/newsfirstlive-kannada/media/post_attachments/wp-content/uploads/2025/01/Team-India-vs-England.jpg)
ಇಂದು ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ.
ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದು ಬೀಗಿದ್ದ ಭಾರತ ತಂಡ 3ನೇ ಪಂದ್ಯ ಗೆಲ್ಲೋ ನಿರೀಕ್ಷೆಯಲ್ಲಿತ್ತು. ಇಂಗ್ಲೆಂಡ್ ನೀಡಿದ 172 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 145 ರನ್ ಗಳಿಸಿದೆ. ಈ ಮೂಲಕ 26 ರನ್ಗಳಿಂದ ಸೋತಿದೆ.
ಭಾರತ ತಂಡದ ಪರ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ ಕೇವಲ 2 ರನ್ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಅಬ್ಬರಿಸಿದ ಅಭಿಷೇಕ್ ಶರ್ಮಾ 14 ಬಾಲ್ನಲ್ಲಿ 5 ಫೋರ್ ಸಮೇತ 24 ರನ್ ಸಿಡಿಸಿದ್ರು. ಬಳಿಕ ಕ್ಯಾಚ್ ನೀಡಿ ಮೈದಾನದಿಂದ ಹೊರ ನಡೆದರು.
ಕ್ಯಾಪ್ಟನ್ ಸೂರ್ಯಕುಮಾರ್ 3ನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಸೂರ್ಯ 14, ತಿಲಕ್ ವರ್ಮಾ 18 ರನ್ಗೆ ಔಟಾದ್ರು.
ಹಾರ್ದಿಕ್ ಪಾಂಡ್ಯ ಏಕಾಂಗಿ ಹೋರಾಟ
ಬ್ಯಾಂಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆ ಆಗಿದ್ದು ಹಾರ್ದಿಕ್ ಪಾಂಡ್ಯ. ವಿಕೆಟ್ ಕಾದು ತಾಳ್ಮೆಯಿಂದ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 1 ಫೋರ್, 2 ಸಿಕ್ಸರ್ ಸಮೇತ 40 ರನ್ ಸಿಡಿಸಿ ಔಟಾದ್ರು.
ಅಕ್ಷರ್ ಪಟೇಲ್ 15, ವಾಷಿಂಗ್ಟನ್ ಸುಂದರ್ 6, ಶಮಿ 7, ಜುರೆಲ್ 2, ಬಿಷ್ಣೋಯ್ 4, ವರುಣ್ ಚಕ್ರವರ್ತಿ 2 ರನ್ ಗಳಿಸಿದ್ರು. ಇಂಗ್ಲೆಂಡ್ ತಂಡದ ಪರ ಜೆಮಿ ಓವರ್ಟನ್ 3, ಜೋಪ್ರಾ ಆರ್ಚರ್ 2, ಕಾರ್ಸೆ 2 ವಿಕೆಟ್ ತೆಗೆದರು.