/newsfirstlive-kannada/media/post_attachments/wp-content/uploads/2023/08/Team-India-2.jpg)
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಗೆಲ್ಲಬಹುದಾದ ಏಕದಿನ ಪಂದ್ಯವನ್ನು ಟೀಮ್​ ಇಂಡಿಯಾ ಕೈ ಚೆಲ್ಲಿತ್ತು. ಇಂದು ಹೇಗಾದ್ರೂ ಮಾಡಿ ಗೆದ್ದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್​ ಇಂಡಿಯಾ ಇಂದು ಕೂಡ ಫೀಲ್ಡಿಂಗ್​​ಗೆ ಇಳಿದಿದೆ.
ಇನ್ನು, ಕಳೆದ ಪಂದ್ಯದಲ್ಲೇ ಕಣಕ್ಕಿಳಿದಿದ್ದ ಆಟಗಾರರೇ ಇಂದು ಕೂಡ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಿಷಬ್​ ಪಂತ್​ ಅವರನ್ನು ಮತ್ತೆ ಬೆಂಚ್​ ಕಾಯಿಸಿದ್ದು, ವಿಕೆಟ್​ ಕೀಪರ್​ ಕೆ.ಎಲ್​ ರಾಹುಲ್​ ಅವರನ್ನೇ ಕಣಕ್ಕಿಳಿಸಲಾಗಿದೆ. ಇದರ ವಿರುದ್ಧ ಒಂದಷ್ಟು ಕಿಡಿಕಾರುತ್ತಿದ್ದಾರೆ. ಇನ್ನೊಂದಷ್ಟು ಜನ ಗೌತಮ್​ ಗಂಭೀರ್​​ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.
It's shame moment for @GautamGambhir if india?? can't win after ROHIT SHUBHMAN VIRAT SHREYAS AND RAHUL then why he drop 210 fastest scorer of @ishankishan51 shame moment #ishankishan#INDvSL#ishan#GG#polticianpic.twitter.com/a89nS4sTTy
— Purushottam Kumar (@pkrvirat)
It's shame moment for @GautamGambhir if india🇮🇳 can't win after ROHIT SHUBHMAN VIRAT SHREYAS AND RAHUL then why he drop 210 fastest scorer of @ishankishan51 shame moment #ishankishan#INDvSL#ishan#GG#polticianpic.twitter.com/a89nS4sTTy
— Purushottam Kumar (@pkrvirat) August 2, 2024
">August 2, 2024
ಗಂಭೀರ್​ ವಿರುದ್ಧ ಆಕ್ರೋಶ!
ಟೀಮ್​ ಇಂಡಿಯಾದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ, ಶುಭ್ಮನ್​ ಗಿಲ್​​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​ ಮತ್ತು ರಾಹುಲ್​​ ತರಹದ ಬಲಿಷ್ಠ ಆಟಗಾರರು ಇದ್ದಾರೆ. ಒಂದು ವೇಳೆ 2ನೇ ಏಕದಿನ ಪಂದ್ಯ ಸೋತರೆ ಗೌತಮ್​ ಗಂಭೀರ್​​ ಒಂದು ಪ್ರಶ್ನೆಗೆ ಉತ್ತರಿಸಬೇಕು. 210 ರನ್​​ ಚಚ್ಚಿ ಪ್ಲೇಯರ್ ಆಫ್​ ದಿ ಸೀರೀಸ್​​ ಆಗಿದ್ದ ಇಶಾನ್​ ಕಿಶನ್​ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದು ಯಾಕೆ? ಎಂದು ಉತ್ತರಿಸಬೇಕು ಎಂದು ಚಾಲೆಂಜ್​ ಆಗಿದ್ದಾರೆ. ಅಷ್ಟೇ ಅಲ್ಲದೇ ಸರಿಯಾದ ತಂಡ ಆಯ್ಕೆ ಮಾಡದ ಗಂಭೀರ್​ಗೆ ನಾಚಿಕೆ ಆಗಬೇಕು ಎಂದು ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ:ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್​ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ