ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ಲೇಯಿಂಗ್-11; ಆಯ್ಕೆಯ ಗೊಂದಲ ಇರೋದು ಎಲ್ಲಿ..?

author-image
Ganesh
Updated On
ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ಲೇಯಿಂಗ್-11; ಆಯ್ಕೆಯ ಗೊಂದಲ ಇರೋದು ಎಲ್ಲಿ..?
Advertisment
  • ಇಂದಿನಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ
  • ಲೀಡ್ಸ್​​​ನ ಹೆಡ್ಡಿಂಗ್ಲಿನಲ್ಲಿ ಮೊದಲ ಟೆಸ್ಟ್​​ ಕದನ
  • ಭಾರತದ ಪ್ಲೇಯಿಂಗ್-11ನಲ್ಲಿ ಯಾರೆಲ್ಲ ಇರ್ತಾರೆ..?

ಕ್ರಿಕೆಟ್​ ಲೋಕದ ಮದಗಜಗಳ ಕಾದಾಟಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಲೀಡ್ಸ್​​​ನ ಹೆಡ್ಡಿಂಗ್ಲಿನಲ್ಲಿ ನಡೆಯೋ ಮೊದಲ ಟೆಸ್ಟ್​​ ಕದನದಲ್ಲಿ ಇಂಡಿಯಾ-ಇಂಗ್ಲೆಂಡ್​​ ತಂಡಗಳು ಮುಖಾಮುಖಿಯಾಗ್ತಿವೆ. ಪ್ರತಿಷ್ಟೆಯ ಸರಣಿಗೆ ಭರ್ಜರಿ ಸಿದ್ಧತೆ ನಡೆಸಿರೋ ಯಂಗ್​ ಇಂಡಿಯಾ ಶುಭಾರಂಭದ ಕನಸು ಕಾಣ್ತಿದೆ.

ಯುವ ಆಟಗಾರರೇ ತುಂಬಿರುವ ತಂಡದಲ್ಲಿ ಕೆಲ ಸೀನಿಯರ್​ಗಳಿದ್ದು, ತಂಡವನ್ನ ಲೀಡ್​ ಮಾಡೋ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ, ರವೀಂದ್ರ ಜಡೇಜಾ ಯುವ ನಾಯಕನಿಗೆ ಹೆಗಲಾಗೋದ್ರ ಜೊತೆಗೆ ಯುವ ಆಟಗಾರರನ್ನ ಗೈಡ್​ ಮಾಡಬೇಕಿದೆ.

ಇದನ್ನೂ ಓದಿ: ನಿಮಗಿದು ಗೊತ್ತೇ..! ಐ ಡ್ರಾಪ್​ ತಪ್ಪಾಗಿ ಹಾಕಿಕೊಳ್ಳೋದು ಅಪಾಯಕಾರಿ; ಹೇಗೆ ಗೊತ್ತಾ?

ಆರಂಭಿಕರಾಗಿ ಜೈಸ್ವಾಲ್​-ರಾಹುಲ್​ ಕಣಕ್ಕೆ..

ಡೈನಾಮಿಕ್​ ಓಪನರ್​ ಯಶಸ್ವಿ ಜೈಸ್ವಾಲ್​ ಓಪನರ್​ ಆಗಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಜೈಸ್ವಾಲ್​ ಜೊತೆಗಾರನಾಗಿ ಅನುಭವಿ ಕೆ.ಎಲ್​ ರಾಹುಲ್​ ಇನ್ನಿಂಗ್ಸ್​ ಓಪನ್​ ಮಾಡಲಿದ್ದಾರೆ. ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ಓಪನರ್​ ಆಗಿ ರಾಹುಲ್​ ಶೈನ್​ ಆಗಿದ್ದು, ಆತ್ಮವಿಶ್ವಾಸ ಮೂಡಿಸಿದೆ.

ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದ ಕ್ಯಾಪ್ಟನ್​ ಗಿಲ್​, 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸಾಯಿ ಸುದರ್ಶನ್​ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದ್ದು, ತಮಿಳುನಾಡು ಬ್ಯಾಟರ್​​ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: ಲೀಡ್ಸ್​​ಗೆ ಹೋದ್ರೆ ಕೊಹ್ಲಿ ದಂಪತಿ ಈ ರೆಸ್ಟೋರೆಂಟ್​ಗೆ ವಿಸಿಟ್​ ಮಾಡೇ ಮಾಡ್ತಾರೆ.. ಕಾರಣವೇನು?

publive-image

ಗಿಲ್​ ನಂತರದ ಸ್ಲಾಟ್​ ಅಂದ್ರೆ 5ನೇ ಕ್ರಮಾಂಕದಲ್ಲಿ ರಿಷಭ್​ ಪಂತ್​ ಆಡೋದು ಈಗಾಗಲೇ ಕನ್​ಫರ್ಮ್​ ಆಗಿದೆ. ಸ್ವತಃ ಪಂತ್​ ಈ ಸುದ್ದಿಯನ್ನ ಅಧಿಕೃತಗೊಳಿದಿದ್ದಾರೆ. ಕನ್ನಡಿಗ ಕರುಣ್​ ನಾಯರ್ ಕನಸು ನನಸಾಗೋ ಕ್ಷಣ ಬಂದಿದೆ. ಸುದೀರ್ಘ ಅಂತರದ ಬಳಿಕ ಕರುಣ್​ ನಾಯರ್​ ವೈಟ್​ ಜೆರ್ಸಿ ತೊಟ್ಟು ಮಿಂಚಲಿದ್ದಾರೆ. ರೆಡ್​ ಹಾಟ್​ ಫಾರ್ಮ್​ನಲ್ಲಿರೋ ಕನ್ನಡಿಗ 6ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.

ಆಲ್​​ರೌಂಡರ್​​ ಕೋಟಾದಲ್ಲಿ ಯಾರಿಗೆ ಅವಕಾಶ..?

ಆಲ್​​ರೌಂಡರ್​​ ಕೋಟಾದಲ್ಲಿ ಟೀಮ್​ ಸೆಲೆಕ್ಷನ್ ಸದ್ಯ ಮ್ಯಾನೇಜ್​ಮೆಂಟ್​ಗೆ ಗೊಂದಲ ಮೂಡಿಸಿದೆ. ಸ್ಪಿನ್​ ಆಲ್​​ರೌಂಡರ್​ ರವೀಂದ್ರ ಜಡೇಜಾ, ಕುಲ್​​ದೀಪ್​ ಯಾದವ್​ ಇಬ್ಬರಲ್ಲಿ ಯಾರನ್ನ ಆಡಿದಬೇಕು ಅನ್ನೋ ಪ್ರಶ್ನೆ ಇದೆ. ಪೇಸ್​ ಆಲ್​​ರೌಂಡರ್​ಗಳಾದ ಶಾರ್ದೂಲ್​ ಠಾಕೂರ್​, ನಿತೀಶ್​ ರೆಡ್ಡಿ ನಡುವೆಯೂ ಸ್ಥಾನಕ್ಕಾಗಿ ಫೈಟ್​ ಏರ್ಪಟ್ಟಿದೆ. ಆಲ್​​ರೌಂಡರ್​ಗಳ ಆಯ್ಕೆಯಲ್ಲಿ ಈಗಲೂ ಗೊಂದಲ ಇದೆ.

ಜಸ್​ಪ್ರಿತ್​ ಬೂಮ್ರಾ ಸಾರಥ್ಯದ ವೇಗದ ವಿಭಾಗ ಸಖತ್​ ಪವರ್​ಫುಲ್​ ಆಗಿದೆ. ಬೂಮ್ರಾ ಜೊತೆಗೆ ಸಿಡಿಗುಂಡು ಸಿರಾಜ್​​ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯ ಸ್ಥಾನಕ್ಕೆ ಪೈಪೋಟಿಯಿದೆ. ಕನ್ನಡಿಗ ಪ್ರಸಿದ್ಧ್​​ ಕೃಷ್ಣ, ಎಡಗೈ ವೇಗಿ ಆರ್ಷ್​​ದೀಪ್ ಸಿಂಗ್​ ಇಬ್ಬರಲ್ಲಿ ಯಾರನ್ನ ಆಡಿಸೋದು ಅನ್ನೋ ಪ್ರಶ್ನೆಗೆ ಕ್ಲೀಯರ್​ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ಕೊಹ್ಲಿ-ರೋಹಿತ್​ ಇಲ್ಲ.. ಇವರ ಜವಾಬ್ದಾರಿಯನ್ನ ಈ ಮೂರು ಸ್ಟಾರ್ ಹೊರಲೇಬೇಕು..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment