/newsfirstlive-kannada/media/post_attachments/wp-content/uploads/2025/01/TEAM_INDIA-3.jpg)
ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಈಗಾಗಲೇ ದುಬೈಗೆ ಪ್ರಯಾಣ ತೆರಳಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಿಂದ ಅರಬ್ಗೆ ತೆರಳಿದೆ. ಆದ್ರೆ ಮಹತ್ವದ ಟೂರ್ನಿಗೂ ಮುನ್ನ ಕ್ಯಾಪ್ಟನ್, ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಇಂಡಿಯನ್ ಸ್ಪಿನ್ನರ್ಸ್.
2013, ಬರ್ಮಿಂಗ್ಹ್ಯಾಮ್..! 12 ವರ್ಷಗಳ ಹಿಂದೆ, ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಆದ್ರೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋಕೆ ಹೊರಟಿರುವ ಟೀಮ್ ಇಂಡಿಯಾ, ಆರಂಭದಲ್ಲೇ ವಿವಾದಗಳ ಸುಳಿಗೆ ಸಿಲುಕಿದೆ. ಟೂರ್ನಿಗೆ ತಂಡ ಪ್ರಕಟಿಸಿದಾಗ ಯಾರೂ ಮಾತನಾಡಲಿಲ್ಲ. ಆದ್ರೆ ಯಾವಾಗ ವೇಗಿ ಜಸ್ಪ್ರೀತ್ ಬೂಮ್ರಾ ರಿಪ್ಲೇಸ್ಮೆಂಟ್ ಅನೌನ್ಸ್ ಆಯಿತೋ, ಟೀಕೆಗಳು ಶುರುವಾದವು.
ಬೂಮ್ರಾ ಔಟ್, ಹರ್ಷಿತ್ ರಾಣಾ ಇನ್. ಜೈಸ್ವಾಲ್ ಔಟ್, ವರುಣ್ ಚಕ್ರವರ್ತಿ ಇನ್ ಅಂತ ಪ್ರಕಟವಾಗಿದ್ದೇ ತಡ, ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
5 ಮಂದಿ ಸ್ಪಿನ್ನರ್ಸ್..! ಟೀಮ್ ಇಂಡಿಯಾ ಲೆಕ್ಕಾಚಾರವೇನು..?
ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ, ಸ್ಥಾನ ಪಡೆದಿರುವ ಸ್ಪಿನ್ನರ್ಸ್. ಆದ್ರೆ ದುಬೈನಲ್ಲಿ ನಡೆಯಲಿರುವ ಟೂರ್ನಿಗೆ, ಐದು ಮಂದಿ ಸ್ಪಿನ್ನರ್ಸ್ ಬೇಕಿತ್ತಾ..? ಇದೇ ಈಗ ದೊಡ್ಡ ಪ್ರಶ್ನೆಯಾಗಿದೆ.
5 ಸ್ಪಿನ್ನರ್ಸ್ ಬೇಕಿರಲಿಲ್ಲ..!
ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ 5 ಮಂದಿ ಸ್ಪಿನ್ನರ್ಗಳನ್ನ ದುಬೈಗೆ ಕರೆದುಕೊಂಡು ಹೋಗ್ತಿರೋದು ನನಗೆ ಆಶ್ಚರ್ಯ ತಂದಿದೆ. 3 ಅಥವಾ 4 ಸ್ಪಿನ್ನರ್ಸ್ ಓಕೆ. 5ನೇ ಸ್ಪಿನ್ನರ್ ತಂಡಕ್ಕೆ ಅವಶ್ಯಕತೆ ಇರಲಿಲ್ಲ ಅನಿಸುತ್ತೆ. ನೀವು ದುಬೈನಲ್ಲಿ ಬಾಲ್ ಟರ್ನ್ ಆಗುತ್ತೆ ಅನ್ಕೊಂಡ್ರಾ, ಖಂಡಿತ ಇಲ್ಲ. ಇತ್ತೀಚಿಗೆ ಮುಕ್ತಾಯವಾಗ ILT20 ಟೂರ್ನಿಯಲ್ಲಿ ಬ್ಯಾಟ್ಸ್ಮನ್ಗಳು ಸಲೀಸಾಗಿ 180+ ರನ್ಸ್ ಚೇಸ್ ಮಾಡ್ತಿದ್ದರು. ಇದನ್ನ ನೋಡಿ ಅರ್ಥ ಮಾಡಿಕೊಳ್ಳಬೇಕಿತ್ತು.!
ಆರ್.ಅಶ್ವಿನ್, ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್
ಅಶ್ವಿನ್ ಹೇಳಿರೋದ್ರಲ್ಲಿ ನೂರಕ್ಕೆ 100 ಅರ್ಥ ಇದೆ. ಮೂರು ಅಥವಾ ನಾಲ್ಕು ಸ್ಪಿನ್ನರ್ಗಳನ್ನ ತಂಡಕ್ಕೆ ಆಯ್ಕೆ ಮಾಡಬಹುದಿತ್ತು. ಆದ್ರೆ ಐದನೇ ಸ್ಪಿನ್ನರ್ ಬದಲು ಜೈಸ್ವಾಲ್ಗೆ ಚಾನ್ಸ್ ನೀಡಬಹುದಿತ್ತು.
ದುಬೈ ಸ್ಟೇಡಿಯಮ್ನಲ್ಲಿ ವೇಗಿಗಳ ದರ್ಬಾರ್..!
ಇತ್ತೀಚಿಗೆ ದುಬೈನಲ್ಲಿ ಮುಕ್ತಾಯವಾದ ILT20 ಟೂರ್ನಿಯಲ್ಲಿ, ಸ್ಪಿನ್ನರ್ಸ್ಗೆ ಹೋಲಿಸಿದ್ರೆ ವೇಗಿಗಳು ಬ್ರಿಲಿಯಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಟೂರ್ನಿಯಲ್ಲಿ ಫಾಸ್ಟ್ ಬೌಲರ್ಸ್ 116 ವಿಕೆಟ್ ಪಡೆದಿದ್ರೆ, ಸ್ಪಿನ್ನರ್ಸ್ 54 ವಿಕೆಟ್ ಕಬಳಿಸಿದ್ದಾರೆ. ಅಂದ್ರೆ ವೇಗಿಗಳ ಅರ್ಧದಷ್ಟು ವಿಕೆಟ್ಗಳನ್ನ ಸ್ಪಿನ್ನರ್ ಪಡೀಲಿಲ್ಲ.
ದುಬೈ ಪಿಚ್ ಹೇಗಿರುತ್ತೆ ಗೊತ್ತಾ..?
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ 30ಕ್ಕಿಂತ ಹೆಚ್ಚು ಡ್ರಿಗ್ರಿ ಸೆಲ್ಸಿಯಸ್ ಇರುತ್ತದೆ. ಅಂದ್ರೆ ಹಾಟ್ ಌಂಡ್ ಹ್ಯೂಮಿಡ್ ಕಂಡೀಷನ್ಸ್ ಎಕ್ಸ್ಪೆಕ್ಟ್ ಮಾಡಬಹುದು. ಇಂತಹ ಸಮಯದಲ್ಲಿ ದುಬೈ ಪಿಚ್, ಡೇ ಟೈಮ್ನಲ್ಲಿ ಸ್ಲೋ ಇರುತ್ತದೆ. ರಾತ್ರಿ ಹೊತ್ತು ಗ್ರೌಂಡ್ನಲ್ಲಿ ಡ್ಯೂ ಫ್ಯಾಕ್ಟರ್ ಇದ್ದೇ ಇರುತ್ತದೆ. ಪಿಚ್ ಮೇಲೆ ಸ್ವಲ್ಪ ಗ್ರಾಸ್ ಬಿಡೋದ್ರಿಂದ, ಬ್ಯಾಟಿಂಗ್ ಕಂಡೀಷನ್ಸ್ ನಿರೀಕ್ಷಿಸಬಹುದು. ಸ್ಪಿನ್ನರ್ಸ್ ಹೇಳಿಕೊಳ್ಳುವಂತಹ ಎಫೆಕ್ಟೀವ್ ಆಗಲ್ಲ.
ಇದನ್ನೂ ಓದಿ:ಫುಲ್ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನ್ಯತಾ- ಡಾಲಿ ಧನಂಜಯ
ಫ್ರೆಶ್ ಪಿಚ್ ಮೇಲೆ ಸ್ಪಿನ್ನರ್ಸ್ ಕಣ್ಣು..!
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅದ್ಯಾವ ಲೆಕ್ಕಾಚಾರದ ಮೇಲೆ, ಐವರು ಸ್ಪಿನ್ನರ್ಗಳನ್ನ ಆಯ್ಕೆ ಮಾಡಿದಿಯೋ ಗೊತ್ತಿಲ್ಲ. ಇದು ತಂಡಕ್ಕೆ ಮುಳುವಾಗುತ್ತಾ ಇಲ್ವಾ ಅನ್ನೋದು ಸ್ಪಷ್ಟತೆ ಇಲ್ಲ. ಸ್ಪಿನ್ ಹೆವಿ ಟ್ಯಾಕ್ಟಿಕ್ಟ್ ತಂಡಕ್ಕೆ ಮುಳುವಾಗಲೂಬಹುದು. ಆದ್ರೆ ದುಬೈ ಸ್ಟೇಡಿಯಮ್ನ ಫ್ರೇಶ್ ಪಿಚ್ಗಳ ಮೇಲೆ, ಇನ್ನೂ ಆಟ ನಡೆದಿಲ್ಲ. ಚಾಂಪಿಯನ್ಸ್ ಟ್ರೋಫಿಗೆಂದು ಮೀಸಲಿಟ್ಟಿರುವ ಈ ಪಿಚ್ಗಳು, ಒಂದು ವೇಳೆ ಸ್ಪಿನ್ ಫ್ರೆಂಡ್ಲಿ ವಿಕೆಟ್ಸ್ ಆದ್ರೆ, ಟೀಮ್ ಇಂಡಿಯಾಕ್ಕೆ ಹಬ್ಬವೋ ಹಬ್ಬ.
ಏನೇ ಇರ್ಲಿ, ಸ್ಪಿನ್ ಲೆಜೆಂಡ್ ಅಶ್ವಿನ್, ಟೀಮ್ ಇಂಡಿಯಾ ಹೆವಿ ಸ್ಪಿನ್ ಟ್ಯಾಕ್ಟಿಕ್ಟ್ ವಿರುದ್ಧ ಇದ್ದಾರೆ. ಆದ್ರೆ ಇದು ರೋಹಿತ್ ಪಡೆಗೆ ವರದಾನನಾ ಅಥವಾ ಶಾಪನಾ ಅನ್ನೋದನ್ನ, ಮುಂದಿನ ದಿನಗಳಲ್ಲಿ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ