ಟೀಮ್​ ಇಂಡಿಯಾ ಗೆಲುವಿಗೆ ಕಾರಣ ಯಾರು? ಸ್ಫೋಟಕ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್ ಶರ್ಮಾ!

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಂ ಇಂಡಿಯಾದ ಸ್ಟಾರ್ ಓಪನರ್ ನಿವೃತ್ತಿ..
Advertisment
  • ಟಿ20 ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ಏಕದಿನ ಸರಣಿ ಕ್ಲೀನ್​ ಸ್ವೀಪ್
  • ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಹತ್ವದ ಸರಣಿ ಗೆದ್ದ ಭಾರತ ತಂಡ
  • ಈ ಬಗ್ಗೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಏನಂದ್ರು..?

ಟಿ20 ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ಏಕದಿನ ಸರಣಿಯನ್ನೂ ಕ್ಲೀನ್​ ಸ್ವೀಪ್​ ಮಾಡಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಮಹತ್ವದ ಸರಣಿ ಗೆದ್ದು ಟೀಮ್​ ಇಂಡಿಯಾ ತನ್ನ ಪ್ರಾಬಲ್ಯ ತೋರಿಸಿದೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಅಧಿಪತ್ಯ ಸಾಧಿಸಿರೋ ಟೀಮ್​ ಇಂಡಿಯಾ ಮೂರು ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ ಗಳಿಸಿ ದೊಡ್ಡ ಟಾರ್ಗೆಟ್​ ನೀಡಿತ್ತು. ಭಾರತದ 357 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ 34.2 ಓವರ್​ಗಳಲ್ಲಿ 214 ರನ್​ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್​ ಆಲೌಟ್​ ಆಗಿರೋ ಕಾರಣ 142 ರನ್​ಗಳಿಂದ ಗೆದ್ದು ಬೀಗಿದೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ ಏನಂದ್ರು?

ಇಂಗ್ಲೆಂಡ್​ ವಿರುದ್ಧ ಸೀರೀಸ್​ ಗೆದ್ದು ಖುಷಿ ತಂದಿದೆ. ನಾವು ಈ ಸೀರೀಸ್​ನಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಭಾವಿಸುತ್ತೇವೆ. ಅದರಲ್ಲೂ ಟೀಮ್​ ಇಂಡಿಯಾದ ಆಟಗಾರರು ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡು ವಿಭಾಗಗಳಲ್ಲೂ ಆಲ್​ರೌಂಡರ್​ ಪ್ರದರ್ಶನ ನೀಡಿದ್ದಾರೆ ಎಂದರು ರೋಹಿತ್​.

ಇನ್ನು, ಮುಂದೆ ಚಾಂಪಿಯನ್ಸ್​ ಟ್ರೋಫಿ ಇದೆ. ವಿಶ್ವಕಪ್​ನಲ್ಲೂ ನಾವು ಗೆದ್ದ ರೀತಿ ಎಲ್ಲರಿಗೂ ಗೊತ್ತಿದೆ. ತಂಡದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಅಗ್ರೆಸ್ಸಿವ್​ ಆಗಿ ಬ್ಯಾಟಿಂಗ್​ ಮಾಡಲು ಅವಕಾಶ ಇದೆ. ಇನ್ನೂ ಕೆಲವು ವಿಚಾರಗಳಲ್ಲಿ ಸುಧಾರಿಸಬೇಕಿದೆ. ಈ ಬಗ್ಗೆ ಮಾತಾಡೋ ಸಮಯ ಅಲ್ಲ. ನಾವು ಚಾಂಪಿಯನ್ಸ್​ ಟ್ರೋಫಿ ಗೆಲ್ಲಲು ಎಲ್ಲಾ ರೀತಿಯಲ್ಲೂ ಸನ್ನದ್ದರಾಗಿದ್ದೇವೆ ಎಂದರು ರೋಹಿತ್. ಇಷ್ಟೇ ಅಲ್ಲ ಭಾರತದ ಗೆಲುವು ಎಲ್ಲರೂ ಕಾರಣ ಎಂದು ಕ್ರೆಡಿಟ್​ ಕೊಟ್ಟರು.

ಇದನ್ನೂ ಓದಿ:ಕೊನೆಯ ಪಂದ್ಯದಲ್ಲೂ ಇಂಗ್ಲೆಂಡ್​​ಗೆ ಹೀನಾಯ ಸೋಲು; ಟೀಮ್​ ಇಂಡಿಯಾಗೆ 142 ರನ್​​ಗಳ ಭರ್ಜರಿ ಜಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment