/newsfirstlive-kannada/media/post_attachments/wp-content/uploads/2025/01/GAMBHIR-3.jpg)
ಟೀಮ್ ಇಂಡಿಯಾದಲ್ಲಿ ಸದ್ಯ ಎಲ್ಲವೂ ಸರಿ ಇಲ್ಲ! ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲೆ, ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಿಸಿಸಿಐ ಬಿಗ್ಬಾಸ್ಗಳು ಕೆರಳಿ ಕೆಂಡವಾಗಿದ್ದಾರೆ. ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಡಿದೆದ್ದಿದ್ದಾರೆ.
ಗಂಭೀರ್ ವಿರುದ್ಧ ಬಿಸಿಸಿಐ ಫುಲ್ ಗರಂ
ಅಡಿಲೇಡ್ ಟೆಸ್ಟ್ ಸೋಲು! ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ತೀವ್ರ ಮುಖಭಂಗ! ಇದೇ ಬಿಗ್ಬಾಸ್ಗಳನ್ನ ಕೆರಳಿ ಕೆಂಡದಂತೆ ಮಾಡಿರೋದು. ಅದ್ರಲ್ಲೂ ಟೀಮ್ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಎಂಟ್ರಿ ಅತ್ಯಂತ ಕಠಿಣವಾಗಿರೋದ್ರಿಂದ, ಬಿಗ್ಬಾಸ್ಗಳ ಕೋಪ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಹೆಸರೇಳದೆ ಆಟಗಾರರನ್ನ ಜಾಡಿಸಿದ ಕೋಚ್..!
ಮೆಲ್ಬರ್ನ್ ಟೆಸ್ಟ್ ಸೋಲಿನ ಬಳಿಕ, ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ನಲ್ಲಿ ಗಲಾಟೆ ಜೋರಾಗಿತ್ತು. ಕೋಚ್ ಗೌತಮ್ ಗಂಭೀರ್, ಆಟಗಾರರ ವಿರುದ್ಧ ಸಿಡಿದೆದ್ದಿದ್ರು. ಇಷ್ಟು ದಿನ ನಿಮಗೆ ಫ್ರೀಡಂ ಕೊಟ್ಟಿದ್ದು ಸಾಕು..! ಇನ್ಮೇಲೆ ನಾನು ಹೇಳಿದಂತೆ ಕೇಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲ..! ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನ, ಗಂಭೀರ್ ಹೆಸರೇಳದೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಗಂಭೀರ್ ಓವರ್ ರಿಯಾಕ್ಷನ್, ಡ್ರೆಸಿಂಗ್ ರೂಮ್ನಲ್ಲಿ ಆಟಗಾರರನ್ನ ವಿಚಲಿತಗೊಳಿಸಿದೆ.
ನಾಯಕನ ಬಗ್ಗೆ ಕೋಚ್ಗೆ ಅಸಮಾಧಾನ..!
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರೋಹಿತ್ ಬ್ಯಾಡ್ ಫಾರ್ಮ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ಆದ್ರೆ ಗಂಭೀರ್, ರೋಹಿತ್ ಬ್ಯಾಟಿಂಗ್ ಮತ್ತು ಆತನ ನಡೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಬ್ಯಾಡ್ ಫಾರ್ಮ್ನಲ್ಲಿರುವ ರೋಹಿತ್, ಸಹ ಆಟಗಾರರ ಜೊತೆ ಈ ಹಿಂದಿನಂತೆ ಹೆಚ್ಚು ಬೆರೆಯೊಲ್ಲ..! ಪದೇ ಪದೇ ಏಕಾಂಗಿಯಾಗಿ ಇರ್ತಾರೆ. ಆಟಗಾರರ ಜೊತೆ ಜಾಸ್ತಿ ಇಲ್ವಾಲ್ಮೆಂಟ್ ತೋರಿಸುತ್ತಿಲ್ಲ ಅಂತ ನಾಯಕನ ವಿರುದ್ಧ ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ಗಂಭೀರ್ ಆ ನಿರ್ಧಾರವೇ ಕಾರಣ; ಹಿಗ್ಗಾಮುಗ್ಗಾ ಜಾಡಿಸಿದ ಬಿಸಿಸಿಐ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ