/newsfirstlive-kannada/media/post_attachments/wp-content/uploads/2024/01/Hardik_Rohit_Kohli-2.jpg)
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ನಿಮ್ಮ ದಾರಿ ನೋಡಿಕೊಳ್ಳಲು ಎಂದು ಬಿಸಿಸಿಐ ಸೂಚನೆ ನೀಡಿದೆ. ರೋಹಿತ್ಗೆ ವಾರ್ನಿಂಗ್ ನೀಡಿದ್ದು, ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್ ಕಾರ್ನರ್ ತೋರಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಮತ್ತಷ್ಟು ದಿನಗಳ ಕಾಲ ಏಕದಿನ ಫಾರ್ಮೆಟ್ನಲ್ಲಿ ಮುಂದುವರಿಸೋ ಅಭಯ ನೀಡಿದೆ. ಇನ್ನೊಂದೆಡೆ ರೋಹಿತ್ಗೆ ನಿವೃತ್ತಿ ಆಗಿ ಎಂದು ಒತ್ತಡ ಹೇರಿದೆ. ಇದು ಸಹಜವಾಗಿ ರೋಹಿತ್ ಶರ್ಮಾಗೊಂದು ನ್ಯಾಯ, ವಿರಾಟ್ಗೊಂದು ನ್ಯಾಯ ಎಂಬ ಪ್ರಶ್ನೆ ಮಾಡುವಂತೆ ಮಾಡಿದೆ. ಇದಕ್ಕೆ ಕಾರಣ ಇಬ್ಬರ ಆಟ ಹಾಗೂ ವಯಸ್ಸು ಹಾಗೂ ಫಾರ್ಮ್.
ಟೆಸ್ಟ್ ಫಾರ್ಮೆಟ್ಗೆ ಹೋಲಿಕೆ ಮಾಡಿದ್ರೆ, ಏಕದಿನ ಫಾರ್ಮೆಟ್ನಲ್ಲಿ ವಿರಾಟ್ಗಿಂತ ರೋಹಿತ್, ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಇಬ್ಬರ ವಯಸ್ಸಿನ ಅಂತರದಲ್ಲೂ ಹೆಚ್ಚೇನಿಲ್ಲ. ಹೀಗಾಗಿ ರೋಹಿತ್ ಶರ್ಮಾ ವಿಚಾರದಲ್ಲಿ ಬಿಸಿಸಿಐ ಆಟ ಆಡ್ತಿದೆಯಾ ಎಂಬ ಅನುಮಾನ ಮೂಡಿಸದಿರಲ್ಲ. ಅಷ್ಟೇ ಅಲ್ಲ! ಏಕದಿನ ಫಾರ್ಮೆಟ್ಗೆ ಹೊಸ ನಾಯಕನಾಗಿ ಯಾರನ್ನ ನೇಮಿಸಬೇಕು ಅನ್ನೋ ಸ್ಪಷ್ಟ ನಿಲುವಿಗೂ ಬಂದಾಗಿದೆಯಂತೆ.
ಹಾರ್ದಿಕ್ ಪಾಂಡ್ಯಗೆ ಏಕದಿನ ನಾಯಕನ ಪಟ್ಟ ಫಿಕ್ಸ್..!
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ಗೆ ಗೇಟ್ಪಾಸ್ ನೀಡಲು ನಿರ್ಧರಿಸಿರುವ ಬಿಸಿಸಿಐ, ನಂತರ ಟೀಮ್ ಇಂಡಿಯಾದ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಾಗಿದೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲು ಉತ್ಸುಕ ತೋರಿರುವ ಬಿಸಿಸಿಐ, ಸತತ ಇಂಜುರಿ ರೀಸನ್ಗೆ ಬೂಮ್ರಾಗೆ ನಾಯಕತ್ವ ನೀಡದಿರಲು ಈಗಾಗಲೇ ತೀರ್ಮಾನಿಸಿದೆ. ಆದ್ರೆ, ಇದೆಲ್ಲಕ್ಕೂ ಚಾಂಪಿಯನ್ಸ್ ಟ್ರೋಫಿ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಬೇಕಷ್ಟೇ.
ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿರುವ ಬಿಸಿಸಿಐ, ವಿರಾಟ್ ಕೊಹ್ಲಿ ವಿಚಾರದಲ್ಲಿ ಮಾತ್ರ ಸಾಫ್ಟ್ ಆಗಿದೆ. ಇದು ಸಹಜವಾಗಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇಡುವ ಯತ್ನನಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಆದ್ರೆ, ಎಲ್ಲವೂ ಚಾಂಪಿಯನ್ಸ್ ಟ್ರೋಫಿ ಬಳಿಕ ನೋಡೋಣ ಎಂದಿರುವ ರೋಹಿತ್, ಹೊಸ ದಾಳ ಉರುಳಿಸ್ತಾರಾ..? ಇಲ್ಲ ಶಾಕ್ ನೀಡ್ತಾರಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಷ್ಟೇ.
ಇದನ್ನೂ ಓದಿ:ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ; ಕ್ಷಮೆ ಕೇಳಲು ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ