ಇಂಡೋ-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯ
‘ರನ್ಭೂಮಿ’ಯಲ್ಲಿ ಯುವರಾಜನ ದರ್ಬಾರ್
11 ತಿಂಗಳ ಸೆಂಚುರಿ ಕೊರಗಿಗೆ ಕೊನೆಗೂ ಬಿತ್ತು ಬ್ರೇಕ್
ಇಂಡೋ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾದ ಭವಿಷ್ಯದ ಕತೆಯನ್ನು ಹೇಳ್ತಿದೆ. ತಮ್ಮ ಆಟದಿಂದಲೇ ಯಂಗ್ಸ್ಟರ್ಸ್ ಸಂದೇಶ ರವಾನಿಸ್ತಿದ್ದಾರೆ. ಮೊನ್ನೆ ಯಶಸ್ವಿ ಜೈಸ್ವಾಲ್.. ನಿನ್ನೆ ಶುಭ್ಮನ್ ಗಿಲ್.. ಏನ್ ಬ್ಯಾಟಿಂಗ್ ಅಂತೀರಾ. ವೈಜಾಗ್ನಲ್ಲಿ ಶುಭ್ಮನ್ ಸಾಲಿಡ್ ಬ್ಯಾಟಿಂಗ್ ಹೇಗಿತ್ತು?
ಇಂಡೋ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ಸ್ಟರ್ಗಳ ದರ್ಬಾರ್ ಜೋರಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಡಬಲ್ ಧಮಾಕಾ ಸೃಷ್ಟಿಸಿದ್ರು. ಆಂಗ್ಲರ ದಾಳಿಯನ್ನು ಬೆಂಡೆತ್ತಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು. ಇದೀಗ 2ನೇ ಇನ್ನಿಂಗ್ಸ್ನಲ್ಲಿ ಸೂಪರ್ ಸ್ಟಾರ್ ಶುಭ್ಮನ್ ಗಿಲ್ ಸಾಲಿಡ್ ಸೆಂಚುರಿ ಸಿಡಿಸಿದ್ದಾರೆ.
ವೈಜಾಗ್ ‘ರನ್ಭೂಮಿ’ಯಲ್ಲಿ ಯುವರಾಜನ ದರ್ಬಾರ್!
ವಿಶಾಖಪಟ್ಟಣಂ ಟೆಸ್ಟ್ನ 3ನೇ ದಿನದಾಟದಲ್ಲಿ ಯುವರಾಜನ ದರ್ಬಾರ್ ನಡೀತು. ರನ್ಭೂಮಿಯಲ್ಲಿ ಶುಭ್ಮನ್ ಗಿಲ್ ಇಂಗ್ಲೆಂಡ್ ಬೌಲಿಂಗ್ ಅಟ್ಯಾಕ್ ಅನ್ನು ಚಿಂದಿ ಉಡಾಯಿಸಿಬಿಟ್ರು. ಸುಲಭಕ್ಕೆ ವಿಕೆಟ್ ಕಬಳಿಸೋ ಲೆಕ್ಕಾಚಾರದಲ್ಲಿದ್ದ ಆಂಗ್ಲ ಬೌಲರ್ಗಳಿಗೆ ತನ್ನ ಬ್ಯಾಟ್ನಿಂದಲೇ ಮುಟ್ಟಿ ನೋಡುಕೊಳ್ಳುವಂತೆ ಆನ್ಸರ್ ಕೊಟ್ಟರು.
11 ತಿಂಗಳ ಸೆಂಚುರಿ ಕೊರಗಿಗೆ ಕೊನೆಗೂ ಬಿತ್ತು ಬ್ರೇಕ್
ನಿನ್ನೆ ಶತಕ ಸಿಡಿಸೋದಕ್ಕೂ ಮುನ್ನ ಶುಭ್ಮನ್ ಗಿಲ್ ಕಳಪೆ ಫಾರ್ಮ್ನ ಸುಳಿಗೆ ಸಿಲುಕಿದ್ರು. ಕಳೆದ ವರ್ಷ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ಎದುರು ಶತಕ ಸಿಡಿಸಿದ್ದೇ ಕೊನೆ. ಆ ಬಳಿಕ ಬರೋಬ್ಬರಿ 12 ಇನ್ನಿಂಗ್ಸ್ಗಳಲ್ಲಿ ಅರ್ಧಶತಕದ ಗಡಿಯನ್ನೂ ದಾಟಿರಲಿಲ್ಲ. ಹೀಗಾಗಿ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಇದೀಗ ಆ ಎಲ್ಲಾ ಟೀಕೆಗಳಿಗೆ ಇದೀಗ ಶುಭ್ಮನ್ ಗಿಲ್ ಖಡಕ್ ಆನ್ಸರ್ ಕೊಟ್ಟಿದ್ದಾರೆ. 11 ತಿಂಗಳ ಶತಕದ ಕೊರಗಿಗೆ ಗಿಲ್ ಕೊನೆಗೂ ಫುಲ್ ಸ್ಟಾಫ್ ಇಟ್ಟಿದ್ದಾರೆ.
ಅಗ್ನಿಪರೀಕ್ಷೆಯ ಕಣದಲ್ಲಿ ಶುಭ್ಮನ್ ಗೆದ್ದಿದ್ದೇಗೆ.?
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ವೈಫಲ್ಯದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಗಿಲ್ಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊನೆ ಚಾನ್ಸ್ ಎಂಬ ಖಡಕ್ ನಿರ್ಧಾರ ತಳೆದು ವೈಜಾಗ್ ಟೆಸ್ಟ್ನಲ್ಲಿ ಚಾನ್ಸ್ ನೀಡಿಲಾಗಿತ್ತು. ಆದ್ರೆ, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಗಿಲ್ ವೈಫಲ್ಯ ಅನುಭವಿಸಿದ್ರು. ಕೇವಲ 34 ರನ್ಗಳಿಗೆ ಆಟ ಮುಗಿಸಿದ್ರು. ಹೀಗಾಗಿ 2ನೇ ಇನ್ನಿಂಗ್ಸ್ ಗಿಲ್ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿತ್ತು. ಪರ್ಫಾಮ್ ಮಾಡಲೇಬಾದ ಒತ್ತಡಕ್ಕೆ ಸಿಲುಕಿದ್ದ ಗಿಲ್, 2ನೇ ದಿನದಾಟ ಮುಗಿದಿದ್ದೇ ಮುಗಿದಿದ್ದು ಅಭ್ಯಾಸದ ಕಣಕ್ಕೆ ಧುಮುಕಿದ್ರು. ಗಿಲ್ರ ಡೆಡಿಕೇಷನ್, ಹಾರ್ಡ್ ವರ್ಕ್ಗೆ ಫಲ ಸಿಕ್ಕೇ ಬಿಡ್ತು. 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ಗಿಲ್, 11 ಬೌಂಡರಿ, 2 ಸಿಕ್ಸರ್ ಸಿಡಿಸಿದ್ರು. 147 ಎಸೆತಗಳನ್ನ ದಿಟ್ಟವಾಗಿ ಎದುರಿಸಿ 104 ರನ್ ಸಿಡಿಸಿದ್ರು.
ಶುಭ್ಮನ್ ಶತಕ, ನಿಟ್ಟುಸಿರು ಬಿಟ್ಟ ಮ್ಯಾನೇಜ್ಮೆಂಟ್
ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿ ಅನುಭವಿ ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಶುಭ್ಮನ್ರನ್ನ ಟೀಮ್ ಮ್ಯಾನೇಜ್ಮೆಂಟ್ ಕಳೆದ ಕೆಲ ಪಂದ್ಯಗಳಿಂದ ಆಡಿಸ್ತಿದೆ. ಆದ್ರೆ, ಶುಭ್ಮನ್ ಸತತ ವೈಫಲ್ಯ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿತ್ತು. ಶುಭ್ಮನ್ ಶತಕ ಇದೀಗ ಮ್ಯಾನೇಜ್ಮೆಂಟ್ಗೆ ಬಿಗ್ ರಿಲೀಫ್ ನೀಡಿದೆ.
24 ವರ್ಷಕ್ಕೆ ಲೆಜೆಂಡ್ಗಳ ಸಾಲಿಗೆ ಸೇರೋ ಸೂಚನೆ
24 ವರ್ಷದ ಶುಭ್ಮನ್ ಗಿಲ್ ಇಂಟರ್ನ್ಯಾಷ್ನಲ್ ಕ್ರಿಕೆಟ್ನಲ್ಲಿ ಒಟ್ಟು 10 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶುಭ್ಮನ್ ಗಿಲ್ ಬಿಟ್ರೆ, ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಮಾತ್ರ ಭಾರತದ ಪರ ಈ ಸಾಧನೆ ಮಾಡಿರೋದು. ಈ ಸಾಧನೆ ಭವಿಷ್ಯದ ಭರವಸೆಯನ್ನ ಹೆಚ್ಚಿಸಿದೆ. ಒಟ್ಟಿನಲ್ಲಿ, ಒಂದೇ ಒಂದು ಶತಕದಿಂದ ಶುಭ್ಮನ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಂದೆಯೂ ಇದೇ ಫಾರ್ಮ್ನಲ್ಲಿ ಯಂಗ್ಸ್ಟರ್ ಆರ್ಭಟಿಸಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಡೋ-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯ
‘ರನ್ಭೂಮಿ’ಯಲ್ಲಿ ಯುವರಾಜನ ದರ್ಬಾರ್
11 ತಿಂಗಳ ಸೆಂಚುರಿ ಕೊರಗಿಗೆ ಕೊನೆಗೂ ಬಿತ್ತು ಬ್ರೇಕ್
ಇಂಡೋ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾದ ಭವಿಷ್ಯದ ಕತೆಯನ್ನು ಹೇಳ್ತಿದೆ. ತಮ್ಮ ಆಟದಿಂದಲೇ ಯಂಗ್ಸ್ಟರ್ಸ್ ಸಂದೇಶ ರವಾನಿಸ್ತಿದ್ದಾರೆ. ಮೊನ್ನೆ ಯಶಸ್ವಿ ಜೈಸ್ವಾಲ್.. ನಿನ್ನೆ ಶುಭ್ಮನ್ ಗಿಲ್.. ಏನ್ ಬ್ಯಾಟಿಂಗ್ ಅಂತೀರಾ. ವೈಜಾಗ್ನಲ್ಲಿ ಶುಭ್ಮನ್ ಸಾಲಿಡ್ ಬ್ಯಾಟಿಂಗ್ ಹೇಗಿತ್ತು?
ಇಂಡೋ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಂಗ್ಸ್ಟರ್ಗಳ ದರ್ಬಾರ್ ಜೋರಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಡಬಲ್ ಧಮಾಕಾ ಸೃಷ್ಟಿಸಿದ್ರು. ಆಂಗ್ಲರ ದಾಳಿಯನ್ನು ಬೆಂಡೆತ್ತಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು. ಇದೀಗ 2ನೇ ಇನ್ನಿಂಗ್ಸ್ನಲ್ಲಿ ಸೂಪರ್ ಸ್ಟಾರ್ ಶುಭ್ಮನ್ ಗಿಲ್ ಸಾಲಿಡ್ ಸೆಂಚುರಿ ಸಿಡಿಸಿದ್ದಾರೆ.
ವೈಜಾಗ್ ‘ರನ್ಭೂಮಿ’ಯಲ್ಲಿ ಯುವರಾಜನ ದರ್ಬಾರ್!
ವಿಶಾಖಪಟ್ಟಣಂ ಟೆಸ್ಟ್ನ 3ನೇ ದಿನದಾಟದಲ್ಲಿ ಯುವರಾಜನ ದರ್ಬಾರ್ ನಡೀತು. ರನ್ಭೂಮಿಯಲ್ಲಿ ಶುಭ್ಮನ್ ಗಿಲ್ ಇಂಗ್ಲೆಂಡ್ ಬೌಲಿಂಗ್ ಅಟ್ಯಾಕ್ ಅನ್ನು ಚಿಂದಿ ಉಡಾಯಿಸಿಬಿಟ್ರು. ಸುಲಭಕ್ಕೆ ವಿಕೆಟ್ ಕಬಳಿಸೋ ಲೆಕ್ಕಾಚಾರದಲ್ಲಿದ್ದ ಆಂಗ್ಲ ಬೌಲರ್ಗಳಿಗೆ ತನ್ನ ಬ್ಯಾಟ್ನಿಂದಲೇ ಮುಟ್ಟಿ ನೋಡುಕೊಳ್ಳುವಂತೆ ಆನ್ಸರ್ ಕೊಟ್ಟರು.
11 ತಿಂಗಳ ಸೆಂಚುರಿ ಕೊರಗಿಗೆ ಕೊನೆಗೂ ಬಿತ್ತು ಬ್ರೇಕ್
ನಿನ್ನೆ ಶತಕ ಸಿಡಿಸೋದಕ್ಕೂ ಮುನ್ನ ಶುಭ್ಮನ್ ಗಿಲ್ ಕಳಪೆ ಫಾರ್ಮ್ನ ಸುಳಿಗೆ ಸಿಲುಕಿದ್ರು. ಕಳೆದ ವರ್ಷ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ಎದುರು ಶತಕ ಸಿಡಿಸಿದ್ದೇ ಕೊನೆ. ಆ ಬಳಿಕ ಬರೋಬ್ಬರಿ 12 ಇನ್ನಿಂಗ್ಸ್ಗಳಲ್ಲಿ ಅರ್ಧಶತಕದ ಗಡಿಯನ್ನೂ ದಾಟಿರಲಿಲ್ಲ. ಹೀಗಾಗಿ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಇದೀಗ ಆ ಎಲ್ಲಾ ಟೀಕೆಗಳಿಗೆ ಇದೀಗ ಶುಭ್ಮನ್ ಗಿಲ್ ಖಡಕ್ ಆನ್ಸರ್ ಕೊಟ್ಟಿದ್ದಾರೆ. 11 ತಿಂಗಳ ಶತಕದ ಕೊರಗಿಗೆ ಗಿಲ್ ಕೊನೆಗೂ ಫುಲ್ ಸ್ಟಾಫ್ ಇಟ್ಟಿದ್ದಾರೆ.
ಅಗ್ನಿಪರೀಕ್ಷೆಯ ಕಣದಲ್ಲಿ ಶುಭ್ಮನ್ ಗೆದ್ದಿದ್ದೇಗೆ.?
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ವೈಫಲ್ಯದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಗಿಲ್ಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊನೆ ಚಾನ್ಸ್ ಎಂಬ ಖಡಕ್ ನಿರ್ಧಾರ ತಳೆದು ವೈಜಾಗ್ ಟೆಸ್ಟ್ನಲ್ಲಿ ಚಾನ್ಸ್ ನೀಡಿಲಾಗಿತ್ತು. ಆದ್ರೆ, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಗಿಲ್ ವೈಫಲ್ಯ ಅನುಭವಿಸಿದ್ರು. ಕೇವಲ 34 ರನ್ಗಳಿಗೆ ಆಟ ಮುಗಿಸಿದ್ರು. ಹೀಗಾಗಿ 2ನೇ ಇನ್ನಿಂಗ್ಸ್ ಗಿಲ್ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿತ್ತು. ಪರ್ಫಾಮ್ ಮಾಡಲೇಬಾದ ಒತ್ತಡಕ್ಕೆ ಸಿಲುಕಿದ್ದ ಗಿಲ್, 2ನೇ ದಿನದಾಟ ಮುಗಿದಿದ್ದೇ ಮುಗಿದಿದ್ದು ಅಭ್ಯಾಸದ ಕಣಕ್ಕೆ ಧುಮುಕಿದ್ರು. ಗಿಲ್ರ ಡೆಡಿಕೇಷನ್, ಹಾರ್ಡ್ ವರ್ಕ್ಗೆ ಫಲ ಸಿಕ್ಕೇ ಬಿಡ್ತು. 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ಗಿಲ್, 11 ಬೌಂಡರಿ, 2 ಸಿಕ್ಸರ್ ಸಿಡಿಸಿದ್ರು. 147 ಎಸೆತಗಳನ್ನ ದಿಟ್ಟವಾಗಿ ಎದುರಿಸಿ 104 ರನ್ ಸಿಡಿಸಿದ್ರು.
ಶುಭ್ಮನ್ ಶತಕ, ನಿಟ್ಟುಸಿರು ಬಿಟ್ಟ ಮ್ಯಾನೇಜ್ಮೆಂಟ್
ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿ ಅನುಭವಿ ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಶುಭ್ಮನ್ರನ್ನ ಟೀಮ್ ಮ್ಯಾನೇಜ್ಮೆಂಟ್ ಕಳೆದ ಕೆಲ ಪಂದ್ಯಗಳಿಂದ ಆಡಿಸ್ತಿದೆ. ಆದ್ರೆ, ಶುಭ್ಮನ್ ಸತತ ವೈಫಲ್ಯ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿತ್ತು. ಶುಭ್ಮನ್ ಶತಕ ಇದೀಗ ಮ್ಯಾನೇಜ್ಮೆಂಟ್ಗೆ ಬಿಗ್ ರಿಲೀಫ್ ನೀಡಿದೆ.
24 ವರ್ಷಕ್ಕೆ ಲೆಜೆಂಡ್ಗಳ ಸಾಲಿಗೆ ಸೇರೋ ಸೂಚನೆ
24 ವರ್ಷದ ಶುಭ್ಮನ್ ಗಿಲ್ ಇಂಟರ್ನ್ಯಾಷ್ನಲ್ ಕ್ರಿಕೆಟ್ನಲ್ಲಿ ಒಟ್ಟು 10 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶುಭ್ಮನ್ ಗಿಲ್ ಬಿಟ್ರೆ, ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿ ಮಾತ್ರ ಭಾರತದ ಪರ ಈ ಸಾಧನೆ ಮಾಡಿರೋದು. ಈ ಸಾಧನೆ ಭವಿಷ್ಯದ ಭರವಸೆಯನ್ನ ಹೆಚ್ಚಿಸಿದೆ. ಒಟ್ಟಿನಲ್ಲಿ, ಒಂದೇ ಒಂದು ಶತಕದಿಂದ ಶುಭ್ಮನ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಂದೆಯೂ ಇದೇ ಫಾರ್ಮ್ನಲ್ಲಿ ಯಂಗ್ಸ್ಟರ್ ಆರ್ಭಟಿಸಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್