ಕೆ.ಎಲ್​​ ರಾಹುಲ್​ಗೆ ಸುವರ್ಣಾವಕಾಶ; ಟೀಮ್​ ಇಂಡಿಯಾದಿಂದ ಪಂತ್​ ಕೈ ಬಿಡಲು ಕಾರಣ ಬಿಚ್ಚಿಟ್ಟ ರೋಹಿತ್

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • ಭಾರತ, ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ!
  • ನಾಗ್ಪುರದ ವಿಸಿಎ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಪಂದ್ಯ
  • ಪ್ಲೇಯಿಂಗ್​ ಎಲೆವೆನ್​​ನಲ್ಲಿ ಪಂತ್​​ ಬದಲಿಗೆ​ ರಾಹುಲ್​ಗೆ ಸ್ಥಾನ

ಟೀಮ್​​ ಇಂಡಿಯಾ, ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ. ನಾಗ್ಪುರದ ವಿಸಿಎ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಬ್ಯಾಟಿಂಗ್​ ಮಾಡುತ್ತಿದೆ.

ಮೊದಲ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಿದೆ. ಪ್ಲೇಯಿಂಗ್​ ಎಲೆವೆನ್​​ನಲ್ಲಿ ರಿಷಬ್​ ಪಂತ್​​ ಬದಲಿಗೆ ಕೆ.ಎಲ್​ ರಾಹುಲ್​ ಅವರನ್ನೇ ಮೊದಲ ವಿಕೆಟ್​ ಕೀಪರ್​ ಆಯ್ಕೆ ಮಾಡಿದ್ದಾರೆ.

ಕೆ.ಎಲ್​ ರಾಹುಲ್​ಗೆ ಚಾನ್ಸ್​ ನೀಡಿದ್ದೇಕೆ?

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಕೆ.ಎಲ್​ ರಾಹುಲ್​. ಇವರು 2023ರ ವಿಶ್ವಕಪ್‌ನಲ್ಲಿ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿದರು. ಜತೆಗೆ ರಾಹುಲ್ ಅದ್ಭುತ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆದಿದ್ರು. ಈಗ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆ.ಎಲ್​​​ ರಾಹುಲ್​ ಸ್ಥಾನ ಪಡೆದಿದ್ದಾರೆ.

ಪಂತ್​ ಕೈ ಬಿಡಲು ಕಾರಣ ಬಿಚ್ಚಿಟ್ಟ ರೋಹಿತ್​​

ಕಳೆದ ಹಲವು ವರ್ಷಗಳಿಂದ ಕೆಎಲ್ ರಾಹುಲ್ ಏಕದಿನ ಮಾದರಿಯಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ವಿಕೆಟ್​ ಕೀಪಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ 10 ಏಕದಿನ ಪಂದ್ಯದಲ್ಲೂ ತಂಡದ ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿದ್ದು, ಪಂತ್​ ಬದಲಿಗೆ ಕೆ.ಎಲ್​ ರಾಹುಲ್​ ಅವರನ್ನೇ ಆಡಿಸುತ್ತೇವೆ ಎಂದರು.

ಪಂತ್​​, ಕೆ.ಎಲ್​ ರಾಹುಲ್​​ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಇಬ್ಬರೂ ಸ್ವಂತ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಾಹುಲ್ ಮತ್ತು ಪಂತ್​​ ನಡುವೆ ಯಾರನ್ನು ಆಡಿಸಬೇಕು ಎಂದು ನಿರ್ಧರಿಸೋದು ಕಷ್ಟ ಎಂದರು.

ಇದನ್ನೂ ಓದಿ: ಭಾರತ, ಇಂಗ್ಲೆಂಡ್​ ಮೊದಲ ಏಕದಿನ ಪಂದ್ಯ; ಬಲಿಷ್ಠ ತಂಡ ಪ್ರಕಟ; ಮೂವರು RCB ಸ್ಟಾರ್​ ಆಟಗಾರರಿಗೆ ಅವಕಾಶ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment