/newsfirstlive-kannada/media/post_attachments/wp-content/uploads/2025/06/Team-India-6.jpg)
ಮ್ಯಾಂಚೆಸ್ಟರ್ನಲ್ಲಿ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸುತ್ತಾ? ಈ ಮೈದಾನದಲ್ಲೇ ಗೆಲುವನ್ನೇ ಕಾಣದ ಟೀಮ್ ಇಂಡಿಯಾ, ಈಗ ಇಂಜುರಿಯ ನಡುವೆ ಗೆದ್ದು ಬೀಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡ್ತಿದೆ. ಕ್ರಿಕೆಟ್ ಪಂಡಿತರಲ್ಲೂ ಇದೆ.
ಇಂಡೋ, ಇಂಗ್ಲೆಂಡ್ ಹೈವೋಲ್ಟೇಜ್ ಫೈಟ್ಗೆ ಕ್ಷಣಗಣನೆ ಶುರುವಾಗಿದೆ. ಡು ಆರ್ ಡೈ ಮ್ಯಾಚ್ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಮ್ ಇಂಡಿಯಾ ಸಿಲುಕಿದೆ. ಇಂಜುರಿಯ ನಡುವೆಯೂ ಹೋರಾಟಕ್ಕಿಳಿಯುತ್ತಿರುವ ಶುಭ್ಮನ್ ಪಡೆ, ಮ್ಯಾಂಚೆಸ್ಟರ್ನಲ್ಲಿ ಗೆಲ್ಲುತ್ತಾ ಎಂಬ ಪ್ರಶ್ನೆಯೂ ಕಾಡ್ತಿದೆ. ಇದಕ್ಕೆ ಕಾರಣ ಮ್ಯಾಂಚೆಸ್ಟರ್ನಲ್ಲಿ ಟೀಮ್ ಇಂಡಿಯಾದ ದಾಖಲೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ರೈತನ ಮಗ ಸಜ್ಜು.. ಇಂದು ಅವಕಾಶ ಸಿಕ್ರೆ ಪರಿಶ್ರಮಕ್ಕೆ ಸಿಕ್ಕ ಬೆಲೆ..!
1936ರಿಂದ ಮ್ಯಾಂಚೆಸ್ಟರ್ನಲ್ಲಿ ಪಂದ್ಯಗಳನ್ನಾಡ್ತಿರುವ ಟೀಮ್ ಇಂಡಿಯಾ, ಬರೋಬ್ಬರಿ 89 ವರ್ಷಗಳಲ್ಲಿ ಗೆಲುವಿನ ಸಿಹಿಯನ್ನೇ ಕಂಡಿಲ್ಲ. ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ದಿಗ್ಗಜ ನಾಯಕರುಗಳ ಅಡಿಯಲ್ಲೇ ಸಾಲು ಸಾಲು ಸೋಲುಂಡಿರುವ ಟೀಮ್ ಇಂಡಿಯಾ, ಈಗ ಯುವ ಪಡೆಯೊಂದಿಗೆ ಗೆದ್ದು ಬೀಗುತ್ತಾ ಅಂದ್ರೆ ಯೆಸ್.. ಗೆದ್ದು ಬೀಗುತ್ತೆ.
89 ವರ್ಷಗಳ ಇತಿಹಾಸ ಬದಲಿಸಿಲಿದೆ ಯಂಗ್ ಇಂಡಿಯಾ!
89 ವರ್ಷಗಳಿಂದ ಮ್ಯಾಂಚೆಸ್ಟರ್ನಲ್ಲಿ ಟೀಮ್ ಇಂಡಿಯಾ ಗೆದ್ದಿಲ್ಲ ನಿಜ. 2018ರಿಂದ ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಇತಿಹಾಸ ಕೆದಕಿದ್ರೆ. ಬೇರೇಯದ್ದೇ ಕಥೆ ಹೇಳ್ತಿದೆ. ಅದೇ ಟೀಮ್ ಇಂಡಿಯಾದ ದಂಡಯಾತ್ರೆಯ ಕಥೆ. ಎದುರಾಳಿ ತಂಡದ ಭದ್ರಕೋಟೆಗೆ ನುಗ್ಗಿ ವಿಜಯಪತಾಕೆ ಹಾರಿಸುವ ಹೋರಾಟದ ಕಥೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಎಡ್ಜ್ಬಾಸ್ಟನ್ ಟೆಸ್ಟ್.
ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಬರೋಬ್ಬರಿ 58 ವರ್ಷಗಳಿಂದ ಗೆಲ್ಲುವ ಕನಸಿನಲ್ಲೇ ಉಳಿಯುತ್ತಿತ್ತು. ಶುಭ್ಮನ್ ಗಿಲ್ ನಾಯಕತ್ವ ಯಂಗ್ ಇಂಡಿಯಾ, ಇಂಗ್ಲೆಂಡ್ನ ಭದ್ರಕೋಟೆಯನ್ನೇ ಉಡಾಹಿಸಿತ್ತು. ಟೀಮ್ ಇಂಡಿಯಾ ಇರಲಿ, ಏಷ್ಯಾದ ಯಾವಬ್ಬ ನಾಯಕನೂ ಮಾಡದ ಸಾಧನೆ ಮಾಡಿತ್ತು. 58 ವರ್ಷಗಳ ಬಳಿಕ ಗೆದ್ದು ಚರಿತ್ರೆ ಬರೆದಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಕೇವಲ ಎಡ್ಜ್ಬಾಸ್ಟನ್ ಟೆಸ್ಟ್ ಮಾತ್ರವಲ್ಲ. 2018ರಿಂದ ಇಂಥಹ ಸಾಲು ಸಾಲು ಕಥೆಗಳಿವೆ.
ಇದನ್ನೂ ಓದಿ: ಇವತ್ತಿನಿಂದ ಧರ್ಮಸ್ಥಳ ಕೇಸ್ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ
ಟೀಮ್ ಇಂಡಿಯಾ ದಂಡಯಾತ್ರೆ
2018 : 37 ವರ್ಷಗಳ ಬಳಿಕ ಮೆಲ್ಬರ್ನ್ನಲ್ಲಿ ಟೀಮ್ ಇಂಡಿಯಾ ಗೆಲುವು
2021 : 77 ವರ್ಷಗಳ ಬಳಿಕ ಬ್ರಿಸ್ಬೇನ್ನಲ್ಲಿ ಮೊದಲ ಗೆಲುವು ದಾಖಲು
2021 : 50 ವರ್ಷಗಳ ನಂತರ ಓವಲ್ನಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ
2021 : 11 ವರ್ಷಗಳ ಬಳಿಕ ಸೆಂಚೂರಿಯನ್ನಲ್ಲಿ ಮೊದಲ ರಣಕೇಕೆ
2024 : 31 ವರ್ಷಗಳ ಬಳಿಕ ಮೊದಲ ಬಾರಿ ಕೇಪ್ಟೌನ್ನಲ್ಲಿ ಗೆಲುವು
2025 : ಬರ್ಮಿಂಗ್ಹ್ಯಾಮ್ನಲ್ಲಿ 58 ವರ್ಷಗಳ ನಂತರ ಮೊದಲ ಗೆಲುವು
ಗೆದ್ದರಷ್ಟೇ ಟೆಸ್ಟ್ ಸರಣಿ ಜೀವಂತ..!
18 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಗೆದ್ದಿಲ್ಲ. 2007ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಬಿಟ್ರೆ, ಆ ಬಳಿಕ ಧೋನಿ, ವಿರಾಟ್ ಕೊಹ್ಲಿ ಅವರಂತಹ ಪ್ರತಿಭಾವಂತ ನಾಯಕರ ಅಡಿಯಲ್ಲೂ ಟೀಮ್ ಇಂಡಿಯಾ ಮಣ್ಣು ಮುಕ್ಕಿದೆ. ಇದೀಗ ಗಿಲ್ ನಾಯಕತ್ವದ ಯಂಗ್ ಇಂಡಿಯಾ ಸರಣಿ ಗೆಲುವಿನ ಬರ ನೀಗಿಸಿಕೊಳ್ಳುವ ಸುವರ್ಣಾವಕಾಶ ಇದೆ. ಈ ಕನಸು ನನಸಾಗಬೇಕಾದ್ರೆ, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನ ಗೆಲ್ಲಲೇಬೇಕು. ಇಲ್ಲ ಅದೇ ಸೋಲಿನ ಸರಮಾಲೆ ಮುಂದುವರಿದ್ರೆ. ಸೋಲು ಮಾತ್ರವೇ ಅಲ್ಲ. ಸರಣಿ ಸೋಲು ಅನುಭವಿಸಲಿದೆ. ಹೀಗಾಗಿ ಹೋರಾಟದ ಮನೋಭಾವ ತೋರುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಬೇಕಿದೆ.
ಇದನ್ನೂ ಓದಿ: ಕ್ರೀಡಾಪಟುಗಳಿಗೆ ಗುಡ್ನ್ಯೂಸ್; ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದರೆ ಕೋಟಿ ಕೋಟಿ ಹಣ.. ಸರ್ಕಾರಿ ಉದ್ಯೋಗ
ಕೆಲ ವರ್ಷಗಳಿಂದ ಗೆಲುವನ್ನೇ ಕಾಣದ ಮೈದಾನಗಳಲ್ಲಿ ಗೆದ್ದು ಬೀಗ್ತಿರುವ ಟೀಮ್ ಇಂಡಿಯಾ, ಎಡ್ಜ್ಬಾಸ್ಟನ್ನಂತೆಯೇ ಮ್ಯಾಂಚೆಸ್ಟರ್ ಗೆದ್ದು ಹೊಸ ಇತಿಹಾಸ ಬರೆಯುತ್ತಾ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ