ತಪ್ಪು ಒಪ್ಪಿಕೊಳ್ಳದ ಗಂಭೀರ್​.. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ ಕೋಚ್..!

author-image
Ganesh
Updated On
2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?
Advertisment
  • ಕಳಪೆ ಆಟವನ್ನ ಡಿಫೆಂಡ್​ ಮಾಡಿಕೊಂಡ ಹೆಡ್​​ಕೋಚ್
  • ಕ್ಯಾಚ್​ ಡ್ರಾಪ್​ನ ಗಂಭೀರವಾಗಿ ಪರಿಗಣಿಸದ ಕೋಚ್​
  • ನಾಯಕನ ಕೆಟ್ಟ ನಿರ್ಣಯವನ್ನ ಸಮರ್ಥನೆ ಸರೀನಾ?

ಲೀಡ್ಸ್​ನಲ್ಲಿ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿದೆ. ಗೆಲ್ಲಬಹುದಾಗಿದ್ದ ಪಂದ್ಯವನ್ನ ಕೈಚೆಲ್ಲಿ ವಿಶ್ವ ಕ್ರಿಕೆಟ್​ನ ಎದುರು ವೀಕ್​ನೆಸ್​ ಎಕ್ಸ್​​ಪೋಸ್​ ಮಾಡಿಕೊಂಡಿದೆ. ಟೀಮ್​ ಇಂಡಿಯಾ ಹೀನಾಯ ಸೋಲಿನ ಮುಖಭಂಗ ಎದುರಿಸಿದ್ದರೂ ಟೀಮ್​ ಇಂಡಿಯಾ ಹೆಡ್​ ಕೋಚ್​ ಗಂಭೀರ್​ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ!

ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ

ಕಳೆದ 9 ಟೆಸ್ಟ್​ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಸೋತ 7ನೇ ಪಂದ್ಯ ಇದು. ಈ ಸೋಲುಗಳು ಬಂದಿದ್ದ ಹೆಡ್​ಕೋಚ್​​​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲೇ. ಇಷ್ಟೊಂದು ಹೀನಾಯ ರೆಕಾರ್ಡ್​​ ಇದ್ದರೂ ಹೆಡ್​ ಕೋಚ್​ ವರ್ತನೆ, ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತಿದೆ. ಹೀನಾಯ ಸೋಲಿನ ಬಳಿಕ ಪ್ರೆಸ್​ಮೀಟ್​ ಮಾಡಿರೋ ಗಂಭೀರ್​, ಕಳಪೆ ಆಟವನ್ನು ಡಿಫೆಂಡ್​ ಮಾಡಿಕೊಂಡಿದ್ದಾರೆ.

ಕ್ಯಾಚ್​ ಡ್ರಾಪ್​ ಬಗ್ಗೆ ಏನಂದ್ರು..?

ಕ್ಯಾಚ್​​ಗಳು ಆಗಾಗ ಡ್ರಾಪ್​ ಆಗ್ತವೆ. ವಿಶ್ವದ ಅತ್ಯುತ್ತಮ ಫೀಲ್ಡರ್​​ಗಳೂ ಕೂಡ ಕ್ಯಾಚ್​ಗಳನ್ನ ಮಿಸ್​ ಮಾಡ್ತಾರೆ. ಯಾರೂ ಬೇಕಂತ ಇದನ್ನ ಮಾಡಲ್ಲ-ಗೌತಮ್ ಗಂಭೀರ್, ಮುಖ್ಯ ಕೋಚ್

ಲೀಡ್ಸ್​​​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸೋಲಿಗೆ ಕ್ಯಾಚ್​ ಡ್ರಾಪ್​ಗಳೇ ಪ್ರಮುಖ ಕಾರಣ. ಹೆಡ್​ ಕೋಚ್​ ಗೌತಮ್​ ಗಂಭೀರ್​ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡಂತಿಲ್ಲ. ಅತ್ಯುತ್ತಮ ಫೀಲ್ಡರ್​​ಗಳೂ ಕೂಡ ಡ್ರಾಪ್​ ಮಾಡ್ತಾರೆ ಅಂತಾ ಪರೋಕ್ಷವಾಗಿ ಸಮರ್ಥಿಸಿಕೊಳ್ತಾರೆ. ಒಂದಾದ್ರೆ ಒಕೆ, ಎರಡಾದ್ರೆ ಬಿಡು ಪರವಾಗಿಲ್ಲ ಅನ್ನಬಹುದು. ಆದರೆ ಬರೋಬ್ಬರಿ 6 ಸುಲಭದ ಕ್ಯಾಚ್​ಗಳನ್ನ​ ಡ್ರಾಪ್​ ಮಾಡಿದ್ದನ್ನ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ ಅಂದ್ರೆ ಏನರ್ಥ ಎಂಬ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ: 4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO

publive-image

ಲೀಡ್ಸ್​​ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳಲ್ಲಿ ಟೀಮ್​ ಇಂಡಿಯಾದ ಟಾಪ್​ ಆರ್ಡರ್​​ ಬ್ಯಾಟರ್​​ಗಳು ಪಾರಮ್ಯ ಮೆರೆದಿದ್ರು. ನಂತರದಲ್ಲಾದ ದಿಢೀರ್​ ಕುಸಿತ ಬಿಗ್​​ ಸ್ಕೋರ್​ ಕಲೆ ಹಾಕೋ ಸುವರ್ಣಾವಕಾಶವನ್ನ ನುಚ್ಚು ನೂರು ಮಾಡ್ತು. ಇದೂ ಕೂಡ ಸೋಲಿಗೆ ಪ್ರಮುಖ ಕಾರಣವಾಯ್ತು. ಇದ್ರ ಬಗ್ಗೆ ಕೇಳಿದ್ರೆ ಕೋಚ್​ ಆಗಾಗ ಹೀಗೆಲ್ಲಾ ಆಗುತ್ತೆ ಅಂತಿದ್ದಾರೆ. 2ನೇ ಟೆಸ್ಟ್​​ಗೆ ಎಲ್ಲಾ ತಪ್ಪನ್ನ ತಿದ್ದಿಕೊಳ್ತೀವಿ ಅಂತಾನೂ ಹೇಳ್ತಿಲ್ಲ. Hopefully, we can learn ಅಂತಿದ್ದಾರೆ.

ಬ್ಯಾಟಿಂಗ್​ನಲ್ಲಿ ಇದು ಬೇಸರದ ವಿಷಯ. ಯಾಕಂದ್ರೆ ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್​​ಗಳನ್ನ 40 ರನ್​ಗಳಿಗೆ ಮತ್ತು ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 30 ರನ್​ಗೆ 6 ವಿಕೆಟ್​ ಕಳೆದುಕೊಂಡ್ವಿ. ನಮಗೆ ಫಸ್ಟ್​​ ಇನ್ನಿಂಗ್ಸ್​ನಲ್ಲಿ 600ರ ಆಸುಪಾಸಿನಲ್ಲಿ ರನ್​ಗಳಿಸೋ ಅವಕಾಶವಿತ್ತು. ಹಾಗಾಗಿದ್ರೆ ನಾವು ಡಾಮಿನೇಟ್​ ಮಾಡಬಹುದಿತ್ತು. ಆಗಾಗ ಹೀಗೆಲ್ಲಾ ಆಗಿತ್ತೆ. Hopefully 2ನೇ ಟೆಸ್ಟ್​​ ವೇಳೆಗೆ ಕಲೀತಿವಿ.

ಜನ ಕೆಲವೊಮ್ಮೆ ಫೇಲ್​ ಆಗ್ತಾರೆ that's okay. ಅವರು ತಮ್ಮನ್ನ ತಾವು ಅನ್ವಯಿಸಿಕೊಳ್ತಿಲ್ಲ ಅಂತಲ್ಲ. ಜನ ಕೆಲವೊಮ್ಮೆ ಫೇಲ್​ ಆಗ್ತಾರೆ. ಮತ್ತು ಅದು ಪರವಾಗಿಲ್ಲ. ಇದರರ್ಥ ಅವರು ನೆಟ್ಸ್​​​ನಲ್ಲಿ ಹಾರ್ಡ್​​ವರ್ಕ್​ ಮಾಡ್ತಿಲ್ಲ ಅಂತಲ್ಲ. ಕೆಲವೊಮ್ಮೆ ಹೀಗೆಲ್ಲ ಅಗುತ್ತೆ. ಕೆಲವೊಮ್ಮೆ ಅದ್ಭುತ ಬ್ಯಾಟ್ಸ್​ಮನ್​ಗಳೂ ವೈಫಲ್ಯ ಅನುಭವಿಸ್ತಾರೆ- ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್

ನಾಯಕನ ಕೆಟ್ಟ ನಿರ್ಣಯ ಸಮರ್ಥಿಸಿದ್ದು ಸರೀನಾ?

ಕೋಚ್​ ಅಂದ್ಮೇಲೆ ನಾಯಕನಿಗೆ ಬೆಂಬಲ ವ್ಯಕ್ತಪಡಿಸಬೇಕು. ಅದ್ರಲ್ಲೂ ಮೊದಲ ಬಾರಿ ನಾಯಕತ್ವ ನಿಭಾಯಿಸಿದ ಶುಭ್​ಮನ್​ ಗಿಲ್​ಗೆ ಬೆಂಬಲದ ಅಗತ್ಯ ಇದ್ದೇ ಇದೆ. ನಾಯಕನ ಮಾಡಿದ ತಪ್ಪುಗಳನ್ನ, ಫೀಲ್ಡ್​ನಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರವನ್ನ ಸಮರ್ಥಿಸೋದು ಸರಿಯಲ್ಲ. ಗಂಭೀರ್​, ಗಿಲ್ ಅವರ ತಪ್ಪು ನಿರ್ಧಾರವನ್ನೂ ಸಮರ್ಥಿಸಿದ್ದಾರೆ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ ತೆಗೆದುಕೊಂಡು ಟೀಮ್​ ಇಂಡಿಯಾಗೆ ರಿಲೀಫ್​ ನೀಡಿದ ಶಾರ್ದೂಲ್​ ಠಾಕೂರ್​ಗೆ ಫಸ್ಟ್​ ಇನ್ನಿಂಗ್ಸ್​​ನಲ್ಲಿ ಗಿಲ್​ ಟ್ರಸ್ಟ್​ ಮಾಡಲಿಲ್ಲ. ಇದ್ರ ಬಗ್ಗೆ ಕೇಳಿದ್ರೆ ಶಾರ್ದೂಲ್​ನ ಸ್ಪೆಷಲಿಸ್ಟ್​ ಬೌಲರ್​ ಆಗಿ ನಾವು ಸೆಲೆಕ್ಟ್​ ಮಾಡಲಿಲ್ಲ ಎಂದಿದ್ದಾರೆ.

ಮೊದಲ ಸೋಲಿನ ಬಳಿಕ ಪ್ರೆಸ್​​ಮೀಟ್​ಗೆ ಬಂದ ಗಂಭೀರ್​ ಮಾಡಿದ ತಪ್ಪುಗಳನ್ನ ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಮರ್ಥನೆಯನ್ನೇ ಮಾಡಿ ಮುಗಿಸಿದ್ದಾರೆ. ಮುಂದಿನ ಟೆಸ್ಟ್​ ಆರಂಭಕ್ಕೆ ಇನ್ನೂ 6 ದಿನಗಳ ಟೈಮ್​ ಇದೆ. ಈ ಗ್ಯಾಪ್​ನಲ್ಲಾದ್ರೂ ವೀಕ್​ನೆಸ್​ ಮೇಲೆ ಹೆಡ್​ಕೋಚ್​ ಗಂಭೀರ್​ ವರ್ಕ್ ಮಾಡಬೇಕಿದೆ.

ಇದನ್ನೂ ಓದಿ: ಮೊದಲ ಟೆಸ್ಟ್​​ ಸೋಲಿನ ಬೆನ್ನಲ್ಲೇ ತಂಡದಿಂದ ಸ್ಟಾರ್ ವೇಗಿಯ ಕೈಬಿಟ್ಟ ಟೀಂ ಇಂಡಿಯಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment