ಬಿಸಿಸಿಐನಿಂದ ಬಿಗ್​ ಶಾಕ್​​; ಟೀಮ್​​ ಇಂಡಿಯಾದಿಂದಲೇ ಹೊರಬಿದ್ದ ರವೀಂದ್ರ ಜಡೇಜಾ

author-image
Ganesh Nachikethu
Updated On
ವಿಶ್ವಕಪ್​ನಲ್ಲಿ ಜಡೇಜಾ, ಚಹಾಲ್ ಜೊತೆ ಯಾವ್ಯಾವ ಸ್ಪಿನ್ ಮಾಂತ್ರಿಕರಿಗೆ ಸ್ಥಾನ..? ಅಶ್ವಿನ್​ ಕಥೆ ಮುಗಿಯಿತಾ..?
Advertisment
  • ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯನ್ನು ಗೆದ್ದ ಟೀಮ್​ ಇಂಡಿಯಾ
  • ಫೆಬ್ರವರಿ 6 ರಿಂದ ಇಂಗ್ಲೆಂಡ್​​, ಭಾರತ ನಡುವಿನ ಏಕದಿನ ಸರಣಿ!
  • ಬಿಸಿಸಿಐನಿಂದ ಟೀಮ್​ ಇಂಡಿಯಾ ಆಟಗಾರನಿಗೆ ಬಿಗ್​ ಶಾಕ್​​

ಇತ್ತೀಚೆಗೆ ನಡೆದ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯನ್ನು ಟೀಮ್​ ಇಂಡಿಯಾ 4-1 ಅಂತರದಿಂದ ಗೆದ್ದು ಬೀಗಿದೆ. ಈಗ ಟಿ20 ಸಿರೀಸ್​​ ಮುಗಿದಿದ್ದು, ಫೆಬ್ರವರಿ 6ನೇ ತಾರೀಕಿನಿಂದ ಏಕದಿನ ಸರಣಿ ಶುರುವಾಗಲಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಐದು ವರ್ಷಗಳ ನಂತರ ನಾಗ್ಪುರ ಮೈದಾನದಲ್ಲಿ ಟೀಮ್ ಇಂಡಿಯಾ ಏಕದಿನ ಪಂದ್ಯ ಆಡಲಿದೆ. ಏಕದಿನ ಸರಣಿ 2025ರ ಐಸಿಸಿ ಚಾಂಪಿಯನ್​​​ ಟ್ರೋಫಿಗೆ ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ ಟೀಮ್​ ಇಂಡಿಯಾ ಸ್ಟಾರ್​ ಆಟಗಾರನಿಗೆ ಶಾಕಿಂಗ್​ ನ್ಯೂಸ್​ ಒಂದು ಕಾದಿದೆ.

ಇನ್ನು, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ ಆಗಿದೆ. ಈ ತಂಡದಲ್ಲಿ ಸ್ಟಾರ್​ ಆಲ್​ರೌಂಡರ್​​ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್​​ ಪಟೇಲ್​​ ಇಬ್ಬರ ಹೆಸರು ಸೇರಿದೆ.

ಜಡೇಜಾಗೆ ಕೊಕ್​​

ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಆಪ್ತ ರವೀಂದ್ರ ಜಡೇಜಾ ಅವರಿಗೆ ಚಾನ್ಸ್​​ ಸಿಗೋದು ಡೌಟ್​​. ಕಾರಣ ಇವರ ಬದಲಿಗೆ ಸ್ಟಾರ್​ ಆಲ್​ರೌಂಡರ್​​ ಅಕ್ಷರ್​ ಪಟೇಲ್​ ಅವರನ್ನು ಪ್ಲೇಯಿಂಗ್​ ಎಲೆವೆನ್​​ನಲ್ಲಿ ಆಡಿಸಲಾಗುತ್ತದೆ.

ಭಾರತದ ತಂಡದ ಎಲ್ಲಾ ಆಟಗಾರರ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಸ್ಟಾರ್ ಬ್ಯಾಟರ್‌ಗಳು ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲಿ ಇದುವರೆಗೆ ಛಾಪು ಮೂಡಿಸದ ವಿಕೆಟ್‌ ಕೀಪರ್-ಬ್ಯಾಟರ್ ರಿಷಬ್​ ಪಂತ್​ ಮೇಲೂ ಬಿಸಿಸಿಐ ಚಿತ್ತ ನೆಟ್ಟಿದೆ.

ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.

ಇದನ್ನೂ ಓದಿ:ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​​; ಬಿಗ್​ ಅಪ್ಡೇಟ್​ ಕೊಟ್ಟ ಮ್ಯಾನೇಜ್ಮೆಂಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment