/newsfirstlive-kannada/media/post_attachments/wp-content/uploads/2024/11/Suryakumar-Yadav.jpg)
ಟೀಮ್​​​ ಇಂಡಿಯಾ, ಇಂಗ್ಲೆಂಡ್​ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿವೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಟೀಮ್​​ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
ಸೂರ್ಯಕುಮಾರ್​ ಯಾದವ್​ ಕಳಪೆ ಪ್ರದರ್ಶನ
ರಾಜ್ಕೋಟ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಮ್​​ ಇಂಡಿಯಾದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಕಳಪೆ ಪ್ರದರ್ಶನ ನೀಡಿದ್ರು. ಇಂಗ್ಲೆಂಡ್​​ ವಿರುದ್ಧದ 3 ಟಿ20 ಪಂದ್ಯಗಳಲ್ಲೂ ಸೂರ್ಯ ತನ್ನ ಜವಾಬ್ದಾರಿ ಮರೆತು ಬ್ಯಾಟ್​​ ಬೀಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅಮೋಘವಾಗಿ ಬ್ಯಾಟ್ ಮಾಡುತ್ತಿದ್ದ ಇವರು ಪ್ರಸಕ್ತ ಸರಣಿಯಲ್ಲಿ ಮಂಕಾಗಿ ಹೋಗಿದ್ದಾರೆ.
ಫ್ಲಾಪ್​​​ ಶೋ
3ನೇ ಟಿ20 ಪಂದ್ಯದಲ್ಲೂ ಸೂರ್ಯನ ಫ್ಲಾಪ್​ ಶೋ ಮುಂದುವರಿದಿದೆ. ಹೀಗಾಗಿ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​​​ ಕಳಪೆ ಫಾರ್ಮ್​​ ಟೀಮ್​ ಇಂಡಿಯಾದ ಟೆನ್ಷನ್ ಹೆಚ್ಚಿಸಿದೆ. ಟೀಮ್​ ಇಂಡಿಯಾ ಕ್ಯಾಪ್ಟನ್​ ಆದಮೇಲೆ ಇವರ ಬ್ಯಾಟ್​​ ಮೌನವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಮೂರು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ ಸೂರ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸೂರ್ಯ ವಿರುದ್ಧ ಭಾರೀ ಆಕ್ರೋಶ
ಸೂರ್ಯ ಕುಮಾರ್​​ ಯಾದವ್​​ ಕಳೆದ 3 ಪಂದ್ಯಗಳಲ್ಲಿ 0, 12, 14 ರನ್​​ ಗಳಿಸಿದ್ದಾರೆ. ಇವರು 3 ಪಂದ್ಯಗಳಲ್ಲಿ ಕೇವಲ 26 ರನ್​ ಸಿಡಿಸಿದ್ದು, ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಟೀಮ್​ ಇಂಡಿಯಾದಲ್ಲಿ ಸೂರ್ಯನ ಕಾಲ ಮುಗಿಯಿತು, ಇವರಿಗೆ ನಾಚಿಕೆ ಆಗಬೇಕು. ಇವರನ್ನು ನಂಬಿದ ಬಿಸಿಸಿಐಗೆ ತರಾಟೆಗೆ ತೆಗೆದುಕೊಳ್ಳಬೇಕು ಅಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು, ಸೂರ್ಯಕುಮಾರ್ ಯಾದವ್ ಇದುವರೆಗೂ 20 ಟಿ20 ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಲೀಡ್​ ಮಾಡಿದ್ದಾರೆ. ಇವರಿಗೆ 19 ಇನಿಂಗ್ಸ್ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ 29.26 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ ಹೆಚ್ಚು ಕಡಿಮೆಯಾಗಿಲ್ಲ ಮತ್ತು 165.97 ರಷ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us