ದೊಡ್ಡ ಗೆಲುವು, ದೊಡ್ಡ ಸಂಭ್ರಮ.. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಜಿಲ್ಲೆಗಳಲ್ಲಿ ಹೇಗಿತ್ತು ಸೆಲೆಬ್ರೆಷನ್?

author-image
Bheemappa
Updated On
ದೊಡ್ಡ ಗೆಲುವು, ದೊಡ್ಡ ಸಂಭ್ರಮ.. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಜಿಲ್ಲೆಗಳಲ್ಲಿ ಹೇಗಿತ್ತು ಸೆಲೆಬ್ರೆಷನ್?
Advertisment
  • ನ್ಯೂಜಿಲೆಂಡ್​ ಅನ್ನು ಬಗ್ಗುಬಡಿದು ಜಯ ಸಾಧಿಸಿದ ಟೀಮ್ ಇಂಡಿಯಾ
  • ಭಾರತ ಗೆಲ್ಲುತ್ತಿದ್ದಂತೆ ರಾಜ್ಯದ ಜಿಲ್ಲೆಗಳಲ್ಲಿ ಯುವಕರ ಸಂಭ್ರಮ ಜೋರು
  • ತ್ರಿವರ್ಣ ಧ್ವಜ ಹಿಡಿದು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ ಯುವಕರು

ಚಾಂಪಿಯನ್ಸ್​​ ಟ್ರೋಫಿ ಟೂರ್ನಿ ಇತಿಹಾಸದಲ್ಲೇ ಭಾರತ ಮೂರನೇ ಬಾರಿಗೆ ಗೆದ್ದು ಬೀಗಿದೆ. 12 ವರ್ಷಗಳ ಬಳಿಕ 3ನೇ ಬಾರಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮದಲ್ಲಿ ತೇಲಾಡಿದೆ.

ವಿಶ್ವಕಪ್ ಇತಿಹಾಸದಲ್ಲಿ ಪಾಕ್ ವಿರುದ್ಧ 8ನೇ ಬಾರಿ ಟೀಮ್​ ಇಂಡಿಯಾ ಗೆದ್ದುಬೀಗಿದೆ. ವರ್ಲ್ಡ್​ ಕಪ್​ನಲ್ಲಿ ಸೋಲಿಲ್ಲದ ಸರದಾರ ಅಂತಾ ಸಾಬೀತುಪಡಿಸಿದೆ. ಬದ್ಧವೈರಿಗಳಿಗೆ ರೋಹಿತ್ ಪಡೆ ಆನ್​ಫೀಲ್ಡ್​ ಮಣ್ಣು ಮುಕ್ಕಿಸಿದೆ. ಹೀಗೆ ದೊಡ್ಡ ಗೆಲುವೇ ಸಿಕ್ಕ ಕಾರಣ ಸಂಭ್ರಮಾಚರಣೆಯೂ ದೊಡ್ಡ ಮಟ್ಟದಲ್ಲೇ ನಡೆದಿದೆ.

publive-image

ಸಂಭ್ರಮ.. ಸಡಗರ.. ತ್ರಿವರ್ಣ ಧ್ವಜದ ಹಾರಾಟ. ಬ್ಲೂ ಜೆರ್ಸಿ ತೊಟ್ಟು ಹರ್ಷೋದ್ಘಾರ. ಪಟಾಕಿ ಸಿಡಿಸಿ ವಿಜಯದ ಆಚರಣೆ. ಇವೆಲ್ಲದಕ್ಕೂ ಕಾರಣ ಟೀಂ ಇಂಡಿಯಾ 12 ವರ್ಷಗಳ ಬಳಿಕ ಚಾಂಪಿಯನ್ಸ್​​​ ಟ್ರೋಫಿ ಗೆದ್ದಿರೋದು. ದುಬೈನಲ್ಲಿ ಟೀಮ್​ ಇಂಡಿಯಾ ಜಯ ಸಾಧಿಸ್ತಿದ್ದಂತೆ ರಾಷ್ಟ್ರಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕತ್ತಲಲ್ಲೂ ಸಂಭ್ರಮದ ಬೆಳಕು ಮೂಡಿತ್ತು. ಫ್ಯಾನ್ಸ್​ಗಳ ಸಪ್ಪಳ ಜೋರಾಗಿತ್ತು.

ಭಾರತ ಗೆಲುವು.. ಪಟಾಕಿ ಸಿಡಿಸಿ ಫ್ಯಾನ್ಸ್ ಮೋಜು!

ದುಬೈನಲ್ಲಿ ನಿನ್ನೆ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್​​ನಲ್ಲಿ ಟೀಂ ಇಂಡಿಯಾ ಕಿವೀಸ್​​ನ​​ ಕಿವಿ ಹಿಂಡಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಅತ್ತ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ದೇಶಾದ್ಯಂತ ಜೈ ಹೋ ಎಂಬ ಮಂತ್ರಘೋಷ ಮೊಳಗಿತ್ತು. ಎಲ್ಲೆಲ್ಲೂ ಕ್ರಿಕೆಟ್​​ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲಾದಂತಾಗಿತ್ತು.

publive-image

ಬೆಂಗಳೂರಿನಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಊಹೆಗೂ ಮೀರಿತ್ತು. ವೀಕೆಂಡ್ ಎಂಜಾಯ್​ ಮಾಡುತ್ತಾ ಟೀಮ್​ ಇಂಡಿಯಾ ಆಟ ನೋಡಿದವರು ರೊಚ್ಚಿಗದ್ದಿದ್ರೂ. ಕುಣಿದು ಕುಪ್ಪಳಿಸುತ್ತಾ ಟೀಂ ಇಂಡಿಯಾ ಗೆಲುವನ್ನ ಅದ್ಧೂರಿಯಾಗಿ ಸಂಭ್ರಮಿಸಿದರು.

ಬೆಳಗಾವಿಯಲ್ಲೂ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಭರ್ಜರಿಯಾಗಿತ್ತು. ಪಟಾಕಿ ಸಿಡಿಸಿ, ತ್ರಿವರ್ಣ ಧ್ವಜ ಹಿಡಿದು ಯುವಕರು ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದರು. ಟೀಂ ಇಂಡಿಯಾ ಜಯವನ್ನ ಸಂಭ್ರಮಿಸುತ್ತಾ ಘೋಷಣೆಗಳನ್ನು ಕೂಗಿದರು.

ಮೈಸೂರಿನಲ್ಲೂ ಈ ಸಂಭ್ರಮ ಶಿಖರವೇರಿತ್ತು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಈ ಸಂಭ್ರಮ ಶಿಖರವೇರಿತ್ತು. ರೋಹಿತ್ ಶರ್ಮಾ ನೇತೃತ್ವದ ತಂಡ ಜಯಭೇರಿ ಭಾರಿಸಿದ್ದನ್ನ ಭರ್ಜರಿ ಸೆಲೆಬ್ರೇಟ್ ಮಾಡಲಾಯಿತು. ಟೀಂ ಪರ ಜಯಘೋಷ ಕೂಗುತ್ತಾ ಯುವಕರು ತಮ್ಮ ಖುಷಿಯನ್ನ ವ್ಯಕ್ತಪಡಿಸಿದರು.

publive-image

ಇತ್ತ, ಹುಬ್ಬಳ್ಳಿಯಲ್ಲೂ ಕೂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಡೊಲ್ಲು ಬಾರಿಸಿ, ಪಟಾಕಿ ಸಿಡಿಸಿ ಕ್ರಿಕೆಟ್​ ಅಭಿಮಾನಿಗಳು ಟೀಂ ಇಂಡಿಯಾ ಗೆಲುವನ್ನ ಸಖತ್​ ಎಂಜಾಯ್​ ಮಾಡಿದ್ದಾರೆ. ಬೀದರ್​, ಚಿಕ್ಕಮಗಳೂರು, ಧಾರವಾಡ, ಕಲಬುರಗಿ ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದ ಸಂಭ್ರಮ ಮನೆಮಾಡಿತ್ತು.

ದೇಶಾದ್ಯಂತ ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡುತ್ತಾ ಟೀಂ ಇಂಡಿಯಾ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ. ಎಲ್ಲೆಲ್ಲೂ ಜೈ ಹೋ ಟೀಂ ಇಂಡಿಯಾ ಎಂಬ ಘೋಷ ಮೊಳಗಿತ್ತು. ದೇಶದ ಮೂಲೆ ಮೂಲೆಯಲ್ಲಿ ರೋಹಿತ್ ಬಳಗದ ದಾಖಲೆಯ ಜಯಕ್ಕೆ ಸಂಭ್ರಮದ ಸುನಾಮಿಯೇ ಎದ್ದಿತ್ತು. 12 ವರ್ಷಗಳ ಬಳಿಕ ಭಾರತ ಚಾಂಪಿಯನ್​​ ಟ್ರೋಫಿ ಸಂಭ್ರಮ ಇಡೀ ದೇಶದಲ್ಲಿ ಮನೆ ಮಾಡಿದೆ. ಟೀಮ್ ಇಂಡಿಯಾ ಜಯದ ಗುಂಗಲ್ಲೇ ಕ್ರಿಕೆಟ್ ಫ್ಯಾನ್ಸ್​ ಇಡೀ ರಾತ್ರಿ ಕಳೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment