/newsfirstlive-kannada/media/post_attachments/wp-content/uploads/2024/08/Team-India-1.jpg)
ಮಹತ್ವದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭರದ ಸಿದ್ಧತೆ ನಡೆಸ್ತಿದ್ದ ಟೀಮ್ ಇಂಡಿಯಾಗೆ ತೀವ್ರ ಹಿನ್ನಡೆ ಉಂಟಾಗಿದೆ. ತಂಡದ ಮ್ಯಾಚ್ ವಿನ್ನರ್ ಜಸ್ಪ್ರಿತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳೋ ಸಾಧ್ಯತೆ ದಟ್ಟವಾಗಿದೆ. ಈ ಮ್ಯಾಸಿವ್ ಸೆಟ್ಬ್ಯಾಕ್ ಟೀಮ್ ಇಂಡಿಯಾ ತೀವ್ರ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಕರಿಯರ್ಗೂ ಇದು ಮುಳ್ಳಾಗಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾಗೆ ಶಾಕ್
ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋತಿರುವ ಟೀಮ್ ಇಂಡಿಯಾ, ಈಗ ಮುಂದಿನ ಚಾಂಪಿಯನ್ಸ್ ಟ್ರೋಫಿಯತ್ತ ದೃಷ್ಟಿ ನೆಟ್ಟಿದೆ. ಟಿ20 ವಿಶ್ವಕಪ್ನಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲೋ ಕಾನ್ಫಿಡೆನ್ಸ್ನಲ್ಲಿ ಸಿದ್ಧತೆಯನ್ನೂ ಆರಂಭಿಸಿದೆ. ಇದ್ರ ನಡುವೆಯೇ ಆಘಾತಕಾರಿ ಸುದ್ದಿ ಟೀಮ್ ಇಂಡಿಯಾಗೆ ಬರ ಸಿಡಿಲನಂತೆ ಅಪ್ಪಳಿಸಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮ್ಯಾಚ್ ವಿನ್ನರ್ ಜಸ್ಪ್ರೀತ್ ಬುಮ್ರಾ ಆಡೋದು ಅನುಮಾನವಾಗಿದೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಜಸ್ಪ್ರೀತ್ ಬುಮ್ರಾ, ಮುಂದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡೋದು ಅನುಮಾನವಾಗಿದೆ. ಸದ್ಯ ಫುಲ್ ಫಿಟ್ ಆಗದ ಬುಮ್ರಾ ಬೆಂಗಳೂರಿನ ಎನ್ಸಿಎಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಬ್ಯಾಕ್ ಇಂಜುರಿಗೆ ತುತ್ತಾದಾಗ ಮೇಜರ್ ಬ್ಯಾಕ್ ಸರ್ಜರಿ ಮಾಡಿದ್ದ ನ್ಯೂಜಿಲೆಂಡ್ನ ತಜ್ಞ ವೈದ್ಯ ರೋವನ್ ಅವರನ್ನ ಈಗಾಗಲೇ ಬೂಮ್ರಾ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಫುಲ್ ಫಿಟ್ ಆಗಲು ಹೆಚ್ಚಿನ ಸಮಯಾವಕಾಶ ಬೇಕು ಎನ್ನಲಾಗಿದೆ.
ಟೀಮ್ ಇಂಡಿಯಾಗೆ ಬುಮ್ರಾ ಶಾಕ್
ಇಂಗ್ಲೆಂಡ್ ಸರಣಿಯಿಂದ ಹೊರಗುಳಿಯಲಿರೋ ಬುಮ್ರಾ, ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯಗಳನ್ನ ಬಹುತೇಕ ಅನುಮಾನವೇ! ನಾಕೌಟ್ ಪಂದ್ಯಗಳಿಗೆ ಲಭ್ಯರಾಗೋ ಸಾಧ್ಯತೆಯಿದೆ. ಪ್ರಮುಖ ಟೂರ್ನಿ ಬುಮ್ರಾ ಅಲಭ್ಯತೆ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ತಂದಿಟ್ಟಿದೆ. ಜೊತೆಗೆ ಬುಮ್ರಾ ಇಂಜುರಿ ಬಿಸಿಸಿಐನ ಕಾರ್ಯವೈಖರಿಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ. ಜಸ್ಪ್ರೀತ್ ಬುಮ್ರಾ ಕರಿಯರ್ ಜೊತೆ ಚೆಲ್ಲಾಟವಾಡ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ.
ಇದನ್ನೂ ಓದಿ:BREAKING: ಬೆಂಗಳೂರಿಂದ ಬೆಳಗಾವಿಗೆ ಹೋಗುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ