/newsfirstlive-kannada/media/post_attachments/wp-content/uploads/2025/02/Yuvaraj-Singh.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕ್ ತಂಡ ಹೊರಬಿದ್ದಿದೆ. ಈ ಬೆನ್ನಲ್ಲೇ ಪಾಕ್ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗಿವೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕ್ ನಂತರ ಟೀಮ್ ಇಂಡಿಯಾ ವಿರುದ್ಧವೂ ಸೋಲು ಕಂಡಿದೆ.
ಇತ್ತೀಚೆಗೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಪಾಕ್ ತಂಡ ಹೇಳಿಕೊಳ್ಳುವಂತ ಪ್ರದರ್ಶನವೇನು ನೀಡುತ್ತಿಲ್ಲ. ಈ ಹೊತ್ತಲ್ಲೇ ಪಾಕ್ ತಂಡಕ್ಕೆ ಕೋಚ್ ಆಗೋ ಬಯಕೆಯನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವ್ಯಕ್ತಪಡಿಸಿದ್ದಾರೆ.
ಏನಂದ್ರು ಯುವಿ ತಂದೆ?
ಟೀಮ್ ಇಂಡಿಯಾದ ದಿಗ್ಗಜ ಯೋಗರಾಜ್ ಸಿಂಗ್. ಇವರು ಮಾಜಿ ವಿಶ್ವ ಚಾಂಪಿಯನ್ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ. ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕ್ ಮಾಜಿ ಆಟಗಾರರನ್ನು ಯೋಗರಾಜ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಒಂದು ವರ್ಷ ನೀಡಿದ್ರೆ ಸಾಕು ಪಾಕ್ ತಂಡವನ್ನು ಸರಿ ಮಾಡುತ್ತೇನೆ ಎಂದಿದ್ದಾರೆ ಯುವಿ ತಂದೆ.
ಶೋಯೆಬ್ ಅಖ್ತರ್ ಮತ್ತು ವಾಸಿಂ ಅಕ್ರಮ್ ಪಾಕ್ ಕಂಡ ಅದ್ಭುತ ಆಟಗಾರರು. ಕಾಮೆಂಟರಿ ಮೂಲಕ ದುಡ್ಡು ಮಾಡುತ್ತಿರೋ ನೀವು ಏಕೆ ನಿಮ್ಮ ದೇಶದ ಆಟಗಾರರ ಸಮಸ್ಯೆ ಕೇಳಿಸಿಕೊಳ್ಳುತ್ತಿಲ್ಲ. ಮೈದಾನಕ್ಕೆ ಹೋಗಿ ಪಾಕ್ ತಂಡದ ಆಟಗಾರರನ್ನು ಗೈಡ್ ಮಾಡಿ ಎಂದರು.
ನಾನು ಪಾಕಿಸ್ತಾನಕ್ಕೆ ಹೋದರೆ ಒಂದು ವರ್ಷದೊಳಗೆ ತಂಡವನ್ನು ಉತ್ತಮಗೊಳಿಸುತ್ತೇನೆ. ನೀವೆಲ್ಲರೂ ನನ್ನನ್ನು ನೆನಪಿಸಿಕೊಳ್ಳುತ್ತೀರಿ. ಇದೆಲ್ಲವೂ ಉತ್ಸಾಹದ ವಿಷಯ. ನಾನು ದಿನಕ್ಕೆ 12 ಗಂಟೆಗಳ ಕಾಲ ತರಬೇತಿಗೆ ಮೀಸಲಿಡುತ್ತೇನೆ. ದೇಶದ ಪರ ಆಡಬೇಕು ಎಂದರೆ ಡಿಡಿಕೇಷನ್ ಬೇಕು ಎಂದರು.
ಇದನ್ನೂ ಓದಿ:ಶುಭ್ಮನ್ ಗಿಲ್ಗೆ ಭರ್ಜರಿ ಗಿಫ್ಟ್ ಕೊಟ್ಟ ICC; ವಿರಾಟ್ ಕೊಹ್ಲಿಗೂ ಸಖತ್ ಗುಡ್ನ್ಯೂಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ