ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
ಯಾರಿಗೆ ಜಾಕ್ಪಾಟ್..? ಯಾರಿಗೆ ಕೊಕ್..?
ಏಕದಿನಕ್ಕೆ ರೋಹಿತ್, T20ಗೆ ಸೂರ್ಯ ನಾಯಕ
ಭಾರತೀಯ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಟೀಮ್ ಸೆಲೆಕ್ಷನ್ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಅಂತೆ-ಕಂತೆಗಳಿಗೆಲ್ಲಾ ಫುಲ್ ಸ್ಟಾಫ್ ಬಿದ್ದಿದ್ದು, ಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್ ಇಂಡಿಯಾ ಪ್ರಕಟಗೊಂಡಿದೆ.
ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ಮುಂಬರೋ ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಸಾಕಷ್ಟು ಸರ್ಕಸ್ ನಡೆಸಿದ ಬಿಸಿಸಿಐ ಬಾಸ್ಗಳು ಹಾಗೂ ಸೆಲೆಕ್ಟರ್ಸ್ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಮುಂಬರೋ ಐಸಿಸಿ ಟ್ರೋಫಿಗಳನ್ನ ಗಮನದಲ್ಲಿರಿಸಿಕೊಂಡು ಏಕದಿನ ಹಾಗೂ ಟಿ20ಗೆ ಸಪರೇಟ್ ಆಟಗಾರರ ತಂಡವನ್ನ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದ ಲಾರಿ.. ಚಾಲಕ ಬದುಕುಳಿದ್ದೇ ದೊಡ್ಡದು..
ಏಕದಿನಕ್ಕೆ ರೋಹಿತ್ ಶರ್ಮಾ, T20ಗೆ ಸೂರ್ಯ ನಾಯಕ..!
ಶ್ರೀಲಂಕಾ ಪ್ರವಾಸದ ಸೆಲೆಕ್ಷನ್ಗೂ ಮುನ್ನ ನಾಯಕತ್ವದ ಚರ್ಚೆ ಜೋರಾಗಿ ನಡೆದಿತ್ತು. ಏಕದಿನಕ್ಕೆ ರೋಹಿತ್ ಶರ್ಮಾ ನಾಯಕನಾಗೋದು ಕನ್ಫರ್ಮ್ ಅನ್ನೋದು ಮೊದಲೇ ಗೊತ್ತಿತ್ತು. ಟಿ20 ಫಾರ್ಮ್ಯಾಟ್ಗೆ ರೋಹಿತ್ ನಿವೃತ್ತಿ ಹೇಳಿದ್ರಿಂದ, ಯಾರು ಕ್ಯಾಪ್ಟನ್ ಎಂಬ ಪ್ರಶ್ನೆ ಹುಟ್ಟಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಟಿ20 ತಂಡದ ನಾಯಕನ ಪಟ್ಟವೇರಿದ್ದಾರೆ.
ಜಸ್ಪ್ರಿತ್ ಬೂಮ್ರಾಗೆ ರೆಸ್ಟ್, ಶ್ರೇಯಸ್ ಕಮ್ಬ್ಯಾಕ್
ಟೀಮ್ ಇಂಡಿಯಾ ಮೂರು ಫಾರ್ಮೆಟ್ನ ಸೂಪರ್ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾಗೆ ಪ್ರವಾಸದಿಂದ ರೆಸ್ಟ್ ನೀಡಲಾಗಿದೆ. ಬೂಮ್ರಾ ಬದಲು ಯುವ ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ. ಕೆಲ ದಿನಗಳಿಂದ ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಏಕದಿನ ಮಾದರಿಗೆ ಕಮ್ಬ್ಯಾಕ್ ಮಾಡಿದ್ದಾರೆ. ಒಟ್ಟಾರೆ 15 ಆಟಗಾರರ ಬಲಿಷ್ಠ ತಂಡವನ್ನ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?
ಏಕದಿನ ಸರಣಿಗೆ ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (WK), ರಿಷಭ್ ಪಂತ್ (WK), ಶ್ರೇಯಸ್ ಅಯ್ಯರ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ
ಚುಟುಕು ಫಾರ್ಮೆಟ್ಗೆ ಯಂಗ್ ಇಂಡಿಯಾ..!
ಜುಲೈ 27ರಿಂದ ಆರಂಭವಾಗಲಿರೋ ಟಿ20 ಸರಣಿಗೂ ತಂಡವನ್ನ ಆಯ್ಕೆ ಮಾಡಲಾಗಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯನ್ನ ಟಾರ್ಗೆಟ್ ಮಾಡಿರುವ ನಯಾ ಕೋಚ್ ಗಂಭೀರ್ ಹಾಗೂ ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ 15 ಯುವ ಆಟಗಾರರ ತಂಡವನ್ನ ಚುಟುಕು ಫಾರ್ಮೆಟ್ಗೆ ಸೆಲೆಕ್ಟ್ ಮಾಡಲಾಗಿದೆ.
T20 ಸರಣಿಗೆ ಟೀಮ್ ಇಂಡಿಯಾ: ಸೂರ್ಯಕುಮಾರ್ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (WK), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ನೋಯ್, ಆರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್
ODI ಮತ್ತು ಟಿ20 ಎರಡೂ ಪಂದ್ಯ ಆಡುವ ಆಟಗಾರರು!
ಶುಬ್ಮನ್ ಗಿಲ್, ರಿಷಬ್ ಪಂತ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಮೊಹ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್ ಸೇರಿ ಒಟ್ಟು 9 ಆಟಗಾರರು ಏಕದಿನ ಸರಣಿ ಹಾಗೂ ಟಿ-20 ಸರಣಿಗಳಲ್ಲಿ ಆಡಲಿದ್ದಾರೆ. ಒಟ್ಟಿನಲ್ಲಿ ಸಿಂಹಳೀಯರನ್ನ ಬೇಟೆಗೆ ಸಾಕಷ್ಟು ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೆ ಸೆಲೆಕ್ಟ್ ಮಾಡಿದೆ. ಆನ್ಫೀಲ್ಡ್ನಲ್ಲಿ ಆಟಗಾರರ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ. ಇದಕ್ಕೆ ಜುಲೈ 27ರಿಂದ ಆರಂಭವಾಗಲಿರೋ ಸರಣಿ ಉತ್ತರ ಕೊಡಲಿದೆ.
ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
ಯಾರಿಗೆ ಜಾಕ್ಪಾಟ್..? ಯಾರಿಗೆ ಕೊಕ್..?
ಏಕದಿನಕ್ಕೆ ರೋಹಿತ್, T20ಗೆ ಸೂರ್ಯ ನಾಯಕ
ಭಾರತೀಯ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಟೀಮ್ ಸೆಲೆಕ್ಷನ್ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಅಂತೆ-ಕಂತೆಗಳಿಗೆಲ್ಲಾ ಫುಲ್ ಸ್ಟಾಫ್ ಬಿದ್ದಿದ್ದು, ಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್ ಇಂಡಿಯಾ ಪ್ರಕಟಗೊಂಡಿದೆ.
ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ಮುಂಬರೋ ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಸಾಕಷ್ಟು ಸರ್ಕಸ್ ನಡೆಸಿದ ಬಿಸಿಸಿಐ ಬಾಸ್ಗಳು ಹಾಗೂ ಸೆಲೆಕ್ಟರ್ಸ್ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಮುಂಬರೋ ಐಸಿಸಿ ಟ್ರೋಫಿಗಳನ್ನ ಗಮನದಲ್ಲಿರಿಸಿಕೊಂಡು ಏಕದಿನ ಹಾಗೂ ಟಿ20ಗೆ ಸಪರೇಟ್ ಆಟಗಾರರ ತಂಡವನ್ನ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದ ಲಾರಿ.. ಚಾಲಕ ಬದುಕುಳಿದ್ದೇ ದೊಡ್ಡದು..
ಏಕದಿನಕ್ಕೆ ರೋಹಿತ್ ಶರ್ಮಾ, T20ಗೆ ಸೂರ್ಯ ನಾಯಕ..!
ಶ್ರೀಲಂಕಾ ಪ್ರವಾಸದ ಸೆಲೆಕ್ಷನ್ಗೂ ಮುನ್ನ ನಾಯಕತ್ವದ ಚರ್ಚೆ ಜೋರಾಗಿ ನಡೆದಿತ್ತು. ಏಕದಿನಕ್ಕೆ ರೋಹಿತ್ ಶರ್ಮಾ ನಾಯಕನಾಗೋದು ಕನ್ಫರ್ಮ್ ಅನ್ನೋದು ಮೊದಲೇ ಗೊತ್ತಿತ್ತು. ಟಿ20 ಫಾರ್ಮ್ಯಾಟ್ಗೆ ರೋಹಿತ್ ನಿವೃತ್ತಿ ಹೇಳಿದ್ರಿಂದ, ಯಾರು ಕ್ಯಾಪ್ಟನ್ ಎಂಬ ಪ್ರಶ್ನೆ ಹುಟ್ಟಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಟಿ20 ತಂಡದ ನಾಯಕನ ಪಟ್ಟವೇರಿದ್ದಾರೆ.
ಜಸ್ಪ್ರಿತ್ ಬೂಮ್ರಾಗೆ ರೆಸ್ಟ್, ಶ್ರೇಯಸ್ ಕಮ್ಬ್ಯಾಕ್
ಟೀಮ್ ಇಂಡಿಯಾ ಮೂರು ಫಾರ್ಮೆಟ್ನ ಸೂಪರ್ ಸ್ಟಾರ್ ವೇಗಿ ಜಸ್ಪ್ರಿತ್ ಬೂಮ್ರಾಗೆ ಪ್ರವಾಸದಿಂದ ರೆಸ್ಟ್ ನೀಡಲಾಗಿದೆ. ಬೂಮ್ರಾ ಬದಲು ಯುವ ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಗಿದೆ. ಕೆಲ ದಿನಗಳಿಂದ ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಏಕದಿನ ಮಾದರಿಗೆ ಕಮ್ಬ್ಯಾಕ್ ಮಾಡಿದ್ದಾರೆ. ಒಟ್ಟಾರೆ 15 ಆಟಗಾರರ ಬಲಿಷ್ಠ ತಂಡವನ್ನ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?
ಏಕದಿನ ಸರಣಿಗೆ ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (WK), ರಿಷಭ್ ಪಂತ್ (WK), ಶ್ರೇಯಸ್ ಅಯ್ಯರ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ
ಚುಟುಕು ಫಾರ್ಮೆಟ್ಗೆ ಯಂಗ್ ಇಂಡಿಯಾ..!
ಜುಲೈ 27ರಿಂದ ಆರಂಭವಾಗಲಿರೋ ಟಿ20 ಸರಣಿಗೂ ತಂಡವನ್ನ ಆಯ್ಕೆ ಮಾಡಲಾಗಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯನ್ನ ಟಾರ್ಗೆಟ್ ಮಾಡಿರುವ ನಯಾ ಕೋಚ್ ಗಂಭೀರ್ ಹಾಗೂ ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ 15 ಯುವ ಆಟಗಾರರ ತಂಡವನ್ನ ಚುಟುಕು ಫಾರ್ಮೆಟ್ಗೆ ಸೆಲೆಕ್ಟ್ ಮಾಡಲಾಗಿದೆ.
T20 ಸರಣಿಗೆ ಟೀಮ್ ಇಂಡಿಯಾ: ಸೂರ್ಯಕುಮಾರ್ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (WK), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ನೋಯ್, ಆರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್
ODI ಮತ್ತು ಟಿ20 ಎರಡೂ ಪಂದ್ಯ ಆಡುವ ಆಟಗಾರರು!
ಶುಬ್ಮನ್ ಗಿಲ್, ರಿಷಬ್ ಪಂತ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಮೊಹ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್ ಸೇರಿ ಒಟ್ಟು 9 ಆಟಗಾರರು ಏಕದಿನ ಸರಣಿ ಹಾಗೂ ಟಿ-20 ಸರಣಿಗಳಲ್ಲಿ ಆಡಲಿದ್ದಾರೆ. ಒಟ್ಟಿನಲ್ಲಿ ಸಿಂಹಳೀಯರನ್ನ ಬೇಟೆಗೆ ಸಾಕಷ್ಟು ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೆ ಸೆಲೆಕ್ಟ್ ಮಾಡಿದೆ. ಆನ್ಫೀಲ್ಡ್ನಲ್ಲಿ ಆಟಗಾರರ ಪರ್ಫಾಮೆನ್ಸ್ ಹೇಗಿರುತ್ತೆ ಅನ್ನೋದಷ್ಟೇ ಸದ್ಯದ ಕುತೂಹಲವಾಗಿದೆ. ಇದಕ್ಕೆ ಜುಲೈ 27ರಿಂದ ಆರಂಭವಾಗಲಿರೋ ಸರಣಿ ಉತ್ತರ ಕೊಡಲಿದೆ.
ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್