ಕಮರಿ ಹೋಯಿತು ಆಟಗಾರರ ಟಿ20 ವಿಶ್ವಕಪ್ ಆಡೋ ಕನಸು
ವಿಶ್ವಕಪ್ ತಂಡದಲ್ಲಿ ಸ್ಥಾನವಿಲ್ಲ ಅನ್ನೋದು ಈಗ ಕನ್ಫರ್ಮ್
ಈ ಸ್ಟಾರ್ ಆಟಗಾರರ ಕ್ರಿಕೆಟ್ ಕರಿಯರ್ ಮುಗಿಯಿತಾ..?
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಬಹಳ ದಿನಗಳ ಬಳಿಕ ಟಿ20 ಕ್ರಿಕೆಟ್ಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಇದರ ಜತೆಗೆ ಹಲವು ಗೊಂದಲಗಳಿದ್ದೂ, ಟೀಮ್ ಇಂಡಿಯಾದ ಈ ಕ್ರಿಕೆಟಿಗರ ಟಿ20 ಕರಿಯರ್ ಮುಗೀತಾ? ಅನ್ನೋ ಚರ್ಚೆ ಶುರುವಾಗಿದೆ.
ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ಗೆ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜತೆ ಮೀಟಿಂಗ್ ನಡೆಸಿದ ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಸೆಲೆಕ್ಷನ್ ಕಮಿಟಿ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಲಿದೆ. ತಂಡದದಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರಿಗೆ ಚಾನ್ಸ್ ಸಿಗೋದು ಡೌಟ್ ಆಗಿದ್ದು, ಇವರ ಕ್ರಿಕೆಟ್ ಜೀವನದ ಕಥೆ ಅಡಕತ್ತರಿಗೆ ಸಿಲುಕಿದೆ.
ಶಿಖರ್ ಧವನ್ ಕರಿಯರ್ಗೆ ಫುಲ್ ಸ್ಟಾಫ್.?
ರೇಸ್ನಲ್ಲಿ ಮುಂಚೂಣಿಯಲ್ಲಿರಲಿಲ್ಲ. ಹಾಗಿದ್ರೂ, ಧವನ್ ಸ್ಥಾನ ಸಿಗಬಹುದು ಅನ್ನೋ ಟಾಕ್ ಸಣ್ಣಮಟ್ಟಿಗೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಲಿದೆ. ಇದರೊಂದಿಗೆ ಶಿಖರ್ ಧವನ್ ಕರಿಯರ್ಗೂ ಬಹುತೇಕ ಫುಲ್ಸ್ಟಾಫ್ ಬಿದ್ದಂತಾಗಿದೆ.
ಯುಜುವೇಂದ್ರ ಚಹಲ್ ಭವಿಷ್ಯ ಅತಂತ್ರ.!
ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್ನಲ್ಲಿ ಕುಲ್ದೀಪ್ ಯಾದವ್, ಸ್ಪಿನ್ನರ್ ಯುಜುವೇಂದ್ರ ಚಹಲ್ರನ್ನ ಓವರ್ಟೇಕ್ ಮಾಡಲಿದ್ದಾರೆ. ಇದ್ರೊಂದಿಗೆ ಚಹಲ್ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ನಿಜ ಹೇಳಬೇಕು ಅಂದ್ರೆ, ವೈಟ್ಬಾಲ್ ಸ್ಪೆಷಲಿಸ್ಟ್ ಅನ್ನೋ ಟ್ಯಾಗ್ ಲೈನ್ ಇದ್ರೂ, ಫೀಲ್ಡಿಂಗ್, ಬ್ಯಾಟಿಂಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸ್ತಾ ಇರೋ ಚಹಲ್ ಕರಿಯರ್ ಅಡಕತ್ತರಿಗೆ ಸಿಲುಕಿದೆ.
ಅಶ್ವಿನ್ ಪಾಲಿಗೆ ಟಿ20 ಡೋರ್ ಕ್ಲೋಸ್.?
ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗೋದು ಡೌಟ್ ಎನ್ನಲಾಗಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿದ್ದು, ಬಹುತೇಕ ಟಿ20 ಕರಿಯರ್ ಅಂತ್ಯ ಕಂಡಂತಾಗಿದೆ.
ಭುವನೇಶ್ವರ್ ಕುಮಾರ್ ಕರಿಯರ್ ಖತಂ.?
ಕಳೆದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಿಂದ ಮರೆಯಾಗಿರುವ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ಕಮ್ಬ್ಯಾಕ್ ಮಾಡಲು ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಭುವನೇಶ್ವರ್ ಕುಮಾರ್ರನ್ನ ಬಿಟ್ಟು ಮುಂದೆ ಸಾಗಿದಂತಿದೆ. ಇದೀಗ ಟಿ20 ವಿಶ್ವಕಪ್ಗೆ ಭುವಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗೋದು ಡೌಟ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕಮರಿ ಹೋಯಿತು ಆಟಗಾರರ ಟಿ20 ವಿಶ್ವಕಪ್ ಆಡೋ ಕನಸು
ವಿಶ್ವಕಪ್ ತಂಡದಲ್ಲಿ ಸ್ಥಾನವಿಲ್ಲ ಅನ್ನೋದು ಈಗ ಕನ್ಫರ್ಮ್
ಈ ಸ್ಟಾರ್ ಆಟಗಾರರ ಕ್ರಿಕೆಟ್ ಕರಿಯರ್ ಮುಗಿಯಿತಾ..?
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಬಹಳ ದಿನಗಳ ಬಳಿಕ ಟಿ20 ಕ್ರಿಕೆಟ್ಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಇದರ ಜತೆಗೆ ಹಲವು ಗೊಂದಲಗಳಿದ್ದೂ, ಟೀಮ್ ಇಂಡಿಯಾದ ಈ ಕ್ರಿಕೆಟಿಗರ ಟಿ20 ಕರಿಯರ್ ಮುಗೀತಾ? ಅನ್ನೋ ಚರ್ಚೆ ಶುರುವಾಗಿದೆ.
ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ಗೆ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಲಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜತೆ ಮೀಟಿಂಗ್ ನಡೆಸಿದ ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಸೆಲೆಕ್ಷನ್ ಕಮಿಟಿ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಲಿದೆ. ತಂಡದದಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರಿಗೆ ಚಾನ್ಸ್ ಸಿಗೋದು ಡೌಟ್ ಆಗಿದ್ದು, ಇವರ ಕ್ರಿಕೆಟ್ ಜೀವನದ ಕಥೆ ಅಡಕತ್ತರಿಗೆ ಸಿಲುಕಿದೆ.
ಶಿಖರ್ ಧವನ್ ಕರಿಯರ್ಗೆ ಫುಲ್ ಸ್ಟಾಫ್.?
ರೇಸ್ನಲ್ಲಿ ಮುಂಚೂಣಿಯಲ್ಲಿರಲಿಲ್ಲ. ಹಾಗಿದ್ರೂ, ಧವನ್ ಸ್ಥಾನ ಸಿಗಬಹುದು ಅನ್ನೋ ಟಾಕ್ ಸಣ್ಣಮಟ್ಟಿಗೆ ಇತ್ತು. ಆದ್ರೆ, ಆ ನಿರೀಕ್ಷೆ ಹುಸಿಯಾಗಲಿದೆ. ಇದರೊಂದಿಗೆ ಶಿಖರ್ ಧವನ್ ಕರಿಯರ್ಗೂ ಬಹುತೇಕ ಫುಲ್ಸ್ಟಾಫ್ ಬಿದ್ದಂತಾಗಿದೆ.
ಯುಜುವೇಂದ್ರ ಚಹಲ್ ಭವಿಷ್ಯ ಅತಂತ್ರ.!
ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್ನಲ್ಲಿ ಕುಲ್ದೀಪ್ ಯಾದವ್, ಸ್ಪಿನ್ನರ್ ಯುಜುವೇಂದ್ರ ಚಹಲ್ರನ್ನ ಓವರ್ಟೇಕ್ ಮಾಡಲಿದ್ದಾರೆ. ಇದ್ರೊಂದಿಗೆ ಚಹಲ್ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ನಿಜ ಹೇಳಬೇಕು ಅಂದ್ರೆ, ವೈಟ್ಬಾಲ್ ಸ್ಪೆಷಲಿಸ್ಟ್ ಅನ್ನೋ ಟ್ಯಾಗ್ ಲೈನ್ ಇದ್ರೂ, ಫೀಲ್ಡಿಂಗ್, ಬ್ಯಾಟಿಂಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸ್ತಾ ಇರೋ ಚಹಲ್ ಕರಿಯರ್ ಅಡಕತ್ತರಿಗೆ ಸಿಲುಕಿದೆ.
ಅಶ್ವಿನ್ ಪಾಲಿಗೆ ಟಿ20 ಡೋರ್ ಕ್ಲೋಸ್.?
ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗೋದು ಡೌಟ್ ಎನ್ನಲಾಗಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿದ್ದು, ಬಹುತೇಕ ಟಿ20 ಕರಿಯರ್ ಅಂತ್ಯ ಕಂಡಂತಾಗಿದೆ.
ಭುವನೇಶ್ವರ್ ಕುಮಾರ್ ಕರಿಯರ್ ಖತಂ.?
ಕಳೆದ ನ್ಯೂಜಿಲೆಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾದಿಂದ ಮರೆಯಾಗಿರುವ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ಕಮ್ಬ್ಯಾಕ್ ಮಾಡಲು ಕಸರತ್ತು ನಡೆಸ್ತಿದ್ದಾರೆ. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಭುವನೇಶ್ವರ್ ಕುಮಾರ್ರನ್ನ ಬಿಟ್ಟು ಮುಂದೆ ಸಾಗಿದಂತಿದೆ. ಇದೀಗ ಟಿ20 ವಿಶ್ವಕಪ್ಗೆ ಭುವಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗೋದು ಡೌಟ್.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ