/newsfirstlive-kannada/media/post_attachments/wp-content/uploads/2024/09/Goutham-Gambhir.jpg)
ಮುಂದಿನ ತಿಂಗಳು ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಇದಕ್ಕೂ ಮುನ್ನ ನಡೆಯಲಿರೋ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಗೆಲ್ಲಲೇಬೇಕಾದ ಪರಿಸ್ಥಿತಿ ಇದೆ. ಇಂದು ಕೋಲ್ಕತ್ತಾ ಈಡನ್ ಗಾರ್ಡನ್ಸ್ ಸ್ಟೇಡಿಯಮ್ನಲ್ಲಿ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡದ ನಡುವಿನ ಮೊದಲ ಟಿ20 ಪಂದ್ಯ ಶುರುವಾಗಲಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ತವರಿನಲ್ಲಿ ನ್ಯೂಜಿಲೆಂಡ್, ಬಳಿಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಸೋಲಿನ ಬಳಿಕ ಗೌತಮ್ ಗಂಭೀರ್ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಈಗಾಗಲೇ ಟೀಮ್ ಸೆಲೆಕ್ಷನ್ ಸೇರಿದಂತೆ ಹಲವು ವಿಚಾರಗಳಲ್ಲಿ ಭೀರ್ ಗಂಭೀರ್ ಸರಹೆಗಳನ್ನ ನಗ್ಲೆಟ್ ಮಾಡಲಾಗಿದೆ. ಗಂಭೀರ್ ಮಾರ್ಗದರ್ಶನದಲ್ಲಿ ಈ ಸರಣಿಯಲ್ಲಿ ಸೋಲುಂಡರೆ, ಕೋಚ್ ಭವಿಷ್ಯ ಮತ್ತಷ್ಟು ಡೋಲಾಯಮಾನವಾಗಲಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಟೀಮ್ ಇಂಡಿಯಾ ಮುಂದೆ ಕಠಿಣ ಸವಾಲನ್ನ ತಂದಿಟ್ಟಿದೆ. ಈ ಸವಾಲನ್ನ ಮೀರಿ ಸೂರ್ಯಕುಮಾರ್ ಯಾದವ್ ಪಡೆ ಶೈನ್ ಆಗಬೇಕಿದೆ. ಒಂದು ವೇಳೆ ಟೀಮ್ ಇಂಡಿಯಾ ಸೋತಲ್ಲಿ ಗೌತಮ್ ಗಂಭೀರ್ಗೆ ಮುಖ್ಯ ಕೋಚ್ ಹುದ್ದೆಯಿಂದ ಕೊಕ್ ನೀಡಬಹುದು.
ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗಂಭೀರ್
ಇನ್ನು, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮುನ್ನ ಭಾರತ ಗೆಲ್ಲಲಿ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಗಂಭೀರ್ ಪೂಜೆ ಮಾಡುತ್ತಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಾಳಿ ದೇವಿಗೆ ಆರತಿ ಬೆಳಗಿದ ಗಂಭೀರ್ ನಂತರ ಪುಷ್ಪಾರ್ಚನೆ ಮಾಡಿದ್ರು. ಇದೇ ವೇಳೆ ಅರ್ಚಕರು ಗಂಭೀರ್ ಅವರಿಗೆ ತಿಲಕವಿಟ್ಟು ಆಶೀರ್ವಾದಿಸಿದ್ದಾರೆ. ಭಾರತ ತಂಡ ಈ ಸೀರೀಸ್ ಗೆಲ್ಲಲಿ ಎಂದು ದೇವಿ ಬಳಿ ಬೇಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗೌತಮ್ ಗಂಭೀರ್; ದೇವಿಗೆ ವಿಶೇಷ ಪೂಜೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ