ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಲಂಕಾಗೆ ಸೋಲು!
ಕೊನೆ ಮ್ಯಾಚ್ನಲ್ಲಿ ಸೂಪರ್ ಓವರ್ನಲ್ಲಿ ಗೆದ್ದು ಬೀಗಿದ ಭಾರತ ತಂಡ
ಶ್ರೀಲಕಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ
ಮೊದಲ 2 ಪಂದ್ಯಗಳಲ್ಲಿ ಗೆದ್ದ ಅತಿಯಾದ ಆತ್ಮವಿಶ್ವಾಸ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮುಳುವಾಯ್ತು. ತಂಡದಲ್ಲಿ ಬರೋಬ್ಬರಿ 4 ಬದಲಾವಣೆ ಮಾಡಿಕೊಂಡು, ಸರಣಿ ಕ್ಲೀನ್ ಸ್ವೀಪ್ ಟಾರ್ಗೆಟ್ ಇಟ್ಟುಕೊಂಡು ಕಣಕ್ಕಿಳಿದ ಟೀಮ್ ಇಂಡಿಯಾಗೆ ಪೆಲ್ಲೆಕೆಲೆಯಲ್ಲಿ ಎದುರಾಗಿದ್ದು ಶಾಕ್.! ಗಾಯಗೊಂಡ ಸಿಂಹದಂತೆ ಲಂಕನ್ ಲಯನ್ಸ್ ಘರ್ಜಿಸಿದ್ರೆ, ಭಾರತೀಯ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ಪಲ್ಲೆಕೆಲೆ ಮೈದಾನದಲ್ಲಿ ಕಣಕ್ಕಿಳಿದಷ್ಟೇ ವೇಗವಾಗಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ವಾಪಾಸ್ಸಾದ ಪರಿಯಿದು. ಮೊದಲ 2 ಪಂದ್ಯದಲ್ಲಿ ಮುಖಭಂಗ ಅನುಭವಿಸಿ ಕೆರಳಿದ್ದ ಲಂಕನ್ ಸಿಂಹಗಳು ಮೈದಾನದಲ್ಲಿ ಅಕ್ಷರಶಃ ಜಾದೂ ಮಾಡಿದ್ರು. ಇವ್ರ ಮೋಡಿಗೆ ಬಲಿಯಾದ ಭಾರತದ ನಾಲ್ವರು ಟಾಪ್ ಆರ್ಡರ್ ಬ್ಯಾಟರ್ಸ್, ತಂಡ 30 ರನ್ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ರು.
ಕುಸಿದ ತಂಡಕ್ಕೆ ಚೇತರಿಕೆ ನೀಡಿದ ಶುಭ್ಮನ್ – ಪರಾಗ್.!
4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಬಳಿಕ ಕಣಕ್ಕಿಳಿದ ಶಿವಂ ದುಬೆ ಕೂಡ ಆಸರೆಯಾಗಲಿಲ್ಲ. ತಾಳ್ಮೆಯ ಆಟವಾಡ್ತಿದ್ದ ದುಬೆ, 13 ರನ್ಗಳಿಸಿ ನಿರ್ಗಮಿಸಿದ್ರು. ಬಳಿಕ ಜೊತೆಯಾದ ಶುಭ್ಮನ್ ಗಿಲ್, ರಿಯಾನ್ ಪರಾಗ್ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
39 ರನ್ಗಳಿಸಿ ಶುಭಮನ್ ಔಟಾದ್ರೆ, ರಿಯಾನ್ ಪರಾಗ್ 26 ರನ್ಗಳಿಸಿ ನಿರ್ಗಮಿಸಿದ್ರು. ಕೊನೆ ಹಂತದಲ್ಲಿ ವಾಷಿಂಗ್ಟನ್ ಸುಂದರ್ 25 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಿತು.
ಶ್ರೀಲಂಕಾಗೆ ಉತ್ತಮ ಆರಂಭ ನೀಡಿದ ನಿಸ್ಸಂಕಾ-ಮೆಂಡಿಸ್..!
138 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾಗೆ ನಿಸ್ಸಾಂಕಾ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 58 ರನ್ಗಳ ಜೊತೆಯಾಟವಾಡಿ ಮುನ್ನುಗ್ಗುತ್ತಿತ್ತು. ಈ ವೇಳೆ 26 ರನ್ ಸಿಡಿಸಿದ್ದ ನಿಸ್ಸಾಂಕಾಗೆ ರವಿ ಬಿಷ್ನೋಯಿ ಪೆವಿಲಿಯನ್ ಹಾದಿ ತೋರಿದರು.
28 ಬಾಲ್.. 26 ರನ್.. 7 ವಿಕೆಟ್..! ಪಂದ್ಯಕ್ಕೆ ಟ್ವಿಸ್ಟ್..!
ನಿಸ್ಸಾಂಕಾ ವಿಕೆಟ್ ಪತನದ ಬಳಿಕ ಕುಸಾಲ್ ಮೆಂಡಿಸ್ ಜೊತೆಗೂಡಿದ ಕುಸಾಲ್ ಪೆರೆರಾ ಸ್ಪೋಟಕ ಇನ್ನಿಂಗ್ ಆಡಿದ್ರೆ. ಎಚ್ಚರಿಕೆಯ ಬ್ಯಾಟಿಂಗ್ ನಡೆಸ್ತಿದ್ದ ಕುಸಾಲ್ ಮೆಂಡಿಸ್, 43 ರನ್ ಗಳಿಸಿದ್ದಾಗ ಬಿಷ್ನೋಯಿಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಬಂದ ಹಸರಂಗ ಹಾಗೂ ಚರಿತ ಅಸಲಂಕಾಗೆ ಸುಂದರ್ ಪೆವಿಲಿಯನ್ ಹಾದಿ ತೋರಿದ್ರು.
ಲಂಕಾ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕುಸಾಲ್ ಪೆರೆರಾ, ಟೀಮ್ ಇಂಡಿಯಾ ಬೌಲರ್ಗಳನ್ನ ಇನ್ನಿಲ್ಲದೆ ಕಾಡಿದರು. 46 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಕುಸಾಲ್ ಪರೆರಾ ಲಂಕಾಗೆ ಗೆಲುವಿನ ದಡ ಸೇರಿಸುವ ಲೆಕ್ಕಚಾರದಲ್ಲಿದ್ದರು. ಆದ್ರೆ, 19ನೇ ಓವರ್ನಲ್ಲಿ ದಾಳಿಗಿಳಿದ ರಿಂಕು ಸಿಂಗ್, ಪೆರೆರಾ ಹಾಗೂ ರಮೇಶ್ ಮೆಂಡಿಸ್ ವಿಕೆಟ್ ಬೇಟೆಯಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.
ಕೊನೆ ಓವರ್ನಲ್ಲಿ ದಾಳಿಗಿಳಿದ ಸೂರ್ಯಕುಮಾರ್, ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಕೊನೆ 2 ಎಸೆತಗಳಲ್ಲಿ 5 ರನ್ ಗಳಿಸಬೇಕಾದ ಸವಾಲು ಲಂಕಾ ಮುಂದಿತ್ತು. ಆದ್ರೆ, 4 ರನ್ ಗಳಿಸಷ್ಟೇ ಶಕ್ತವಾದ ಲಂಕಾ ಪಂದ್ಯವನ್ನು ಟೈ ಮಾಡಿಕೊಳ್ತು.
ಸೂಪರ್ ಓವರ್ನಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ!
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾಗೆ ಸ್ಪಿನ್ನರ್ ಸುಂದರ್, 3 ಎಸೆತಗಳಲ್ಲಿ 2 ವಿಕೆಟ್ ಬೇಟೆಯಾಡಿ ಕೇವಲ 2 ರನ್ಗಳಿಗೆ ಕಟ್ಟಿಹಾಕಿದರು. ಈ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ, ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ಸಾಧಿಸಿತು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧನೆ ಮಾಡ್ತು.
ಇದನ್ನೂ ಓದಿ: ‘ಎಷ್ಟು ಅವಕಾಶ ಕೊಟ್ರೂ ಅದೇ ರಾಗ ಅದೇ ಹಾಡು’- ನಾಚಿಕೆ ಆಗಬೇಕು ಎಂದು ಸ್ಟಾರ್ ಪ್ಲೇಯರ್ ವಿರುದ್ಧ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಲಂಕಾಗೆ ಸೋಲು!
ಕೊನೆ ಮ್ಯಾಚ್ನಲ್ಲಿ ಸೂಪರ್ ಓವರ್ನಲ್ಲಿ ಗೆದ್ದು ಬೀಗಿದ ಭಾರತ ತಂಡ
ಶ್ರೀಲಕಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ
ಮೊದಲ 2 ಪಂದ್ಯಗಳಲ್ಲಿ ಗೆದ್ದ ಅತಿಯಾದ ಆತ್ಮವಿಶ್ವಾಸ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಮುಳುವಾಯ್ತು. ತಂಡದಲ್ಲಿ ಬರೋಬ್ಬರಿ 4 ಬದಲಾವಣೆ ಮಾಡಿಕೊಂಡು, ಸರಣಿ ಕ್ಲೀನ್ ಸ್ವೀಪ್ ಟಾರ್ಗೆಟ್ ಇಟ್ಟುಕೊಂಡು ಕಣಕ್ಕಿಳಿದ ಟೀಮ್ ಇಂಡಿಯಾಗೆ ಪೆಲ್ಲೆಕೆಲೆಯಲ್ಲಿ ಎದುರಾಗಿದ್ದು ಶಾಕ್.! ಗಾಯಗೊಂಡ ಸಿಂಹದಂತೆ ಲಂಕನ್ ಲಯನ್ಸ್ ಘರ್ಜಿಸಿದ್ರೆ, ಭಾರತೀಯ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು.
ಪಲ್ಲೆಕೆಲೆ ಮೈದಾನದಲ್ಲಿ ಕಣಕ್ಕಿಳಿದಷ್ಟೇ ವೇಗವಾಗಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ವಾಪಾಸ್ಸಾದ ಪರಿಯಿದು. ಮೊದಲ 2 ಪಂದ್ಯದಲ್ಲಿ ಮುಖಭಂಗ ಅನುಭವಿಸಿ ಕೆರಳಿದ್ದ ಲಂಕನ್ ಸಿಂಹಗಳು ಮೈದಾನದಲ್ಲಿ ಅಕ್ಷರಶಃ ಜಾದೂ ಮಾಡಿದ್ರು. ಇವ್ರ ಮೋಡಿಗೆ ಬಲಿಯಾದ ಭಾರತದ ನಾಲ್ವರು ಟಾಪ್ ಆರ್ಡರ್ ಬ್ಯಾಟರ್ಸ್, ತಂಡ 30 ರನ್ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದ್ರು.
ಕುಸಿದ ತಂಡಕ್ಕೆ ಚೇತರಿಕೆ ನೀಡಿದ ಶುಭ್ಮನ್ – ಪರಾಗ್.!
4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಬಳಿಕ ಕಣಕ್ಕಿಳಿದ ಶಿವಂ ದುಬೆ ಕೂಡ ಆಸರೆಯಾಗಲಿಲ್ಲ. ತಾಳ್ಮೆಯ ಆಟವಾಡ್ತಿದ್ದ ದುಬೆ, 13 ರನ್ಗಳಿಸಿ ನಿರ್ಗಮಿಸಿದ್ರು. ಬಳಿಕ ಜೊತೆಯಾದ ಶುಭ್ಮನ್ ಗಿಲ್, ರಿಯಾನ್ ಪರಾಗ್ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು.
39 ರನ್ಗಳಿಸಿ ಶುಭಮನ್ ಔಟಾದ್ರೆ, ರಿಯಾನ್ ಪರಾಗ್ 26 ರನ್ಗಳಿಸಿ ನಿರ್ಗಮಿಸಿದ್ರು. ಕೊನೆ ಹಂತದಲ್ಲಿ ವಾಷಿಂಗ್ಟನ್ ಸುಂದರ್ 25 ರನ್ಗಳ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಿತು.
ಶ್ರೀಲಂಕಾಗೆ ಉತ್ತಮ ಆರಂಭ ನೀಡಿದ ನಿಸ್ಸಂಕಾ-ಮೆಂಡಿಸ್..!
138 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾಗೆ ನಿಸ್ಸಾಂಕಾ ಹಾಗೂ ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 58 ರನ್ಗಳ ಜೊತೆಯಾಟವಾಡಿ ಮುನ್ನುಗ್ಗುತ್ತಿತ್ತು. ಈ ವೇಳೆ 26 ರನ್ ಸಿಡಿಸಿದ್ದ ನಿಸ್ಸಾಂಕಾಗೆ ರವಿ ಬಿಷ್ನೋಯಿ ಪೆವಿಲಿಯನ್ ಹಾದಿ ತೋರಿದರು.
28 ಬಾಲ್.. 26 ರನ್.. 7 ವಿಕೆಟ್..! ಪಂದ್ಯಕ್ಕೆ ಟ್ವಿಸ್ಟ್..!
ನಿಸ್ಸಾಂಕಾ ವಿಕೆಟ್ ಪತನದ ಬಳಿಕ ಕುಸಾಲ್ ಮೆಂಡಿಸ್ ಜೊತೆಗೂಡಿದ ಕುಸಾಲ್ ಪೆರೆರಾ ಸ್ಪೋಟಕ ಇನ್ನಿಂಗ್ ಆಡಿದ್ರೆ. ಎಚ್ಚರಿಕೆಯ ಬ್ಯಾಟಿಂಗ್ ನಡೆಸ್ತಿದ್ದ ಕುಸಾಲ್ ಮೆಂಡಿಸ್, 43 ರನ್ ಗಳಿಸಿದ್ದಾಗ ಬಿಷ್ನೋಯಿಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಬಂದ ಹಸರಂಗ ಹಾಗೂ ಚರಿತ ಅಸಲಂಕಾಗೆ ಸುಂದರ್ ಪೆವಿಲಿಯನ್ ಹಾದಿ ತೋರಿದ್ರು.
ಲಂಕಾ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕುಸಾಲ್ ಪೆರೆರಾ, ಟೀಮ್ ಇಂಡಿಯಾ ಬೌಲರ್ಗಳನ್ನ ಇನ್ನಿಲ್ಲದೆ ಕಾಡಿದರು. 46 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಕುಸಾಲ್ ಪರೆರಾ ಲಂಕಾಗೆ ಗೆಲುವಿನ ದಡ ಸೇರಿಸುವ ಲೆಕ್ಕಚಾರದಲ್ಲಿದ್ದರು. ಆದ್ರೆ, 19ನೇ ಓವರ್ನಲ್ಲಿ ದಾಳಿಗಿಳಿದ ರಿಂಕು ಸಿಂಗ್, ಪೆರೆರಾ ಹಾಗೂ ರಮೇಶ್ ಮೆಂಡಿಸ್ ವಿಕೆಟ್ ಬೇಟೆಯಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.
ಕೊನೆ ಓವರ್ನಲ್ಲಿ ದಾಳಿಗಿಳಿದ ಸೂರ್ಯಕುಮಾರ್, ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಕೊನೆ 2 ಎಸೆತಗಳಲ್ಲಿ 5 ರನ್ ಗಳಿಸಬೇಕಾದ ಸವಾಲು ಲಂಕಾ ಮುಂದಿತ್ತು. ಆದ್ರೆ, 4 ರನ್ ಗಳಿಸಷ್ಟೇ ಶಕ್ತವಾದ ಲಂಕಾ ಪಂದ್ಯವನ್ನು ಟೈ ಮಾಡಿಕೊಳ್ತು.
ಸೂಪರ್ ಓವರ್ನಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ!
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾಗೆ ಸ್ಪಿನ್ನರ್ ಸುಂದರ್, 3 ಎಸೆತಗಳಲ್ಲಿ 2 ವಿಕೆಟ್ ಬೇಟೆಯಾಡಿ ಕೇವಲ 2 ರನ್ಗಳಿಗೆ ಕಟ್ಟಿಹಾಕಿದರು. ಈ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ, ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ಸಾಧಿಸಿತು. ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧನೆ ಮಾಡ್ತು.
ಇದನ್ನೂ ಓದಿ: ‘ಎಷ್ಟು ಅವಕಾಶ ಕೊಟ್ರೂ ಅದೇ ರಾಗ ಅದೇ ಹಾಡು’- ನಾಚಿಕೆ ಆಗಬೇಕು ಎಂದು ಸ್ಟಾರ್ ಪ್ಲೇಯರ್ ವಿರುದ್ಧ ಆಕ್ರೋಶ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್