ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್..!
ಬೌಲಿಂಗ್ ಕೋಚ್ ಆಗಬೇಕಿದ್ದ ಆರ್ಸಿಬಿ ಮಾಜಿ ಆಟಗಾರನಿಗೆ ಶಾಕ್
ಸಪೋರ್ಟಿಂಗ್ ಸ್ಟ್ಯಾಫ್ಗೆ ಹಲವರ ಶಾರ್ಟ್ಲಿಸ್ಟ್ ಮಾಡಿರೋ ಬಿಸಿಸಿಐ
ಸದ್ಯ ನಡೆಯುತ್ತಿರೋ ಜಿಂಬಾಬ್ವೆ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 26ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆಗಬೇಕಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಕೂಡ ಆಯ್ಕೆಯಾಗಿದ್ದಾರೆ.
ಇನ್ನು, ಟೀಮ್ ಇಂಡಿಯಾ ಪ್ರಕಟ ಆಗೋ ಮುನ್ನವೇ ಸಪೋರ್ಟಿಂಗ್ ಸ್ಟ್ಯಾಫ್ ಕೂಡ ಬದಲಾಗಲಿದೆ. ಭಾರತ ತಂಡದ ಸಪೋರ್ಟಿಂಗ್ ಸ್ಟ್ಯಾಫ್ಗೆ ತಮಗೆ ಬೇಕಾದವರನ್ನು ಗೌತಮ್ ಗಂಭೀರ್ ಕರೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಈಗ ಬಿಸಿಸಿಐ ಮುಂದೆ ಮತ್ತೊಂದು ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಗಂಭೀರ್ ಮೊದಲು ಬೌಲಿಂಗ್ ಕೋಚ್ ಆಯ್ಕೆ ಸಲುವಾಗಿ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಹೆಸರು ಸೂಚಿಸಿದ್ರು. ಇವರ ಬೇಡಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ವರದಿ ಆಗಿತ್ತು. ಈ ಬೆನ್ನಲ್ಲೇ ಇದೇ ಸ್ಥಾನಕ್ಕೆ ಪಾಕ್ ಮಾಜಿ ಬೌಲಿಂಗ್ ಕೋಚ್ ಮತ್ತು ಸೌತ್ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಈ ಮಧ್ಯೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಬಿಸಿಸಿಐ ಮಾಜಿ ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಜಹೀರ್ ಖಾನ್ ಹೆಸರು ಶಾರ್ಟ್ ಲಿಸ್ಟ್ ಮಾಡಿದೆ. ಗಂಭೀರ್ ತಲೆಯಲ್ಲಿ ದಕ್ಷಿಣ ಆಫ್ರಿಕಾದ ತಾರೆ ಹೆಸರಿದೆ. ಯಾರು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: T20 ಕ್ರಿಕೆಟ್ ನಿವೃತ್ತಿಯಿಂದ ವಾಪಸ್ ಬರ್ತಾರಾ ಕೊಹ್ಲಿ, ರೋಹಿತ್ ಶರ್ಮಾ? ಏನಿದು ಸ್ಟೋರಿ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್..!
ಬೌಲಿಂಗ್ ಕೋಚ್ ಆಗಬೇಕಿದ್ದ ಆರ್ಸಿಬಿ ಮಾಜಿ ಆಟಗಾರನಿಗೆ ಶಾಕ್
ಸಪೋರ್ಟಿಂಗ್ ಸ್ಟ್ಯಾಫ್ಗೆ ಹಲವರ ಶಾರ್ಟ್ಲಿಸ್ಟ್ ಮಾಡಿರೋ ಬಿಸಿಸಿಐ
ಸದ್ಯ ನಡೆಯುತ್ತಿರೋ ಜಿಂಬಾಬ್ವೆ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 26ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆಗಬೇಕಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಕೂಡ ಆಯ್ಕೆಯಾಗಿದ್ದಾರೆ.
ಇನ್ನು, ಟೀಮ್ ಇಂಡಿಯಾ ಪ್ರಕಟ ಆಗೋ ಮುನ್ನವೇ ಸಪೋರ್ಟಿಂಗ್ ಸ್ಟ್ಯಾಫ್ ಕೂಡ ಬದಲಾಗಲಿದೆ. ಭಾರತ ತಂಡದ ಸಪೋರ್ಟಿಂಗ್ ಸ್ಟ್ಯಾಫ್ಗೆ ತಮಗೆ ಬೇಕಾದವರನ್ನು ಗೌತಮ್ ಗಂಭೀರ್ ಕರೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಈಗ ಬಿಸಿಸಿಐ ಮುಂದೆ ಮತ್ತೊಂದು ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಗಂಭೀರ್ ಮೊದಲು ಬೌಲಿಂಗ್ ಕೋಚ್ ಆಯ್ಕೆ ಸಲುವಾಗಿ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಹೆಸರು ಸೂಚಿಸಿದ್ರು. ಇವರ ಬೇಡಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ವರದಿ ಆಗಿತ್ತು. ಈ ಬೆನ್ನಲ್ಲೇ ಇದೇ ಸ್ಥಾನಕ್ಕೆ ಪಾಕ್ ಮಾಜಿ ಬೌಲಿಂಗ್ ಕೋಚ್ ಮತ್ತು ಸೌತ್ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಈ ಮಧ್ಯೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಬಿಸಿಸಿಐ ಮಾಜಿ ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಜಹೀರ್ ಖಾನ್ ಹೆಸರು ಶಾರ್ಟ್ ಲಿಸ್ಟ್ ಮಾಡಿದೆ. ಗಂಭೀರ್ ತಲೆಯಲ್ಲಿ ದಕ್ಷಿಣ ಆಫ್ರಿಕಾದ ತಾರೆ ಹೆಸರಿದೆ. ಯಾರು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: T20 ಕ್ರಿಕೆಟ್ ನಿವೃತ್ತಿಯಿಂದ ವಾಪಸ್ ಬರ್ತಾರಾ ಕೊಹ್ಲಿ, ರೋಹಿತ್ ಶರ್ಮಾ? ಏನಿದು ಸ್ಟೋರಿ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್