ಇಂಗ್ಲೆಂಡ್​​ ವಿರುದ್ಧ ಕಳಪೆ ಆಟ; ಮೆಗಾ ಟೂರ್ನಿಯಿಂದಲೇ ಹೊರಬಿದ್ದ ಕನ್ನಡಿಗ ಕೆ.ಎಲ್​ ರಾಹುಲ್

author-image
Ganesh Nachikethu
Updated On
ಅಭಿಮಾನಿಗಳ ಕನಸು ನನಸಾಗಿಸಿದ ಒಬ್ಬ ಕನ್ನಡಿಗ; ಇದು ಟ್ರೋಲ್​ ಟು ಕಂಬ್ಯಾಕ್ ಕಥೆ
Advertisment
  • ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ
  • ಟೂರ್ನಿ ಆರಂಭಕ್ಕೆ ಇನ್ನೇನು ಒಂದೂವರೆ ತಿಂಗಳು ಮಾತ್ರ ಬಾಕಿ
  • ಟೀಮ್​ ಇಂಡಿಯಾ ಸ್ಟಾರ್​ ಆಟಗಾರನಿಗೆ ಬಿಸಿಸಿಐನಿಂದ ಬಿಗ್​ ಶಾಕ್​​

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಮೆಗಾ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಶುರುವಾಗಿವೆ.

ಇನ್ನು, ಈಗಾಗಲೇ ಬಿಸಿಸಿಐ ಕೂಡ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಿದೆ. ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಆದ್ರೂ ಪ್ಲೇಯಿಂಗ್​ ಎಲೆವೆನ್​ನಲ್ಲಿ ಯಾರಿಗೆ ಸ್ಥಾನ ಅನ್ನೋ ಚರ್ಚೆ ಶುರುವಾಗಿದೆ. ಇದರ ಭಾಗವಾಗಿ ಕೋಚ್​ ಗಂಭೀರ್​​, ಕ್ಯಾಪ್ಟನ್​ ರೋಹಿತ್​ ಮಧ್ಯೆ ಮಾತುಕತೆ ನಡೆಯಲಿದೆ. ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಸಾಕಷ್ಟು ಆಟಗಾರರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮುಖ್ಯ ಕೋಚ್​ ಗಂಭೀರ್​​ ಕೃಪೆ ಯಾರ ಮೇಲಿದೆ? ಎಂಬುದು ನೋಡಬೇಕಿದೆ.

ಪ್ಲೇಯಿಂಗ್​​ ಎಲೆವೆನ್​ ಆಯ್ಕೆ ಸವಾಲ್​​

ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ಲೇಯಿಂಗ್​​ ಎಲೆವೆನ್ ಆಯ್ಕೆ ಮಾಡೋದು ಅಷ್ಟು ಸುಲಭವಲ್ಲ. ಇದಕ್ಕಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ, ಕ್ಯಾಪ್ಟನ್​ ರೋಹಿತ್​​ ಮತ್ತು ಗೌತಮ್ ಗಂಭೀರ್ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.

ಕನ್ನಡಿಗ ಕಳಪೆ ಪ್ರದರ್ಶನ

ಏಕದಿನ ವಿಶ್ವಕಪ್‌ ಫೈನಲ್‌ ನಂತರ ಟೀಮ್​ ಇಂಡಿಯಾ ಕೇವಲ 7 ಏಕದಿನ ಪಂದ್ಯಗಳನ್ನು ಆಡಿದೆ. ಟೀಮ್​ ಇಂಡಿಯಾ ಅನುಭವಿ ಬ್ಯಾಟರ್​ ಕೆ.ಎಲ್​ ರಾಹುಲ್​​ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ನಡೆದ 6 ಏಕದಿನ ಪಂದ್ಯಗಳಿಗೂ ಆಯ್ಕೆಯಾಗಿದ್ದರು. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಇವರನ್ನು ಸರಣಿ ಮಧ್ಯದಲ್ಲೇ ಕೈಬಿಡಲಾಗಿತ್ತು. 2023ರ ನವೆಂಬರ್‌ 19ರಂದು ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಕೆ.ಎಲ್​ ರಾಹುಲ್​ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇಂದು ಇಂಗ್ಲೆಂಡ್​​ ವಿರುದ್ಧ ನಡೆದ ಪಂದ್ಯಲ್ಲೂ ಕೇವಲ 2 ರನ್​ಗೆ ಔಟಾದ್ರು.

ಕೆ.ಎಲ್​ ರಾಹುಲ್​ಗೆ ಕೊಕ್​​

ಇತ್ತ ಯಶಸ್ವಿ ಜೈಸ್ವಾಲ್‌ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಪಂತ್‌ ಮೊದಲ ವಿಕೆಟ್‌ ಕೀಪರ್‌ ಆಯ್ಕೆಯಾದರೆ, ರಾಹುಲ್‌ ಬೆಂಚ್​ ಕಾಯಲೇಬೇಕು. ಹೀಗಾಗಿ ರಾಹುಲ್‌ ಸ್ಥಾನದ ಬಗ್ಗೆ ಗೊಂದಲ ಮುಂದುವರಿದಿದೆ.

ಇದನ್ನೂ ಓದಿ:ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment