newsfirstkannada.com

ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರನನ್ನೇ ಕೈ ಬಿಟ್ಟ ಗಂಭೀರ್​​; ‘ನಾಚಿಕೆ ಆಗಲ್ವಾ?’ ಎಂದು ಆಕ್ರೋಶ

Share :

Published August 4, 2024 at 4:17pm

Update August 4, 2024 at 4:18pm

    ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಮುಖಭಂಗ!

    ಇಂದು 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ, ಭಾರತ ತಂಡ ಮುಖಾಮುಖಿ

    ಟಾಸ್​ ಗೆದ್ದ ಶ್ರೀಲಂಕಾ ಕ್ರಿಕೆಟ್​ ತಂಡದಿಂದ ಮೊದಲು ಬ್ಯಾಟಿಂಗ್​​ ಆಯ್ಕೆ

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಗೆಲ್ಲಬಹುದಾದ ಏಕದಿನ ಪಂದ್ಯವನ್ನು ಟೀಮ್​ ಇಂಡಿಯಾ ಕೈ ಚೆಲ್ಲಿತ್ತು. ಇಂದು ಹೇಗಾದ್ರೂ ಮಾಡಿ ಗೆದ್ದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್​ ಇಂಡಿಯಾ ಇಂದು ಕೂಡ ಫೀಲ್ಡಿಂಗ್​​ಗೆ ಇಳಿದಿದೆ.

ಇನ್ನು, ಕಳೆದ ಪಂದ್ಯದಲ್ಲೇ ಕಣಕ್ಕಿಳಿದಿದ್ದ ಆಟಗಾರರೇ ಇಂದು ಕೂಡ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಿಷಬ್​ ಪಂತ್​ ಅವರನ್ನು ಮತ್ತೆ ಬೆಂಚ್​ ಕಾಯಿಸಿದ್ದು, ವಿಕೆಟ್​ ಕೀಪರ್​ ಕೆ.ಎಲ್​ ರಾಹುಲ್​ ಅವರನ್ನೇ ಕಣಕ್ಕಿಳಿಸಲಾಗಿದೆ. ಇದರ ವಿರುದ್ಧ ಒಂದಷ್ಟು ಕಿಡಿಕಾರುತ್ತಿದ್ದಾರೆ. ಇನ್ನೊಂದಷ್ಟು ಜನ ಗೌತಮ್​ ಗಂಭೀರ್​​ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.

ಗಂಭೀರ್​ ವಿರುದ್ಧ ಆಕ್ರೋಶ!

ಟೀಮ್​ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಶುಭ್ಮನ್​ ಗಿಲ್​​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​ ಮತ್ತು ರಾಹುಲ್​​ ತರಹದ ಬಲಿಷ್ಠ ಆಟಗಾರರು ಇದ್ದಾರೆ. ಒಂದು ವೇಳೆ 2ನೇ ಏಕದಿನ ಪಂದ್ಯ ಸೋತರೆ ಗೌತಮ್​ ಗಂಭೀರ್​​ ಒಂದು ಪ್ರಶ್ನೆಗೆ ಉತ್ತರಿಸಬೇಕು. 210 ರನ್​​ ಚಚ್ಚಿ ಪ್ಲೇಯರ್ ಆಫ್​ ದಿ ಸೀರೀಸ್​​ ಆಗಿದ್ದ ಇಶಾನ್​ ಕಿಶನ್​ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದು ಯಾಕೆ? ಎಂದು ಉತ್ತರಿಸಬೇಕು ಎಂದು ಚಾಲೆಂಜ್​ ಆಗಿದ್ದಾರೆ. ಅಷ್ಟೇ ಅಲ್ಲದೇ ಸರಿಯಾದ ತಂಡ ಆಯ್ಕೆ ಮಾಡದ ಗಂಭೀರ್​ಗೆ ನಾಚಿಕೆ ಆಗಬೇಕು ಎಂದು ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್​ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರನನ್ನೇ ಕೈ ಬಿಟ್ಟ ಗಂಭೀರ್​​; ‘ನಾಚಿಕೆ ಆಗಲ್ವಾ?’ ಎಂದು ಆಕ್ರೋಶ

https://newsfirstlive.com/wp-content/uploads/2023/08/Team-India-2.jpg

    ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಮುಖಭಂಗ!

    ಇಂದು 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ, ಭಾರತ ತಂಡ ಮುಖಾಮುಖಿ

    ಟಾಸ್​ ಗೆದ್ದ ಶ್ರೀಲಂಕಾ ಕ್ರಿಕೆಟ್​ ತಂಡದಿಂದ ಮೊದಲು ಬ್ಯಾಟಿಂಗ್​​ ಆಯ್ಕೆ

ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಗೆಲ್ಲಬಹುದಾದ ಏಕದಿನ ಪಂದ್ಯವನ್ನು ಟೀಮ್​ ಇಂಡಿಯಾ ಕೈ ಚೆಲ್ಲಿತ್ತು. ಇಂದು ಹೇಗಾದ್ರೂ ಮಾಡಿ ಗೆದ್ದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್​ ಇಂಡಿಯಾ ಇಂದು ಕೂಡ ಫೀಲ್ಡಿಂಗ್​​ಗೆ ಇಳಿದಿದೆ.

ಇನ್ನು, ಕಳೆದ ಪಂದ್ಯದಲ್ಲೇ ಕಣಕ್ಕಿಳಿದಿದ್ದ ಆಟಗಾರರೇ ಇಂದು ಕೂಡ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಿಷಬ್​ ಪಂತ್​ ಅವರನ್ನು ಮತ್ತೆ ಬೆಂಚ್​ ಕಾಯಿಸಿದ್ದು, ವಿಕೆಟ್​ ಕೀಪರ್​ ಕೆ.ಎಲ್​ ರಾಹುಲ್​ ಅವರನ್ನೇ ಕಣಕ್ಕಿಳಿಸಲಾಗಿದೆ. ಇದರ ವಿರುದ್ಧ ಒಂದಷ್ಟು ಕಿಡಿಕಾರುತ್ತಿದ್ದಾರೆ. ಇನ್ನೊಂದಷ್ಟು ಜನ ಗೌತಮ್​ ಗಂಭೀರ್​​ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.

ಗಂಭೀರ್​ ವಿರುದ್ಧ ಆಕ್ರೋಶ!

ಟೀಮ್​ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಶುಭ್ಮನ್​ ಗಿಲ್​​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​ ಮತ್ತು ರಾಹುಲ್​​ ತರಹದ ಬಲಿಷ್ಠ ಆಟಗಾರರು ಇದ್ದಾರೆ. ಒಂದು ವೇಳೆ 2ನೇ ಏಕದಿನ ಪಂದ್ಯ ಸೋತರೆ ಗೌತಮ್​ ಗಂಭೀರ್​​ ಒಂದು ಪ್ರಶ್ನೆಗೆ ಉತ್ತರಿಸಬೇಕು. 210 ರನ್​​ ಚಚ್ಚಿ ಪ್ಲೇಯರ್ ಆಫ್​ ದಿ ಸೀರೀಸ್​​ ಆಗಿದ್ದ ಇಶಾನ್​ ಕಿಶನ್​ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದು ಯಾಕೆ? ಎಂದು ಉತ್ತರಿಸಬೇಕು ಎಂದು ಚಾಲೆಂಜ್​ ಆಗಿದ್ದಾರೆ. ಅಷ್ಟೇ ಅಲ್ಲದೇ ಸರಿಯಾದ ತಂಡ ಆಯ್ಕೆ ಮಾಡದ ಗಂಭೀರ್​ಗೆ ನಾಚಿಕೆ ಆಗಬೇಕು ಎಂದು ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್​ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More