ಭಾರತ ತಂಡದ ಗೆಲುವಿಗೆ ಇವರೇ ಕಾರಣ ಎಂದ ಕ್ಯಾಪ್ಟನ್​ ಸೂರ್ಯ; ಬಿಚ್ಚಿಟ್ಟ ಅಸಲಿ ಸತ್ಯವೇನು?

author-image
Ganesh Nachikethu
Updated On
ಭಾರತ ತಂಡದ ಗೆಲುವಿಗೆ ಇವರೇ ಕಾರಣ ಎಂದ ಕ್ಯಾಪ್ಟನ್​ ಸೂರ್ಯ; ಬಿಚ್ಚಿಟ್ಟ ಅಸಲಿ ಸತ್ಯವೇನು?
Advertisment
  • ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ20 ಪಂದ್ಯ!
  • ಬಾಂಗ್ಲಾದೇಶ ತಂಡದಿಂದ ಟೀಮ್​ ಇಂಡಿಯಾಗೆ ಸಾಧಾರಣ ಮೊತ್ತದ ಗುರಿ
  • ಮೊದಲ ಪಂದ್ಯದಲ್ಲೇ ಬಾಂಗ್ಲಾದೇಶವನ್ನು ಬಗ್ಗು ಬಡಿದ ಭಾರತಕ್ಕೆ ಗೆಲುವು

ಇಂದು ಗ್ವಾಲಿಯರ್​ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ನಡೆದ ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ.

ಕ್ಯಾಪ್ಟನ್​ ಸೂರ್ಯ ಏನಂದ್ರು?

ಟೀಮ್​ ಇಂಡಿಯಾ ಭರ್ಜರಿ ಗೆಲುವಿನ ಬಳಿಕ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಮಾತಾಡಿದ್ರು. ನಾವು ನಮ್ಮ ಕೌಶಲ್ಯವನ್ನು ನಂಬಿದ್ದೇವೆ. ಟೀಮ್​ ಮೀಟಿಂಗ್​​ನಲ್ಲಿ ಏನು ಪ್ಲಾನ್​ ಮಾಡಿದ್ದೇವೋ ಅದನ್ನೇ ಎಕ್ಸಿಗ್ಯೂಟ್​ ಮಾಡಿದ್ದೇವೆ. ನಾವು ಬ್ಯಾಟ್​ ಮತ್ತು ಬೌಲಿಂಗ್​ ಮಾಡಿದ ರೀತಿ ಅದ್ಭುತ ಎಂದರು.

ತಂಡದಲ್ಲಿ ಹೆಚ್ಚು ಬೌಲಿಂಗ್​ ಆಪ್ಷನ್​ ಇರೋದು ಯಾವಾಗಲೂ ಒಳ್ಳೆಯದು. ಸಾಕಾಷ್ಟು ಇಂಪ್ರೂವ್​ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಇದರ ಜೊತೆಗೆ ನಿತ್ಯ ಕಲಿಯೋದು ಇದ್ದಿದ್ದೇ. ಪಂದ್ಯದ ಗೆಲುವು ತಂಡದ ಪ್ರತಿಯೊಬ್ಬ ಆಟಗಾರ ಕಾರಣ ಎಂದರು.

ಬಾಂಗ್ಲಾ ಬೌಲರ್ಸ್​ ಬೆವರಿಳಿಸಿದ ಭಾರತ

ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾ ಪರ ಓಪನರ್ಸ್​ ಆಗಿ ಬಂದ ಸಂಜು ಸ್ಯಾಮ್ಸನ್​​, ಅಭಿಷೇಕ್​ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಸಂಜು ಸ್ಯಾಮ್ಸನ್​ ತಾನು ಎದುರಿಸಿದ 19 ಬಾಲ್​​ನಲ್ಲಿ 6 ಫೋರ್​ ಸಮೇತ 29 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಅಭಿಷೇಕ್​ ಕೇವಲ 7 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 16 ರನ್​​ ಸಿಡಿಸಿದ್ರು.

ಬಳಿಕ ಬಂದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​ ಕೂಡ ಅಬ್ಬರಿಸಿದ್ರು. 14 ಬಾಲ್​ನಲ್ಲಿ 3 ಸಿಕ್ಸರ್​​, 2 ಫೋರ್​​ ಸಮೇತ 29 ರನ್​ ಚಚ್ಚಿದ್ರು. ನಿತೀಶ್​ ರೆಡ್ಡಿ 15 ರನ್​​ ಕಲೆ ಹಾಕಿದ್ರು. ಬಿರುಸಿನ ಬ್ಯಾಟಿಂಗ್​ ಮಾಡಿದ ಹಾರ್ದಿಕ್​ ಪಾಂಡ್ಯ 16 ಬಾಲ್​ನಲ್ಲಿ 2 ಸಿಕ್ಸರ್​​, 5 ಫೋರ್​ನೊಂದಿಗೆ 39 ರನ್​​ ಬಾರಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment