ಕೆ.ಎಲ್​ ರಾಹುಲ್​ ಬೆನ್ನಲ್ಲೇ ಟೀಮ್​ ಇಂಡಿಯಾ ಸ್ಟಾರ್​ ಆಟಗಾರನಿಗೆ ಕೊಕ್; ಆತಂಕದಲ್ಲಿ ಆಲ್​ರೌಂಡರ್​​

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​
Advertisment
  • ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ
  • ಟೂರ್ನಿ ಆರಂಭಕ್ಕೆ ಇನ್ನೇನು ಒಂದೂವರೆ ತಿಂಗಳು ಮಾತ್ರ ಬಾಕಿ
  • ಕೆ.ಎಲ್​ ರಾಹುಲ್​ ಬೆನ್ನಲ್ಲೇ ಸ್ಟಾರ್​ ಆಟಗಾರನಿಗೆ ಮಾಸ್ಟರ್​ ಸ್ಟ್ರೋಕ್

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೆ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಈ ಮೆಗಾ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಶುರುವಾಗಿವೆ. ಇನ್ನೂ 3 ದಿನದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಎಲ್ಲಾ ತಂಡಗಳು ಪ್ರಕಟಿಸಬೇಕು ಎಂದು ಐಸಿಸಿ ಗಡುವು ನೀಡಿದೆ.

ಇನ್ನು, ಬಿಸಿಸಿಐ ಕೂಡ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಬೇಕಿದೆ. ಇದರ ಭಾಗವಾಗಿ ಶನಿವಾರ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಸಭೆ ನಡೆಸಲಿದೆ. ಟೀಮ್​ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಸಾಕಷ್ಟು ಆಟಗಾರರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮುಖ್ಯ ಕೋಚ್​ ಗಂಭೀರ್​​ ಕೃಪೆ ಯಾರ ಮೇಲಿದೆ? ಅನ್ನೋ ಚರ್ಚೆ ಶುರುವಾಗಿದೆ.

ಪ್ಲೇಯಿಂಗ್​​ ಎಲೆವೆನ್​ ಆಯ್ಕೆ ಸವಾಲ್​​

ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ಲೇಯಿಂಗ್​​ ಎಲೆವೆನ್ ಆಯ್ಕೆ ಮಾಡೋದು ಅಷ್ಟು ಸುಲಭವಲ್ಲ. ಇದಕ್ಕಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಮತ್ತು ಗೌತಮ್ ಗಂಭೀರ್ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.

ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಹೊರತಾಗಿ ಮತ್ಯಾರಿಗೂ ಟೀಮ್​ ಇಂಡಿಯಾದಲ್ಲಿ ಸ್ಥಾನ ಖಾತ್ರಿಯಿಲ್ಲ. ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಚಾಂಪಿಯನ್ಸ್​​ ಟ್ರೋಫಿ ಆಡೋದು ಡೌಟ್​ ಆಗಿದೆ.

ಜಡೇಜಾಗೆ ಕೊಕ್​

ರವೀಂದ್ರ ಜಡೇಜಾ ಸೀಮಿತ ಓವರ್​ಗಳಲ್ಲಿ ಚಾರ್ಮ್ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಅಕ್ಷರ್‌ ಪಟೇಲ್‌ ಮೇಲೆ ಗಮನ ಹರಿಸಿದೆ. ಏಕದಿನ ಪಂದ್ಯಗಳಲ್ಲಿ ಅಕ್ಷರ್‌ ಪರಿಣಾಮಕಾರಿ ಆಟ ಆಡಬಲ್ಲರು. ಜಡೇಜಾ ಸ್ಥಾನವನ್ನು ತುಂಬಬಲ್ಲ ಆಟಗಾರ ಅಕ್ಷರ್​ ಪಟೇಲ್​​. ಇವರು ಕೇವಲ ಬೌಲಿಂಗ್​ ಮಾತ್ರವಲ್ಲ ಬ್ಯಾಟಿಂಗ್​​ನಲ್ಲೂ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡಿಗನಿಗೆ ಬಿಸಿಸಿಐ ಬಿಗ್​ ಶಾಕ್​​; ಮೆಗಾ ಟೂರ್ನಿಯಿಂದ ಕೆ.ಎಲ್​ ರಾಹುಲ್​ ಔಟ್​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment