ಗೆಲುವಿಗಾಗಿ ಹನುಮನ ಮೊರೆ ಹೋದ ಟೀಮ್ ಇಂಡಿಯಾ.. ಗಿಲ್ ಪಡೆ ಏನ್ ಮಾಡ್ತಿದೆ ಗೊತ್ತಾ?

author-image
Bheemappa
ಗೆಲುವಿಗಾಗಿ ಹನುಮನ ಮೊರೆ ಹೋದ ಟೀಮ್ ಇಂಡಿಯಾ.. ಗಿಲ್ ಪಡೆ ಏನ್ ಮಾಡ್ತಿದೆ ಗೊತ್ತಾ?
Advertisment
  • ಮ್ಯಾಂಚೆಸ್ಟರ್​​ನಲ್ಲಿ ಇದುವರೆಗೆ ಒಂದೂ ಟೆಸ್ಟ್​​ ಗೆದ್ದಿಲ್ಲ ಭಾರತ ತಂಡ
  • ಬ್ಯಾಡ್​ ಲಕ್ ಎಂದು ಹನುಮನ ಆರಾಧನೆಗೆ ಮುಂದಾದ ಗಿಲ್ ಪಡೆ
  • ಲೆಗ್​ಬೈಸ್​​ ರೂಪದಲ್ಲೇ 55 ರನ್​ಗಳನ್ನ ಬಿಟ್ಟುಕೊಟ್ಟ ಭಾರತ ತಂಡ

ಲಾರ್ಡ್ಸ್​​ ಟೆಸ್ಟ್​ ಪಂದ್ಯದಲ್ಲಿ ಸೋತ ಟೀಮ್​ ಇಂಡಿಯಾ, ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​​ನಲ್ಲಿ ಗೆಲುವಿಗೆ ಪಣತೊಟ್ಟಿದೆ. ಮ್ಯಾಂಚೆಸ್ಟರ್​ ಮೈದಾನದ ಇತಿಹಾಸವನ್ನ ಬದಲಿಸೋಕೆ ಹೊರಟಿರೋ ಟೀಮ್​ ಇಂಡಿಯಾ ಹನುಮನ ಮೊರೆ ಹೋಗಿದೆ. ಆಂಜನೇಯನ ಆರಾಧಿಸಿ ಅಭ್ಯಾಸದ ಅಖಾಡಕ್ಕೆ ಧುಮುಕಿದೆ. ಏನಿದು ಟೀಮ್​ ಇಂಡಿಯಾದ ಹೊಸ ನಡೆ?.

ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​​ ಟೆಸ್ಟ್​ ಪಂದ್ಯದಲ್ಲಿ ವಿರೋಚಿತ ಸೋಲುಂಡ ಟೀಮ್​ ಇಂಡಿಯಾ ಇದೀಗ ಮುಂದಿನ ಟೆಸ್ಟ್​ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್​​​ನ ಓಲ್ಡ್​​ ಟ್ರಾಫರ್ಡ್​​​​ ಮೈದಾನದಲ್ಲಿ ನೆಕ್ಸ್ಟ್​ ಟೆಸ್ಟ್​​ ಫೈಟ್​​ ನಡೆಯಲಿದ್ದು ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ. ಲಂಡನ್​ನಿಂದ ಬೆಕೆನ್​​ಹ್ಯಾಮ್​ಗೆ ಪ್ರಯಾಣಿಸಿರೋ ಟೀಮ್​ ಇಂಡಿಯಾ ಕೆಂಟ್​ನಲ್ಲಿ ವಿಶೇಷ ಅಭ್ಯಾಸ ಆರಂಭಿಸಿದೆ.

publive-image

ಡ್ರೆಸ್ಸಿಂಗ್​ರೂಮ್​ನಲ್ಲಿ ಮೊಳಗಿದ ಹನುಮಾನ್​ ಚಾಲೀಸಾ.!

ಲಾರ್ಡ್ಸ್​​​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯವನ್ನ ಸೋತಿರುವ ಟೀಮ್​ ಇಂಡಿಯಾ ಪಾಲಿಗೆ 4ನೇ ಟೆಸ್ಟ್​​ ಪಂದ್ಯ ಡು ಆರ್​​ ಡೈ ಆಗಿದೆ. ಸರಣಿ ಜೀವಂತ ಇರಬೇಕು ಎಂದರೆ ಗೆಲುವು ಅನಿವಾರ್ಯವಾಗಿದೆ. ಸ್ವಲ್ಪ ಯಾಮಾರಿದ್ರೂ ಸರಣಿ ಕೈ ಜಾರಲಿದೆ. ಹೀಗಾಗಿ ಶತಾಯಗತಾಯ ಮ್ಯಾಂಚೆಸ್ಟರ್​​ನಲ್ಲಿ ಗೆಲುವಿಗೆ ಟೀಮ್​ ಇಂಡಿಯಾ ಪಣತೊಟ್ಟಿದ್ದು, ದೇವರ ಮೋರೆ ಹೋಗಿದೆ.

ಕೆಂಟ್​ನಲ್ಲಿ ಟೀಮ್ ಇಂಡಿಯಾ ಅಭ್ಯಾಸಕ್ಕೆ ಬಂದ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಕೋಚ್​​ ಗೌತಮ್​ ಗಂಭೀರ್​​ ನೇತೃತ್ವದಲ್ಲಿ ಮೀಟಿಂಗ್​ ನಡೆದಿದೆ. ಆ ಬಳಿಕ ಅಭ್ಯಾಸದ ಕಣಕ್ಕೆ ಇಳಿಯೋಕೂ ಎಲ್ಲಾ ಆಟಗಾರರು ಹನುಮಾನ ಚಾಲೀಸಾವನ್ನ ಕೇಳಿದ್ದಾರೆ. ಆಂಜನೇಯನನ್ನ ಆರಾಧಿಸಿದ ಬಳಿಕ ಆಟಗಾರರು ಅಭ್ಯಾಸದ ಕಣಕ್ಕಿಳಿದಿದ್ದಾರೆ.

ಲಾರ್ಡ್ಸ್​​ನಲ್ಲಿ ಟೀಮ್​ ಇಂಡಿಯಾಗೆ ಕೈ ಕೊಟ್ಟಿತ್ತು ಲಕ್​.!

ಲಾರ್ಡ್ಸ್​​​ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾಗೆ ಗೆಲ್ಲೋ ಅವಕಾಶವಿತ್ತು. ಅಂತಿಮ ದಿನದಾಟದ ಆರಂಭದಲ್ಲೇ ಪ್ರಮುಖ ವಿಕೆಟ್​ ಕಳೆದುಕೊಂಡ್ರೂ, ಜಡೇಜಾ ಹೋರಾಟ, ಬೂಮ್ರಾ, ಸಿರಾಜ್​ ತಾಳ್ಮೆಯ ಆಟ ಗೆಲುವಿನ ಭರವಸೆಯನ್ನ ಮೂಡಿಸಿತ್ತು. ಆದ್ರೆ, ಅಂತಿಮ ಹಂತದಲ್ಲಿ ಲಕ್​ ಕೈ ಕೊಟ್ಟಿತ್ತು. ಬ್ಯಾಟ್​​ ಬಡಿದ ಬಾಲ್​ ಉರುಳಿಕೊಂಡು ಹೋಗಿ ವಿಕೆಟ್​ ಬಡಿದು ಅನ್​​​ಲಕ್ಕಿ ರೀತಿಯಲ್ಲಿ ಭಾರತ ತಂಡ ಸೋಲ್ತು. ಇದೊಂದೆ ಅಲ್ಲ.. ಹಲವು ಡಿಆರ್​​ಎಸ್​ಗಳು ಅಂಪೈರ್ಸ್​ ಕಾಲ್​ ಆಗಿ ಸ್ಟಿಕ್​ ಆದ್ವು. ಬೈಸ್​​, ಲೆಗ್​ಬೈಸ್​​ ರೂಪದಲ್ಲೇ ಬರೋಬ್ಬರಿ 55 ರನ್​ಗಳು ಲೀಕ್​ ಆದ್ವು. ಹೀಗೆ ಪಂದ್ಯದ ಹಲವು ಹಂತಗಳಲ್ಲಿ ಬ್ಯಾಡ್​ ಲಕ್​ ಕಾಡಿತು. ಆಂಜನೇಯನ ಆರಾಧನೆಗೆ ಇದೂ ಒಂದು ಕಾರಣ.

ಮ್ಯಾಂಚೆಸ್ಟರ್​​ನಲ್ಲಿ ಗೆದ್ದೇ ಇಲ್ಲ ಒಂದೂ ಪಂದ್ಯ.!

ನೆಕ್ಸ್ಟ್​​ ಟೆಸ್ಟ್​ ಪಂದ್ಯ ನಡೆಯೋ ಮ್ಯಾಂಚೆಸ್ಟರ್​ನ ಒಲ್ಡ್​ಟ್ರಾಫರ್ಡ್​​​ ಮೈದಾನದಲ್ಲಿ ಟೀಮ್​ ಇಂಡಿಯಾ ಈವರೆಗೆ ಗೆಲುವು ಅನ್ನೋದನ್ನೇ ಕಂಡಿಲ್ಲ. ಈವರೆಗೆ ಒಲ್ಡ್​ಟ್ರಾಫರ್ಡ್​​ನಲ್ಲಿ 9 ಪಂದ್ಯಗಳನ್ನ ಭಾರತ ತಂಡ ಆಡಿದೆ. ಈ ಪೈಕಿ 4 ಪಂದ್ಯಗಳನ್ನ ಸೋತಿದ್ರೆ, 5 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಇತಿಹಾಸದಲ್ಲೇ ಒಂದೂ ಪಂದ್ಯ ಗೆಲ್ಲದ ಅಂಗಳದಲ್ಲಿ ಜಯ ಸಾಧಿಸಲೇ ಬೇಕಾದ ಚಾಲೆಂಜ್​ ಇದೀಗ ಟೀಮ್​ ಇಂಡಿಯಾ ಮುಂದಿದೆ.

ಇದನ್ನೂ ಓದಿ:ಸಾರಾ, ಸನಾ ಏನ್​ ಮಾಡ್ತಿದ್ದಾರೆ.. ಸಚಿನ್, ಗಂಗೂಲಿ ಪುತ್ರಿಯರ ಲೈಫ್​​ಸ್ಟೈಲ್​​​ ಹೇಗೆಲ್ಲಾ ಇದೆ?

publive-image

ಕೊಹ್ಲಿ, ಹಾರ್ದಿಕ್​​ ಹಾದಿಯಲ್ಲಿ ಯಂಗ್​ ಇಂಡಿಯಾ.!

ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್​​ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಹನುಮನ ಪರಮಭಕ್ತರು. ಪಾಸಿಟಿವ್​ ಎನರ್ಜಿಗಾಗಿ ಹನುಮಾನ್​ ಚಾಲೀಸಾವನ್ನ ಹೆಚ್ಚು ಹೆಚ್ಚು ಕೇಳ್ತಾ ಇದ್ರು. ಇದೀಗ ಇದೇ ಹಾದಿಯಲ್ಲಿ ಯುವ ಆಟಗಾರರನ್ನೇ ಒಳಗೊಂಡ ಟೀಮ್​ ಇಂಡಿಯಾ ಕೂಡ ಸಾಗ್ತಿದೆ.

ಆಂಜನೇಯನ ಆರಾಧನೆ ಮಾಡೋ ಮೂಲಕ 4ನೇ ಟೆಸ್ಟ್​​ ಪಂದ್ಯಕ್ಕೆ ಟೀಮ್​ ಇಂಡಿಯಾ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್​ನ ಒಲ್ಡ್​ ಟ್ರಾಫರ್ಡ್​ ಮೈದಾನದ​ ಇತಿಹಾಸ ಬದಲಿಸೋಕೆ ಪಣತೊಟ್ಟಿದೆ. ಸರಣಿ ಜೀವಂತವಾಗಿರಿಸಿಕೊಳ್ಳೋಕೆ ಸಜ್ಜಾಗ್ತಿರೋ ತಂಡಕ್ಕೆ ಹನುಮನ ಬಲ ಸಿಗುತ್ತಾ.? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment