24 ಬಾಲ್ ಎಸೆದು ಕೇವಲ 14 ರನ್ ಕೊಟ್ಟ ಅಕ್ಸರ್ ಪಟೇಲ್.. ಅಭಿಮಾನಿಗಳ ಮನಗೆದ್ದ ಯಂಗ್ ಇಂಡಿಯಾ..!

author-image
Ganesh
Updated On
24 ಬಾಲ್ ಎಸೆದು ಕೇವಲ 14 ರನ್ ಕೊಟ್ಟ ಅಕ್ಸರ್ ಪಟೇಲ್.. ಅಭಿಮಾನಿಗಳ ಮನಗೆದ್ದ ಯಂಗ್ ಇಂಡಿಯಾ..!
Advertisment
  • 5ನೇ ಟಿ20 ಪಂದ್ಯದಲ್ಲೀ ಭಾರತ ತಂಡ ದಿಗ್ವಿಜಯ
  • 4-1 ಅಂತರದಲ್ಲಿ ಸರಣಿ ಗೆದ್ದ ಟೀಮ್​ ಇಂಡಿಯಾ
  • ಟೀಮ್​ ಇಂಡಿಯಾಗೆ 6 ರನ್​ಗಳ ರೋಚಕ ಗೆಲುವು

ಆಸ್ಟ್ರೇಲಿಯಾ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಟೀಮ್​ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಚಿನ್ನಸ್ವಾಮಿ ಅಂಗಳದಲ್ಲಿ ಚಿನ್ನದಂಥ ಆಟವಾಡಿದ ಯಂಗ್​ ಇಂಡಿಯಾ ಅಭಿಮಾನಿಗಳ ಮನ ಗೆದ್ದಿತು.

5ನೇ ಟಿ 20 ಪಂದ್ಯದಲ್ಲಿ ಟಾಸ್​ ಸೋತ ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್​ಗಿಳಿಯಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ ಹಾಗೂ ಋತುರಾಜ್​ ಗಾಯಕ್ವಾಡ್​ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದ್ರು. ಜೈಸ್ವಾಲ್​ 21 ರನ್​ಗಳಿಸಿ ಔಟಾದ್ರೆ ಋತುರಾಜ್​ ಗಾಯಕ್ವಾಡ್​ ಆಟ 10 ರನ್​ಗಳಿಗೆ ಅಂತ್ಯವಾಯ್ತು.

publive-image

ಬಳಿಕ ಕಣಕ್ಕಿಳಿದ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ 5 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ರಿಂಕು ಸಿಂಗ್​ ಆಟ 6 ರನ್​ಗಳಿಗೆ ಅಂತ್ಯವಾಯ್ತು. ಕೇವಲ 55 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.

ಉತ್ತಮ ಆಟವಾಡಿದ ಶ್ರೇಯಸ್​​ ಅಯ್ಯರ್​​ ತಂಡಕ್ಕೆ ಚೇತರಿಕೆ ನೀಡಿದರು. ವಿಕೆಟ್​ ಕೀಪರ್​ ಜಿತೇಶ್​ ಶರ್ಮಾ 24 ರನ್​ಗಳಿಸಿದ್ರು. 21 ಎಸೆತಗಳಲ್ಲಿ 31 ರನ್​ಗಳಿಸಿ ಅಕ್ಷರ್​ ಪಟೇಲ್​ ಆಟ ಮುಗಿಸಿದ್ರು. ಉತ್ತಮ ಆಟವಾಡಿದ ಶ್ರೇಯಸ್​​ 37 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ಸಹಿತ 53 ರನ್​ಗಳಿಸಿ ಔಟಾದ್ರು. ಅಂತಿಮವಾಗಿ ಟೀಮ್​ ಇಂಡಿಯಾ 20 ಓವರ್​ಗಳಲ್ಲಿ 160 ರನ್​ ಕಲೆ ಹಾಕಿತು.

161 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಜೋಶ್​​ ಫಿಲಿಪ್​ 4 ರನ್​ಗಳಿಸಿ ಔಟಾದ್ರು. ಬಳಿಕ ಜೊತೆಯಾದ ಟ್ರಾವಿಸ್​​ ಹೆಡ್​, ಬೆನ್​ ಡೆಕ್​​ಮಾರ್ಟ್​​ ತಂಡಕ್ಕೆ ಚೇತರಿಕೆ ನೀಡಿದ್ರು. ಟ್ರಾವಿಸ್​​ ಹೆಡ್ ಆಟಕ್ಕೆ ರವಿ ಬಿಷ್ನೋಯಿ ಬ್ರೇಕ್​ ಹಾಕಿದ್ರು. ಬಳಿಕ ಕಣಕ್ಕಿಳಿದ ಆರೋನ್​ ಹಾರ್ಡಿ 6 ರನ್​ಗಳಿಸುವಷ್ಟರಲ್ಲೇ ಸುಸ್ತಾದ್ರು. ತಾಳ್ಮೆಯ ಆಟಕ್ಕೆ ಮುಂದಾದ ಟಿಮ್​ ಡೇವಿಡ್​​ಗೆ ಅಕ್ಷರ್​ ಪಟೇಲ್​ ಪೆವಿಲಿಯನ್​ ದಾರಿ ತೋರಿಸಿದ್ರು.

publive-image

ಟಿಮ್​ ಡೇವಿಡ್​ ಬೆನ್ನಲ್ಲೇ ಮ್ಯಾಥ್ಯೂ ಶಾರ್ಟ್​​ ನಿರ್ಗಮಿಸಿದ್ರು. ಅದ್ರ ಬೆನ್ನಲ್ಲೇ ಮುಖೇಶ್​​ ಕುಮಾರ್​​ ಬೆನ್​​ ಡ್ವಾರ್ಶಿಸ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಆದ್ರೆ, ಬಳಿಕ ಕಣಕ್ಕಿಳಿದ ಕ್ಯಾಪ್ಟನ್​ ಮ್ಯಾಥ್ಯೂ ವೇಡ್​​ ಸ್ಪೋಟಕ ಆಟದ ಮುನ್ಸೂಚನೆ ನೀಡಿದ್ರು. ಅಂತಿಮವಾಗಿ ವೇಡ್​ ಆಟಕ್ಕೆ ಬ್ರೇಕ್​ ಹಾಕಿದ ಆರ್ಷ್​ದೀಪ್​ ಸಿಂಗ್ ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು.

publive-image

ಅಂತಿಮವಾಗಿ 20 ಓವರ್​​ಗಳಲ್ಲಿ 154 ರನ್​ಗಳಿಸಲಷ್ಟೇ ಶಕ್ತವಾದ ಆಸ್ಟ್ರೇಲಿಯಾ 6 ರನ್​ಗಳ ಅಂತರದಲ್ಲಿ ಸೋಲುಂಡಿತು. ರೋಚಕ ಜಯ ಸಾಧಿಸಿದ ಟೀಮ್​ ಇಂಡಿಯಾ 4-1 ಅಂತರದಲ್ಲಿ ಸರಣಿ ಜಯಿಸಿತು. ವಿಶೇಷ ಅಂದರೆ ಅಕ್ಸರ್ ಪಟೇಲ್ 4 ಓವರ್ ಹಾಕಿ ಕೇವಲ 14 ರನ್​ ಮಾತ್ರ ನೀಡಿದರು. ಮುಕೇಶ್ ಕುಮಾರ್ 32 ರನ್​ ನೀಡಿ 3 ವಿಕೆಟ್ ಪಡೆದುಕೊಂಡರು. ರವಿ ಬಿಷ್ಣೋಯಿ 2, ಅರ್ಷದೀಪ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಾಯಕನಾದ ಮೊದಲ ಸರಣಿಯಲ್ಲೇ ಸೂರ್ಯಕುಮಾರ್​ ಯಾದವ್​ ಸಕ್ಸಸ್​ ಕಂಡರೆ ಯುವ ಆಟಗಾರರ ಆಟ ಎಲ್ಲರ ಮನಗೆದ್ದಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment