/newsfirstlive-kannada/media/post_attachments/wp-content/uploads/2025/06/KL_RAHUL_BUMRHA-1.jpg)
ಕ್ರಿಕೆಟ್ ಲೋಕದ ಮದಗಜಗಳ ಕಾದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಲೀಡ್ಸ್ನ ಹೆಡ್ಡಿಂಗ್ಲಿನಲ್ಲಿ ನಡೆಯೋ ಮೊದಲ ಟೆಸ್ಟ್ ಕದನದಲ್ಲಿ ಇಂಡಿಯಾ-ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗ್ತಿವೆ. ಪ್ರತಿಷ್ಟೆಯ ಸರಣಿಗೆ ಭರ್ಜರಿ ಸಿದ್ಧತೆ ನಡೆಸಿರೋ ಯಂಗ್ ಇಂಡಿಯಾ ಶುಭಾರಂಭದ ಕನಸು ಕಾಣ್ತಿದೆ.
ಯುವ ಆಟಗಾರರೇ ತುಂಬಿರುವ ತಂಡದಲ್ಲಿ ಕೆಲ ಸೀನಿಯರ್ಗಳಿದ್ದು, ತಂಡವನ್ನ ಲೀಡ್ ಮಾಡೋ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಕೆ.ಎಲ್ ರಾಹುಲ್, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಯುವ ನಾಯಕನಿಗೆ ಹೆಗಲಾಗೋದ್ರ ಜೊತೆಗೆ ಯುವ ಆಟಗಾರರನ್ನ ಗೈಡ್ ಮಾಡಬೇಕಿದೆ.
ಇದನ್ನೂ ಓದಿ: ನಿಮಗಿದು ಗೊತ್ತೇ..! ಐ ಡ್ರಾಪ್ ತಪ್ಪಾಗಿ ಹಾಕಿಕೊಳ್ಳೋದು ಅಪಾಯಕಾರಿ; ಹೇಗೆ ಗೊತ್ತಾ?
ಆರಂಭಿಕರಾಗಿ ಜೈಸ್ವಾಲ್-ರಾಹುಲ್ ಕಣಕ್ಕೆ..
ಡೈನಾಮಿಕ್ ಓಪನರ್ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಜೈಸ್ವಾಲ್ ಜೊತೆಗಾರನಾಗಿ ಅನುಭವಿ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ಓಪನರ್ ಆಗಿ ರಾಹುಲ್ ಶೈನ್ ಆಗಿದ್ದು, ಆತ್ಮವಿಶ್ವಾಸ ಮೂಡಿಸಿದೆ.
ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಕ್ಯಾಪ್ಟನ್ ಗಿಲ್, 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಾಯಿ ಸುದರ್ಶನ್ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದ್ದು, ತಮಿಳುನಾಡು ಬ್ಯಾಟರ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ: ಲೀಡ್ಸ್ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್ಗೆ ವಿಸಿಟ್ ಮಾಡೇ ಮಾಡ್ತಾರೆ.. ಕಾರಣವೇನು?
ಗಿಲ್ ನಂತರದ ಸ್ಲಾಟ್ ಅಂದ್ರೆ 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡೋದು ಈಗಾಗಲೇ ಕನ್ಫರ್ಮ್ ಆಗಿದೆ. ಸ್ವತಃ ಪಂತ್ ಈ ಸುದ್ದಿಯನ್ನ ಅಧಿಕೃತಗೊಳಿದಿದ್ದಾರೆ. ಕನ್ನಡಿಗ ಕರುಣ್ ನಾಯರ್ ಕನಸು ನನಸಾಗೋ ಕ್ಷಣ ಬಂದಿದೆ. ಸುದೀರ್ಘ ಅಂತರದ ಬಳಿಕ ಕರುಣ್ ನಾಯರ್ ವೈಟ್ ಜೆರ್ಸಿ ತೊಟ್ಟು ಮಿಂಚಲಿದ್ದಾರೆ. ರೆಡ್ ಹಾಟ್ ಫಾರ್ಮ್ನಲ್ಲಿರೋ ಕನ್ನಡಿಗ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಆಲ್ರೌಂಡರ್ ಕೋಟಾದಲ್ಲಿ ಯಾರಿಗೆ ಅವಕಾಶ..?
ಆಲ್ರೌಂಡರ್ ಕೋಟಾದಲ್ಲಿ ಟೀಮ್ ಸೆಲೆಕ್ಷನ್ ಸದ್ಯ ಮ್ಯಾನೇಜ್ಮೆಂಟ್ಗೆ ಗೊಂದಲ ಮೂಡಿಸಿದೆ. ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಇಬ್ಬರಲ್ಲಿ ಯಾರನ್ನ ಆಡಿದಬೇಕು ಅನ್ನೋ ಪ್ರಶ್ನೆ ಇದೆ. ಪೇಸ್ ಆಲ್ರೌಂಡರ್ಗಳಾದ ಶಾರ್ದೂಲ್ ಠಾಕೂರ್, ನಿತೀಶ್ ರೆಡ್ಡಿ ನಡುವೆಯೂ ಸ್ಥಾನಕ್ಕಾಗಿ ಫೈಟ್ ಏರ್ಪಟ್ಟಿದೆ. ಆಲ್ರೌಂಡರ್ಗಳ ಆಯ್ಕೆಯಲ್ಲಿ ಈಗಲೂ ಗೊಂದಲ ಇದೆ.
ಜಸ್ಪ್ರಿತ್ ಬೂಮ್ರಾ ಸಾರಥ್ಯದ ವೇಗದ ವಿಭಾಗ ಸಖತ್ ಪವರ್ಫುಲ್ ಆಗಿದೆ. ಬೂಮ್ರಾ ಜೊತೆಗೆ ಸಿಡಿಗುಂಡು ಸಿರಾಜ್ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯ ಸ್ಥಾನಕ್ಕೆ ಪೈಪೋಟಿಯಿದೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ, ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಇಬ್ಬರಲ್ಲಿ ಯಾರನ್ನ ಆಡಿಸೋದು ಅನ್ನೋ ಪ್ರಶ್ನೆಗೆ ಕ್ಲೀಯರ್ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ: ಕೊಹ್ಲಿ-ರೋಹಿತ್ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ