/newsfirstlive-kannada/media/post_attachments/wp-content/uploads/2025/06/team-india-5.jpg)
4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಶುಭ್ಮನ್ ಗಿಲ್ ಪಡೆ ಮುಂದೆ ಸಾಲು ಸಾಲು ಸವಾಲುಗಳಿವೆ. ಈ ಸವಾಲುಗಳನ್ನ ಮೆಟ್ಟಿನಿಂತರಷ್ಟೇ ಟೀಮ್ ಇಂಡಿಯಾ ಸೇಫ್. ಇಲ್ಲ ಕನಸು ಭಗ್ನ!
ಹೆಡಿಂಗ್ಲೆಯಲ್ಲಿ ಸೋಲು, ಎಡ್ಜ್ಬಾಸ್ಟನ್ನಲ್ಲಿ ಐತಿಹಾಸಿಕ ಗೆಲುವು. ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಅನಿರೀಕ್ಷಿತ ಸೋಲು. ಈಗ ಮಿಷಲ್ ಮ್ಯಾಂಚೆಸ್ಟರ್ ಸವಾಲು, ಇಲ್ಲಿ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಮೈದಾನದಲ್ಲಿ ಗೆಲುವನ್ನೇ ಕಾಣದ ಟೀಮ್ ಇಂಡಿಯಾ ಚೊಚ್ಚಲ ಟೆಸ್ಟ್ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಕನಸಿನಲ್ಲಿದೆ. ಈ ಕನಸು ನನಸಾಗಬೇಕಾದ್ರೆ ಟೀಮ್ ಇಂಡಿಯಾ 5 ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ.
ಇದನ್ನೂ ಓದಿ: ಕ್ರಿಕೆಟರ್ ಶ್ರೀಶಾಂತ್ ಮಗಳು ನೆನಪಾದಾಗಲೆಲ್ಲಾ ಹೃದಯ ಛಿದ್ರ ಆಗುತ್ತೆ.. ಭಜ್ಜಿ ಪಶ್ಚಾತಾಪ..!
ನಂಬರ್ 1: ಸ್ವಿಂಗ್ ಮತ್ತು ಸೀಮ್ ಕಂಡೀಷನ್
ಈ ಹಿಂದಿನ ಮೂರು ಪಂದ್ಯಗಳೇ ಪಿಚ್, ಕಂಡೀಷನ್ಸ್ ಭಿನ್ನವಾದ್ರೆ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಪಿಚ್ ಮತ್ತಷ್ಟು ವಿಭಿನ್ನ. ಪೇಸ್, ಬೌನ್ಸ್ಗೆ ಆಫರ್ ನೀಡುವ ಈ ಪಿಚ್, ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಪಂದ್ಯದ ನಡುವೆ ಮಳೆಬರುವ ಸಾಧ್ಯತೆ ಇದೆ. ಇದು ಸೀಮರ್ಗಳಿಗೆ ಬಿಗ್ ಅಡ್ವಾಂಟೇಜ್ ಆಗುವುದರಲ್ಲಿ ಡೌಟಿಲ್ಲ.
ನಂಬರ್ 2: ಡೇಂಜರಸ್ ಜೋಫ್ರಾ ಆರ್ಚರ್
ಫಾಸ್ಟ್ ಅಂಡ್ ಫ್ಯೂರಿಯಸ್ ಜೋಫ್ರಾ ಆರ್ಚರ್. ಲಾರ್ಡ್ಸ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾಗೆ ಕಾಡಿದ್ದ ಆರ್ಚರ್, ಓಲ್ಡ್ ಟ್ರಾಫರ್ಡ್ ಸೀಮಿಂಗ್ ಕಂಡೀಷನ್ಸ್ನಲ್ಲಿ ವಿಲನ್ ಆಗುವುದು ಫಿಕ್ಸ್. ಹೀಗಾಗಿ ಜೋಫ್ರಾ ಆರ್ಚರ್ ಎಫೆಕ್ಟೀವ್ ಬೌಲಿಂಗ್ ಎದುರು ಎಚ್ಚರಿಕೆಯ ಆಟವಾಡಬೇಕಿದೆ. ಟೀಮ್ ಇಂಡಿಯಾ ಹೆಡೆಮುರಿ ಕಟ್ಟಬೇಕಾಗುತ್ತೆ.
ನಂಬರ್.3: ಬ್ಯಾಟ್ಸ್ಮನ್ಸ್ ತೋರಿಸಬೇಕು ತಾಳ್ಮೆ
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ್ರೆ, ಬ್ಯಾಟ್ಸ್ಮನ್ಗಳ ಪಾತ್ರವೇ ಅತಿಮುಖ್ಯ. ಹೆಚ್ಚುವರಿ ಸ್ವಿಂಗ್ ಅಂಡ್ ಸೀಮ್ ಇರುವುದರಿಂದ ಬ್ಯಾಟ್ಸ್ಮನ್ಸ್ ತಾಳ್ಮೆ ತೋರಬೇಕಿದೆ. ಪ್ರಮುಖವಾಗಿ ಟಫ್ ಕಂಡೀಷನ್ಸ್ನಲ್ಲಿ ಕೈಕೊಡುವ ಯಶಸ್ವಿ ಜೈಸ್ವಾಲ್, ಗಿಲ್ ಈ ಪಿಚ್ನಲ್ಲಿ ತಾಳ್ಮೆ ತೋರದಿದ್ರೆ ಕೊಲಾಪ್ಸ್ ಆಗೋದ್ರಲ್ಲಿ ಡೌಟಿಲ್ಲ.
ಇದನ್ನೂ ಓದಿ: ಇವತ್ತಿನಿಂದ ಧರ್ಮಸ್ಥಳ ಕೇಸ್ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ
ನಂಬರ್.4: ಟಾಸ್ ಗೆಲ್ಲೋದು ಇಂಪಾರ್ಟೆಂಟ್
ಟಾಸ್ ಗೆದ್ದವನೇ ಬಾಸ್. ತಂಡಗಳ ಗೆಲುವು ನಿರ್ಣಯಿಸುವುದೇ ಟಾಸ್. ಹೀಗಾಗಿ ಮ್ಯಾಂಚೆಸ್ಟರ್ ಮ್ಯಾಚ್ ಗೆಲ್ಲಬೇಕಾದ್ರೆ ಟೀಮ್ ಇಂಡಿಯಾ ಟಾಸ್ ಗೆಲ್ಲೋದು ಬಹುಮುಖ್ಯ. ಟೆಸ್ಟ್ನ ಮೊದಲ ದಿನ ಬೌಲಿಂಗ್ಗೆ ಹೆಚ್ಚೆಚ್ಚು ಅಡ್ವಾಂಟೇಜ್ ಇರುತ್ತದೆ. ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ನಡೆಯುತ್ತೆ. ಹೀಗಾಗಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ನ ಆಯ್ದುಕೊಳ್ಳಬೇಕು. ಆ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳಿಗೆ ಕಾಟ ನೀಡಬೇಕು.
ನಂಬರ್.5: ಡು ಆರ್ ಡೈ ಮ್ಯಾಚ್..
ಇದು ಟೀಮ್ ಇಂಡಿಯಾಗೆ ಡು ಆರ್ ಡೈ ಮ್ಯಾಚ್. ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಸರಣಿ ಜೀವಂತವಾಗಿರಿಸಿಕೊಳ್ಳಬೇಕಾದ್ರೆ ಮ್ಯಾಂಚೆಸ್ಟರ್ ಮ್ಯಾಚ್ ಗೆಲ್ಲಲೇಬೇಕಿದೆ. ಇಲ್ಲದಿದ್ರೆ ಸರಣಿ ಕೈಚೆಲ್ಲಬೇಕಾಗುತ್ತೆ. ಹೀಗಾಗಿ ಡು ಆರ್ ಡೈ ಮ್ಯಾಚ್ನಲ್ಲಿ ಕೆಚ್ಚೆದೆಯ ಹೋರಾಟ ನಡೆಸಬೇಕಿದೆ. ಕೆಲವರನ್ನಷ್ಟೇ ನಂಬಿಕೊಳ್ಳದೆ, ಪ್ರತಿ ಆಟಗಾರ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ಹೊರಗಾಕಬೇಕು. ಹಿಂದಿನ ರೆಕಾರ್ಡ್ಸ್ ಅಲ್ಲದಿದ್ದರೂ ಎಡ್ಜ್ಬಾಸ್ಟನ್ ಗೆಲುವನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮ್ಯಾಂಚೆಸ್ಟರ್ನಲ್ಲಿ ಐತಿಹಾಸಿಕ ಸಾಧನೆ ಮಾಡಬೇಕಿದೆ.
ಮ್ಯಾಂಚೆಸ್ಟರ್ನ ಇತಿಹಾಸ ಏನೇ ಹೇಳಲಿ, ಕಂಡೀಷನ್ಸ್ ಟೀಮ್ ಇಂಡಿಯಾ ಪಾಲಿಗೆ ವಿರುದ್ಧವೇ ಆಗಿರಲಿ ಒಗ್ಗಟ್ಟಿನ ಆಟವಾಡಿದ್ರೆ ಗೆಲ್ಲೋದು ಕಷ್ಟವೇನಲ್ಲ.
ಇದನ್ನೂ ಓದಿ: ಅಂದು ಅಮ್ಮನಿಗೆ ಅವಮಾನ ಮಾಡಿದ್ದಕ್ಕೆ ಸೇಡು.. 10 ವರ್ಷ ಕಾಲ ಹುಡುಕಿ ಹೊಡೆದ ಮಗ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ