/newsfirstlive-kannada/media/post_attachments/wp-content/uploads/2024/10/Surya_New.jpg)
ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಇಂಗ್ಲೆಂಡ್ ನೀಡಿದ 172 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 145 ರನ್ ಗಳಿಸಿದೆ. ಈ ಮೂಲಕ 26 ರನ್ಗಳಿಂದ ಸೋತಿದೆ.
ಕ್ಯಾಪ್ಟನ್ ಸೂರ್ಯ ಏನಂದ್ರು?
ಟೀಮ್ ಇಂಡಿಯಾ ಸೋಲಿನ ಬಗ್ಗೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮಾತಾಡಿದ್ದಾರೆ. ನಾವು ಗೆಲ್ಲಬೇಕಿದ್ದ ಮ್ಯಾಚ್ ಇದು. ಆದರೆ, ಟೀಮ್ ಇಂಡಿಯಾದ ಬ್ಯಾಟರ್ಗಳು ಸರಿಯಾಗಿ ಆಡಲಿಲ್ಲ. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಕ್ರೀಸ್ನಲ್ಲಿ ಇರೋವರೆಗೂ ಗೆಲ್ಲುತ್ತೇವೆ ಎಂದು ಭಾವಿಸಿದ್ದೆವು. ಮ್ಯಾಚ್ ನಮ್ಮ ಕೈಯಲ್ಲೇ ಇತ್ತು. ಆದರೆ, ನಾವು ಸೋತೆವು. ಇದಕ್ಕೆ ಕಾರಣ ಆದಿಲ್ ರಶೀದ್ ಎಂದರು.
ಇಂಗ್ಲೆಂಡ್ ತಂಡದ ಗೆಲುವಿನ ಕ್ರೆಡಿಟ್ ರಶೀದ್ಗೆ ಸಲ್ಲಬೇಕು. ಇವರು ನಮ್ಮನ್ನು ಸ್ಟ್ರೈಕ್ ರೊಟೇಟ್ ಮಾಡಲು ಬಿಡಲೇ ಇಲ್ಲ. ನಮ್ಮಲ್ಲೂ ಸಾಕಷ್ಟು ಸ್ಪಿನ್ನರ್ಸ್ ಇದ್ರು. ಈ ಪಂದ್ಯದಿಂದ ಸಾಕಷ್ಟು ಕಲಿತಿದ್ದೇವೆ ಎಂದರು.
ಭಾರತ ತಂಡದ ಪರ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಅಬ್ಬರಿಸಿದ ಅಭಿಷೇಕ್ ಶರ್ಮಾ 14 ಬಾಲ್ನಲ್ಲಿ 5 ಫೋರ್ ಸಮೇತ 24 ರನ್ ಸಿಡಿಸಿದ್ರು. ಬಳಿಕ ಕ್ಯಾಚ್ ನೀಡಿ ಮೈದಾನದಿಂದ ಹೊರ ನಡೆದರು.
ಕ್ಯಾಪ್ಟನ್ ಸೂರ್ಯಕುಮಾರ್ 3ನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಸೂರ್ಯ 14, ತಿಲಕ್ ವರ್ಮಾ 18 ರನ್ಗೆ ಔಟಾದ್ರು.
ಹಾರ್ದಿಕ್ ಪಾಂಡ್ಯ ಏಕಾಂಗಿ ಹೋರಾಟ
ಬ್ಯಾಂಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆ ಆಗಿದ್ದು ಹಾರ್ದಿಕ್ ಪಾಂಡ್ಯ. ವಿಕೆಟ್ ಕಾದು ತಾಳ್ಮೆಯಿಂದ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 1 ಫೋರ್, 2 ಸಿಕ್ಸರ್ ಸಮೇತ 40 ರನ್ ಸಿಡಿಸಿ ಔಟಾದ್ರು. ಅಕ್ಷರ್ ಪಟೇಲ್ 15, ವಾಷಿಂಗ್ಟನ್ ಸುಂದರ್ 6, ಶಮಿ 7, ಜುರೆಲ್ 2, ಬಿಷ್ಣೋಯ್ 4, ವರುಣ್ ಚಕ್ರವರ್ತಿ 2 ರನ್ ಗಳಿಸಿದ್ರು.
ಇದನ್ನೂ ಓದಿ:ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್; ಕ್ಯಾಪ್ಟನ್ ಆಗಿ ಎಬಿಡಿ ಕ್ರಿಕೆಟ್ಗೆ ಗ್ರ್ಯಾಂಡ್ ಎಂಟ್ರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ