/newsfirstlive-kannada/media/post_attachments/wp-content/uploads/2023/09/Sanju-Samson.jpg)
ಸೆಂಚುರಿಯನ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 11 ರನ್ಗಳಿಂದ ಗೆದ್ದು ಬೀಗಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರೀ ಸುದ್ದಿಯಾದವರು ಸಂಜು ಸ್ಯಾಮ್ಸನ್. ಈಗ ಇವರು ತಮ್ಮ ತಂದೆಯಿಂದ ಸುದ್ದಿಯಾಗಿದ್ದಾರೆ.
ಯೆಸ್, ನವೆಂಬರ್ 8ನೇ ತಾರೀಕು ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 107 ರನ್ಗಳ ಅದ್ಭುತ ಶತಕ ಬಾರಿಸಿದ್ರು. ಇದಾದ ಬಳಿಕ ನಡೆದ ಸತತ 2 ಪಂದ್ಯಗಳಲ್ಲೂ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾದ್ರು.
ಸಂಜು ಸ್ಯಾಮ್ಸನ್ ತಂದೆ ವಿಡಿಯೋ ವೈರಲ್
ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಟಿ20 ಸರಣಿ ಮಧ್ಯೆಯೇ ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಮಾತಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತ ಕ್ರಿಕೆಟ್ ತಂಡದ ಮೂವರು ನಾಯಕರು ಮತ್ತು ಮುಖ್ಯ ಕೋಚ್ ಆಗಿದ್ದವ್ರು ತಮ್ಮ ಮಗನ ಕ್ರಿಕೆಟ್ ಜೀವನ ಹಾಳು ಮಾಡಿದ್ರು ಎಂದು ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ.
ವಿಶ್ವನಾಥ್ ಏನಂದ್ರು?
ಟೀಮ್ ಇಂಡಿಯಾದ ದಿಗ್ಗಜರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಂಜುವಿನ 10 ವರ್ಷಗಳನ್ನು ವ್ಯರ್ಥ ಮಾಡಿದ್ರು ಎಂದರು ವಿಶ್ವನಾಥ್.
ಗಂಭೀರ್ -ಸೂರ್ಯಗೆ ಥ್ಯಾಂಕ್ಸ್ ಎಂದ್ರು!
ಇನ್ನು, ನನ್ನ ಮಗ ಪ್ರತಿಭಾವಂತ ಕ್ರಿಕೆಟರ್. ಸಂಜು ಅವರನ್ನು ಪ್ರೋತ್ಸಾಹಿಸಿದಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದಗಳು ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್