/newsfirstlive-kannada/media/post_attachments/wp-content/uploads/2024/10/Abhimanyu-Eashwaran.jpg)
ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್ ಇರಾನಿ ಕಪ್ನಲ್ಲಿ ಅಮೋಘ ಶತಕ ಸಿಡಿಸಿದ್ರು. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಬ್ಯಾಟ್ ಬೀಸಿದ ಅಭಿಮನ್ಯು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ರು.
ಮುಂಬೈ ತಂಡ 3ನೇ ದಿನದ ಆರಂಭಕ್ಕೆ 536 ರನ್ ಗಳಿಸಿ ಆಲೌಟ್ ಆಗಿದೆ. ತಂಡದ ಪರ ಸರ್ಫರಾಜ್ ಖಾನ್ 286 ಎಸೆತಗಳಲ್ಲಿ 25 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 222 ರನ್ ಕಲೆ ಹಾಕಿದ್ರು.
ಇನ್ನು, ಮೊದಲ ಇನ್ನಿಂಗ್ಸ್ನಲ್ಲೇ 536 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ರೆಸ್ಟ್ ಆಫ್ ಇಂಡಿಯಾ ತಂಡ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್ಗೆ 289 ರನ್ ಕಲೆ ಹಾಕಿದೆ. ರೆಸ್ಟ್ ಆಫ್ ಇಂಡಿಯಾ ತಂಡದ ಪರ ಇನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿದ್ರು.
ಅಭಿಮನ್ಯು ಭರ್ಜರಿ ಶತಕ
ರೆಸ್ಟ್ ಆಫ್ ಇಂಡಿಯಾ ತಂಡದ ಪರ ಓಪನರ್ ಆಗಿ ಬಂದ ಅಭಿಮನ್ಯು ಈಶ್ವರನ್ ಅಮೋಘ ಬ್ಯಾಟಿಂಗ್ ಮಾಡಿದ್ರು. ಇವರು ಎದುರಿಸಿದ 292 ಎಸೆತಗಳಲ್ಲಿ ಬರೋಬ್ಬರಿ 191 ರನ್ ಚಚ್ಚಿದ್ರು. ಬ್ಯಾಕ್ ಟು ಬ್ಯಾಕ್ 16 ಫೋರ್, 1 ಸಿಕ್ಸರ್ ಸಿಡಿಸಿದ್ರು. ಈ ಮೂಲಕ ಬಿಸಿಸಿಐ ಸೆಲೆಕ್ಷನ್ ಕಮಿಟಿ ಗಮನ ಸೆಳೆದರು. ಮುಂದಿನ ಟೆಸ್ಟ್ ಸೀರೀಸ್ಗೆ ಟೀಮ್ ಇಂಡಿಯಾಗೆ ಆಯ್ಕೆ ಮಾಡಿ ಎಂದು ಸೂಚನೆ ಕೊಟ್ರು.
ಕೊನೆಗೆ ರೆಸ್ಟ್ ಆಫ್ ಇಂಡಿಯಾ ತಂಡ 110 ಓವರ್ನಲ್ಲಿ 416 ರನ್ಗಳಿಗೆ ಆಲೌಟ್ ಆಗಿದೆ. ಮುಂಬೈ ತಂಡ 2ನೇ ಇನ್ನಿಂಗ್ಸ್ ಶುರು ಮಾಡಿದ್ದು, 274 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ: ಸಂಬಳ ಕೊಟ್ಟಿಲ್ಲ ಎಂದು ಕ್ಯಾಪ್ಟನ್ಸಿಗೆ ರಾಜೀನಾಮೆ ಕೊಟ್ಟ ಬಾಬರ್; ಶಾಕ್ ಆದ ಪಾಕಿಸ್ತಾನ ಟೀಮ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ