/newsfirstlive-kannada/media/post_attachments/wp-content/uploads/2025/02/ROHIT-SHARMA-3.jpg)
ಭಾರತ ಕ್ರಿಕೆಟ್ ತಂಡ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದ್ರು.
ಕೆ.ಎಲ್ ರಾಹುಲ್ ಅವರನ್ನು ಹೊಗಳಿದ ರೋಹಿತ್
ಇಡೀ ತಂಡ ಗೆಲುವಿಗಾಗಿ ಶ್ರಮಿಸಿದೆ. ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇದೇ ಕಾರಣಕ್ಕೆ ನಾವು ಕೆ.ಎಲ್ ರಾಹುಲ್ ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಲಿ ಎಂದು ಒತ್ತಡ ಹಾಕಿದ್ದು. ಮಿಡಲ್ ಆರ್ಡರ್ ಬ್ಯಾಟ್ ಮಾಡಲು ಕೆ.ಎಲ್ ರಾಹುಲ್ ಅವರಿಂದ ಮಾತ್ರ ಸಾಧ್ಯ. ಆ ಕಾಮ್ನೆಸ್ ಮತ್ತು ಡೀಸೆಂಟ್ ಬ್ಯಾಟಿಂಗ್ ಎಲ್ಲರಿಗೂ ಇಷ್ಟ ಆಗುತ್ತೆ. ಅವರೊಂದಿಗೆ ಬ್ಯಾಟಿಂಗ್ ಮಾಡುವ ಎಲ್ಲರಿಗೂ ಕೆ.ಎಲ್ ರಾಹುಲ್ ಫ್ರೀಡಮ್ ಕೊಡುತ್ತಾರೆ ಎಂದರು ಕ್ಯಾಪ್ಟನ್ ರೋಹಿತ್ ಶರ್ಮಾ.
ನ್ಯೂಜಿಲೆಂಡ್ 252 ರನ್ಗಳ ಗುರಿ ನೀಡಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಕೊನೆಯವರೆಗೂ ಕ್ರೀಸ್ನಲ್ಲೇ ನಿಂತು ಆಡಿದ ಕನ್ನಡಿಗ ಕೆ.ಎಲ್ ರಾಹುಲ್ ಆಡಿದರು. ಅಷ್ಟೇ ಅಲ್ಲ ಭಾರತ ತಂಡವನ್ನು ಗೆಲ್ಲಿಸಿದರು. ರಾಹುಲ್ 1 ಸಿಕ್ಸರ್, 1 ಫೋರ್ ಸಮೇತ 34 ರನ್ ಸಿಡಿಸಿದರು. ಭಾರತ 49 ಓವರ್ನಲ್ಲಿ 254 ರನ್ ಗಳಿಸಿ ಗೆಲುವು ಸಾಧಿಸಿದೆ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು; ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ