newsfirstkannada.com

KL ರಾಹುಲ್​​​ಗೆ ಟೀಂ ಇಂಡಿಯಾ ಡೋರ್ ಕ್ಲೋಸ್..? ಎಲ್ಲಾ ಅವಕಾಶ ಮುಚ್ಚಿದೆ, ಆದರೆ..!

Share :

Published September 8, 2024 at 10:18am

Update September 8, 2024 at 10:20am

    ಟೆಸ್ಟ್ ತಂಡದಿಂದಲೂ ಕೆ.ಎಲ್​.ರಾಹುಲ್ ಔಟ್​..?

    ಕೆ.ಎಲ್.ರಾಹುಲ್ ಟೆಸ್ಟ್​ ತಂಡದ ಬಾಗಿಲು ಬಂದ್..?

    ಕಮ್​​ಬ್ಯಾಕ್​​ ವೇದಿಕೆಯಲ್ಲೇ ಕೆ.ಎಲ್.ರಾಹುಲ್ ಫ್ಲಾಪ್

ಕೆ.ಎಲ್.ರಾಹುಲ್ ಆಲ್ ಫಾರ್ಮೆಟ್ ಪ್ಲೇಯರ್ ಅನ್ನೋದ್ರಲ್ಲಿ ನೋ ಡೌಟ್​. ಆದ್ರೀಗ ಇದೇ ಕೆ.ಎಲ್.ರಾಹುಲ್, ಟಿ20 ಬೆನ್ನಲ್ಲೇ ಟೆಸ್ಟ್ ಟೀಮ್​ನಿಂದಲೂ ದೂರ ಉಳಿಯೋದು ಬಹುತೇಕ ಕನ್ಫರ್ಮ್. ಬಾಂಗ್ಲಾ ಟೆಸ್ಟ್​ನಿಂದಲೇ ತಂಡದ ಡೋರ್ ಕ್ಲೋಸ್ ಆದರು ಅಚ್ಚರಿ ಇಲ್ಲ.
ಕನ್ನಡಿಗ ಕೆ.ಎಲ್.ರಾಹುಲ್. ಪಕ್ಕಾ ಕ್ಲಾಸ್ ಬ್ಯಾಟ್ಸ್​ಮನ್. ಕಂಡೀಷನ್ಸ್​ ಯಾವುದೇ ಆಗಿರಲಿ, ಸರಾಗವಾಗಿ ರನ್ ಗಳಿಸುವ ಚಾಕಚಕ್ಯತೆ ಕನ್ನಡಿಗನಿಗಿದೆ. ಆದ್ರೀಗ ಇದೇ ರಾಹಲ್, ಈಗ ಒಂದೊಂದೇ ಫಾರ್ಮೆಟ್​ನಿಂದ ದೂರ ಹೋಗ್ತಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ದುಲೀಪ್ ಟ್ರೋಪಿ.

ಕೆ.ಎಲ್.ರಾಹುಲ್ ಫ್ಲಾಪ್..!
ದುಲೀಪ್ ಟ್ರೋಪಿ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಕಮ್​​ಬ್ಯಾಕ್​​​​ಗೆ ವೇದಿಕೆಯಾಗಿತ್ತು. ಹೀಗಾಗಿ ದುಲೀಪ್​ ಟ್ರೋಪಿಯಲ್ಲಿ ಕಮಾಲ್ ಮಾಡಿ, ಬಾಂಗ್ಲಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯೋದು ಬಹುತೇಕರ ಪರಮ ಗುರಿಯಾಗಿದೆ. ಈ ಪೈಕಿ ಕೆ.ಎಲ್.ರಾಹುಲ್ ಕೂಡ ಒಬ್ಬರು. ಈ ಮೊದಲ ಅಗ್ನಿಪರೀಕ್ಷೆಯಲ್ಲೇ ರಾಹುಲ್​, ಫೇಲ್ಯೂರ್ ಆಗಿದ್ದಾರೆ.

ಇದನ್ನೂ ಓದಿ: Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

ಚಿನ್ನಸ್ವಾಮಿಯಲ್ಲಿ ಭಾರತ ಬಿ ಎದುರಿನ ಪಂದ್ಯ ಕೆ.ಎಲ್.ರಾಹುಲ್ ಪಾಲಿಗೆ ಮೋಸ್ಟ್​ ಕ್ರೂಶಿಯಲ್ ಆಗಿತ್ತು. ಈ ಪಂದ್ಯದಲ್ಲಿ ಕಣಕ್ಕಿಳಿದ ಕೆ.ಎಲ್.ರಾಹುಲ್, ನೆಚ್ಚಿನ ಹೋಮ್​ ಗ್ರೌಂಡ್​ನಲ್ಲೇ ರನ್ ಗಳಿಸಲು ಪರದಾಡಿದ್ರು. ಬರೋಬ್ಬರಿ 111 ಎಸೆತಗಳನ್ನ ಎದುರಿಸಿದ ಕನ್ನಡಿಗ ರಾಹುಲ್, ಗಳಿಸಿದ್ದು ಜಸ್ಟ್​ 37 ರನ್.. ಆದ್ರೀಗ ಇದೇ ​ಆಟ ಕೆ.ಎಲ್​​​.ರಾಹುಲ್​ ಟೆಸ್ಟ್​ ತಂಡದ ಸ್ಥಾನಕ್ಕೆ ಕುತ್ತು ತಂದಿದೆ.

ರಾಹುಲ್​​​​​​​​​​​​​​​​​​​​​ ಸ್ಥಾನಕ್ಕೆ ಸಾಲು ಸಾಲು ಆಕಾಂಕ್ಷಿಗಳು
ಕೆ.ಎಲ್.ರಾಹುಲ್ ಟೆಸ್ಟ್​ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಆದ್ರೀಗ ಅದೇ ರಾಹುಲ್​​ ಟೆಸ್ಟ್​ ತಂಡದ ಸ್ಥಾನ ಇಕ್ಕಟ್ಟಿಗೆ ಸಿಲುಕಿದೆ. ಬ್ಯಾಟ್ಸ್​ಮನ್​ ಆಗಿಯೇ ಅಲ್ಲ. ವಿಕೆಟ್ ಕೀಪರ್ ಕೋಟಾದಲ್ಲೂ ಕೆ.ಎಲ್.ರಾಹುಲ್​​​ ಡೋರ್​​ ಕಂಪ್ಲೀಟ್​​ ಕ್ಲೋಸ್. ಇದಕ್ಕೆ ಕಾರಣ ರಾಹುಲ್​​ರ ವೈಫಲ್ಯ ಒಂದಾದ್ರೆ ಸಾಲು ಸಾಲು ಆಟಗಾರರ ಪೈಪೋಟಿ ಮತ್ತೊಂದು.

ಹೌದು! ರಿಷಭ್ ಪಂತ್ ಫಸ್ಟ್​ ಚಾಯ್ಸ್ ಪ್ಲೇಯರ್ ಆಗಿದ್ದಾರೆ. ಇದಕ್ಕೆ ತಕ್ಕಂತೆಯೇ ದುಲೀಪ್ ಟ್ರೋಪಿಯ ಸ್ಪೋಟಕ 60 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಬ್ಯಾಕ್ ಆಪ್​ ಆಗಿ ಧೃವ್ ಜುರೇಲ್​​​ ಸೆಲೆಕ್ಷನ್ ಕಮಿಟಿಯ ಆಯ್ಕೆ ಆಗೋದು ಬಹುತೇಕ ಫಿಕ್ಸ್​. ವಿಕೆಟ್ ಕೀಪರ್ ಹೊರತಾದ ಸ್ಲಾಟ್​ನಲ್ಲೂ ಕೆ.ಎಲ್.ರಾಹುಲ್​ಗೆ ಅವಕಾಶ ಮುಚ್ಚಿದೆ. ಇದಕ್ಕೆ ಕಾರಣ ಶ್ರೇಯಸ್ ಅಯ್ಯರ್ ಅಂಡ್ ಸರ್ಫರಾಜ್ ಖಾನ್
ಮಿಡಲ್ ಆರ್ಡರ್​ನಲ್ಲಿ ಅಬ್ಬರಿಸಬಲ್ಲ ಸರ್ಫರಾಜ್​ ಖಾನ್ ಹಾಗೂ ಶ್ರೇಯಸ್ ಅಯ್ಯರ್​​​​​​​​​​​​​, ಸದ್ಯ ದುಲೀಪ್ ಟ್ರೋಪಿಯಲ್ಲಿ ಸಾಲಿಡ್ ಪರ್ಫಾಮೆಮ್ಸ್​ ನೀಡಿದ್ದಾರೆ. ಅದ್ರಲ್ಲೂ ಯಂಗ್ ಬ್ಯಾಟರ್ ಸರ್ಫರಾಜ್, ಈ ಹಿಂದಿನ ಇಂಗ್ಲೆಂಡ್ ಸರಣಿಯಲ್ಲೂ ಮ್ಯಾಚ್​​​​​​​​​​​​ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯ ಜೊತೆ ಜೊತೆಗೆ ಅಗ್ರೆಸ್ಸಿವ್ ಬ್ಯಾಟಿಂಗ್ ಆಡಬಲ್ಲೆ ಅನ್ನೋದು ತೂರಿಸಿಕೊಟ್ಟಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್​​ಗೆ ಸರ್ಫರಾಜ್​ ಖಾನ್​ ವಿಲನ್​ ಆಗದರ ಅಚ್ಚರಿ ಇಲ್ಲ.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಬೌಲರ್​​ ಸೆನ್ಸೇಷನ್​; ಈತ ಬೆಂಗಳೂರು ತಂಡಕ್ಕೆ ಮತ್ತೆ ಬೇಕೇಬೇಕು ಎಂದ ಫ್ಯಾನ್ಸ್..!

ಬಾಂಗ್ಲಾ ಸರಣಿಯಲ್ಲೇ ಭವಿಷ್ಯ
ಒಂದ್ಕಡೆ ದುಲೀಪ್ ಟ್ರೋಫಿಯಲ್ಲಿ ಅಬ್ಬರಿಸದ ಕೆ.ಎಲ್.ರಾಹುಲ್, ಪದೇ ಪದೇ ಇಂಜುರಿಗೂ ತುತ್ತಾಗ್ತಾನೇ ಇರ್ತಾರೆ. ಇದಕ್ಕೆ ಬೆಸ್ಟ್​ ಏಕ್ಸಾಂಪಲ್​. ಇದೇ ಮಾರ್ಚ್​ನಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿ. ಈ ಸರಣಿಯಲ್ಲಿ ಜಸ್ಟ್​ ಒಂದೇ ಒಂದು ಪಂದ್ಯಕ್ಕೆ ಸಿಮೀತವಾಗಿದ್ದ ರಾಹುಲ್, ಶ್ರೀಲಂಕಾ ಎದುರಿನ ಏಕದಿನ ಸರಣಿ ಬಿಟ್ರೆ, ಇನ್ಯಾವ ಸರಣಿಯಲ್ಲಿ ಆಡಿಲ್ಲ. ಈಗ ಅದೃಷ್ಟದಂತೆ ಸಿಕ್ಕ ದುಲೀಪ್ ಟ್ರೋಫಿಯಲ್ಲೂ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಇದೇ 19ರಿಂದ ನಡೆಯಲಿರುವ ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ರಾಹುಲ್ ದೂರ ಆಗ್ತಾರಾ ಅನ್ನೋ ಪ್ರಶ್ನೆ ಇದ್ದೇ ಇದೆ.

ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

KL ರಾಹುಲ್​​​ಗೆ ಟೀಂ ಇಂಡಿಯಾ ಡೋರ್ ಕ್ಲೋಸ್..? ಎಲ್ಲಾ ಅವಕಾಶ ಮುಚ್ಚಿದೆ, ಆದರೆ..!

https://newsfirstlive.com/wp-content/uploads/2024/08/KL_RAHUL.jpg

    ಟೆಸ್ಟ್ ತಂಡದಿಂದಲೂ ಕೆ.ಎಲ್​.ರಾಹುಲ್ ಔಟ್​..?

    ಕೆ.ಎಲ್.ರಾಹುಲ್ ಟೆಸ್ಟ್​ ತಂಡದ ಬಾಗಿಲು ಬಂದ್..?

    ಕಮ್​​ಬ್ಯಾಕ್​​ ವೇದಿಕೆಯಲ್ಲೇ ಕೆ.ಎಲ್.ರಾಹುಲ್ ಫ್ಲಾಪ್

ಕೆ.ಎಲ್.ರಾಹುಲ್ ಆಲ್ ಫಾರ್ಮೆಟ್ ಪ್ಲೇಯರ್ ಅನ್ನೋದ್ರಲ್ಲಿ ನೋ ಡೌಟ್​. ಆದ್ರೀಗ ಇದೇ ಕೆ.ಎಲ್.ರಾಹುಲ್, ಟಿ20 ಬೆನ್ನಲ್ಲೇ ಟೆಸ್ಟ್ ಟೀಮ್​ನಿಂದಲೂ ದೂರ ಉಳಿಯೋದು ಬಹುತೇಕ ಕನ್ಫರ್ಮ್. ಬಾಂಗ್ಲಾ ಟೆಸ್ಟ್​ನಿಂದಲೇ ತಂಡದ ಡೋರ್ ಕ್ಲೋಸ್ ಆದರು ಅಚ್ಚರಿ ಇಲ್ಲ.
ಕನ್ನಡಿಗ ಕೆ.ಎಲ್.ರಾಹುಲ್. ಪಕ್ಕಾ ಕ್ಲಾಸ್ ಬ್ಯಾಟ್ಸ್​ಮನ್. ಕಂಡೀಷನ್ಸ್​ ಯಾವುದೇ ಆಗಿರಲಿ, ಸರಾಗವಾಗಿ ರನ್ ಗಳಿಸುವ ಚಾಕಚಕ್ಯತೆ ಕನ್ನಡಿಗನಿಗಿದೆ. ಆದ್ರೀಗ ಇದೇ ರಾಹಲ್, ಈಗ ಒಂದೊಂದೇ ಫಾರ್ಮೆಟ್​ನಿಂದ ದೂರ ಹೋಗ್ತಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ದುಲೀಪ್ ಟ್ರೋಪಿ.

ಕೆ.ಎಲ್.ರಾಹುಲ್ ಫ್ಲಾಪ್..!
ದುಲೀಪ್ ಟ್ರೋಪಿ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಕಮ್​​ಬ್ಯಾಕ್​​​​ಗೆ ವೇದಿಕೆಯಾಗಿತ್ತು. ಹೀಗಾಗಿ ದುಲೀಪ್​ ಟ್ರೋಪಿಯಲ್ಲಿ ಕಮಾಲ್ ಮಾಡಿ, ಬಾಂಗ್ಲಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯೋದು ಬಹುತೇಕರ ಪರಮ ಗುರಿಯಾಗಿದೆ. ಈ ಪೈಕಿ ಕೆ.ಎಲ್.ರಾಹುಲ್ ಕೂಡ ಒಬ್ಬರು. ಈ ಮೊದಲ ಅಗ್ನಿಪರೀಕ್ಷೆಯಲ್ಲೇ ರಾಹುಲ್​, ಫೇಲ್ಯೂರ್ ಆಗಿದ್ದಾರೆ.

ಇದನ್ನೂ ಓದಿ: Jio, Airtel ಸೋಲಿಸಲು ಹಠತೊಟ್ಟು ನಿಂತ BSNL; ದಿಢೀರ್ ಟಿವಿ ಜಗತ್ತಿಗೆ ಕಾಲಿಟ್ಟ ಟೆಲಿಕಾಂ ಕಂಪನಿ

ಚಿನ್ನಸ್ವಾಮಿಯಲ್ಲಿ ಭಾರತ ಬಿ ಎದುರಿನ ಪಂದ್ಯ ಕೆ.ಎಲ್.ರಾಹುಲ್ ಪಾಲಿಗೆ ಮೋಸ್ಟ್​ ಕ್ರೂಶಿಯಲ್ ಆಗಿತ್ತು. ಈ ಪಂದ್ಯದಲ್ಲಿ ಕಣಕ್ಕಿಳಿದ ಕೆ.ಎಲ್.ರಾಹುಲ್, ನೆಚ್ಚಿನ ಹೋಮ್​ ಗ್ರೌಂಡ್​ನಲ್ಲೇ ರನ್ ಗಳಿಸಲು ಪರದಾಡಿದ್ರು. ಬರೋಬ್ಬರಿ 111 ಎಸೆತಗಳನ್ನ ಎದುರಿಸಿದ ಕನ್ನಡಿಗ ರಾಹುಲ್, ಗಳಿಸಿದ್ದು ಜಸ್ಟ್​ 37 ರನ್.. ಆದ್ರೀಗ ಇದೇ ​ಆಟ ಕೆ.ಎಲ್​​​.ರಾಹುಲ್​ ಟೆಸ್ಟ್​ ತಂಡದ ಸ್ಥಾನಕ್ಕೆ ಕುತ್ತು ತಂದಿದೆ.

ರಾಹುಲ್​​​​​​​​​​​​​​​​​​​​​ ಸ್ಥಾನಕ್ಕೆ ಸಾಲು ಸಾಲು ಆಕಾಂಕ್ಷಿಗಳು
ಕೆ.ಎಲ್.ರಾಹುಲ್ ಟೆಸ್ಟ್​ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಆದ್ರೀಗ ಅದೇ ರಾಹುಲ್​​ ಟೆಸ್ಟ್​ ತಂಡದ ಸ್ಥಾನ ಇಕ್ಕಟ್ಟಿಗೆ ಸಿಲುಕಿದೆ. ಬ್ಯಾಟ್ಸ್​ಮನ್​ ಆಗಿಯೇ ಅಲ್ಲ. ವಿಕೆಟ್ ಕೀಪರ್ ಕೋಟಾದಲ್ಲೂ ಕೆ.ಎಲ್.ರಾಹುಲ್​​​ ಡೋರ್​​ ಕಂಪ್ಲೀಟ್​​ ಕ್ಲೋಸ್. ಇದಕ್ಕೆ ಕಾರಣ ರಾಹುಲ್​​ರ ವೈಫಲ್ಯ ಒಂದಾದ್ರೆ ಸಾಲು ಸಾಲು ಆಟಗಾರರ ಪೈಪೋಟಿ ಮತ್ತೊಂದು.

ಹೌದು! ರಿಷಭ್ ಪಂತ್ ಫಸ್ಟ್​ ಚಾಯ್ಸ್ ಪ್ಲೇಯರ್ ಆಗಿದ್ದಾರೆ. ಇದಕ್ಕೆ ತಕ್ಕಂತೆಯೇ ದುಲೀಪ್ ಟ್ರೋಪಿಯ ಸ್ಪೋಟಕ 60 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಬ್ಯಾಕ್ ಆಪ್​ ಆಗಿ ಧೃವ್ ಜುರೇಲ್​​​ ಸೆಲೆಕ್ಷನ್ ಕಮಿಟಿಯ ಆಯ್ಕೆ ಆಗೋದು ಬಹುತೇಕ ಫಿಕ್ಸ್​. ವಿಕೆಟ್ ಕೀಪರ್ ಹೊರತಾದ ಸ್ಲಾಟ್​ನಲ್ಲೂ ಕೆ.ಎಲ್.ರಾಹುಲ್​ಗೆ ಅವಕಾಶ ಮುಚ್ಚಿದೆ. ಇದಕ್ಕೆ ಕಾರಣ ಶ್ರೇಯಸ್ ಅಯ್ಯರ್ ಅಂಡ್ ಸರ್ಫರಾಜ್ ಖಾನ್
ಮಿಡಲ್ ಆರ್ಡರ್​ನಲ್ಲಿ ಅಬ್ಬರಿಸಬಲ್ಲ ಸರ್ಫರಾಜ್​ ಖಾನ್ ಹಾಗೂ ಶ್ರೇಯಸ್ ಅಯ್ಯರ್​​​​​​​​​​​​​, ಸದ್ಯ ದುಲೀಪ್ ಟ್ರೋಪಿಯಲ್ಲಿ ಸಾಲಿಡ್ ಪರ್ಫಾಮೆಮ್ಸ್​ ನೀಡಿದ್ದಾರೆ. ಅದ್ರಲ್ಲೂ ಯಂಗ್ ಬ್ಯಾಟರ್ ಸರ್ಫರಾಜ್, ಈ ಹಿಂದಿನ ಇಂಗ್ಲೆಂಡ್ ಸರಣಿಯಲ್ಲೂ ಮ್ಯಾಚ್​​​​​​​​​​​​ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯ ಜೊತೆ ಜೊತೆಗೆ ಅಗ್ರೆಸ್ಸಿವ್ ಬ್ಯಾಟಿಂಗ್ ಆಡಬಲ್ಲೆ ಅನ್ನೋದು ತೂರಿಸಿಕೊಟ್ಟಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್​​ಗೆ ಸರ್ಫರಾಜ್​ ಖಾನ್​ ವಿಲನ್​ ಆಗದರ ಅಚ್ಚರಿ ಇಲ್ಲ.

ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಬೌಲರ್​​ ಸೆನ್ಸೇಷನ್​; ಈತ ಬೆಂಗಳೂರು ತಂಡಕ್ಕೆ ಮತ್ತೆ ಬೇಕೇಬೇಕು ಎಂದ ಫ್ಯಾನ್ಸ್..!

ಬಾಂಗ್ಲಾ ಸರಣಿಯಲ್ಲೇ ಭವಿಷ್ಯ
ಒಂದ್ಕಡೆ ದುಲೀಪ್ ಟ್ರೋಫಿಯಲ್ಲಿ ಅಬ್ಬರಿಸದ ಕೆ.ಎಲ್.ರಾಹುಲ್, ಪದೇ ಪದೇ ಇಂಜುರಿಗೂ ತುತ್ತಾಗ್ತಾನೇ ಇರ್ತಾರೆ. ಇದಕ್ಕೆ ಬೆಸ್ಟ್​ ಏಕ್ಸಾಂಪಲ್​. ಇದೇ ಮಾರ್ಚ್​ನಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿ. ಈ ಸರಣಿಯಲ್ಲಿ ಜಸ್ಟ್​ ಒಂದೇ ಒಂದು ಪಂದ್ಯಕ್ಕೆ ಸಿಮೀತವಾಗಿದ್ದ ರಾಹುಲ್, ಶ್ರೀಲಂಕಾ ಎದುರಿನ ಏಕದಿನ ಸರಣಿ ಬಿಟ್ರೆ, ಇನ್ಯಾವ ಸರಣಿಯಲ್ಲಿ ಆಡಿಲ್ಲ. ಈಗ ಅದೃಷ್ಟದಂತೆ ಸಿಕ್ಕ ದುಲೀಪ್ ಟ್ರೋಫಿಯಲ್ಲೂ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಇದೇ 19ರಿಂದ ನಡೆಯಲಿರುವ ಬಾಂಗ್ಲಾ ಎದುರಿನ 2 ಪಂದ್ಯಗಳ ಟೆಸ್ಟ್ ಸರಣಿಯಿಂದಲೇ ರಾಹುಲ್ ದೂರ ಆಗ್ತಾರಾ ಅನ್ನೋ ಪ್ರಶ್ನೆ ಇದ್ದೇ ಇದೆ.

ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More