2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ..!
2-0 ಅಂತರದಿಂದ ಶ್ರೀಲಂಕಾ ಟೀಮ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡ
ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಇದು ಮೊದಲ ಟಿ20 ಸರಣಿ ಗೆಲುವು
ಇಂದು ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. 3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಸೀರೀಸ್ ಗೆದ್ದಿದೆ.
ಭಾರತ ತಂಡದ ಹೊಸ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ಗೆ ಇದು 2ನೇ ಟಿ20 ಸರಣಿ ಗೆಲುವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್ ಅವರಿಗೂ ಇದು ಮೊದಲ ಟಿ20 ಸರಣಿ ಗೆಲುವು ಅನ್ನೋದು ವಿಶೇಷ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತ್ತು. ಈ ಮೂಲಕ ಟೀಮ್ ಇಂಡಿಯಾಗೆ 162 ರನ್ಗಳ ಗುರಿ ನೀಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಿಎಲ್ಎಸ್ ಮೆಥೆಡ್ ಪ್ರಕಾರ ಟೀಮ್ ಇಂಡಿಯಾಗೆ 8 ಓವರ್ಗಳಲ್ಲಿ 78 ರನ್ಗಳ ಗುರಿ ಕೊಟ್ಟಿತ್ತು.
ಡಿಎಲ್ಎಸ್ ಮೆಥೆಡ್ ಪ್ರಕಾರ ಟೀಮ್ ಇಂಡಿಯಾಗೆ 78 ರನ್ಗಳ ಟಾರ್ಗೆಟ್
ಇನ್ನು, 78 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಸಂಜು ಸ್ಯಾಮ್ಸನ್ ಡಕೌಟ್ ಆದರು. ಕ್ರೀಸ್ನಲ್ಲೇ ಕೊನೆವರೆಗೂ ನಿಂತು ಆಡಿದ ಯಶಸ್ವಿ ಜೈಸ್ವಾಲ್ ಕೇವಲ 15 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 30 ರನ್ ಚಚ್ಚಿದ್ರು. ಇವರಿಗೆ ಸಾಥ್ ಕೊಟ್ಟ ಕ್ಯಾಪ್ಟನ್ ಸೂರ್ಯ 12 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 26 ರನ್ ಸಿಡಿಸಿದ್ರು.
ನಂತರ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕೇವಲ 9 ಬಾಲ್ನಲ್ಲಿ 3 ಫೋರ್, 1 ಸಿಕ್ಸರ್ನೊಂದಿಗೆ 22 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾ ಕೇವಲ 6.3 ಓವರ್ನಲ್ಲಿ 81 ರನ್ ಗಳಿಸಿ 7 ವಿಕೆಟ್ಗಳಿಂದ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ..!
2-0 ಅಂತರದಿಂದ ಶ್ರೀಲಂಕಾ ಟೀಮ್ ವಿರುದ್ಧ ಟಿ20 ಸರಣಿ ಗೆದ್ದ ಭಾರತ ತಂಡ
ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಇದು ಮೊದಲ ಟಿ20 ಸರಣಿ ಗೆಲುವು
ಇಂದು ಪಲ್ಲೆಕೆಲೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. 3 ಟಿ20 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಸೀರೀಸ್ ಗೆದ್ದಿದೆ.
ಭಾರತ ತಂಡದ ಹೊಸ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ಗೆ ಇದು 2ನೇ ಟಿ20 ಸರಣಿ ಗೆಲುವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್ ಅವರಿಗೂ ಇದು ಮೊದಲ ಟಿ20 ಸರಣಿ ಗೆಲುವು ಅನ್ನೋದು ವಿಶೇಷ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತ್ತು. ಈ ಮೂಲಕ ಟೀಮ್ ಇಂಡಿಯಾಗೆ 162 ರನ್ಗಳ ಗುರಿ ನೀಡಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡಿಎಲ್ಎಸ್ ಮೆಥೆಡ್ ಪ್ರಕಾರ ಟೀಮ್ ಇಂಡಿಯಾಗೆ 8 ಓವರ್ಗಳಲ್ಲಿ 78 ರನ್ಗಳ ಗುರಿ ಕೊಟ್ಟಿತ್ತು.
ಡಿಎಲ್ಎಸ್ ಮೆಥೆಡ್ ಪ್ರಕಾರ ಟೀಮ್ ಇಂಡಿಯಾಗೆ 78 ರನ್ಗಳ ಟಾರ್ಗೆಟ್
ಇನ್ನು, 78 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಸಂಜು ಸ್ಯಾಮ್ಸನ್ ಡಕೌಟ್ ಆದರು. ಕ್ರೀಸ್ನಲ್ಲೇ ಕೊನೆವರೆಗೂ ನಿಂತು ಆಡಿದ ಯಶಸ್ವಿ ಜೈಸ್ವಾಲ್ ಕೇವಲ 15 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 30 ರನ್ ಚಚ್ಚಿದ್ರು. ಇವರಿಗೆ ಸಾಥ್ ಕೊಟ್ಟ ಕ್ಯಾಪ್ಟನ್ ಸೂರ್ಯ 12 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 26 ರನ್ ಸಿಡಿಸಿದ್ರು.
ನಂತರ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕೇವಲ 9 ಬಾಲ್ನಲ್ಲಿ 3 ಫೋರ್, 1 ಸಿಕ್ಸರ್ನೊಂದಿಗೆ 22 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾ ಕೇವಲ 6.3 ಓವರ್ನಲ್ಲಿ 81 ರನ್ ಗಳಿಸಿ 7 ವಿಕೆಟ್ಗಳಿಂದ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್