/newsfirstlive-kannada/media/post_attachments/wp-content/uploads/2024/11/KL-Rahul-Test-Batting.jpg)
ಟೀಮ್ ಇಂಡಿಯಾ ಮತ್ತು ಆಸ್ಟೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯ ಪರ್ತ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆಸೀಸ್ ಭಯಾನಕ ವೇಗದ ಬೌಲಿಂಗಿಗೆ ತತ್ತರಿಸಿದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ಗೆ ಆಲೌಟ್ ಆಯ್ತು. ಈ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕ್ಯಾಪ್ಟನ್ ಬುಮ್ರಾ, ಸಿರಾಜ್, ಹರ್ಷಿತ್ ರಾಣಾ ಬೌಲಿಂಗ್ ಮಾರಕ ದಾಳಿಗೆ ತತ್ತರಿಸಿತು. ಕೇವಲ 104 ರನ್ಗೆ ಆಲೌಟ್ ಆಯ್ತು.
ಮೊದಲ ಇನ್ನಿಂಗ್ಸ್ನಲ್ಲಿ ಅಂಪೈರ್ ತಪ್ಪು ನಿರ್ಧಾರದಿಂದ ಕೆ.ಎಲ್ ರಾಹುಲ್ ವಿಕೆಟ್ ಒಪ್ಪಿಸಬೇಕಾಯ್ತು. ಪಂದ್ಯದ 23ನೇ ಓವರ್ ಮಿಚೆಲ್ ಸ್ಟಾರ್ಕ್ ಎಸೆಯುತ್ತಿದ್ರು. ಆಫ್ ಸ್ಟಂಪ್ ಕಡೆಗೆ ಬಿದ್ದ ಬಾಲ್ ಅನ್ನು ರಾಹುಲ್ ಡಿಫೆನ್ಸ್ ಮಾಡಲು ಹೋದ್ರು. ಆದರೆ, ಬ್ಯಾಟಿಗೆ ತಗುಲದೇ ಬಾಲ್ ವಿಕೆಟ್ ಕೀಪರ್ ಕಡೆಗೆ ಹೋಯಿತು. ಸ್ಟಾರ್ಕ್ ಅಪೀಲ್ ಮಾಡಿದ್ರು. ಮೂರನೇ ಅಂಪೈರ್ ಎಲ್ಲಾ ಆ್ಯಂಗಲ್ ಕ್ಯಾಮರಾ ನೋಡದೆ ಔಟ್ ಎಂದು ತೀರ್ಪು ಕೊಟ್ರು.
ಅನ್ಯಾಯಕ್ಕೆ ಸೇಡು ತೀರಿಸಿಕೊಂಡ ಕೆ.ಎಲ್ ರಾಹುಲ್
ತನಗಾದ ಅನ್ಯಾಯಕ್ಕೆ ಕೆ.ಎಲ್ ರಾಹುಲ್ ಸೇಡು ತೀರಿಸಿಕೊಂಡಿದ್ದಾರೆ. 2ನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಓಪನರ್ ಆಗಿ ಬಂದ ಕೆ.ಎಲ್ ರಾಹುಲ್ ಕಲ್ಲು ಬಂಡೆಯಂತೆ ನಿಂತು ಆಡಿದ್ರು. ತಾಳ್ಮೆಯಿಂದಲೇ ಬ್ಯಾಟ್ ಬೀಸಿದ ರಾಹುಲ್ ಅವರು, 124 ಬಾಲ್ನಲ್ಲಿ 50 ರನ್ ಚಚ್ಚಿದ್ರು. ಈ ಪೈಕಿ 4 ಬೌಂಡರಿಗಳು ಸೇರಿವೆ. ಇವರಿಗೆ ಯಶಸ್ವಿ ಜೈಸ್ವಾಲ್ ಸಾಥ್ ಕೊಟ್ಟರು.
ಇದನ್ನೂ ಓದಿ: RCB ಸೇರಲು ದಿನೇಶ್ ಕಾರ್ತಿಕ್ಗೆ ಕಾಲ್ ಮಾಡಿದ್ದ ಸ್ಟಾರ್ ಆಟಗಾರರು; ಸತ್ಯ ಬಿಚ್ಚಿಟ್ಟ ಕೋಚ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ