/newsfirstlive-kannada/media/post_attachments/wp-content/uploads/2025/01/Gambhir_Rohit-Sharma_News.jpg)
ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದೆ. ಫೆಬ್ರವರಿ 19ರಿಂದ ಆರಂಭವಾಗೋ ಐಸಿಸಿ ಟೂರ್ನಿಗೆ ತಂಡಗಳ ಸಿದ್ಧತೆಗಳು ಜೋರಾಗಿವೆ. ಭಾರತೀಯ ಕ್ರಿಕೆಟ್ ವಲಯದಲ್ಲೂ ಪ್ರಿಪರೇಶನ್ ಶುರುವಾಗಿದೆ. ಆದ್ರೆ, ಇದ್ರ ನಡುವೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಆತಂಕದ ಸುದ್ದಿ ಹೊರಬಿದ್ದಿದೆ. ಕೋಚ್ ಗೌತಮ್ ಗಂಭೀರ್ - ಕ್ಯಾಪ್ಟನ್ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಟೀಮ್ ಇಂಡಿಯಾದಲ್ಲಿ ಅಸಮಾಧಾನದ ಹೊಗೆ.?
ಟೀಮ್ ಇಂಡಿಯಾದಲ್ಲಿ ಮತ್ತೆ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ. ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಶಾಕಿಂಗ್ ಸುದ್ದಿ ರಿವೀಲ್ ಆಗಿದೆ. ಬಾರ್ಡರ್-ಗವಾಸ್ಕರ್ ಸರಣಿಯ ರಿವ್ಯೂ ಮೀಟಿಂಗ್ ಅಂತ್ಯದ ಬೆನ್ನಲ್ಲೇ, ಸ್ಪೋಟವಾಗಿರೋ ಈ ಸುದ್ದಿ ಬಿರುಗಾಳಿ ಎಬ್ಬಿಸಿದೆ.
ರೋಹಿತ್ ಶರ್ಮಾ ವೈಫಲ್ಯ.. ಗಂಭೀರ್ ಗರಂ.!
ವೈಫಲ್ಯದ ಸುಳಿಗೆ ಸಿಲುಕಿದ್ದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಟೂರ್ ಮಧ್ಯದಲ್ಲೇ ನಿವೃತ್ತಿ ಘೋಷಿಸಲು ಸಜ್ಜಾಗಿದ್ರಂತೆ. ಮೆಲ್ಬರ್ನ್ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ ಬಳಿಕ ರೋಹಿತ್ ಶರ್ಮಾ ತೀವ್ರ ಟೀಕೆಗೆ ಗುರಿಯಾಗಿದ್ರು. ರೋಹಿತ್ ಪರ್ಫಾಮೆನ್ಸ್ ಬಗ್ಗೆ ಸ್ವತಃ ಕೋಚ್ ಗೌತಮ್ ಗಂಭೀರ್ಗೆ ಅಸಮಾಧಾನ ಶುರುವಾಗಿತ್ತಂತೆ. ಹೀಗಾಗಿ ಸಿಡ್ನಿಯಲ್ಲಿ ನಡೆಯ ಕೊನೆಯ ಟೆಸ್ಟ್ನಿಂದ ನಾಯಕನನ್ನೇ ಡ್ರಾಪ್ ಮಾಡೋ ನಿರ್ಧಾರ ಮಾಡಿದ್ರಂತೆ.
ರೋಹಿತ್ ಶರ್ಮಾಗೆ ಬೇಸರ.. ನಿವೃತ್ತಿಗೆ ನಿರ್ಧಾರ.!
ಅಂತಿಮ ಟೆಸ್ಟ್ನ ಹಿಂದಿನ ದಿನ ಬೂಮ್ರಾ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದ ಗಂಭೀರ್, ರೋಹಿತ್ಗೂ ತಮ್ಮ ನಿರ್ಧಾರ ತಿಳಿಸಿದ್ರಂತೆ. ಆ ಬಳಿಕ ರೋಹಿತ್ರ ಆನ್ಸರ್ಗೆ ಕಾಯದೇ ಪಂದ್ಯಕ್ಕೂ ಮುನ್ನ ತಾವೇ ಸುದ್ದಿಗೋಷ್ಟಿಗೆ ಹಾಜಾರಾಗಿದ್ರು. ಅಲ್ಲೂ ಕೂಡ ರೋಹಿತ್ ಬಗ್ಗೆ ಕೇಳಿಬಂದ ಪ್ರಶ್ನೆಗೆ ಪಿಚ್ ನೋಡಿ ತೀರ್ಮಾನ ಎಂದು ಹೇಳಿದ್ರು. ಕೋಚ್ ಗಂಭೀರ್ರ ಈ ನಡೆ ರೋಹಿತ್ ಶರ್ಮಾಗೆ ಬೇಸರ ತರಿಸಿತ್ತಂತೆ. ಇಷ್ಟೇ ಅಲ್ಲ.. ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳೋ ತೀರ್ಮಾನವನ್ನೂ ಮಾಡಿದ್ರಂತೆ.
‘ಸೆಲೆಕ್ಟರ್ ಸಂಧಾನ’ ರೋಹಿತ್ ಶರ್ಮಾ U-ಟರ್ನ್!
ಗಂಭೀರ್ ಅಂದುಕೊಂಡಂತೆ ಎಲ್ಲಾ ನಡೆದು ಸಿಡ್ನಿ ಟೆಸ್ಟ್ನಿಂದ ರೋಹಿತ್ ಶರ್ಮಾ ಹೊರಗುಳಿದ್ರು. ಇದ್ರಿಂದ ಬೇಸರಗೊಂಡಿದ್ದ ರೋಹಿತ್, ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳೋ ನಿರ್ಧಾರ ಮಾಡಿದ್ರು. ಈ ಬಗ್ಗೆ ಗೌತಮ್ ಗಂಭೀರ್ ಜೊತೆಗೂ ಚರ್ಚಿಸಿದ್ರು. ರೋಹಿತ್ ಶರ್ಮಾ ನಿವೃತ್ತಿ ಮಾತಿಗೆ ಗಂಭೀರ್ ಮರು ಮಾತಾಡದೇ ಯೆಸ್ ಅಂದಿದ್ರಂತೆ. ಆದ್ರೆ, ಈ ನಡುವೆ ರೋಹಿತ್ ಶರ್ಮಾ ಆಪ್ತರು ಹಾಗೂ ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ಸದಸ್ಯರೊಬ್ಬರು ರೋಹಿತ್ನ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ರಂತೆ. ಆಗ U ಟರ್ನ್ ತೆಗೆದುಕೊಂಡ ರೋಹಿತ್, ನಿವೃತ್ತಿ ನಿರ್ಧಾರ ಕೈ ಬಿಟ್ಟಿದ್ದಂತೆ.
ರೋಹಿತ್ ಶರ್ಮಾ ನಿವೃತ್ತಿಯಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ದೇ ಗೌತಮ್ ಗಂಭೀರ್ ಬೇಸರ ತರಿಸಿತ್ತು. ಇನ್ನೊಂದು ಹೆಜ್ಜೆ ಮುಂದೆ ಹೋದ ರೋಹಿತ್ ಬಹಿರಂಗವಾಗಿ ಸಂದರ್ಶನ ನೀಡಿ ನಿವೃತ್ತಿ ಬಗೆಗಿನ ಪ್ರಶ್ನೆಗಳಿಗೆ ಖಡಕ್ ಆನ್ಸರ್ ನೀಡಿದ್ರು. ನಾನು ಯಾರಿಗೂ ಹೆದರಲ್ಲ. ನಾಯಕತ್ವ ಯಾರು ತಟ್ಟೆಗೆ ಹಾಕಿಕೊಟ್ಟಿಲ್ಲ ಎಂದೆಲ್ಲಾ ಖಡಕ್ ಮಾತುಗಳನ್ನ ರೋಹಿತ್ ಶರ್ಮಾ ಆಡಿದ್ರೆ. ಇವೆಲ್ಲಾ ಪರೋಕ್ಷವಾಗಿ ಗಂಭೀರ್ಗೆ ಕೊಟ್ಟ ಟಾಂಗ್ ಎನ್ನಲಾಗ್ತಿದೆ.
ಕೆಲ ಆಟಗಾರರೊಂದಿಗೆ ಗಂಭೀರ್ ಸಂಬಂಧ ಅಷ್ಟಕಷ್ಟೆ.!
ರೋಹಿತ್ ಶರ್ಮಾ ವಿಚಾರದಲ್ಲಿ ಮಾತ್ರವಲ್ಲ.. ತಂಡದಲ್ಲಿ ಕೆಲ ಆಟಗಾರರ ಜೊತೆಗೆ ಕೋಚ್ ಗೌತಮ್ ಗಂಭೀರ್ ಭಾಂದವ್ಯ ಅಷ್ಟಕಷ್ಟೇ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್ ರೂಮ್ನ ವಾತಾವರಣವನ್ನ ಹಾಳು ಮಾಡಿದೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್, ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ವಾತಾವರಣ ಸಂಪೂರ್ಣ ವಿಭಿನ್ನವಾಗಿತ್ತು, ಪ್ರತಿಯೊಬ್ಬ ಆಟಗಾರರನಿಗೂ ಸ್ವಾತಂತ್ರ್ಯವಿತ್ತು. ಆದ್ರೆ, ಈಗಿನ ಹೆಡ್ಕೋಚ್ ಗಂಭೀರ್ ಹೆಡ್ ಮಾಸ್ಟರ್ ರೀತಿ ವರ್ತಿಸ್ತಾ ಇರೋದು ಹಲವರಿಗೆ ಬೇಸರ ತರಿಸಿದೆ ಎಂಬ ಸುದ್ದಿಯೂ ಹರಿದಾಡ್ತಿದೆ.
ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ಪರ್ಫಾಮೆನ್ಸ್ ಕುಂದಿದೆ. ಸಾಲು ಸಾಲು ಸೋಲುಗಳನ್ನ ತಂಡ ಕಂಡಿದೆ. ಈ ವೈಫಲ್ಯಕ್ಕೆ ಟೀಮ್ ಇಂಡಿಯಾದ ಕಳಪೆ ಪರ್ಫಾಮೆನ್ಸ್ ಡ್ರೆಸ್ಸಿಂಗ್ ರೂಮ್ ವಾತಾವರಣವೂ ಒಂದು ಕಾರಣ ಅನ್ನೋ ವಿಶ್ಲೇಷಣೆ ಸದ್ಯ ನಡೀತಿದೆ. ಮುಂದಿನ ಚಾಂಪಿಯನ್ಸ್ ಟ್ರೋಫಿಯೊಳಗೆ ಇದು ಸರಿಯಾಗದಿದ್ರೆ, ಅಲ್ಲೂ ಸೋಲಿನ ದರ್ಶನವಾಗೋದು ಪಕ್ಕಾ.!
ಇದನ್ನೂ ಓದಿ:ಕೊಹ್ಲಿಗೆ ಬಿಗ್ ಶಾಕ್; ಬಿಸಿಸಿಐ ಮಹತ್ವದ ಸಭೆಯಲ್ಲಿ ವಿರಾಟ್ ಭವಿಷ್ಯದ ಬಗ್ಗೆ ನಡೆದ ಚರ್ಚೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ