್​​ ಬಯೋಪಿಕ್​ನ ಸುದ್ದಿ ಇನ್ನೂ ಅಧಿಕೃತಗೊಂಡಿಲ್ಲ. ಅದಾಗಲೇ ಫ್ಯಾನ್ಸ್​ ವಲಯದಲ್ಲಿ ತೀವ್ರವಾದ ಕುತೂಹಲವನ್ನ ಹುಟ್ಟುಹಾಕಿದೆ. ಬಯೋಪಿಕ್​ ತೆರೆ ಕಂಡ್ರೆ ಸ್ಟಾರ್​ ನಟರ ಸಿನೆಮಾದಂತೆ, ದ್ರಾವಿಡ್ ಜೀವನದ ಕಹಾನಿಯೂ ಸಖತ್​​ ಸೌಂಡ್​ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಯೋಪಿಕ್​ ಬಗ್ಗೆ ದ್ರಾವಿಡ್ ಅಚ್ಚರಿ ಹೇಳಿಕೆ.. ರಹಸ್ಯವಾಗಿ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಗ್ಯಾರಂಟಿ ಎಂದ ಫ್ಯಾನ್ಸ್

https://newsfirstlive.com/wp-content/uploads/2023/11/Rahul-Dravid-Coach.jpg

    ಬಾಲಿವುಡ್​ನಲ್ಲಿ ರಾಹುಲ್​ ದ್ರಾವಿಡ್​ ಬಯೋಪಿಕ್​​ ಸದ್ದು

    ಕನ್ನಡದ ಕಣ್ಮಣಿಯ ಬಯೋಪಿಕ್​ಗೆ ತೆರೆಮರೆಯ ಸಿದ್ಧತೆ

    ರಾಹುಲ್​ ದ್ರಾವಿಡ್​ ಬಯೋಪಿಕ್​ನಲ್ಲಿ ಏನೆಲ್ಲಾ ಇರುತ್ತೆ?

ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​ ಬಯೋಪಿಕ್​ ಅನೌನ್ಸ್​ಮೆಂಟ್​ ಆಗಿ ವಾರ ಕಳೆದಿಲ್ಲ. ಅದಾಗಲೇ ಮತ್ತೊಬ್ಬ ಸೂಪರ್​ ಸ್ಟಾರ್​ ಜೀವನದ ಕಥೆ ತೆರೆಗೆ ಅಪ್ಪಳಿಸೋ ಸುದ್ದಿ ಹೊರ ಬಿದ್ದಿದೆ. ಅಂದ್ಹಾಗೆ ಆ ಸೂಪರ್​ ಸ್ಟಾರ್​​ ಬೇರಾರೂ ಅಲ್ಲ. ಕನ್ನಡದ ಕಣ್ಮಣಿ, ವಿಶ್ವ ಕ್ರಿಕೆಟ್​ ಲೋಕದ ದಿ ವಾಲ್​, ರಾಹುಲ್​ ದ್ರಾವಿಡ್​.

MS ಧೋನಿ, ಸಚಿನ್​ ತೆಂಡುಲ್ಕರ್​, ಮೊಹಮ್ಮದ್​ ಅಜರುದ್ದೀನ್​, ಕಪಿಲ್​ ದೇವ್​.. ಟೀಮ್​ ಇಂಡಿಯಾ ಕಂಡ ಈ ಲೆಜೆಂಡ್​​ಗಳ ಜೀವನಾಧಾರಿತ ಚಿತ್ರಗಳು ಬಾಲಿವುಡ್​ನಲ್ಲಿ ಮೋಡಿ ಮಾಡಿದೆ. ನೆಚ್ಚಿನ ಕ್ರಿಕೆಟರ್​ಗಳ ಆನ್ ಅಂಡ್ ಆಫ್​ ದ ಫೀಲ್ಡ್​ ಜೀವನವನ್ನ ತೆರೆ ಮೇಲೆ ಕಣ್ತುಂಬಿಕೊಂಡು ಫ್ಯಾನ್ಸ್​ ಆನಂದಿಸಿದ್ದಾರೆ. ಇದೀಗ ಈ ಬಯೋಪಿಕ್​ಗಳ ಲಿಸ್ಟ್​ಗೆ ಯುವರಾಜ್​ ಸಿಂಗ್​ ಚಿತ್ರ ಹೊಸ ಸೇರ್ಪಡೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಯುವಿಯ ಬಯೋಪಿಕ್​ ನಿರ್ಮಾಣದ ಬಗ್ಗೆ ಅಧಿಕೃತವಾಗಿ ಅನೌನ್ಸ್​ ಆಗಿದೆ. ಇದ್ರ ಬೆನಲ್ಲೇ, ಮತ್ತೊಬ್ಬ ಲೆಜೆಂಡ್​ ಜೀವನಾಧಾರಿತ ಚಿತ್ರದ ಸದ್ದು ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ.

ಇದನ್ನೂ ಓದಿ:IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?

ಬಾಲಿವುಡ್​ನಲ್ಲಿ ರಾಹುಲ್​ ದ್ರಾವಿಡ್​ ಬಯೋಪಿಕ್​​ ಸದ್ದು
ಯುವರಾಜ್​ ಸಿಂಗ್​ ಬಯೋಪಿಕ್​​ ತೆರೆಗೆ ಬರುವ ಅಧಿಕೃತ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಲೆಜೆಂಡ್​ ರಾಹುಲ್​ ದ್ರಾವಿಡ್​​ ಜೀವನಾಧಾರಿತ ಚಿತ್ರದ ಸದ್ದು ಬಿ ಟೌನ್​ನಲ್ಲಿ ಜೋರಾಗಿದೆ. ವಿಶ್ವ ಕ್ರಿಕೆಟ್​ ಲೋಕ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗನ ಬಯೋಪಿಕ್​ ನಿರ್ಮಾಣಕ್ಕೆ ಬಾಲಿವುಡ್​ನಲ್ಲಿ ತೆರೆಮರೆಯಲ್ಲೇ ಕಸರತ್ತು ಆರಂಭವಾಗಿದೆ. ಬಹುಕೋಟಿ ಬಜೆಟ್​ನಲ್ಲಿ ದ್ರಾವಿಡ್​ ಕ್ರಿಕೆಟ್​ ಕರಿಯರ್​ನ ಕಥೆಯನ್ನ ತೆರೆಗೆ ತರಲು ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ನನ್ನ ಬಯೋಪಿಕ್​ಗೆ ನಾನೇ ಹೀರೋ ಎಂದ ದ್ರಾವಿಡ್​
ಅಸಲಿಗೆ ದ್ರಾವಿಡ್​ ಬಯೋಪಿಕ್​ ತೆರೆಗೆ ಬರುತ್ತೆ ಅನ್ನೋ ಸುದ್ದಿ ಹರಿದಾಡಲು ಆರಂಭಿಸಿ ವಾರಗಳೇ ಕಳೆದಿತ್ತು. ಸುದ್ದಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಈ ಬಗ್ಗೆ ಸ್ವತಃ ರಾಹುಲ್​ ದ್ರಾವಿಡ್​ ತುಟಿ ಬಿಚ್ಚಿದ್ದಾರೆ. ದ್ರಾವಿಡ್​ ಮಾತುಗಳೇ, ಬಯೋಪಿಕ್​ ತೆರೆಗೆ ಬರೋ ಸುದ್ದಿ ಸತ್ಯ ಎಂಬ ಹಿಂಟ್​ ನೀಡಿವೆ. ಇಂವೆಂಟ್​ ಒಂದರಲ್ಲಿ ಬಯೋಪಿಕ್​ ಹೀರೋ ಯಾರಾಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿರೋ ದ್ರಾವಿಡ್​, ತುಂಬಾ ಹಣ ಸಿಕ್ಕರೆ ನಾನೇ ಎಂದು ಉತ್ತರಿಸಿದ್ದಾರೆ. ಅಪ್ಪಿತಪ್ಪಿಯೂ ಬಯೋಪಿಕ್​ನ ಬಗ್ಗೆ ಹಬ್ಬಿರುವ ಸುದ್ದಿಯನ್ನ ತಳ್ಳಿ ಹಾಕಿಲ್ಲ. ದ್ರಾವಿಡ್​ರ ಈ ನಡೆ ಫ್ಯಾನ್ಸ್​ ಕುತೂಹಲ ಹೆಚ್ಚಿಸಿದ್ದು, ಬಯೋಪಿಕ್​ನಲ್ಲಿ ಏನೆಲ್ಲಾ ಇರಲಿದೆ ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

ಚಿನ್ನಸ್ವಾಮಿ TO ಬಾರ್ಬಡೋಸ್​.. ರೋಚಕ ಜರ್ನಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ವರೆಗಿನ ರಾಹುಲ್​ ದ್ರಾವಿಡ್​ ಜರ್ನಿ ರೋಚಕವಾಗಿದೆ. ಸಾಮಾನ್ಯನಾಗಿ ಜರ್ನಿ ಆರಂಭಿಸಿದ ದ್ರಾವಿಡ್​, ಕರಿಯರ್​​ ಅಂತ್ಯಗೊಳಿಸಿದ್ದು, ವಿಶ್ವ ಕ್ರಿಕೆಟ್​ ಲೋಕ ಕಂಡ ಸರ್ವಶ್ರೇಷ್ಟ ಬ್ಯಾಟ್ಸ್​ಮನ್​ ಆಗಿ. ಸುದೀರ್ಘ 16 ವರ್ಷಗಳ ಕ್ರಿಕೆಟ್​ ಜರ್ನಿಯಲ್ಲಿ ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಈ ಏಳು-ಬೀಳುಗಳ ಕಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿದೆ.

ನಾಯಕನಾಗಿ ಫೇಲ್​.. ಕೋಚ್​ ಆಗಿ ಸಕ್ಸಸ್
ಸರ್ವಶ್ರೇಷ್ಟ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆ ಹೊಂದಿರೋ ದ್ರಾವಿಡ್​ಗೆ, ಕಳಪೆ ಕ್ಯಾಪ್ಟನ್​ ಎಂಬ ಅಪಖ್ಯಾತಿ ಕೂಡ ಇದೆ. ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ದ್ರಾವಿಡ್​ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ನಿರ್ಗಮಿಸಿತ್ತು. ಆ ಬಳಿಕ ಕ್ಯಾಪ್ಟನ್ಸಿಗೆ ದ್ರಾವಿಡ್​ ಗುಡ್​ ಬೈ ಹೇಳಿದರು. ನಾಯಕನಾಗಿ ಫೇಲ್​ ಆದ ದ್ರಾವಿಡ್​, ಕೋಚ್​ ಆಗಿ ಅದೇ ವೆಸ್ಟ್​​ ಇಂಡೀಸ್​ನಲ್ಲಿ ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟರು.

ರಹಸ್ಯವಾಗಿ ಉಳಿದ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?
ರಾಹುಲ್​ ದ್ರಾವಿಡ್​ನ ಜಂಟಲ್​ಮನ್​ ಗೇಮ್​ನ ರಿಯಲ್​ ಜಂಟಲ್​ಮನ್​ ಎನ್ನಲಾಗುತ್ತೆ. ಕಾಂಟ್ರವರ್ಸಿಗಳಿಂದ ಸದಾ ಅಂತರ ಕಾಯ್ದುಕೊಂಡ ಕ್ರಿಕೆಟಿಗ ದ್ರಾವಿಡ್​. ಇಂತಹ ದ್ರಾವಿಡ್​ ವಿಚಾರದಲ್ಲೂ ಹಲವು ಉತ್ತರ ಸಿಗದ ಪ್ರಶ್ನೆಗಳಿವೆ. ನಾಯಕನಾದ ಬಳಿಕ ಸೌರವ್​ ಗಂಗೂಲಿಯನ್ನ ಡ್ರಾಪ್​ ಮಾಡಿದ್ದು, ಸಚಿನ್​ ತೆಂಡುಲ್ಕರ್​ 194 ರನ್​ಗಳಿಸಿದ್ದಾಗ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಂಡಿದ್ದು, 2004ರ ಬಾಲ್​ ಟ್ಯಾಂಪರಿಂಗ್​ ವಿವಾದ ಸೇರಿದಂತೆ ಹಲವು ಕಾಂಟ್ರವರ್ಸಿಗಳು ಉತ್ತರ ಸಿಗದೇ ಉಳಿದಿವೆ. ಆ ಪ್ರಶ್ನೆಗಳಿಗೆ ಬಯೋಪಿಕ್​ನಲ್ಲಿ ಉತ್ತರ ಸಿಗುತ್ತಾ ಅನ್ನೋ ಕುತೂಹಲವಿದೆ.

ಇದನ್ನೂ ಓದಿ:‘ಅವಕಾಶ ಸಿಕ್ಕರೆ..’ RCB ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ ಮನಿಷ್ ಪಾಂಡೆ

ರಾಹುಲ್​ ದ್ರಾವಿಡ್​​ ಬಯೋಪಿಕ್​ನ ಸುದ್ದಿ ಇನ್ನೂ ಅಧಿಕೃತಗೊಂಡಿಲ್ಲ. ಅದಾಗಲೇ ಫ್ಯಾನ್ಸ್​ ವಲಯದಲ್ಲಿ ತೀವ್ರವಾದ ಕುತೂಹಲವನ್ನ ಹುಟ್ಟುಹಾಕಿದೆ. ಬಯೋಪಿಕ್​ ತೆರೆ ಕಂಡ್ರೆ ಸ್ಟಾರ್​ ನಟರ ಸಿನೆಮಾದಂತೆ, ದ್ರಾವಿಡ್ ಜೀವನದ ಕಹಾನಿಯೂ ಸಖತ್​​ ಸೌಂಡ್​ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More