/newsfirstlive-kannada/media/post_attachments/wp-content/uploads/2025/01/Team-India-vs-England.jpg)
ಇಂದು ರಾಜ್​ಕೋಟ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.
ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದು ಬೀಗಿದ್ದ ಭಾರತ ತಂಡ 3ನೇ ಪಂದ್ಯ ಗೆಲ್ಲೋ ನಿರೀಕ್ಷೆಯಲ್ಲಿತ್ತು. ಇಂಗ್ಲೆಂಡ್​ ನೀಡಿದ 172 ರನ್​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 20 ಓವರ್​ನಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 145 ರನ್​ ಗಳಿಸಿದೆ. ಈ ಮೂಲಕ 26 ರನ್​​ಗಳಿಂದ ಸೋತಿದೆ.
ಭಾರತ ತಂಡದ ಪರ ಓಪನರ್​ ಆಗಿ ಬಂದ ಸಂಜು ಸ್ಯಾಮ್ಸನ್​​ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಅಬ್ಬರಿಸಿದ ಅಭಿಷೇಕ್​ ಶರ್ಮಾ 14 ಬಾಲ್​ನಲ್ಲಿ 5 ಫೋರ್​ ಸಮೇತ 24 ರನ್​​ ಸಿಡಿಸಿದ್ರು. ಬಳಿಕ ಕ್ಯಾಚ್​ ನೀಡಿ ಮೈದಾನದಿಂದ ಹೊರ ನಡೆದರು.
ಕ್ಯಾಪ್ಟನ್​ ಸೂರ್ಯಕುಮಾರ್​ 3ನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ಸೂರ್ಯ 14, ತಿಲಕ್​ ವರ್ಮಾ 18 ರನ್​ಗೆ ಔಟಾದ್ರು.
ಹಾರ್ದಿಕ್​ ಪಾಂಡ್ಯ ಏಕಾಂಗಿ ಹೋರಾಟ
ಬ್ಯಾಂಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆ ಆಗಿದ್ದು ಹಾರ್ದಿಕ್​ ಪಾಂಡ್ಯ. ವಿಕೆಟ್​ ಕಾದು ತಾಳ್ಮೆಯಿಂದ ಬ್ಯಾಟ್​ ಬೀಸಿದ ಹಾರ್ದಿಕ್​ ಪಾಂಡ್ಯ 1 ಫೋರ್​, 2 ಸಿಕ್ಸರ್​ ಸಮೇತ 40 ರನ್​ ಸಿಡಿಸಿ ಔಟಾದ್ರು.
ಅಕ್ಷರ್​ ಪಟೇಲ್​ 15, ವಾಷಿಂಗ್ಟನ್​ ಸುಂದರ್​ 6, ಶಮಿ 7, ಜುರೆಲ್​ 2, ಬಿಷ್ಣೋಯ್​ 4, ವರುಣ್​ ಚಕ್ರವರ್ತಿ 2 ರನ್​ ಗಳಿಸಿದ್ರು. ಇಂಗ್ಲೆಂಡ್​ ತಂಡದ ಪರ ಜೆಮಿ ಓವರ್ಟನ್​ 3, ಜೋಪ್ರಾ ಆರ್ಚರ್​​ 2, ಕಾರ್ಸೆ 2 ವಿಕೆಟ್​ ತೆಗೆದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us