ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
ನೋ ಎನ್ನಲಿಲ್ಲ, ರೋಹಿತ್ ಹಾದಿಯಲ್ಲೇ ಸಾಗಿದ ಕೊಹ್ಲಿ
ಸೂರ್ಯಂಗೆ ನಗುವುದೋ? ಅಳುವುದೋ ಪರಿಸ್ಥಿತಿ
ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮೊದಲ ಸೆಲೆಕ್ಷನ್ ಮೀಟಿಂಗ್ನಲ್ಲೇ ಮೇಲುಗೈ ಸಾಧಿಸಿದ್ದಾರೆ. ಗಂಭೀರ್ ಬಿಗಿಪಟ್ಟಿಗೆ ಕಿಂಗ್ ಕೊಹ್ಲಿಯೇ ತಲೆಬಾಗಿದ್ರೆ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯಗೆ ಶಾಕ್ ಎದುರಾಗಿದೆ. ಟೀಮ್ ಸೆಲೆಕ್ಷನ್ ಮಾಡಿದ್ದು ಸೆಲೆಕ್ಷನ್ ಕಮಿಟಿಯಾದ್ರೂ, ಆಯ್ಕೆ ವಿಚಾರದಲ್ಲಿ ಗಂಭೀರ್ ಸಖತ್ತಾಗೇ ಗೇಮ್ ಆಡಿದ್ದಾರೆ.
ಮೊದಲ ಟಾಸ್ಕ್ಗೆ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಸಜ್ಜಾಗಿದ್ದಾರೆ. ಜುಲೈ 27ರಿಂದ ಆರಂಭವಾಗೋ ಲಂಕಾ ಎದುರಿನ ಸರಣಿಯೊಂದಿಗೆ ಅಧಿಕೃತವಾಗಿ ಗೌತಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಟೀಮ್ ಸೆಲೆಕ್ಷನ್ನಲ್ಲೇ ಗಂಭೀರ್ ಬಿಗಿ ಹಿಡಿತ ಸಾಧಿಸಿದ್ದಾರೆ.
ಇದನ್ನೂ ಓದಿ:ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!
ಗಂಭೀರ್ ಮಾತಿಗೆ ತಲೆ ಬಾಗಿದ ಕೊಹ್ಲಿ
ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲ ಸೀನಿಯರ್ಸ್ ರೆಸ್ಟ್ ಬಯಸಿದ್ರು. ಗೌತಮ್ ಗಂಭೀರ್ ಮುಂಬರೋ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಸೀನಿಯರ್ಸ್ ಆಡಲೇಬೇಕು ಬಿಗಿ ಪಟ್ಟು ಹಿಡಿದಿದ್ರು. ಕೊನೆಗೂ ಗೌತಿ ಒತ್ತಾಯಕ್ಕೆ ಸೀನಿಯರ್ಸ್ ಮಣಿದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಸರಣಿಯನ್ನಾಡಲು ಯೆಸ್ ಎಂದಿದ್ದಾರೆ.
ರಾಹುಲ್, ಹಾರ್ದಿಕ್ಗೆ ತೀವ್ರ ನಿರಾಸೆ..!
ರೋಹಿತ್ ಶರ್ಮಾ ಬಳಿಕ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಗೌತಮ್ ಗಂಭೀರ್ ಇಬ್ಬರ ಕನಸಿಗೆ ತಣ್ಣೀರೆರೆಚಿದ್ದಾರೆ. ಟಿ20 ನಾಯಕತ್ವವನ್ನ ಸೂರ್ಯಕುಮಾರ್ಗೆ ನೀಡಿ ಶಾಕ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲ.. ಭವಿಷ್ಯದಲ್ಲಿ ಏಕದಿನ ತಂಡದ ನಾಯಕತ್ವವೂ ನಿಮಗೆ ಸಿಗಲ್ಲ ಅನ್ನೋ ಪರೋಕ್ಷ ಸಂದೇಶವನ್ನ ರವಾನಿಸಿದ್ದಾರೆ.
ಶುಭ್ಮನ್ ಗಿಲ್ ಭವಿಷ್ಯದ ನಾಯಕ..!
ಜಿಂಬಾಬ್ವೆ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿ ನಾಯಕತ್ವದ ಅಗ್ನಿ ಪರೀಕ್ಷೆ ಗೆದ್ದ ಶುಭ್ಮನ್ ಗಿಲ್ಗೆ ಬಂಪರ್ ಜಾಕ್ಪಾಟ್ ಹೊಡೆದಿದೆ. ಏಕದಿನ ಹಾಗೂ ಟಿ20 ಎರಡೂ ತಂಡಗಳ ಉಪನಾಯಕನ ಪಟ್ಟವನ್ನ ಶುಭ್ಮನ್ ಗಿಲ್ಗೆ ನೀಡಲಾಗಿದೆ. ಈ ಮೂಲಕ ಯುವ ಶುಭ್ಮನ್ ಗಿಲ್ನ ಭವಿಷ್ಯದ ನಾಯಕನನ್ನಾಗಿ ಬೆಳೆಸೋ ಯತ್ನಕ್ಕೆ ಟೀಮ್ ಇಂಡಿಯಾ ಕೈ ಹಾಕಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತೆ.
ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?
ಸೂರ್ಯನಿಗೆ ಸರ್ಪ್ರೈಸ್ ಮತ್ತು ಶಾಕ್..!
ರೋಹಿತ್ ಶರ್ಮಾ ನಿವೃತ್ತಿಯ ಬೆನ್ನಲ್ಲೇ ಸರ್ಪ್ರೈಸ್ ರೀತಿಯಲ್ಲಿ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ನ ಅರಸಿಕೊಂಡು ಬಂದಿದೆ. ಇದ್ರಿಂದ ನೂರಕ್ಕೆ ನೂರರಷ್ಟು ಸೂರ್ಯ ಖುಷಿಪಡುವಂತಿಲ್ಲ. ಟಿ20 ಫಾರ್ಮೆಟ್ನ ನಾಯಕತ್ವ ಬಂದ ಬೆನ್ನಲ್ಲೇ, ಏಕದಿನ ತಂಡದಿಂದ ಸೂರ್ಯನಿಗೆ ಜಾಗವೇ ಇಲ್ಲದಂತಾಗಿದೆ. ಓಡಿಐ ತಂಡದಿಂದ ಸೂರ್ಯನಿಗೆ ಗೇಟ್ಪಾಸ್ ನೀಡಲಾಗಿದೆ.
ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ಗೆ ಲೈಫ್ ಲೈನ್
ಶ್ರೀಲಂಕಾ ಪ್ರವಾಸದ T20 ತಂಡದಲ್ಲಿ ಮಾತ್ರ ಸಂಜು ಸ್ಯಾಮ್ಸನ್ ಸ್ಥಾನ ನೀಡಲಾಗಿದೆ. ಏಕದಿನ ತಂಡಕ್ಕೆ ಟೀಮ್ ಇಂಡಿಯಾದಿಂದಲೇ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ದಾರೆ. ಖಾಯಂ ಸ್ಥಾನಕ್ಕಾಗಿ ಸ್ಟ್ರಗಲ್ ಮಾಡ್ತಿರೋ ಸಂಜು ಹಾಗೂ ಕಮ್ಬ್ಯಾಕ್ ಮಾಡಿರೋ ಶ್ರೇಯಸ್ಗೆ ಈ ಅವಕಾಶವನ್ನ ಲೈಫ್ಲೈನ್ ಎನ್ನಲಾಗ್ತಿದೆ. ಇಲ್ಲಿ ಮಿಂಚಿದ್ರಷ್ಟೇ ಭವಿಷ್ಯ ಭದ್ರವಾಗಲಿದೆ.
ಖಲೀಲ್, ಪರಾಗ್, ವಾಷಿಂಗ್ಟನ್ ಮೇಲೆ ಫೋಕಸ್
ಹಲವು ಟ್ಯಾಲೆಂಟೆಡ್ ಆಟಗಾರರು ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್ ಅಹ್ಮದ್, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್ ಸೆಲೆಕ್ಷನ್ ಸದ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಭವಿಷ್ಯದ ತಂಡ ಕಟ್ಟೋ ದೃಷ್ಟಿಯಿಂದ ಈ ಮೂವರಿಗೆ ಸ್ಥಾನ ನೀಡಲಾಗಿದೆ ಎನ್ನಲಾಗ್ತಿದೆ. ಸರಣಿಯೂದ್ದಕ್ಕೂ ಇವರನ್ನ ಟೀಮ್ ಮ್ಯಾನೇಜ್ಮೆಂಟ್ನ ಹದ್ದಿನ ಕಣ್ಣಿರಲಿದೆ.
ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!
ಒಟ್ಟಿನಲ್ಲಿ, ಮೊದಲ ಟೀಮ್ ಸೆಲೆಕ್ಷನ್ನಲ್ಲೇ ಗೌತಮ್ ಗಂಭೀರ್, ಬಿಗಿ ಹಿಡಿತ ಸಾಧಿಸಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಐಸಿಸಿ ಟ್ರೋಫಿಗಳನ್ನ ಟಾರ್ಗೆಟ್ ಮಾಡಿ, ಗಂಭೀರ್ ಈ ಎಲ್ಲಾ ನಿರ್ಧಾರಗಳನ್ನ ಮಾಡಿದ್ದಾರೆ. ಟಫ್ ಕಾಲ್ಗಳನ್ನ ತೆಗೆದುಕೊಂಡಿರೋ ಹೆಡ್ ಮಾಸ್ಟರ್ ಗಂಭೀರ್, ಇದೀಗ ಪರ್ಫಾಮೆನ್ಸ್ನ ಉತ್ತರ ಕೊಡಬೇಕಿದೆ. ಅದೇ ಸದ್ಯದ ಕುತೂಹಲ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ
ನೋ ಎನ್ನಲಿಲ್ಲ, ರೋಹಿತ್ ಹಾದಿಯಲ್ಲೇ ಸಾಗಿದ ಕೊಹ್ಲಿ
ಸೂರ್ಯಂಗೆ ನಗುವುದೋ? ಅಳುವುದೋ ಪರಿಸ್ಥಿತಿ
ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮೊದಲ ಸೆಲೆಕ್ಷನ್ ಮೀಟಿಂಗ್ನಲ್ಲೇ ಮೇಲುಗೈ ಸಾಧಿಸಿದ್ದಾರೆ. ಗಂಭೀರ್ ಬಿಗಿಪಟ್ಟಿಗೆ ಕಿಂಗ್ ಕೊಹ್ಲಿಯೇ ತಲೆಬಾಗಿದ್ರೆ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯಗೆ ಶಾಕ್ ಎದುರಾಗಿದೆ. ಟೀಮ್ ಸೆಲೆಕ್ಷನ್ ಮಾಡಿದ್ದು ಸೆಲೆಕ್ಷನ್ ಕಮಿಟಿಯಾದ್ರೂ, ಆಯ್ಕೆ ವಿಚಾರದಲ್ಲಿ ಗಂಭೀರ್ ಸಖತ್ತಾಗೇ ಗೇಮ್ ಆಡಿದ್ದಾರೆ.
ಮೊದಲ ಟಾಸ್ಕ್ಗೆ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಸಜ್ಜಾಗಿದ್ದಾರೆ. ಜುಲೈ 27ರಿಂದ ಆರಂಭವಾಗೋ ಲಂಕಾ ಎದುರಿನ ಸರಣಿಯೊಂದಿಗೆ ಅಧಿಕೃತವಾಗಿ ಗೌತಿ ಚಾರ್ಜ್ ತೆಗೆದುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಟೀಮ್ ಸೆಲೆಕ್ಷನ್ನಲ್ಲೇ ಗಂಭೀರ್ ಬಿಗಿ ಹಿಡಿತ ಸಾಧಿಸಿದ್ದಾರೆ.
ಇದನ್ನೂ ಓದಿ:ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!
ಗಂಭೀರ್ ಮಾತಿಗೆ ತಲೆ ಬಾಗಿದ ಕೊಹ್ಲಿ
ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲ ಸೀನಿಯರ್ಸ್ ರೆಸ್ಟ್ ಬಯಸಿದ್ರು. ಗೌತಮ್ ಗಂಭೀರ್ ಮುಂಬರೋ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಸೀನಿಯರ್ಸ್ ಆಡಲೇಬೇಕು ಬಿಗಿ ಪಟ್ಟು ಹಿಡಿದಿದ್ರು. ಕೊನೆಗೂ ಗೌತಿ ಒತ್ತಾಯಕ್ಕೆ ಸೀನಿಯರ್ಸ್ ಮಣಿದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಸರಣಿಯನ್ನಾಡಲು ಯೆಸ್ ಎಂದಿದ್ದಾರೆ.
ರಾಹುಲ್, ಹಾರ್ದಿಕ್ಗೆ ತೀವ್ರ ನಿರಾಸೆ..!
ರೋಹಿತ್ ಶರ್ಮಾ ಬಳಿಕ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಗೌತಮ್ ಗಂಭೀರ್ ಇಬ್ಬರ ಕನಸಿಗೆ ತಣ್ಣೀರೆರೆಚಿದ್ದಾರೆ. ಟಿ20 ನಾಯಕತ್ವವನ್ನ ಸೂರ್ಯಕುಮಾರ್ಗೆ ನೀಡಿ ಶಾಕ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲ.. ಭವಿಷ್ಯದಲ್ಲಿ ಏಕದಿನ ತಂಡದ ನಾಯಕತ್ವವೂ ನಿಮಗೆ ಸಿಗಲ್ಲ ಅನ್ನೋ ಪರೋಕ್ಷ ಸಂದೇಶವನ್ನ ರವಾನಿಸಿದ್ದಾರೆ.
ಶುಭ್ಮನ್ ಗಿಲ್ ಭವಿಷ್ಯದ ನಾಯಕ..!
ಜಿಂಬಾಬ್ವೆ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿ ನಾಯಕತ್ವದ ಅಗ್ನಿ ಪರೀಕ್ಷೆ ಗೆದ್ದ ಶುಭ್ಮನ್ ಗಿಲ್ಗೆ ಬಂಪರ್ ಜಾಕ್ಪಾಟ್ ಹೊಡೆದಿದೆ. ಏಕದಿನ ಹಾಗೂ ಟಿ20 ಎರಡೂ ತಂಡಗಳ ಉಪನಾಯಕನ ಪಟ್ಟವನ್ನ ಶುಭ್ಮನ್ ಗಿಲ್ಗೆ ನೀಡಲಾಗಿದೆ. ಈ ಮೂಲಕ ಯುವ ಶುಭ್ಮನ್ ಗಿಲ್ನ ಭವಿಷ್ಯದ ನಾಯಕನನ್ನಾಗಿ ಬೆಳೆಸೋ ಯತ್ನಕ್ಕೆ ಟೀಮ್ ಇಂಡಿಯಾ ಕೈ ಹಾಕಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತೆ.
ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?
ಸೂರ್ಯನಿಗೆ ಸರ್ಪ್ರೈಸ್ ಮತ್ತು ಶಾಕ್..!
ರೋಹಿತ್ ಶರ್ಮಾ ನಿವೃತ್ತಿಯ ಬೆನ್ನಲ್ಲೇ ಸರ್ಪ್ರೈಸ್ ರೀತಿಯಲ್ಲಿ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ನ ಅರಸಿಕೊಂಡು ಬಂದಿದೆ. ಇದ್ರಿಂದ ನೂರಕ್ಕೆ ನೂರರಷ್ಟು ಸೂರ್ಯ ಖುಷಿಪಡುವಂತಿಲ್ಲ. ಟಿ20 ಫಾರ್ಮೆಟ್ನ ನಾಯಕತ್ವ ಬಂದ ಬೆನ್ನಲ್ಲೇ, ಏಕದಿನ ತಂಡದಿಂದ ಸೂರ್ಯನಿಗೆ ಜಾಗವೇ ಇಲ್ಲದಂತಾಗಿದೆ. ಓಡಿಐ ತಂಡದಿಂದ ಸೂರ್ಯನಿಗೆ ಗೇಟ್ಪಾಸ್ ನೀಡಲಾಗಿದೆ.
ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ಗೆ ಲೈಫ್ ಲೈನ್
ಶ್ರೀಲಂಕಾ ಪ್ರವಾಸದ T20 ತಂಡದಲ್ಲಿ ಮಾತ್ರ ಸಂಜು ಸ್ಯಾಮ್ಸನ್ ಸ್ಥಾನ ನೀಡಲಾಗಿದೆ. ಏಕದಿನ ತಂಡಕ್ಕೆ ಟೀಮ್ ಇಂಡಿಯಾದಿಂದಲೇ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿದ್ದಾರೆ. ಖಾಯಂ ಸ್ಥಾನಕ್ಕಾಗಿ ಸ್ಟ್ರಗಲ್ ಮಾಡ್ತಿರೋ ಸಂಜು ಹಾಗೂ ಕಮ್ಬ್ಯಾಕ್ ಮಾಡಿರೋ ಶ್ರೇಯಸ್ಗೆ ಈ ಅವಕಾಶವನ್ನ ಲೈಫ್ಲೈನ್ ಎನ್ನಲಾಗ್ತಿದೆ. ಇಲ್ಲಿ ಮಿಂಚಿದ್ರಷ್ಟೇ ಭವಿಷ್ಯ ಭದ್ರವಾಗಲಿದೆ.
ಖಲೀಲ್, ಪರಾಗ್, ವಾಷಿಂಗ್ಟನ್ ಮೇಲೆ ಫೋಕಸ್
ಹಲವು ಟ್ಯಾಲೆಂಟೆಡ್ ಆಟಗಾರರು ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್ ಅಹ್ಮದ್, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್ ಸೆಲೆಕ್ಷನ್ ಸದ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಭವಿಷ್ಯದ ತಂಡ ಕಟ್ಟೋ ದೃಷ್ಟಿಯಿಂದ ಈ ಮೂವರಿಗೆ ಸ್ಥಾನ ನೀಡಲಾಗಿದೆ ಎನ್ನಲಾಗ್ತಿದೆ. ಸರಣಿಯೂದ್ದಕ್ಕೂ ಇವರನ್ನ ಟೀಮ್ ಮ್ಯಾನೇಜ್ಮೆಂಟ್ನ ಹದ್ದಿನ ಕಣ್ಣಿರಲಿದೆ.
ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!
ಒಟ್ಟಿನಲ್ಲಿ, ಮೊದಲ ಟೀಮ್ ಸೆಲೆಕ್ಷನ್ನಲ್ಲೇ ಗೌತಮ್ ಗಂಭೀರ್, ಬಿಗಿ ಹಿಡಿತ ಸಾಧಿಸಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಐಸಿಸಿ ಟ್ರೋಫಿಗಳನ್ನ ಟಾರ್ಗೆಟ್ ಮಾಡಿ, ಗಂಭೀರ್ ಈ ಎಲ್ಲಾ ನಿರ್ಧಾರಗಳನ್ನ ಮಾಡಿದ್ದಾರೆ. ಟಫ್ ಕಾಲ್ಗಳನ್ನ ತೆಗೆದುಕೊಂಡಿರೋ ಹೆಡ್ ಮಾಸ್ಟರ್ ಗಂಭೀರ್, ಇದೀಗ ಪರ್ಫಾಮೆನ್ಸ್ನ ಉತ್ತರ ಕೊಡಬೇಕಿದೆ. ಅದೇ ಸದ್ಯದ ಕುತೂಹಲ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್