/newsfirstlive-kannada/media/post_attachments/wp-content/uploads/2025/03/Rohit-sharma-6.jpg)
ಚಾಂಪಿಯನ್ಸ್ ಟ್ರೋಫಿ ಫೈನಲ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೆ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋಕೆ ಹೊರಟಿದೆ. ಅತ್ತ ಡೇಂಜರಸ್ ನ್ಯೂಜಿಲೆಂಡ್, ದುಬೈನಲ್ಲಿ ದರ್ಬಾರ್ ನಡೆಸೋಕೆ ತುದಿಗಾಲಲ್ಲಿ ನಿಂತಿದೆ. ಹಾಗಾದ್ರೆ ಇಂದಿನ ಫೈನಲ್ ಫೈಟ್ನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
23 ಜೂನ್ 2013 ಬರ್ಮಿಂಗ್ಹ್ಯಾಮ್
ಇಂಗ್ಲೆಂಡ್ ಮಣಿಸಿ ಇಂಡಿಯಾ ಚಾಂಪಿಯನ್!
ಬರೋಬ್ಬರಿ 12 ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಮರೆದಾಡಿತ್ತು. ಧೋನಿ ನಾಯಕತ್ವದ ಟೀಮ್ ಇಂಡಿಯಾ, ಆಂಗ್ಲರನ್ನ ಸೆದೆಬಡಿದು ರೋಚಕ ಗೆಲುವು ಸಾಧಿಸಿತ್ತು. ಬರ್ಮಿಂಗ್ಹ್ಯಾಮ್ ವಿಜಯೋತ್ಸವ ಆಚರಿಸಿತ್ತು.
ಅಂದು ಚಾಂಪಿಯನ್ ಆಗಿ ಮೆರೆದಾಡಿದ ಟೀಮ್ ಇಂಡಿಯಾ 2017ರಲ್ಲಿ ಕೊನೆಯ ಹೆಜ್ಜೆಯಲ್ಲಿ ಎಡವಿತ್ತು. ಫೈನಲ್ಸ್ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಆ ಸೋಲಿನ ನೋವು, ಹತಾಶೆ ಇಡೀ ಭಾರತವನ್ನ ಬಿಡದೇ ಕಾಡಿತ್ತು. ಇದೀಗ ಆ ನೋವನ್ನ ಮರೆತೂ ಮತ್ತೆ ಸಂಭ್ರಮಿಸೋ ಟೈಮ್ ಬಂದಿದೆ. ಇಂದು ನಡೆಯೋ ಯುದ್ಧದಲ್ಲಿ ಕಿವೀಸ್ ಕಿವಿ ಹಿಂಡಿ ಚಾಂಪಿಯನ್ ಆಗಿ ಮೆರೆದಾಡಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಕದನಕ್ಕೆ ಕೌಂಟ್ಡೌನ್
ದುಬೈ ಅಂಗಳದಲ್ಲಿ ಪಟ್ಟಕ್ಕಾಗಿ ಇಂಡೋ-ಕಿವೀಸ್ ಕದನ
ದುಬೈನಲ್ಲಿ ಇಂದು ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಅದೃಷ್ಟದ ಪರೀಕ್ಷೆಗೆ ಇಳಿಯಲಿದೆ. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್ಗೆ ಎಂಟ್ರಿ ನೀಡಿದೆ. ಜಬರ್ದಸ್ತ್ ಬ್ಯಾಟಿಂಗ್, ಅತ್ಯದ್ಭುತ ಬೌಲಿಂಗ್ ಮೂಲಕ ಟೂರ್ನಿಯಲ್ಲಿ ಕ್ವಾಲಿಟಿ ಆಟವಾಡಿರೋ ಟೀಮ್ ಇಂಡಿಯಾ ಫೈನಲ್ನಲ್ಲೂ ಗೆದ್ದು ಬೀಗುವ ತವಕದಲ್ಲಿದೆ. 3ನೇ ಬಾರಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕೋ ತವಕದಲ್ಲಿದೆ.
ಹಾಗಂತ ಎದುರಾಳಿ ನ್ಯೂಜಿಲೆಂಡ್ ಮಣಿಸೋದು ಅಷ್ಟು ಸುಲಭಾನ? ಚಾನ್ಸೇ ಇಲ್ಲ.. ನ್ಯೂಜಿಲೆಂಡ್ ತಂಡದಲ್ಲಿ ಇರೋವವರೆಲ್ಲಾ ಸೈಲೆಂಟ್ ಕಿಲ್ಲರ್ಸ್. ಯಾಮಾರಾದ್ರೆ, ಸೋಲಿನ ದರ್ಶನ ಮಾಡಿಸಿ ಬಿಡ್ತಾರೆ. ಟೂರ್ನಿಯ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಎದುರು ಸೋತಿದ್ದು ಬಿಟ್ರೆ, ಸೆಮಿಸ್ ಸೇರಿ ಉಳಿದ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ತಂಡದಲ್ಲಿರೋ ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರರಂತ ಯುವ ಹಾಗೂ ಅನುಭವಿ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಸ್ಪಿನ್ &, ಪೇಸ್ ಎರಡೂ ವಿಭಾಗವೂ ಬಲಿಷ್ಟವಾಗಿದ್ದು ಟಾಪ್ ಕ್ಲಾಸ್ ಬೌಲಿಂಗ್ ಅಟ್ಯಾಕ್ನ ಬಲ ತಂಡಕ್ಕಿದೆ. ಯಾವ ಕಾರಣಕ್ಕೂ ಕಿವೀಸ್ನ ಸುಲಭಕ್ಕೆ ಪರಿಗಣಿಸುವಂತೇ ಇಲ್ಲ.
ಇದನ್ನೂ ಓದಿ: ಚಾಂಪಿಯನ್ ಪಟ್ಟಕ್ಕೆ ಬಿಗ್ ಫೈಟ್.. ಫೈನಲ್ಸ್ನಲ್ಲಿ ವರ್ಕ್ಔಟ್ ಆಗುತ್ತಾ ಆ ಮ್ಯಾಜಿಕ್? ಕಿವೀಸ್ಗೆ ದೊಡ್ಡ ಟೆನ್ಷನ್!
ಸೇಡಿನ ಸಮರ.. ಟ್ರೋಫಿ ಗೆದ್ದರಷ್ಟೇ ಸಮಾಧಾನ!
ಟೀಮ್ ಇಂಡಿಯಾ ಪಾಲಿಗೆ ಇಂದಿನ ಫೈನಲ್ ಪಂದ್ಯ ಸೇಡಿನ ಸಮರ. 2019ರ ಏಕದಿನ ವಿಶ್ವಕಪ್ನ ಸೆಮಿಸ್ ಸೋಲು ಅಭಿಮಾನಿಗಳನ್ನ ಇಂದಿಗೂ ಬಿಡದೇ ಕಾಡ್ತಿದೆ. ಅಂದು ಮ್ಯಾಂಚೆಸ್ಟರ್ನಲ್ಲಿ ನಡೆದ ಸೆಮಿಸ್ ಸಮರದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಿತ್ತು. ಜಗತ್ತನ್ನೇ ಗೆದ್ದ ಸಂಭ್ರದಲ್ಲಿ ಕಿವೀಸ್ ಪ್ಲೇಯರ್ಸ್ ಸಂಭ್ರಮಿಸ್ತಾ ಇದ್ರೆ, ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಮೌನ ಆವರಿಸಿತ್ತು. ಅಸಂಖ್ಯ ಭಾರತೀಯ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿತ್ತು. ಅಂದಾಗಿತ್ತು ಆ ಬೇಸರ, ಹತಾಶೆ, ನೋವನ್ನ ತೀರಿಸಿಕೊಳ್ಳಲು ಇದಕ್ಕಿಂತ ಒಳ್ಳೆ ಅವಕಾಶ ಬೇರೆ ಇಲ್ಲವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ