/newsfirstlive-kannada/media/post_attachments/wp-content/uploads/2024/09/Rohit-Sharma-News.jpg)
ಇತ್ತೀಚೆಗೆ ಆಸ್ಟ್ರೇಲಿಯಾದ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ವಿಫಲರಾಗಿದ್ದರು. ಹೀಗಾಗಿ ಫಾರ್ಮ್​ಗೆ ಬರಲು ದೇಶೀಯ ಕ್ರಿಕೆಟ್​ ಆಡುತ್ತಿದ್ದಾರೆ.
ಬಿಸಿಸಿಐ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನೀಡುವ ಪ್ರಾಮುಖ್ಯತೆ ದೇಶೀಯ ಟೂರ್ನಿಗಳಿಗೂ ನೀಡಬೇಕು ಎಂದು ಸೂಚಿಸಿತ್ತು. ಇದರಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್​ ಶರ್ಮಾ ದೇಶೀಯ ಟೂರ್ನಿಯಲ್ಲಿ ಮೈದಾನ ಪ್ರವೇಶಿಸಿದರು. ಮುಂಬೈ ಪರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು.
ರೋಹಿತ್​ ಫ್ಲಾಫ್​​ ಶೋ
ರಣಜಿ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್​ ಶರ್ಮಾ ಫ್ಲಾಫ್ ಶೋ ಮುಂದುವರೆದಿದೆ. ಲೋಕಲ್ ಬೌಲರ್ಗಳ ಎದುರು ರನ್ ಕಲೆ ಹಾಕುವಲ್ಲಿ ರೋಹಿತ್​ ಎಡವಿದರು. ಫಾರ್ಮ್ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಲು ಬಂದ ಇವರು ಇಲ್ಲೂ ರನ್​ ಬರ ಎದುರಿಸಿದರು. ಸಿಂಗಲ್ ಡಿಜಿಟ್ನಲ್ಲೇ ಆಟ ಮುಗಿಸಿದರು.
3 ರನ್​ಗೆ ರೋಹಿತ್​ ಔಟ್​
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದರು. ಆದರೆ, ಜಮ್ಮು ಕಾಶ್ಮೀರ್ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಾನು ಎದುರಿಸಿದ 19 ಎಸೆತಗಳಲ್ಲಿ 3 ರನ್ ಬಾರಿಸಿ ಔಟ್ ಆದರು. ಈ ಮೂಲಕ ರಣಜಿ ಟ್ರೋಫಿಯಲ್ಲೂ ನಿರಾಸೆ ಕಂಡರು.
ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವಂತೆ ಒತ್ತಾಯ
ಅಂತರಾಷ್ಟ್ರೀಯ ಕ್ರಿಕೆಟ್​ ಮಾತ್ರವಲ್ಲ ರಣಜಿಯಲ್ಲೂ ರೋಹಿತ್​ ವಿಫಲರಾದರು. ಹೀಗಾಗಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ಟೀಮ್​ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ