ಟೀಮ್ ಇಂಡಿಯಾ ಹಿಂದೆ ಸರಿದರೆ ಯಾವ ತಂಡಕ್ಕೆ ಲಕ್ ಒಲಿಯುತ್ತೆ?
ರೋಹಿತ್ ಪಡೆ ಪಾಕ್ಗೆ ಹೋಗಬೇಕಾದ್ರೆ ಇವರ ಅನುಮತಿ ಬೇಕೇಬೇಕು
ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ಮುಖ್ಯ ಕಾರಣ?
ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. ಪಾಕ್ನಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗೆ ಟೀಮ್ ಇಂಡಿಯಾ ತೆರಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವಿಚಾರವಾಗಿ ಪಿಸಿಬಿ ಹಾಗೂ ಬಿಸಿಸಿಐ ನಡುವೆ ತಿಕ್ಕಾಟ ಶುರುವಾಗಿದ್ದು, ಅಂತಿಮವಾಗಿ ಏನ್ ಆಗುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.
ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?
ಮಾರ್ಚ್ 3, 2009.. ವಿಶ್ವ ಕ್ರಿಕೆಟ್ ಪಾಲಿಗೆ ಕರಾಳ ದಿನ. ಲಾಹೋರ್ನ 2ನೇ ಟೆಸ್ಟ್ನ 3ನೇ ದಿನ ಸ್ಟೇಡಿಯಂನತ್ತ ಲಂಕಾ ಆಟಗಾರರ ಬಸ್ ತೆರಳಿತ್ತು. ಗೆಲುವಿನ ಕನವರಿಕೆಯಲ್ಲೇ ಲಂಕಾ ಆಟಗಾರರು ನಗುನಗುತ್ತಾ ಕುಳಿತಿದ್ದರು. ನೋಡ ನೋಡುತ್ತಿದ್ದಂತೆ ಗುಂಡಿನ ಮಳೆ ಸುರಿದಿತ್ತು. 12 ಮಂದಿ ಬಂದೂಕು ದಾರಿಗಳು, ಬಸ್ ಮೇಲೆ ಗುಂಡಿನ ದಾಳಿ ನಡೆಸಿದರು. ತೀವ್ರ ಗುಂಡಿನ ದಾಳಿಯಲ್ಲಿ ಲಂಕಾ ಆಟಗಾರರು ಬದುಕುಳಿದಿದ್ದೇ ಹೆಚ್ಚು.
ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್ ಅಸ್ತ್ರ!
ಇದೇ ರಣಭಯಾನಕ ಪಾಕ್ನಲ್ಲೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಲಾಹೋರ್ನಲ್ಲೇ ಟೀಮ್ ಇಂಡಿಯಾದ ಶೆಡ್ಯೂಲ್ ಫಿಕ್ಸ್ ಆಗಿದೆ. ಇಂಥ ಉಗ್ರತಾಣಕ್ಕೆ ಟೀಮ್ ಇಂಡಿಯಾ ಪ್ರಯಾಣಿಸಬೇಕಾ..? ಬೇಡ್ವಾ ಎಂಬ ಚರ್ಚೆಗಳಿಗೆ ನಾಂದಿಯಾಡಿದೆ. ಇದೇ ವಿಚಾರವಾಗಿ ಬಿಸಿಸಿಐ ಹಾಗೂ ಪಾಕ್ ಕ್ರಿಕೆಟ್ ಬೋರ್ಡ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ.
ಪಾಕ್ಗೆ ತೆರಳಲ್ಲ ಟೀಮ್ ಇಂಡಿಯಾ ಆಟಗಾರರು..!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆ ಮಾಡಲಾಗ್ತಿದೆ. ಈಗಾಗಲೇ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಈ ಬೆನ್ನಲ್ಲೇ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ವಾಗ್ವಾದ ತಾರಕ್ಕೇರಿದೆ. ಆಟಗಾರರನ್ನು ಪಾಕ್ ಕಳುಹಿಸದಿರಲು ಬಿಸಿಸಿಐ ಪಟ್ಟು ಹಿಡಿದಿದೆ. ಇದಕ್ಕೆ ಬಿಸಿಸಿಐ, ಸೆಕ್ಯೂರಿಟಿ ಸೇರಿದಂತೆ ನಾನಾ ಕಾರಣಗಳನ್ನೇ ಮುಂದಿಟ್ಟಿದೆ. ಬಿಸಿಸಿಐನ ಈ ನಿರ್ಧಾರಕ್ಕೆ ಪಾಕ್ ಕೆಂಡಕಾರಿದೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?
ಅಷ್ಟೇ ಅಲ್ಲ, ಭಾರತದ ಟೆನಿಸ್, ಬ್ಯಾಡ್ಮಿಂಟನ್, ಕಬ್ಬಡಿ ಸೇರಿದಂತೆ ಇತರೆ ಅಥ್ಲೆಟಿಕ್ಗಳು ಪಾಕ್ ಪ್ರವಾಸ ಮಾಡಿದ್ದಾರೆ. ಕ್ರಿಕೆಟಿಗರು ಬಂದ್ರೆ, ಏನಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರದ ಒಪ್ಪಿಗೆಯೇ ಅಂತಿಮ ಎಂದಿದ್ದಾರೆ. ಆ ಮೂಲಕ ಪಾಕ್ ಆಸೆಗೆ ಪರೋಕ್ಷ ತಣ್ಣೀರು ಎರಚಿದ್ದಾರೆ. ಆದ್ರೆ, ಇದಕ್ಕೆ ಕೇಂದ್ರದ ಒಪ್ಪಿಗೆ ನಿಜಕ್ಕೂ ಡೌಟೇ ಆಗಿದೆ.
ಪಾಕ್ಗೆ ಯಾಕೆ ಟೀಮ್ ಇಂಡಿಯಾ ತೆರಳಲ್ಲ..?
ಬಿಸಿಸಿಐ ಅಧಿಕಾರಿಗಳಿಗೆ ಟೀಮ್ ಇಂಡಿಯಾ ಆಟಗಾರರು ಪಾಕ್, ಪ್ರವಾಸಕ್ಕೆ ಕಳುಹಿಸಲು ಇಷ್ಟ ಇಲ್ಲ. ಮತ್ತೊಂದೆಡೆ ಪಾಕ್ ಗಡಿಭಾಗದಲ್ಲಿನ ಭಯೋತ್ಪಾದನೆ ನಿಲ್ಲಿಸುವವರೆಗೂ 2 ರಾಷ್ಟ್ರಗಳ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂಬ ಸಂದೇಶ ಈ ಹಿಂದೆಯೇ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಟೀಮ್ ಇಂಡಿಯಾ ಪಾಕ್ ಪ್ರವಾಸಕ್ಕೆ ತೆರಳುವುದು ಅಸಾಧ್ಯವೇ ಆಗಿದೆ.
1993- ಮುಂಬೈ ಸೀರಿಯಲ್ ಬ್ಲಾಸ್ಟ್
1993ರಲ್ಲಿ ಮುಂಬೈ ಸೀರಿಯಲ್ ಬ್ಲಾಸ್ಟ್ ನಡೆದಿತ್ತು. ಆ ನಂತರ 1997ರ ಪಾಕ್ನಲ್ಲಿ ಏಕದಿನ ಸರಣಿಯನ್ನಾಡಿದ ಭಾರತ, 1999ರ ವಿಶ್ವಕಪ್ ಸೆಮಿಫೈನಲ್ನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿತ್ತು. 2001ರ ಪಾರ್ಲಿಮೆಂಟ್ ಅಟ್ಯಾಕ್ ಬಳಿಕವೂ 2004ರಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಪಾಕ್ ಪ್ರವಾಸ ಕೈಗೊಂಡಿದ್ದ ಭಾರತ, 2006 ಮುಂಬೈ ಟ್ರೈನ್ ಅಟ್ಯಾಕ್ನ ಬಳಿಕವೂ 2007ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 2008ರ ಮುಂಬೈ ದಾಳಿ ಬಳಿಕ ಸಂಪೂರ್ಣ ದ್ವಿಪಕ್ಷೀಯ ಪ್ರವಾಸಕ್ಕೆ ಬ್ರೇಕ್ ಹಾಕಿತ್ತು. ಈ ಬಳಿಕ ಐಸಿಸಿ ಟೂರ್ನಿಗಳಲ್ಲಷ್ಟೇ ಇಂಡೋ- ಪಾಕ್ ಮುಖಾಮುಖಿಯಾಗ್ತಿತ್ತು. ಐಸಿಸಿ ಟೂರ್ನಿ ಪಾಕ್ನಲ್ಲೇ ಆಯೋಜನೆಗೊಂಡಿದ್ದು, ಪಾಕ್ ತೆರಳುವಿಕೆ ಅನುಮಾನವಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?
ಹೈಬ್ರಿಡ್ ಮಾದರಿ ನಿರಾಕರಿಸುತ್ತಾ ಪಾಕ್ ಕ್ರಿಕೆಟ್ ಬೋರ್ಡ್..?
2023ರ ಏಷ್ಯಾಕಪ್ ಪಾಕ್ನಲ್ಲೇ ಆಯೋಜನೆಗೊಂಡಿತ್ತು. ಆದ್ರೆ, ಇದಕ್ಕೆ ನೋ ಎಂದಿದ್ದ ಬಿಸಿಸಿಐ, ಹೈಬ್ರಿಡ್ ಮಾದರಿ ನಡೆಸಲು ಒತ್ತಾಯಿಸಿತ್ತು. ಈ ಕಾರಣಕ್ಕಾಗಿಯೇ ಪಾಕ್, ಭಾರತದ ಪಂದ್ಯಗಳನ್ನಿ ಶ್ರೀಲಂಕಾದಲ್ಲಿ ಆಯೋಜಿಸಿತ್ತು. ಈಗ ಇದೇ ಮಾದರಿಗೆ ಬಿಸಿಸಿಐ ಡಿಮ್ಯಾಂಡ್ ಮಾಡ್ತಿದೆ. ಆದ್ರೆ, ಟೀಮ್ ಇಂಡಿಯಾ ಪ್ರವಾಸವನ್ನು ಸಾಧ್ಯವಾಗಿಸಲು ಶತ ಪ್ರಯತ್ನ ನಡೆಸ್ತಿರುವ ಪಾಕ್, ಭಾರತ ಸೆಮಿಫೈನಲ್ ಅಥವಾ ಫೈನಲ್ ತಲುಪಿದ್ರೆ, ಲಾಹೋರ್ನಲ್ಲೇ ಆಯೋಜಿಸಲು ಮುಂದಾಗಿದೆ. ಆದ್ರೆ, ಇದಕ್ಕೆ ಬಿಸಿಸಿಐ ಒಪ್ಪಿಗೆ ನೀಡುವುದು ಅನುಮಾನವಾಗಿದ್ದು, ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲಿದೆ.
ಭಾರತ ಹಿಂದೆ ಸರಿದ್ರೆ ಯಾರಿಗೆ ಸಿಗುತ್ತೆ ಚಾನ್ಸ್..?
ಹೈಬ್ರಿಡ್ ಮಾದರಿ ಟೂರ್ನಿ ಆಯೋಜಿಸಲು ಪಾಕ್ ನಿರಾಕರಿಸುತ್ತಿದೆ. ಅಕಸ್ಮಾತ್ ಇದೇ ನಡೆದ್ರೆ, ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯಲಿದೆ. ಈ ವೇಳೆ ಶ್ರೀಲಂಕಾಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಚಾನ್ಸ್ ಸಿಗುತ್ತೆ. 2023ರ ಏಕದಿನ ವಿಶ್ವಕಪ್ನ ಪಾಯಿಂಟ್ ಟೇಬಲ್ನಲ್ಲಿ ಮೊದಲ 8 ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿ ಆಡೋ ಅವಕಾಶ ಇದೆ. ಹೀಗಾಗಿ 9ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಗಿಟ್ಟಿಸಲಿದೆ. ಚಾಂಪಿಯನ್ಸ್ ಟ್ರೋಫಿ ಬಿಸಿಸಿಐ ಆ್ಯಂಡ್ ಪಾಕ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ಈ ವಿವಾದದಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಟೀಮ್ ಇಂಡಿಯಾ ಹಿಂದೆ ಸರಿದರೆ ಯಾವ ತಂಡಕ್ಕೆ ಲಕ್ ಒಲಿಯುತ್ತೆ?
ರೋಹಿತ್ ಪಡೆ ಪಾಕ್ಗೆ ಹೋಗಬೇಕಾದ್ರೆ ಇವರ ಅನುಮತಿ ಬೇಕೇಬೇಕು
ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ಮುಖ್ಯ ಕಾರಣ?
ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. ಪಾಕ್ನಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗೆ ಟೀಮ್ ಇಂಡಿಯಾ ತೆರಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ವಿಚಾರವಾಗಿ ಪಿಸಿಬಿ ಹಾಗೂ ಬಿಸಿಸಿಐ ನಡುವೆ ತಿಕ್ಕಾಟ ಶುರುವಾಗಿದ್ದು, ಅಂತಿಮವಾಗಿ ಏನ್ ಆಗುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.
ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?
ಮಾರ್ಚ್ 3, 2009.. ವಿಶ್ವ ಕ್ರಿಕೆಟ್ ಪಾಲಿಗೆ ಕರಾಳ ದಿನ. ಲಾಹೋರ್ನ 2ನೇ ಟೆಸ್ಟ್ನ 3ನೇ ದಿನ ಸ್ಟೇಡಿಯಂನತ್ತ ಲಂಕಾ ಆಟಗಾರರ ಬಸ್ ತೆರಳಿತ್ತು. ಗೆಲುವಿನ ಕನವರಿಕೆಯಲ್ಲೇ ಲಂಕಾ ಆಟಗಾರರು ನಗುನಗುತ್ತಾ ಕುಳಿತಿದ್ದರು. ನೋಡ ನೋಡುತ್ತಿದ್ದಂತೆ ಗುಂಡಿನ ಮಳೆ ಸುರಿದಿತ್ತು. 12 ಮಂದಿ ಬಂದೂಕು ದಾರಿಗಳು, ಬಸ್ ಮೇಲೆ ಗುಂಡಿನ ದಾಳಿ ನಡೆಸಿದರು. ತೀವ್ರ ಗುಂಡಿನ ದಾಳಿಯಲ್ಲಿ ಲಂಕಾ ಆಟಗಾರರು ಬದುಕುಳಿದಿದ್ದೇ ಹೆಚ್ಚು.
ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್ ಅಸ್ತ್ರ!
ಇದೇ ರಣಭಯಾನಕ ಪಾಕ್ನಲ್ಲೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಲಾಹೋರ್ನಲ್ಲೇ ಟೀಮ್ ಇಂಡಿಯಾದ ಶೆಡ್ಯೂಲ್ ಫಿಕ್ಸ್ ಆಗಿದೆ. ಇಂಥ ಉಗ್ರತಾಣಕ್ಕೆ ಟೀಮ್ ಇಂಡಿಯಾ ಪ್ರಯಾಣಿಸಬೇಕಾ..? ಬೇಡ್ವಾ ಎಂಬ ಚರ್ಚೆಗಳಿಗೆ ನಾಂದಿಯಾಡಿದೆ. ಇದೇ ವಿಚಾರವಾಗಿ ಬಿಸಿಸಿಐ ಹಾಗೂ ಪಾಕ್ ಕ್ರಿಕೆಟ್ ಬೋರ್ಡ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ.
ಪಾಕ್ಗೆ ತೆರಳಲ್ಲ ಟೀಮ್ ಇಂಡಿಯಾ ಆಟಗಾರರು..!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆ ಮಾಡಲಾಗ್ತಿದೆ. ಈಗಾಗಲೇ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಈ ಬೆನ್ನಲ್ಲೇ ಬಿಸಿಸಿಐ ಹಾಗೂ ಪಿಸಿಬಿ ನಡುವಿನ ವಾಗ್ವಾದ ತಾರಕ್ಕೇರಿದೆ. ಆಟಗಾರರನ್ನು ಪಾಕ್ ಕಳುಹಿಸದಿರಲು ಬಿಸಿಸಿಐ ಪಟ್ಟು ಹಿಡಿದಿದೆ. ಇದಕ್ಕೆ ಬಿಸಿಸಿಐ, ಸೆಕ್ಯೂರಿಟಿ ಸೇರಿದಂತೆ ನಾನಾ ಕಾರಣಗಳನ್ನೇ ಮುಂದಿಟ್ಟಿದೆ. ಬಿಸಿಸಿಐನ ಈ ನಿರ್ಧಾರಕ್ಕೆ ಪಾಕ್ ಕೆಂಡಕಾರಿದೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?
ಅಷ್ಟೇ ಅಲ್ಲ, ಭಾರತದ ಟೆನಿಸ್, ಬ್ಯಾಡ್ಮಿಂಟನ್, ಕಬ್ಬಡಿ ಸೇರಿದಂತೆ ಇತರೆ ಅಥ್ಲೆಟಿಕ್ಗಳು ಪಾಕ್ ಪ್ರವಾಸ ಮಾಡಿದ್ದಾರೆ. ಕ್ರಿಕೆಟಿಗರು ಬಂದ್ರೆ, ಏನಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರದ ಒಪ್ಪಿಗೆಯೇ ಅಂತಿಮ ಎಂದಿದ್ದಾರೆ. ಆ ಮೂಲಕ ಪಾಕ್ ಆಸೆಗೆ ಪರೋಕ್ಷ ತಣ್ಣೀರು ಎರಚಿದ್ದಾರೆ. ಆದ್ರೆ, ಇದಕ್ಕೆ ಕೇಂದ್ರದ ಒಪ್ಪಿಗೆ ನಿಜಕ್ಕೂ ಡೌಟೇ ಆಗಿದೆ.
ಪಾಕ್ಗೆ ಯಾಕೆ ಟೀಮ್ ಇಂಡಿಯಾ ತೆರಳಲ್ಲ..?
ಬಿಸಿಸಿಐ ಅಧಿಕಾರಿಗಳಿಗೆ ಟೀಮ್ ಇಂಡಿಯಾ ಆಟಗಾರರು ಪಾಕ್, ಪ್ರವಾಸಕ್ಕೆ ಕಳುಹಿಸಲು ಇಷ್ಟ ಇಲ್ಲ. ಮತ್ತೊಂದೆಡೆ ಪಾಕ್ ಗಡಿಭಾಗದಲ್ಲಿನ ಭಯೋತ್ಪಾದನೆ ನಿಲ್ಲಿಸುವವರೆಗೂ 2 ರಾಷ್ಟ್ರಗಳ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂಬ ಸಂದೇಶ ಈ ಹಿಂದೆಯೇ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಟೀಮ್ ಇಂಡಿಯಾ ಪಾಕ್ ಪ್ರವಾಸಕ್ಕೆ ತೆರಳುವುದು ಅಸಾಧ್ಯವೇ ಆಗಿದೆ.
1993- ಮುಂಬೈ ಸೀರಿಯಲ್ ಬ್ಲಾಸ್ಟ್
1993ರಲ್ಲಿ ಮುಂಬೈ ಸೀರಿಯಲ್ ಬ್ಲಾಸ್ಟ್ ನಡೆದಿತ್ತು. ಆ ನಂತರ 1997ರ ಪಾಕ್ನಲ್ಲಿ ಏಕದಿನ ಸರಣಿಯನ್ನಾಡಿದ ಭಾರತ, 1999ರ ವಿಶ್ವಕಪ್ ಸೆಮಿಫೈನಲ್ನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿತ್ತು. 2001ರ ಪಾರ್ಲಿಮೆಂಟ್ ಅಟ್ಯಾಕ್ ಬಳಿಕವೂ 2004ರಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಪಾಕ್ ಪ್ರವಾಸ ಕೈಗೊಂಡಿದ್ದ ಭಾರತ, 2006 ಮುಂಬೈ ಟ್ರೈನ್ ಅಟ್ಯಾಕ್ನ ಬಳಿಕವೂ 2007ರಲ್ಲಿ ಪಾಕ್, ಭಾರತ ಪ್ರವಾಸ ಕೈಗೊಂಡಿತ್ತು. 2008ರ ಮುಂಬೈ ದಾಳಿ ಬಳಿಕ ಸಂಪೂರ್ಣ ದ್ವಿಪಕ್ಷೀಯ ಪ್ರವಾಸಕ್ಕೆ ಬ್ರೇಕ್ ಹಾಕಿತ್ತು. ಈ ಬಳಿಕ ಐಸಿಸಿ ಟೂರ್ನಿಗಳಲ್ಲಷ್ಟೇ ಇಂಡೋ- ಪಾಕ್ ಮುಖಾಮುಖಿಯಾಗ್ತಿತ್ತು. ಐಸಿಸಿ ಟೂರ್ನಿ ಪಾಕ್ನಲ್ಲೇ ಆಯೋಜನೆಗೊಂಡಿದ್ದು, ಪಾಕ್ ತೆರಳುವಿಕೆ ಅನುಮಾನವಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?
ಹೈಬ್ರಿಡ್ ಮಾದರಿ ನಿರಾಕರಿಸುತ್ತಾ ಪಾಕ್ ಕ್ರಿಕೆಟ್ ಬೋರ್ಡ್..?
2023ರ ಏಷ್ಯಾಕಪ್ ಪಾಕ್ನಲ್ಲೇ ಆಯೋಜನೆಗೊಂಡಿತ್ತು. ಆದ್ರೆ, ಇದಕ್ಕೆ ನೋ ಎಂದಿದ್ದ ಬಿಸಿಸಿಐ, ಹೈಬ್ರಿಡ್ ಮಾದರಿ ನಡೆಸಲು ಒತ್ತಾಯಿಸಿತ್ತು. ಈ ಕಾರಣಕ್ಕಾಗಿಯೇ ಪಾಕ್, ಭಾರತದ ಪಂದ್ಯಗಳನ್ನಿ ಶ್ರೀಲಂಕಾದಲ್ಲಿ ಆಯೋಜಿಸಿತ್ತು. ಈಗ ಇದೇ ಮಾದರಿಗೆ ಬಿಸಿಸಿಐ ಡಿಮ್ಯಾಂಡ್ ಮಾಡ್ತಿದೆ. ಆದ್ರೆ, ಟೀಮ್ ಇಂಡಿಯಾ ಪ್ರವಾಸವನ್ನು ಸಾಧ್ಯವಾಗಿಸಲು ಶತ ಪ್ರಯತ್ನ ನಡೆಸ್ತಿರುವ ಪಾಕ್, ಭಾರತ ಸೆಮಿಫೈನಲ್ ಅಥವಾ ಫೈನಲ್ ತಲುಪಿದ್ರೆ, ಲಾಹೋರ್ನಲ್ಲೇ ಆಯೋಜಿಸಲು ಮುಂದಾಗಿದೆ. ಆದ್ರೆ, ಇದಕ್ಕೆ ಬಿಸಿಸಿಐ ಒಪ್ಪಿಗೆ ನೀಡುವುದು ಅನುಮಾನವಾಗಿದ್ದು, ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲಿದೆ.
ಭಾರತ ಹಿಂದೆ ಸರಿದ್ರೆ ಯಾರಿಗೆ ಸಿಗುತ್ತೆ ಚಾನ್ಸ್..?
ಹೈಬ್ರಿಡ್ ಮಾದರಿ ಟೂರ್ನಿ ಆಯೋಜಿಸಲು ಪಾಕ್ ನಿರಾಕರಿಸುತ್ತಿದೆ. ಅಕಸ್ಮಾತ್ ಇದೇ ನಡೆದ್ರೆ, ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯಲಿದೆ. ಈ ವೇಳೆ ಶ್ರೀಲಂಕಾಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಚಾನ್ಸ್ ಸಿಗುತ್ತೆ. 2023ರ ಏಕದಿನ ವಿಶ್ವಕಪ್ನ ಪಾಯಿಂಟ್ ಟೇಬಲ್ನಲ್ಲಿ ಮೊದಲ 8 ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿ ಆಡೋ ಅವಕಾಶ ಇದೆ. ಹೀಗಾಗಿ 9ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಹತೆ ಗಿಟ್ಟಿಸಲಿದೆ. ಚಾಂಪಿಯನ್ಸ್ ಟ್ರೋಫಿ ಬಿಸಿಸಿಐ ಆ್ಯಂಡ್ ಪಾಕ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದು, ಈ ವಿವಾದದಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ