ನ್ಯೂಜಿಲೆಂಡ್​​ ವಿರುದ್ಧ ರೋಚಕ ಜಯ; ಭಾರತದ ಗೆಲುವಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಂ ಇಂಡಿಯಾದ ಸ್ಟಾರ್ ಓಪನರ್ ನಿವೃತ್ತಿ..
Advertisment
  • ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯ
  • ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಗೆದ್ದ ಟೀಮ್​ ಇಂಡಿಯಾ!
  • ಭಾರತ ತಂಡ ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್​ ರೋಹಿತ್ ಏನಂದ್ರು?

ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ನಾಕೌಟ್​ ಹಂತದ ಕೊನೆಯ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​ ವಿರುದ್ಧ 44 ರನ್​ಗಳಿಂದ ಜಯ ಸಾಧಿಸಿದೆ.

ಇನ್ನು, ಭಾರತ ತಂಡ ಗೆದ್ದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದರು. ನ್ಯೂಜಿಲೆಂಡ್​ ವಿರುದ್ಧ ಗೆದ್ದಿರುವುದು ಬಹಳ ಖುಷಿ ತಂದಿದೆ. ಇದೇ ರೀತಿ ಸೆಮಿಫೈನಲ್​​ನಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದರು.

ಕ್ಯಾಪ್ಟನ್​ ರೋಹಿತ್​ ಏನಂದ್ರು?

ನಾಕೌಟ್​ ಪಂದ್ಯವನ್ನು ಗೆಲುವಿನೊಂದಿಗೆ ಫಿನಿಶ್​ ಮಾಡಿದ್ದು ಒಳ್ಳೆಯದು ಆಯ್ತು. ನ್ಯೂಜಿಲೆಂಡ್​​ ಬಲಿಷ್ಠ ಕ್ರಿಕೆಟ್​ ತಂಡ. ಎಲ್ಲಾ ರೀತಿಯಲ್ಲೂ ನ್ಯೂಜಿಲೆಂಡ್​​ ಸಖತ್​ ಸ್ಟ್ರಾಂಗ್​​. ಉತ್ತಮ ಫಲಿತಾಂಶ ಸಿಗೋದು ಬಹಳ ಮುಖ್ಯ. ನಾವು ಪರ್ಫೆಕ್ಟ್​ ಗೇಮ್​ ಆಡಿದ್ದೇವೆ ಎಂದರು ರೋಹಿತ್​.

ನಮ್ಮ ಬೌಲಿಂಗ್​ ವಿಭಾಗ ತುಂಬಾ ಸ್ಟ್ರಾಂಗ್​ ಇದೆ. ಚಕ್ರವರ್ತಿ ತುಂಬಾ ಕ್ವಾಲಿಟಿ ಬೌಲರ್. ಮುಂದಿನ ಪಂದ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಎಲ್ಲಾ ಪಂದ್ಯಗಳನ್ನು ಸೀರಿಯಸ್​ ಆಗಿ ತೆಗೆದುಕೊಳ್ಳುತ್ತೇವೆ. ಒಳ್ಳೆಯ ತಂಡವು ಇದೆ. ಆಸ್ಟ್ರೇಲಿಯಾ ವಿರುದ್ಧ ಆಡಲು ಎದುರು ನೋಡುತ್ತಿದ್ದೇವೆ. ಅಂದು ಹೇಗೆ ಗೆಲ್ಲಬೇಕು ಎಂದು ಪ್ಲಾನ್​ ಮಾಡುತ್ತೇವೆ ಎಂದರು.

ಇದನ್ನೂ ಓದಿ:ನ್ಯೂಜಿಲೆಂಡ್​ ವಿರುದ್ಧ ಗೆದ್ದು ಬೀಗಿದ ಭಾರತ ತಂಡ; ಸೆಮಿಫೈನಲ್​ ಗೆಲ್ಲೋಕೆ ಪ್ಲಾನ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment