/newsfirstlive-kannada/media/post_attachments/wp-content/uploads/2025/06/Team-India-3.jpg)
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ದಾಖಲೆಯ ಜಯ ಸಾಧಿಸಿದೆ. ಇತಿಹಾಸದಲ್ಲೇ ಎಡ್ಜ್ಬಾಸ್ಟನ್ನಲ್ಲಿ ಚೊಚ್ಚಲ ಟೆಸ್ಟ್ ಗೆದ್ದ ಸಾಧನೆ ಮಾಡಿದ ಯಂಗ್ ಇಂಡಿಯಾ ಇದೀಗ ಆಂಗ್ಲರ ನೆಲದಲ್ಲಿ 14 ವರ್ಷಗಳ ಬಳಿಕ ಸರಣಿ ಗೆಲ್ಲೋ ಕನಸು ಕಾಣ್ತಿದೆ. ಇದಕ್ಕಾಗಿ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ಗೆ ಭಾರಿ ಸರ್ಜರಿ ಮಾಡೋಕೆ ಮುಂದಾಗಿದೆ.
ಲಾರ್ಡ್ಸ್ ಟೆಸ್ಟ್ಗೂ ಮುನ್ನ ಪ್ಲೇಯಿಂಗ್-XIಗೆ ಸರ್ಜರಿ
ಹೀನಾಯ ಸೋಲುಂಡಿರೋ ಇಂಗ್ಲೆಂಡ್ ಗಾಯಗೊಂಡ ಸಿಂಹದಂತಾಗಿದ್ದು ಮುಂದಿನ ಲಾರ್ಡ್ಸ್ ಟೆಸ್ಟ್ನಲ್ಲಿ ಟಫ್ ಫೈಟ್ ನೀಡೋದು ಪಕ್ಕಾ. ಹೀಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸೋಕೆ ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ. ಸಿಕ್ಕ 4 ಅವಕಾಶಗಳನ್ನೂ ಕೈ ಚೆಲ್ಲಿರೋ ಕರುಣ್ ನಾಯರ್ಗೆ ಕೊಕ್ ಕೊಡೋ ಸಾಧ್ಯತೆ ದಟ್ಟವಾಗಿದೆ. 8 ವರ್ಷಗಳ ಬಳಿಕ ಕಮ್ಬ್ಯಾಕ್ ಮಾಡಿದ ಕರುಣ್, 4 ಇನ್ನಿಂಗ್ಸ್ಗಳಿಂದ ಜಸ್ಟ್ 77 ರನ್ಗಳಿಸಿದ್ದಾರೆ. ಆಂಗ್ಲರ ನಾಡಲ್ಲಿ ರನ್ಗಳಿಕೆಗೆ ಪರದಾಡ್ತಿರೋ ಕರುಣ್ನ ಮುಂದಿನ ಪಂದ್ಯದಿಂದ ಡ್ರಾಪ್ ಮಾಡೋ ಗಂಭೀರ ಚಿಂತನೆ ನಡೆದಿದೆ. ಒಂದು ವೇಳೆ ಲಾರ್ಡ್ಸ್ ಟೆಸ್ಟ್ನಿಂದ ಡ್ರಾಪ್ ಕರುಣ್ ಕರಿಯರ್ ಕೂಡ ಅಂತ್ಯವಾಗೋ ಸಾಧ್ಯತೆಯನ್ನ ತಳ್ಳಿ ಹಾಕಿವಂತಿಲ್ಲ.
ಇದನ್ನೂ ಓದಿ: ವೈಯಕ್ತಿಕ 400 ರನ್ ಬಾರಿಸೋ ಚಾನ್ಸ್ ಕೈಚೆಲ್ಲಿದ ಕ್ಯಾಪ್ಟನ್.. ವಿಯಾನ್ ವಿರುದ್ಧ ಫ್ಯಾನ್ಸ್ ಭಾರೀ ಆಕ್ರೋಶ!
ಕರುಣ್ ನಾಯರ್ ಬದಲು ಈಶ್ವರನ್ಗೆ ಚಾನ್ಸ್..?
3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್, ಕರುಣ್ ನಾಯರ್ ವೈಫಲ್ಯ ಕಂಡಿದ್ದಾಗಿದೆ. ಸುದೀರ್ಘ ಕಾಲದಿಂದ ಬೆಂಚ್ ಕಾದಿರೋ ಅಭಿಮನ್ಯು ಈಶ್ವರನ್ಗೆ ಅವಕಾಶ ನೀಡೋಕೆ ಇದಕ್ಕಿಂತಾ ಒಳ್ಳೆ ಟೈಮ್ ಇಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಅಭಿಮನ್ಯು ವಾರ್ಮ್ ಅಪ್ ಗೇಮ್ನಲ್ಲಿ ಭಾರತ ಎ ಪರ ಕ್ರಮವಾಗಿ 68, 80 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಕಂಡೀಷನ್ಸ್ಗೂ ಹೊಂದಿಕೊಂಡಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 48ರ ಬ್ಯಾಟಿಂಗ್ ಅವರೇಜ್ನಲ್ಲಿ 7841 ರನ್ ಗಳಿಸಿರೋ ಈಶ್ವರನ್ಗೆ ಒಂದು ಅವಕಾಶ ನೀಡೋ ಸಾಧ್ಯತೆಯಿದೆ.
ನಿತೀಶ್ ರೆಡ್ಡಿಗೆ ಪ್ಲೇಯಿಂಗ್-XIನಿಂದ ಕೊಕ್?
2ನೇ ಟೆಸ್ಟ್ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಆಲ್ರೌಂಡರ್ ನಿತೀಶ್ ರೆಡ್ಡಿ, ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಫೇಲ್ ಆಗಿದ್ದಾರೆ. ಟೀಮ್ ಇಂಡಿಯಾದ ಪೇಸ್ ಆಲ್ರೌಂಡರ್ ಯಾಕೋ ವರ್ಕೌಟ್ ಆಗ್ತಿಲ್ಲ. ಹೀಗಾಗಿ ಒಬ್ಬ ಸ್ಪೆಷಲಿಸ್ಟ್ ಬ್ಯಾಟರ್ ಅಥವಾ ಸ್ಪೆಷಲಿಸ್ಟ್ ಬೌಲರ್ ಜೊತೆಗೆ ಕಣಕ್ಕಿಳಿಯೋ ಚರ್ಚೆಯೋ ನಡೆಸಿದೆ. ಇಂಗ್ಲೆಂಡ್ ಲಯನ್ಸ್ ಎದುರು ಉತ್ತಮ ಆಟವಾಡಿದ ಜುರೇಲ್ 3 ಹಾಫ್ ಸೆಂಚುರಿ ಸೇರಿ 4 ಇನ್ನಿಂಗ್ಸ್ಗಳಿಂದ 227 ರನ್ಗಳಿಸಿದ್ದಾರೆ. ಲಾರ್ಡ್ಸ್ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಸಾಲಿಡ್ ಟಚ್ನಲ್ಲಿರೋ ಜುರೇಲ್ಗೆ ಚಾನ್ಸ್ ನೀಡಿದ್ರೆ ಬ್ಯಾಟಿಂಗ್ ಡೆಪ್ತ್ ಹೆಚ್ಚಲಿದೆ.
ಇದನ್ನೂ ಓದಿ: ಕ್ರಿಕೆಟ್ ಜಗತ್ತಿಗೆ ಹೊಸ ಸಂದೇಶ; 10 ಬಿಗ್ ಸಿಕ್ಸರ್, 13 ಬೌಂಡ್ರಿ.. ಸೂರ್ಯವಂಶಿ ಸಿಡಿಲಬ್ಬರ, ಸೆಂಚುರಿ ‘ವೈಭವ’
ಜುರೇಲ್ ಬದಲಾಗಿ ವೇಗಿ ಆರ್ಷ್ದೀಪ್ ಸಿಂಗ್ನ ಕಣಕ್ಕಿಳಿಸೋ ಲೆಕ್ಕಾಚಾರವೂ ತಂಡದಲ್ಲಿದೆ. ಲೆಫ್ಟ್ ಆರ್ಮ್ ಪೇಸರ್ ಎಂಟ್ರಿ ತಂಡದ ಬೌಲಿಂಗ್ಗೆ ವೆರೈಟಿ ತರಲಿದೆ. ಕೌಂಟಿ ಕ್ರಿಕೆಟ್ ಆಡಿದ ಅನುಭವ ಆರ್ಷ್ದೀಪ್ ಸಿಂಗ್ಗಿದ್ದು, ಪಂದ್ಯದಲ್ಲಿ ನೆರವಾಗಲಿದೆ.
ಸ್ಪಿನ್ನರ್ ಕುಲ್ದೀಪ್ ಯಾದವ್ ಕತೆ ಏನು?
ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕಳೆದ 2 ಪಂದ್ಯಗಳಿಂದ ಬೆಂಚ್ಗೆ ಸೀಮಿತವಾಗಿದ್ದಾರೆ. 2ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ನಲ್ಲಿ ಮಿಂಚಿದ್ರು. ಬೌಲಿಂಗ್ ಎಫೆಕ್ಟಿವ್ ಅನಿಸಲಿಲ್ಲ. ಸ್ಪಿನ್ ಬೌಲಿಂಗ್ ಕೈ ಕೊಡ್ತಿರೋದು ಭಾರತಕ್ಕೆ ಹಿನ್ನಡೆಯಾಗ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ನ ಕಾಣಕ್ಕಿಳಿಸೋ ಯೋಚನೆಯಿದೆ. ಕುಲ್ದೀಪ್ ಕರೆತರಬೇಕಂದ್ರೆ ಜಡೇಜಾ - ಸುಂದರ್ ಇಬ್ಬರಲ್ಲಿ ಒಬ್ಬರನ್ನ ಡ್ರಾಪ್ ಮಾಡಬೇಕಿದೆ. ಯಾರು ಹೊರಬೀಳ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ಬೂಮ್ರಾ ಕಮ್ಬ್ಯಾಕ್..! ಪ್ರಸಿದ್ಧ ಕೃಷ್ಣ ಔಟ್?
3ನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ಕಮ್ಬ್ಯಾಕ್ ಮಾಡ್ತಾರೆ ಅನ್ನೋದನ್ನ ಕ್ಯಾಪ್ಟನ್ ಗಿಲ್ ಈಗಾಗಲೇ ಕನ್ಫರ್ಮ್ ಮಾಡಿದ್ದಾರೆ. ಬೂಮ್ರಾ ಬಂದ್ರೆ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಲಿದ್ದಾರೆ. 2ನೇ ಟೆಸ್ಟ್ನಲ್ಲೂ ಆಕಾಶ್ದೀಪ್, ಮೊಹಮ್ಮದ್ ಸಿರಾಜ್ ಇಬ್ಬರೂ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಪ್ರಸಿದ್ಧ ಕೃಷ್ಣ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಇಂಪ್ರೆಸ್ಸಿವ್ ಅನಿಲಿಲ್ಲ. 6 ವಿಕೆಟ್ ಬೇಟೆಯಾಡಿದ್ರೂ, ಉದಾರವಾಗಿ ರನ್ ಬಿಟ್ಟು ಕೊಟ್ಟು ದುಬಾರಿಯಾಗಿದ್ದಾರೆ. ಹೀಗಾಗಿ ಪ್ರಸಿದ್ಧ್ ಬೆಂಚ್ ಕಾಯೋ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ ಲಾರ್ಡ್ಸ್ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿರೋ ಟೀಮ್ ಇಂಡಿಯಾ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಸದ್ಯಕ್ಕಂತೂ ಪ್ಲೇಯಿಂಗ್ ಇಲೆವೆನ್ಗೆ 4 ಬದಲಾವಣೆ ಮಾಡಿ ಬಲಿಷ್ಠ ತಂಡವನ್ನ ಫೀಲ್ಡ್ಗಿಳಿಸೋ ಪ್ಲಾನ್ ರೆಡಿಯಾಗಿದೆ. ಪಿಚ್ ನೋಡಿದ ಬಳಿಕ ಇನ್ನೂ ಕೆಲ ಬದಲಾವಣೆಗಳಾದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಗೆದ್ದ ಖುಷಿ, ಗಿಲ್ ದೊಡ್ಡ ಎಡವಟ್ಟು.. ಕ್ಯಾಪ್ಟನ್ನಿಂದ ಒಪ್ಪಂದ ಉಲ್ಲಂಘನೆ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ