ಟೀಮ್​ ಇಂಡಿಯಾ ಸೋಲಿಗೆ ಗಂಭೀರ್​ ಆ ನಿರ್ಧಾರವೇ ಕಾರಣ; ಹಿಗ್ಗಾಮುಗ್ಗಾ ಜಾಡಿಸಿದ ಬಿಸಿಸಿಐ

author-image
Ganesh Nachikethu
Updated On
ಬಾಂಗ್ಲಾ ಟೆಸ್ಟ್​ ಸರಣಿಗೆ ಗಂಭೀರ್​​​, ರೋಹಿತ್​ ಮಾಸ್ಟರ್​ ಪ್ಲಾನ್​​.. ಈ ಸ್ಟಾರ್​ ಆಟಗಾರರಿಗೆ ಮಾತ್ರ ಮಣೆ
Advertisment
  • ಟೀಮ್​ ಇಂಡಿಯಾಗೆ ಬ್ಯಾಕ್​ ಟು ಬ್ಯಾಕ್​ ಹೀನಾಯ ಸೋಲು!
  • ಭಾರತ ತಂಡದ ಆಯ್ಕೆಯಲ್ಲಿ ಕೋಚ್ ಗಂಭೀರ್​​ ತಪ್ಪು ಲೆಕ್ಕಾಚಾರ
  • ಗೌತಮ್​​ ಗಂಭೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಬಿಸಿಸಿಐ ಬಾಸ್​ಗಳು

ಗಂಭೀರ್​​ ಭಾರತ ತಂಡದ ಮುಖ್ಯ ಕೋಚ್​ ಆದ ದಿನದಿಂದಲೂ ಭಾರೀ ಸುದ್ದಿಯಲ್ಲೇ ಇದ್ದಾರೆ. ಹಲವು ಕಂಡೀಷನ್​​​ ಹಾಕಿ ಕೋಚ್​ ಆಗಿದ್ದ ಗಂಭೀರ್​​ ಇಡೀ ಕೋಚಿಂಗ್​ ಸ್ಟ್ಯಾಫ್​ ಅನ್ನೇ ಬದಲಿಸಿದ್ರು. ಆದರೀಗ, ಟೀಮ್​ ಇಂಡಿಯಾ ಬ್ಯಾಕ್​​ ಟು ಬ್ಯಾಕ್​​​ ಸರಣಿ ಸೋಲುತ್ತಿದ್ದು, ಗಂಭೀರ್​ ಅವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.

ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಆಗಿ ಗಂಭೀರ್​​ ಆಯ್ಕೆಯಾಗಿ ಇನ್ನೂ 5 ತಿಂಗಳು. ಇವ್ರು ಕೋಚ್​​ ಆದ 5 ತಿಂಗಳಲ್ಲೇ ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವು ಹೊರತುಪಡಿಸಿ ಮತ್ತೆಲ್ಲಾ ಸೀರೀಸ್​ನಲ್ಲೂ ಬಹುತೇಕ ಸೋಲಾಗಿದೆ.

ಬರೋಬ್ಬರಿ 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಟೀಮ್​​​ ಇಂಡಿಯಾ ಏಕದಿನ ಸರಣಿ ಸೋತಿತ್ತು. ಇದಾದ ಬೆನ್ನಲ್ಲೇ ತವರಿನಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಸೋತಿದೆ.

ಸುಮಾರು 24 ವರ್ಷಗಳ ಬಳಿಕ ಟೆಸ್ಟ್​ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್​​ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್​ವಾಶ್​ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳು ಸೋತಿರುವುದು ಇದೇ ಮೊದಲು. ಹೀಗಾಗಿ ಗಂಭೀರ್​ ವಿರುದ್ಧ ಬಿಸಿಸಿಐ ಕಠಿಣಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕೋಚ್​ ಸ್ಥಾನದಿಂದ ಗಂಭೀರ್​ಗೆ ಕೊಕ್​​

ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲು ಕಂಡ ಕಾರಣ ಈಗಾಗಲೇ ಗಂಭೀರ್​ ಅವರಿಗೆ ನೀಡಲಾಗಿದ್ದ ಹಲವು ಅಧಿಕಾರಿಗಳನ್ನು ಕಸಿದುಕೊಳ್ಳಲಾಗಿದೆ. ವಿಶ್ವಟೆಸ್ಟ್​ ಚಾಂಪಿಯನ್​ಶೀಪ್​​ ಫೈನಲ್​ಗೆ ಹೋಗಲು ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್​ ಗೆಲ್ಲಬೇಕಿತ್ತು. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಟೀಮ್​​ ಇಂಡಿಯಾ 2 ಟೆಸ್ಟ್​ ಸೋತಿದೆ. ಮುಂದಿನ ಟೆಸ್ಟ್​ ಗೆದ್ರೂ ಟೀಮ್​ ಇಂಡಿಯಾ ವಿಶ್ವಟೆಸ್ಟ್​ ಚಾಂಪಿಯನ್​ಶೀಪ್​​ ಫೈನಲ್​ಗೆ ಹೋಗಲು ಅವಕಾಶ ಇಲ್ಲ. ಹೀಗಾಗಿ ಕೋಚ್​ ಸ್ಥಾನದಿಂದ ಗಂಭೀರ್​​ ಔಟ್​ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ತಂಡದ ಆಯ್ಕೆಯಲ್ಲಿ ಕೋಚ್ ತಪ್ಪು ಲೆಕ್ಕಾಚಾರ!

ಕೋಚ್ ಗೌತಮ್ ಗಂಭೀರ್​​​​​​ ತಂಡದ ಆಯ್ಕೆಯಲ್ಲೂ ಎಡವಿದ್ದಾರೆ. ಪರ್ತ್​ ಟೆಸ್ಟ್​ ಪಂದ್ಯಕ್ಕೆ ಗಂಭೀರ್, ಹರ್ಷಿತ್ ರಾಣಾ ಮತ್ತು ವಾಶಿಂಗ್ಟನ್ ಸುಂದರ್​​​​ರನ್ನ ಪ್ಲೇಯಿಂಗ್​​ ಇಲೆವೆನ್​​​​​ನಲ್ಲಿ ಆಯ್ಕೆ ಮಾಡಿದ್ರು. ಆದ್ರೆ ರಾಣಾ ಮತ್ತು ಸುಂದರ್ ಆಯ್ಕೆ, ಗಂಭೀರ್​ರ ವನ್​ ಸೈಡೆಡ್ ನಿರ್ಧಾರವಾಗಿತ್ತು. ಅಷ್ಟೇ ಅಲ್ಲ! ಪಿಂಕ್ ಬಾಲ್ ಟೆಸ್ಟ್​ನಲ್ಲಿ ವೇಗಿ ಆಕಾಶ್​​ದೀಪ್​ರನ್ನ ಆಯ್ಕೆ ಮಾಡದೇ ಇದ್ದಿದ್ದು, ವಿವಾದಗಳಿಗೆ ಕಾರಣವಾಗಿದೆ.​​​​​

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಭಾರೀ ಮುಖಭಂಗ; ಮುಖ್ಯ ಕೋಚ್​ ಗಂಭೀರ್​​ಗೆ ಬಿಸಿಸಿಐ ಕೊಟ್ಟ ವಾರ್ನಿಂಗ್​ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment