/newsfirstlive-kannada/media/post_attachments/wp-content/uploads/2025/02/ROHIT-SHARMA-2.jpg)
ಇಂಗ್ಲೆಂಡ್ ವಿರುದ್ಧ ಕ್ಲೀನ್ಸ್ವೀಪ್ ವಿಜಯ ಸಾಧಿಸಿದ ಟೀಮ್ ಇಂಡಿಯಾ ಇದೀಗ ಚಾಂಪಿಯನ್ ಕಿರೀಟದ ಮೇಲೆ ಕಣ್ಣಿಟ್ಟಿದೆ. ಟ್ರೋಫಿ ಗೆದ್ದು ಬೀಗಲು ಟೀಮ್ ಇಂಡಿಯಾ ಸಮರಾಭ್ಯಾಸ ಅರಬ್ ನಾಡಲ್ಲಿ ಆರಂಭವಾಗಿದೆ.
ಪ್ರತಿಷ್ಟಿತ ಐಸಿಸಿ ಚಾಂಪಿಯನ್ ಟ್ರೋಫಿಗೆ ಕೌಂಟ್ಡೌನ್ ಶುರುವಾಗಿದೆ. ನಾಳೆಯಿಂದ ಪ್ರತಿಷ್ಟೆಯ ಸಮರಕ್ಕೆ ಕಿಕ್ ಸ್ಟಾರ್ಟ್ ಸಿಗಲಿದೆ. ಗುರುವಾರ ನಡೆಯೋ ಬಾಂಗ್ಲಾದೇಶ ಎದುರಿನ ಕದನದೊಂದಿಗೆ ಟೀಮ್ ಇಂಡಿಯಾದ ಅಭಿಯಾನ ಆರಂಭವಾಗಲಿದೆ. ಟ್ರೋಫಿ ಗೆಲ್ಲೋ ಕನಸಿನೊಂದಿಗೆ ಈಗಾಗಲೇ ದುಬೈ ತಲುಪಿರೋ ರೋಹಿತ್ ಪಡೆ ಭರ್ಜರಿ ಸಮರಾಭ್ಯಾಸ ನಡೆಸಿದೆ. ಆ ಮೂಲಕ ಎದುರಾಳಿಗಳಿಗೆ ಬಿಗ್ ಮೆಸೇಜ್ ಕಳುಹಿಸಿದೆ ಭಾರತ ತಂಡ.
ಟೀಮ್ ಇಂಡಿಯಾ ಸಮರಾಭ್ಯಾಸ
ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಮ್ ಇಂಡಿಯಾದ ಸಮರಾಭ್ಯಾಸ ಶುರುವಾಗಿದೆ. ಆರಂಭದಲ್ಲಿ ವಾರ್ಮ್ ಅಪ್ ಮಾಡಿದ ರೋಹಿತ್ ಪಡೆ ಕೆಲ ಕಾಲ ಫುಟ್ಬಾಲ್ ಆಡಿದೆ. ಆ ಬಳಿಕ ಫನ್ನಿ ಫೀಲ್ಡಿಂಗ್ ಸೆಷನ್ನೊಂದಿಗೆ ಅಸಲಿ ಅಭ್ಯಾಸ ಆರಂಭವಾಯ್ತು. ಬಳಿಕ ಪ್ಯಾಡ್ ಕಟ್ಟಿ ಕಣಕ್ಕಿಳಿದ ಇಂಡಿಯನ್ ಸ್ಟಾರ್ಸ್ ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಅಭ್ಯಾಸ ಅಖಾಡದಲ್ಲಿ ಬೆವರಿಳಿಸಿದ್ದಾರೆ.
ಇದನ್ನೂ ಓದಿ: ನಿಮಗೆ ನಾಚಿಕೆ ಆಗಬೇಕು.. ಹುಷಾರ್! ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ
ವೇಗಿಗಳ ಎಸೆತಗಳನ್ನ ರೋಹಿತ್ ಶರ್ಮಾ ಹೆಚ್ಚು ಎದುರಿಸಿದ್ರೆ, ಪ್ರಿನ್ಸ್ ಶುಭ್ಮನ್ ಗಿಲ್ಗೆ ಕಿಂಗ್ ಕೊಹ್ಲಿ ಬ್ಯಾಟಿಂಗ್ ಪಾಠ ಮಾಡಿದ್ದಾರೆ. ಕೊಹ್ಲಿ ಕೂಡ ಗಂಟೆಗೂ ಅಧಿಕ ಕಾಲ ಬ್ಯಾಟ್ ಹಿಡಿದು ಅಭ್ಯಾಸ ನಡೆಸಿದ್ದಾರೆ. ವೇಗಿಗಳಾದ ಆರ್ಷ್ದೀಪ್ ಸಿಂಗ್, ಮೊಹಮ್ಮದ್ ಶಮಿ ಸತತವಾಗಿ ಬೌಲಿಂಗ್ ಮಾಡಿದ್ದಾರೆ. ಸ್ಪಿನ್ನರ್ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ವರುಣ್ ಚಕ್ರವರ್ತಿ ನೆಟ್ಸ್ನಲ್ಲಿ ಬ್ಯಾಟ್ಸ್ಮನ್ಗಳನ್ನ ಟ್ರಬಲ್ ಮಾಡಿದ್ದಾರೆ.
ಇಂಜುರಿಗೆ ತುತ್ತಾದ ಪಂತ್..
ಮೊದಲ ದಿನದ ಅಭ್ಯಾಸದಲ್ಲೇ ಟೀಮ್ ಇಂಡಿಯಾಗೆ ಆಘಾತವು ಎದುರಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಇಂಜುರಿಗೆ ತುತ್ತಾಗಿದ್ದಾರೆ. ಹಾರ್ದಿಕ್ ಪವರ್ಫುಲ್ ಹಿಟ್ ಮಾಡಿದ್ರು. ಆ ಚೆಂಡು ನೇರವಾಗಿ ಬಂದು ಪಂತ್ ಮೊಣಕಾಲಿಗೆ ಬಡಿದಿದೆ. ದಿಢೀರ್ ಕುಸಿದ ಪಂತ್, ನೋವಲ್ಲಿ ಕೆಲ ಕಾಲ ಒದ್ದಾಡಿದ್ರು.
ಒಟ್ಟಿನಲ್ಲಿ, ದುಬೈ ತಲುಪಿದ ಬಳಿಕ ನಡೆಸಿದ ಮೊದಲ ಅಭ್ಯಾಸದ ಸೆಷನ್ನಲ್ಲಿ ಟೀಮ್ ಇಂಡಿಯಾ ಆಟಗಾರರು, ಭರ್ಜರಿ ಅಭ್ಯಾಸ ನಡೆಸಿ ಸಮರಕ್ಕೆ ಸಿದ್ಧವಾಗಿದ್ದಾರೆ. ಆಟಗಾರರ ಅಭ್ಯಾಸ ಮ್ಯಾನೇಜ್ಮೆಂಟ್ಗೆ ಸಮಾಧಾನ ತರಿಸಿದ್ರೆ, ಪಂತ್ ಇಂಜುರಿ ಟೆನ್ಶನ್ಗೆ ಕಾರಣವಾಗಿದೆ. ಸರ್ಜರಿಯಾಗಿದ್ದ ಮೊಣಕಾಲಿಗೇ ಬಾಲ್ ಬಡಿದಿದ್ದು, ಅಭ್ಯಾಸದ ಬಳಿಕವೂ ಕುಂಟುತ್ತಲೇ ಪಂತ್ ಟೀಮ್ ಬಸ್ ಹತ್ತಿದ್ದಾರೆ. ಹೀಗಾಗಿ ಮೊದಲ ಪಂದ್ಯದ ಸೆಲೆಕ್ಷನ್ಗೆ ಲಭ್ಯ ಇರೋದು ಬಹುತೇಕ ಅನುಮಾನವೇ.
ಇದನ್ನೂ ಓದಿ: ಬೆಂಗಳೂರಲ್ಲಿ ಹೆಂಗೆಲ್ಲ ಸೈಬರ್ ವಂಚನೆ ಆಗ್ತಿದೆ? ‘ಡಾರ್ಲಿಂಗ್ ಡೆವಿಡ್’ನ ಕೋಟಿ ವಂಚನೆ ಕತೆ ಹೇಳಿ ಎಚ್ಚರಿಸಿದ ಅಧಿಕಾರಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್