/newsfirstlive-kannada/media/post_attachments/wp-content/uploads/2024/07/Rohit_sharma.jpg)
ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ. ಇವರು ಇತ್ತೀಚೆಗೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಕಟಕ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ರೋಹಿತ್ ಶರ್ಮಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಈ ಹೊತ್ತಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಾರ್ಮ್ಗೆ ಬಂದಿದ್ದಾರೆ. ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್ನಿಂದ 90 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಹಾಯದಿಂದ 119 ರನ್ ಚಚ್ಚಿದ್ರು. ಇದು ಇವರ ವೃತ್ತಿ ಜೀವನದ 32ನೇ ಶತಕ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ಬಗ್ಗೆ ಏನಂದ್ರು?
ಪಂದ್ಯ ಮುಗಿದ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ನನ್ನ ಬ್ಯಾಟಿಂಗ್ ಬಗ್ಗೆ ನನಗೆ ಖುಷಿ ಇದೆ. ನಿಜಕ್ಕೂ ತಂಡಕ್ಕಾಗಿ ರನ್ ಕಲೆ ಹಾಕುವುದು ಖುಷಿಯ ವಿಚಾರ. ನಾವು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ ಇದ್ದೆವು. ನಮಗೆ ಈ ಪಂದ್ಯ ಮಹತ್ವದಾಗಿತ್ತು ಎಂದರು.
ನಾನು ವಿಭಿನ್ನ ರೀತಿಯ ಬ್ಯಾಟಿಂಗ್ ಅಭ್ಯಾಸ ನಡೆಸಿದೆ. ಪಂದ್ಯವನ್ನು ಟಿ20ಗಿಂತ ದೊಡ್ಡದು, ಟೆಸ್ಟ್ಗಿಂತ ಚಿಕ್ಕದು ಎಂದು ಬ್ಯಾಟಿಂಗ್ ಮಾಡಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕ್ರೀಸ್ನಲ್ಲಿ ನಿಲ್ಲುವುದೇ ನನ್ನ ಗುರಿ ಆಗಿತ್ತು ಎಂದರು.
ಮಿಡ್ಲ್ ಓವರ್ಗಳಲ್ಲಿ ಬ್ಯಾಟಿಂಗ್ ಮಾಡುವುದು ಕೊಂಚ ಕಷ್ಟ. ನಾವು ಚೂರು ಯಾಮಾರಿದ್ರೂ ವಿಕೆಟ್ಗಳು ಬೀಳುತ್ತಿದ್ದವು. ಒಂದು ವೇಳೆ ಮಿಡ್ಲ್ ಓವರ್ನಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡರೆ ಸಾಕು ಪಂದ್ಯ ಗೆಲ್ಲಬಹುದು. ಇದು ನನ್ನ ಗೆಲುವಲ್ಲ, ಇಡೀ ತಂಡದ ಗೆಲುವು. ಭಾರತದ ಗೆಲುವಿಗೆ ಎಲ್ಲರೂ ಕಾರಣಕರ್ತರು ಎಂದರು.
ಇದನ್ನೂ ಓದಿ:RCB ಮಾಜಿ ಪ್ಲೇಯರ್ ಇಂದ ವರುಣ್ ಚಕ್ರವರ್ತಿ ಲಕ್ ಬದಲಾಯಿತಾ.. ಹೇಗೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ