ವೆಸ್ಟ್ ಇಂಡೀಸ್ ಜೊತೆ ಸೆಣೆಸಾಡಲು ಇವರಿಗಿಲ್ವಾ ಚಾನ್ಸ್
ಅಡಕತ್ತರಿಯಲ್ಲಿದೆ ಈ ಸ್ಫೋಟಕ ಬ್ಯಾಟ್ಸ್ಮನ್ ಭವಿಷ್ಯ
ರೋಹಿತ್ ತಂಡ ಸೇರಲು ಯಾರೆಲ್ಲಾ ಅದೃಷ್ಟ ಮಾಡಿದ್ದಾರೆ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಖಭಂಗದ ಬಳಿಕ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆಯಾಗುತ್ತೆ ಎಂಬ ನಿರೀಕ್ಷೆ ಕ್ರಿಕೆಟ್ ವಲಯದಲ್ಲಿದೆ. ಆದರೆ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ತಂಡದಲ್ಲಿ ಮೇಜರ್ ಸರ್ಜರಿ ಆಗೋ ಸಾಧ್ಯತೆ ತುಂಬಾ ಕಡಿಮೆಯಿದೆ. ಕಾದು ನೋಡೋ ತಂತ್ರಗಾರಿಕೆಗೆ ಸೆಲೆಕ್ಷನ್ ಕಮಿಟಿಯಿ ಮುಂದಾಗಿದೆ.
ರೋಹಿತ್ ಶರ್ಮಾನೇ ನಾಯಕ, ಅನುಭವಿಗಳೂ ಸೇಫ್.!
ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದ್ವು. ರೋಹಿತ್ಗೆ ಕೊಕ್ ಕೊಡಬೇಕು ಅನ್ನೋ ಮಾತುಗಳೂ ಕೇಳಿ ಬಂದಿದ್ವು. ಆದರೆ, ಈ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಸದ್ಯಕ್ಕೆ ನಾಯಕತ್ವ ಬದಲಾವಣೆಗೆ ಕೈ ಹಾಕದಿರಲು ನಿರ್ಧರಿಸಿದೆ. ಜೊತೆಗೆ ಅನುಭವಿಗಳನ್ನೂ ಕಡೆಗಣಿಸದೆ ಚಾನ್ಸ್ ನೀಡಲು ನಿರ್ಧರಿಸಿದೆ.
ಅಡಕತ್ತರಿಯಲ್ಲಿ ಚೇತೇಶ್ವರ್ ಪೂಜಾರ ಭವಿಷ್ಯ.!
ಉಳಿದೆಲ್ಲಾ ಅನುಭವಿಗಳ ಸ್ಥಾನ ಸೇಫ್ ಆಗಿದೆ. ಆದ್ರೆ, ಚೇತೇಶ್ವರ್ ಪೂಜಾರ ಭವಿಷ್ಯ ಮಾತ್ರ ಅಡಕತ್ತರಿಗೆ ಸಿಲುಕಿದೆ. ಸಿಕ್ಕ ಅವಕಾಶಗಳಲ್ಲಿ ಫೇಲ್ಯೂರ್ ಆಗಿರೋ ಪೂಜಾರಗೆ ಚಾನ್ಸ್ ನೀಡಬೇಕಾ? ಬೇಡ್ವಾ? ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡರೂ, ಟೀಮ್ ಮ್ಯಾನೇಜ್ಮೆಂಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡೋದು ಅನುಮಾನವಾಗಿದೆ. ಹೀಗಾಗಿ ಸೆಲೆಕ್ಷನ್ ಕಮಿಟಿ ಪೂಜಾರರನ್ನ ತಂಡದಿಂದಲೇ ಕೈ ಬಿಡೋ ನಿರ್ಧಾರಕ್ಕೆ ಬರೋ ಸಾಧ್ಯತೆ ದಟ್ಟವಾಗಿದೆ.
ಟೆಸ್ಟ್ನಿಂದ ಶಮಿಗೆ ವಿಶ್ರಾಂತಿ, ಏಕದಿನದಲ್ಲಿ ಚಾನ್ಸ್.!
ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ, ವಿಶ್ರಾಂತಿ ನೀಡಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಬಾರ್ಡರ್ – ಗವಾಸ್ಕರ್ ಸರಣಿ, ಐಪಿಎಲ್ ಟೂರ್ನಿ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್.. ಸತತ ಪಂದ್ಯಗಳನ್ನ ಆಡಿ ಬಳಲಿರುವ ಶಮಿಗೆ ವಿಶ್ರಾಂತಿ ಪಕ್ಕಾ. ಆದ್ರೆ, ಮುಂಬರೋ ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಏಕದಿನ ಸರಣಿಗಳಲ್ಲಿ ಅವಕಾಶ ನೀಡೋ ಸಾಧ್ಯತೆಯಿದೆ. ಇನ್ನೋರ್ವ ವೇಗಿ ಮೊಹಮ್ಮದ್ ಸಿರಾಜ್ರನ್ನ ರೊಟೇಶನ್ ಮಾಡುವ ಲೆಕ್ಕಾಚಾರವಿದೆ.
ಟೆಸ್ಟ್ ತಂಡದಲ್ಲಿ ಭರತ್ಗೆ ಸ್ಥಾನ ಕನ್ಫರ್ಮ್.!
ವಿಕೆಟ್ ಕೀಪರ್ ಕೆ.ಎಸ್ ಭರತ್ ಸಾಮರ್ಥ್ಯದ ಬಗ್ಗೆ ಎಲ್ಲಡೆ ಚರ್ಚೆಯಾಗ್ತಿವೆ. ಆಡಿದ 5 ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನ ಭರತ್ ನೀಡಿದ್ದಾರೆ. ವಿಕೆಟ್ ಕೀಪಿಂಗ್ನಲ್ಲೂ ಹಿನ್ನಡೆ ಅನುಭವಿಸ್ತಿದ್ದಾರೆ. ಹಾಗಿದ್ರೂ ಯುವ ಆಟಗಾರನನ್ನ ಬ್ಯಾಕ್ ಮಾಡಲು ಕಮಿಟಿ ನಿರ್ಧರಿಸಿದೆ. ವಿಂಡೀಸ್ ಪ್ರವಾಸಲ್ಲಿ ಯಂಗ್ಗನ್ಗೆ ಸ್ಥಾನ ಸಿಗೋದು ಕನ್ಫರ್ಮ್ ಆಗಿದೆ.
ಏಕದಿನ – ಟಿ20ಗೆ ಸಂಜು ಸ್ಯಾಮ್ಸನ್ ಕಮ್ಬ್ಯಾಕ್..!
ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಮತ್ತೆ ಮಣೆಹಾಕಲು ನಿರ್ಧರಿಸಲಾಗಿದೆ. ಏಕದಿನ ಹಾಗೂ ಟಿ20 ತಂಡದಲ್ಲಿ ಸಂಜುಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ವಿಕೆಟ್ ಕೀಪರ್ ಕೋಟಾದಲ್ಲಿ ಸಂಜು ಸ್ಯಾಮ್ಸನ್ ಜೊತೆಗೆ ಇಶಾನ್ ಕಿಶನ್ ಕೂಡ ಆಯ್ಕೆಯಾಗೋ ಸಾಧ್ಯತೆ ದಟ್ಟವಾಗಿದೆ.
ಉಮ್ರಾನ್, ಆರ್ಷ್ದೀಪ್ಗೆ ಫ್ಲೈಟ್ ಟಿಕೆಟ್ ಕನ್ಫರ್ಮ್.!
ಯುವ ವೇಗಿಗಳಾದ ಉಮ್ರಾನ್ ಮಲಿಕ್, ಆರ್ಷ್ ದೀಪ್ ಸಿಂಗ್ ಕೂಡ ಕೆರಬಿಯನ್ ನಾಡಿಗೆ ಹಾರೋದು ಖಚಿತವಾಗಿದೆ. ಟಿ20 ತಂಡದಲ್ಲಿ ಇವರಿಬ್ಬರಿಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ಇದೆಲ್ಲದರ ಜೊತೆಗೆ ಇನ್ನೂ ಹಲವು ನಿರ್ಧಾರಗಳನ್ನ ಸೆಲೆಕ್ಷನ್ ಕಮಿಟಿ ಈಗಾಗಲೇ ಮಾಡಿದ್ದು, ಮುಂದಿನ ವಾರದಲ್ಲಿ ಕಂಪ್ಲೀಟ್ ಟೀಮ್ ಅನೌನ್ಸ್ ಆಗೋದು ಕನ್ಫರ್ಮ್.!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವೆಸ್ಟ್ ಇಂಡೀಸ್ ಜೊತೆ ಸೆಣೆಸಾಡಲು ಇವರಿಗಿಲ್ವಾ ಚಾನ್ಸ್
ಅಡಕತ್ತರಿಯಲ್ಲಿದೆ ಈ ಸ್ಫೋಟಕ ಬ್ಯಾಟ್ಸ್ಮನ್ ಭವಿಷ್ಯ
ರೋಹಿತ್ ತಂಡ ಸೇರಲು ಯಾರೆಲ್ಲಾ ಅದೃಷ್ಟ ಮಾಡಿದ್ದಾರೆ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಖಭಂಗದ ಬಳಿಕ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆಯಾಗುತ್ತೆ ಎಂಬ ನಿರೀಕ್ಷೆ ಕ್ರಿಕೆಟ್ ವಲಯದಲ್ಲಿದೆ. ಆದರೆ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ತಂಡದಲ್ಲಿ ಮೇಜರ್ ಸರ್ಜರಿ ಆಗೋ ಸಾಧ್ಯತೆ ತುಂಬಾ ಕಡಿಮೆಯಿದೆ. ಕಾದು ನೋಡೋ ತಂತ್ರಗಾರಿಕೆಗೆ ಸೆಲೆಕ್ಷನ್ ಕಮಿಟಿಯಿ ಮುಂದಾಗಿದೆ.
ರೋಹಿತ್ ಶರ್ಮಾನೇ ನಾಯಕ, ಅನುಭವಿಗಳೂ ಸೇಫ್.!
ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದ್ವು. ರೋಹಿತ್ಗೆ ಕೊಕ್ ಕೊಡಬೇಕು ಅನ್ನೋ ಮಾತುಗಳೂ ಕೇಳಿ ಬಂದಿದ್ವು. ಆದರೆ, ಈ ವಿಚಾರದಲ್ಲಿ ಸೆಲೆಕ್ಷನ್ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಸದ್ಯಕ್ಕೆ ನಾಯಕತ್ವ ಬದಲಾವಣೆಗೆ ಕೈ ಹಾಕದಿರಲು ನಿರ್ಧರಿಸಿದೆ. ಜೊತೆಗೆ ಅನುಭವಿಗಳನ್ನೂ ಕಡೆಗಣಿಸದೆ ಚಾನ್ಸ್ ನೀಡಲು ನಿರ್ಧರಿಸಿದೆ.
ಅಡಕತ್ತರಿಯಲ್ಲಿ ಚೇತೇಶ್ವರ್ ಪೂಜಾರ ಭವಿಷ್ಯ.!
ಉಳಿದೆಲ್ಲಾ ಅನುಭವಿಗಳ ಸ್ಥಾನ ಸೇಫ್ ಆಗಿದೆ. ಆದ್ರೆ, ಚೇತೇಶ್ವರ್ ಪೂಜಾರ ಭವಿಷ್ಯ ಮಾತ್ರ ಅಡಕತ್ತರಿಗೆ ಸಿಲುಕಿದೆ. ಸಿಕ್ಕ ಅವಕಾಶಗಳಲ್ಲಿ ಫೇಲ್ಯೂರ್ ಆಗಿರೋ ಪೂಜಾರಗೆ ಚಾನ್ಸ್ ನೀಡಬೇಕಾ? ಬೇಡ್ವಾ? ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡರೂ, ಟೀಮ್ ಮ್ಯಾನೇಜ್ಮೆಂಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡೋದು ಅನುಮಾನವಾಗಿದೆ. ಹೀಗಾಗಿ ಸೆಲೆಕ್ಷನ್ ಕಮಿಟಿ ಪೂಜಾರರನ್ನ ತಂಡದಿಂದಲೇ ಕೈ ಬಿಡೋ ನಿರ್ಧಾರಕ್ಕೆ ಬರೋ ಸಾಧ್ಯತೆ ದಟ್ಟವಾಗಿದೆ.
ಟೆಸ್ಟ್ನಿಂದ ಶಮಿಗೆ ವಿಶ್ರಾಂತಿ, ಏಕದಿನದಲ್ಲಿ ಚಾನ್ಸ್.!
ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ, ವಿಶ್ರಾಂತಿ ನೀಡಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಬಾರ್ಡರ್ – ಗವಾಸ್ಕರ್ ಸರಣಿ, ಐಪಿಎಲ್ ಟೂರ್ನಿ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್.. ಸತತ ಪಂದ್ಯಗಳನ್ನ ಆಡಿ ಬಳಲಿರುವ ಶಮಿಗೆ ವಿಶ್ರಾಂತಿ ಪಕ್ಕಾ. ಆದ್ರೆ, ಮುಂಬರೋ ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಏಕದಿನ ಸರಣಿಗಳಲ್ಲಿ ಅವಕಾಶ ನೀಡೋ ಸಾಧ್ಯತೆಯಿದೆ. ಇನ್ನೋರ್ವ ವೇಗಿ ಮೊಹಮ್ಮದ್ ಸಿರಾಜ್ರನ್ನ ರೊಟೇಶನ್ ಮಾಡುವ ಲೆಕ್ಕಾಚಾರವಿದೆ.
ಟೆಸ್ಟ್ ತಂಡದಲ್ಲಿ ಭರತ್ಗೆ ಸ್ಥಾನ ಕನ್ಫರ್ಮ್.!
ವಿಕೆಟ್ ಕೀಪರ್ ಕೆ.ಎಸ್ ಭರತ್ ಸಾಮರ್ಥ್ಯದ ಬಗ್ಗೆ ಎಲ್ಲಡೆ ಚರ್ಚೆಯಾಗ್ತಿವೆ. ಆಡಿದ 5 ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನ ಭರತ್ ನೀಡಿದ್ದಾರೆ. ವಿಕೆಟ್ ಕೀಪಿಂಗ್ನಲ್ಲೂ ಹಿನ್ನಡೆ ಅನುಭವಿಸ್ತಿದ್ದಾರೆ. ಹಾಗಿದ್ರೂ ಯುವ ಆಟಗಾರನನ್ನ ಬ್ಯಾಕ್ ಮಾಡಲು ಕಮಿಟಿ ನಿರ್ಧರಿಸಿದೆ. ವಿಂಡೀಸ್ ಪ್ರವಾಸಲ್ಲಿ ಯಂಗ್ಗನ್ಗೆ ಸ್ಥಾನ ಸಿಗೋದು ಕನ್ಫರ್ಮ್ ಆಗಿದೆ.
ಏಕದಿನ – ಟಿ20ಗೆ ಸಂಜು ಸ್ಯಾಮ್ಸನ್ ಕಮ್ಬ್ಯಾಕ್..!
ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಮತ್ತೆ ಮಣೆಹಾಕಲು ನಿರ್ಧರಿಸಲಾಗಿದೆ. ಏಕದಿನ ಹಾಗೂ ಟಿ20 ತಂಡದಲ್ಲಿ ಸಂಜುಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ವಿಕೆಟ್ ಕೀಪರ್ ಕೋಟಾದಲ್ಲಿ ಸಂಜು ಸ್ಯಾಮ್ಸನ್ ಜೊತೆಗೆ ಇಶಾನ್ ಕಿಶನ್ ಕೂಡ ಆಯ್ಕೆಯಾಗೋ ಸಾಧ್ಯತೆ ದಟ್ಟವಾಗಿದೆ.
ಉಮ್ರಾನ್, ಆರ್ಷ್ದೀಪ್ಗೆ ಫ್ಲೈಟ್ ಟಿಕೆಟ್ ಕನ್ಫರ್ಮ್.!
ಯುವ ವೇಗಿಗಳಾದ ಉಮ್ರಾನ್ ಮಲಿಕ್, ಆರ್ಷ್ ದೀಪ್ ಸಿಂಗ್ ಕೂಡ ಕೆರಬಿಯನ್ ನಾಡಿಗೆ ಹಾರೋದು ಖಚಿತವಾಗಿದೆ. ಟಿ20 ತಂಡದಲ್ಲಿ ಇವರಿಬ್ಬರಿಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ಇದೆಲ್ಲದರ ಜೊತೆಗೆ ಇನ್ನೂ ಹಲವು ನಿರ್ಧಾರಗಳನ್ನ ಸೆಲೆಕ್ಷನ್ ಕಮಿಟಿ ಈಗಾಗಲೇ ಮಾಡಿದ್ದು, ಮುಂದಿನ ವಾರದಲ್ಲಿ ಕಂಪ್ಲೀಟ್ ಟೀಮ್ ಅನೌನ್ಸ್ ಆಗೋದು ಕನ್ಫರ್ಮ್.!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ