/newsfirstlive-kannada/media/post_attachments/wp-content/uploads/2024/12/Mohammed-Siraj_Rohit.jpg)
ಅಡಿಲೇಡ್ನಲ್ಲಿ ನಡೆದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಆಸ್ಟ್ರೇಲಿಯಾ ಗೆದ್ದು ಬೀಗಿದ್ದು, ಈಗ ಉಭಯ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲಗೊಂಡಿದೆ.
ಟೀಮ್ ಇಂಡಿಯಾ ಸೋಲಿನ ಹೊರತಾಗಿ ಭಾರೀ ಚರ್ಚೆಗೆ ಒಳಗಾದ ವಿಷಯ ಎಂದರೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಮೊಹಮ್ಮದ್ ಸಿರಾಜ್ ನಡುವಿನ ಗಲಾಟೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡುವಾಗ ಟ್ರಾವಿಡ್ ಹೆಡ್ ಅವರನ್ನು ಸಿರಾಜ್ ಔಟ್ ಮಾಡಿದ್ರು. ಇದಾದ ಬಳಿಕ ಸಿರಾಜ್ ಬಹಳ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಈ ಸಂದರ್ಭದಲ್ಲಿ ಸಿರಾಜ್ಗೆ ಟ್ರಾವಿಡ್ ಹೆಡ್ ತಮ್ಮ ಭಾಷೆಯಲ್ಲಿ ಏನೋ ಹೇಳಿದ್ರು. ಆಗ ಸಿರಾಜ್ ಪೆವಿಲಿಯನ್ಗೆ ಹೋಗುವಂತೆ ಕೈಸನ್ನೆ ಮಾಡಿದರು. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ.
ರೋಹಿತ್ ಶರ್ಮಾ ಏನಂದ್ರು?
ಸಿರಾಜ್ ಟೀಮ್ ಇಂಡಿಯಾದ ಸ್ಟಾರ್ ಬೌಲರ್. ಆತ ಇಂದು ಯಶಸ್ವಿಯಾಗಲು ಕಾರಣ ಅಗ್ರೆಸ್ಸಿವ್ ಆಗಿರುವುದು. ಆಕ್ರಮಣಕಾರಿ ಆಟದಿಂದಲೇ ಇಲ್ಲಿವರೆಗೂ ಬಂದಿದ್ದಾರೆ. ನಾನು ಸದಾ ಸಿರಾಜ್ ಬೆಂಬಲವಾಗಿ ನಿಲ್ಲುತ್ತೇನೆ. ಭಾರತ, ಆಸ್ಟ್ರೇಲಿಯಾ ಮಧ್ಯೆ ಪಂದ್ಯ ಇರುವಾಗ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯ. ನಾನು ಒಟ್ಟಾರೆ ಗೇಮ್ ಬಗ್ಗೆ ಮಾತಾಡಬಹುದು. ಒಂದು ಘಟನೆ ಬಗ್ಗೆ ಮಾತಾಡಲು ಆಗಲ್ಲ ಎಂದರು.
ಸಿರಾಜ್ಗೆ ಎಚ್ಚರಿಕೆ ಕೊಟ್ಟ ರೋಹಿತ್
ನನಗೆ ಸಿರಾಜ್ ಅಗ್ರೆಸ್ಸಿವ್ನೆಸ್ ಇಷ್ಟ. ಆದರೆ, ಅತಿಯಾದ ಅಗ್ರೆಸಿವ್ನೆಸ್ ಅಲ್ಲ. ಎರಡಕ್ಕೂ ಬಹಳ ವ್ಯತ್ಯಾಸ ಇದೆ. ಎಲ್ಲದಕ್ಕೂ ಮಿತಿ ಇದೆ. ಯಾರು ಮಿತಿಯನ್ನು ಮೀರಬಾರದು. ಒಂದು ಸಣ್ಣ ಗೆರೆ ಇರುತ್ತದೆ. ಅದನ್ನು ದಾಟಿದ್ರೆ ಯಾರಿಗೂ ಒಳ್ಳೆಯದಲ್ಲ ಎಂದು ಮೊಹಮ್ಮದ್ ಸಿರಾಜ್ಗೆ ರೋಹಿತ್ ಶರ್ಮಾ ವಾರ್ನಿಂಗ್ ಕೊಟ್ಟರು.
ಪಂದ್ಯದಲ್ಲಿ ಆಗಿದ್ದೇನು?
ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಭಾರತ 180 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 337 ರನ್ಗಳಿಸಿ 157 ರನ್ ಗಳ ಬೃಹತ್ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸ್ನಲ್ಲಿ ಭಾರತ 175 ರನ್ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 19 ರನ್ಗಳ ಗುರಿಯನ್ನು ಕೇವಲ 3.1 ಓವರ್ನಲ್ಲಿ ಮುಟ್ಟಿತು.
ಇದನ್ನೂ ಓದಿ: ‘ಟೀಮ್ ಇಂಡಿಯಾದ ಸೋಲಿಗೆ ಇವರೇ ಕಾರಣ’- ಕ್ಯಾಪ್ಟನ್ ರೋಹಿತ್ ಬಿಚ್ಚಿಟ್ಟ ಸ್ಫೋಟಕ ಸತ್ಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ