/newsfirstlive-kannada/media/post_attachments/wp-content/uploads/2025/02/Karun-Nair_News.jpg)
ರಣಜಿಯಲ್ಲೂ ಕನ್ನಡಿಗ ಸ್ಟಾರ್​ ಕ್ರಿಕೆಟರ್​ ಕರುಣ್​​ ನಾಯರ್​​ ಅಮೋಘ ಬ್ಯಾಟಿಂಗ್​ ಪ್ರದರ್ಶನ ಮುಂದುವರಿದಿದೆ. ಇತ್ತೀಚೆಗೆ ತಮಿಳುನಾಡು ವಿರುದ್ಧ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ವಿದರ್ಭ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 353 ರನ್​​ ಕಲೆ ಹಾಕಿತ್ತು. ಈ ಮೂಲಕ ತಮಿಳುನಾಡಿಗೆ ಬೃಹತ್​ ಟಾರ್ಗೆಟ್​ ನೀಡಿತ್ತು.
ಕರುಣ್​ ನಾಯರ್​​ ಶತಕ
ಇನ್ನು, ತಮಿಳುನಾಡು ವಿರುದ್ಧದ ಮಹತ್ವದ ಪಂದ್ಯದಲ್ಲಿ ಕ್ಯಾಪ್ಟನ್​​ ಕರುಣ್ ನಾಯರ್ ಅಬ್ಬರಿಸಿದ್ರು. ತಾನು ಎದುರಿಸಿದ 243 ಎಸೆತಗಳಲ್ಲಿ 122 ರನ್ ಸಿಡಿಸಿದರು. ಈ ಪೈಕಿ ಬರೋಬ್ಬರಿ 18 ಫೋರ್​​, 1 ಸಿಕ್ಸರ್​​ ಚಚ್ಚಿದ್ರು.
ಟಾಪ್​ ಆರ್ಡರ್​ ವೈಫಲ್ಯ
ವಿದರ್ಭ ತಂಡ ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡಿತ್ತು. ಟಾಪ್​ ಆರ್ಡರ್​ ಬ್ಯಾಟರ್​ಗಳ ವೈಫಲ್ಯದಿಂದ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 44 ರನ್​ಗೆ 3 ವಿಕೆಟ್​ಗಳು ಬಿದ್ದು ಹೋದವು.
ತಂಡಕ್ಕೆ ಕರುಣ್​ ನಾಯರ್​ ಆಸರೆ
ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಕ್ಯಾಪ್ಟನ್​ ಕರುಣ್​ ನಾಯರ್​ ಅವರು ಕ್ರೀಸ್​ನಲ್ಲೇ ನಿಂತು ಬ್ಯಾಟ್​ ಬೀಸಿದ್ರು. ಮಿಡ್ಲ್ ಓವರ್ಗಳಲ್ಲಿ ವಿಕೆಟ್ ಬೀಳದಂತೆ ಬ್ಯಾಟ್​ ಮಾಡಿದರು. ಡ್ಯಾನಿಶ್ ಮಾಲೆವಾರ್, ಕರುಣ್​​​ ನಾಯರ್​ ಜೋಡಿ ಸುಮಾರು 30 ಓವರ್ ನೆಲಕಚ್ಚಿ ನಿಂತು ಆಡಿ 98 ರನ್ ಕಲೆ ಹಾಕಿತು.
ಟೀಮ್​ ಇಂಡಿಯಾ ಕದ ತಟ್ಟಿದ ಕನ್ನಡಿಗ
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರೋ ಕರುಣ್ ನಾಯರ್ ಮತ್ತೆ ಟೀಮ್​ ಇಂಡಿಯಾ ಕದ ತಟ್ಟಿದ್ದಾರೆ. ಸತತ 7 ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿರೋ ಕರುಣ್ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕನ್ನಡಿಗನಿಗೆ ಅವಕಾಶ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ