/newsfirstlive-kannada/media/post_attachments/wp-content/uploads/2024/11/KL_RAHUL_1.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​ ಕದನ ನಾಳೆ ನಡೆಯಲಿದೆ. ನಾಳೆ ನಡೆಯಲಿರೋ ಮಿನಿ ಕದನದಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ. ಇದರ ಮಧ್ಯೆ ಟೀಮ್​ ಇಂಡಿಯಾದಿಂದ ಸ್ಟಾರ್​ ವಿಕೆಟ್​ ಕೀಪರ್​​​ ಕೆ.ಎಲ್​ ರಾಹುಲ್​ಗೆ ಗೇಟ್​​​ಪಾಸ್​ ಗ್ಯಾರಂಟಿ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆ.ಎಲ್​​ ರಾಹುಲ್​​​ ಬೆಸ್ಟ್​​ ಫೀಲ್ಡಿಂಗ್​ ಅವಾರ್ಡ್​ಗೆ ಭಾಜನರಾದ್ರು. ಇದಾದ ಬಳಿಕ ನಡೆದ 2​ ಪಂದ್ಯಗಳಲ್ಲೂ ಕನ್ನಡಿಗ ಕೆ.ಎಲ್​ ರಾಹುಲ್​​​ ತಮ್ಮ ಫಾರ್ಮ್​​​ ಕಾಯ್ದುಕೊಳ್ಳುವಲ್ಲಿ ಎಡವಿದರು. ವಿಕೆಟ್​ ಕೀಪಿಂಗ್​​ ಮತ್ತು ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ರಾಹುಲ್​​ಗೆ ಕೊಕ್​​ ನೀಡಿ ಪಂತ್​ಗೆ ಅವಕಾಶ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಪಂತ್​​ಗೆ ಚಾನ್ಸ್​
ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಆಗಿ ಹಲವು ತಪ್ಪುಗಳನ್ನು ಮಾಡಿದ್ರು. ಇದು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಸೆಮಿಫೈನಲ್​​ ಪಂದ್ಯಕ್ಕೆ ಕೆ.ಎಲ್​ ರಾಹುಲ್​ಗೆ ರೆಸ್ಟ್​ ನೀಡಿ ಪಂತ್​ ಅವರನ್ನು ಆಡಿಸೋ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
ಕೆ.ಎಲ್​ ರಾಹುಲ್​ ಎಡವಟ್ಟು
ನ್ಯೂಜಿಲೆಂಡ್​ ವಿರುದ್ಧ ವಿಕೆಟ್​ ಕೀಪರ್​ ಆಗಿ ಕೆ.ಎಲ್​ ರಾಹುಲ್​​ ಸಾಲು ಸಾಲು ತಪ್ಪುಗಳನ್ನು ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಕೇವಲ 1 ರನ್ ಗಳಿಸಿದ್ದಾಗ ರಾಹುಲ್ ಅವರ ಕ್ಯಾಚ್ ಬಿಟ್ಟರು. 26ನೇ ಓವರ್ನಲ್ಲೂ ಟಾಮ್ ಲಾಥಮ್ ಕ್ಯಾಚ್ ಕೈ ಚೆಲ್ಲಿದರು. ಇದೇ ಕಾರಣದಿಂದಲೇ ಕೇನ್​ ವಿಲಿಯಮ್ಸನ್​ ದೊಡ್ಡ ಇನ್ನಿಂಗ್ಸ್​ ಆಡಿದರು.
ಮುಂದೆ ನಾಕೌಟ್ ಪಂದ್ಯಗಳು ನಡೆಯಲಿವೆ. ಈ ವೇಳೆ ಒಂದೇ ಒಂದು ತಪ್ಪು ನಡೆದ್ರೂ ತಂಡಕ್ಕೆ ದೊಡ್ಡ ಮಾರಕವಾಗಲಿದೆ. ಈ ದೃಷ್ಟಿಯಿಂದ ಮ್ಯಾನೇಜ್ಮೆಂಟ್ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us